ಕುಣಿದಾಡುತ್ತಾ ಓಡುತ್ತಿದ್ದ ಕಾಲುಗಳೇಕೋ
ಇಂದು ಸೋತು ಮೂಲೆ ಸೇರಿಬಿಟ್ಟಿವೆ
ಮತ್ತೆಂದೂ ಕುಣಿಯಲಾರದಂತೆ..
ನಿನ್ನ ನಶೆಯಲ್ಲೇ ಬರೆಯುತ್ತಿದ್ದ ಕೈಗಳಿಂದು
ಮತ್ತೆಂದೂ ಮೇಲೆತ್ತಾಲಾಗದ
ಸ್ಥಿತಿ ತಲುಪಿಬಿಟ್ಟಿವೆ..
ಎಂದೋ ಬತ್ತೋಗಿದ್ದ ಕಣ್ಹನಿಗಳು
ಇಂದು ಹರಿಯುತ್ತಿದೆ ಅಡ್ಡಿಲ್ಲದೇ ಸಡ್ಡಿಲ್ಲದೇ..-
ಗುರುವಿಗೆ ಹರಿ ಸರ್ವೋತ್ತಮ ತರು ಭಾವೋತ್ತಮ ಶಿವಸೂರ್ಯೋತ್ತಮ ಮೌನ ಮಾತನಾಡಿದಾಗ ಜೀವೋತ್ತಮ ಮಂಜುಳನಾದದಿ ಹೃದಯಸ್ಪರ್ಶಿಸಿ ಮನೋಜ್ಞವಾಗಿಸಿದ ಅಭಿಜ್ಞಾ ಸರಸ್ವತಿ ಪುತ್ರಿ ರತ್ನರಾಯಮಲ್ಲಸಜ್ಜನರ ಸಹವಾಸ ದಿಂದ ಶಾಂತಚಿತ್ತ ಪ್ರಹ್ಲಾದಕಾಂತರಾದಂತೆ ಏಕಾಂಗಿಯ
ಮುಗ್ದಮನಸನು ಮಾಯಾಜಿಂಕೆಯಾಗಿಸಲು ಶೃತಿ ಸೇರಿಸಿದೆ ಸುಮನಾಕೃತಿಯಲಿ ಅಶ್ಲೇಷಮಳೆಯ ಹುಡುಕಲು ಎಣ್ಣೆಶಿವನ ಜೊತೆ ಹೊರಟಾಗ ಕನಸು ಬಿದ್ದಂತೆ ಎಚ್ಚರಗೊಂಡು ಮಸಣದ ಕಾವಲುಗಾರನ ಹತ್ತಿರ ಬಂದು ಕಜೆಯವರಿಗೆ ಕರೆಮಾಡಲು ಹೋದಾಗ ಶ್ರೀನಾಗಮೌನದಿಂದಲೇ ಸಿಂಪಲ್ಲಾಗಿ ಬೇಡಎನ್ನಲು ಕ್ರಿಯೇಟಿವ್ ನಯನಗಳಿಗೆ ಮನಸೋತು ಕಾರ್ತಿಕಮಾಸ ನೆನಪಿಸಿಕೊಳ್ಳುತ್ತಾ ಕೋಮಲವಾದ ಕೈಗಳನ್ನು ಲೇಖಕನಾಗಿ ಪರಿವರ್ತಿಸಿದ ನನ್ನವಳ ವಿಳಾಸ ಸುಕೃತಿಯವರಿಂದ
ಪಡೆದು ನವಮಿ ಮುಗಿಸಿ ದಶಮಿಯೆಡೆಗೆ ನಡೆವಾಗ
ಸುತಾರನ ಗರಡಿಯಲಿ ತುಸು ಪಳಗಿ ಸುನಿತೆಯ ಜೊತೆ ಹೂವನ್ನು ಪೋಣಿಸುವುದನು ಕಲಿತು
ವಿಜಿ ಸಹೋದರಿ ಮನೆಯಲ್ಲಿ ಬಜಿ ತಿಂದು ಹೊಂಚುಹಾಕಿ ಸಂಚುಮಾಡಿ ವರಮಿಂಚುರವರ ಮನೆಗೆ ಊಟಕ್ಕೆ ಹೊರಟಿದ್ದೆ, ಅಷ್ಟರಲ್ಲಿ
ಹಂಸಪ್ರಿಯ ವಿಧ ವಿಧವಾದ ಭೋಜನ ಗಳಿಗೆ ಶ್ರೀಕಾಂತ ಬಟ್ಟರು ಶಿರಸಿಯವರಿಗೆ ಫೋನಾಯಿಸಿ ವಿಭಾ ಗ ಮಾಡಲು ತಿಳಿಸಿ. ಸಹೋದರ ಲಕ್ಷ್ಮಣ ನೊಂದಿಗೆ ಬರಲು ಹೇಳಿ. ಮಹಾಲಿಂಗನ ದರುಶನಕೆ
ಮಧುರೆಯಿಂದ ಬಂದ ಮೇಲೆ ಕರೆದುಕೊಂಡು ಹೋಗುವುದಾಗಿ ಹೇಳಿ ಭಾರಿ ಭಾರಿ ಪದಗಳಾಕೃತಿ
ಯಲ್ಲಿನ ಬರ್ಗರ್ ಪಿಜ್ಜಾ ತಿನ್ನಿಸುವ ಆಸೆ ತೋರಿಸಿದ ಉರ್ಮಿಳಾ ಮತ್ತು ಕಾವೇರಿ ಹೇಳದೆ ಕೇಳದೆ ಮಾಯವಾದರು..! 😂-
ಹೃದಯಪೂರ್ವಕ ವಂದನೆಗಳು ಜೋಗಿ ಜೀ
ೲೲೲೲೲೲೲೲೲೲೲೲೲೲೲೲೲೲೲೲೲ
ಕನ್ನಡ ಸಾಹಿತ್ಯದಂಗಳದಲಿ
ಯುವರ್ ಕೋಟ್ ಚಂದದ ವೇಧಿಕೆ
ಹೊನ್ನಿನ ಕಿರಣ ಸೂಸುವ ದೀವಿಗೆ
ನಮ್ಮಯ ನವಿರಾದ ಭಾವಕೆ...
ೲೲೲೲೲೲೲೲೲೲೲೲೲೲೲೲೲೲೲೲೲೲ
ನವಿರಾಗಿದೆ ಇನ್ನು ಹೊಸದರಂತೆ
ನನ್ನ ಈ ಭಾವದೂರಿನ ಅನುಬಂಧ
ವರುಷಗಳೆರಡು ತುಂಬಿದರೇನು
ಪುಟ್ಟ ಹೆಜ್ಜೆಯಿಟ್ಟು ಇದೀಗ ಬಂದಂತಿದೆ
ಈ ಯುವರ್ ಕೋಟ್ ವೇಧಿಕೆಯತ್ತ..
ಇಷ್ಟು ದಿನ ನಾ ಮಾಡಿದ
ತಪ್ಪು ಒಪ್ಪುಗಳ ಸಹಿಸುತ್ತಾ..
ಪ್ರೀತಿಯಿಂದ ಪ್ರೋತ್ಸಾಹಿಸಿ ಹರಸಿ ಹಾರೈಸಿದ
ಜೋಗಿ ಮತ್ತು ಎಲ್ಲ ಸಹೃದಯ ಸವಿಮನಗಳಿಗೂ
ಹೃದಯಪೂರ್ವಕ ವಂದನೆಗಳು-
ನನ್ನ YourQuote ನ ಪಯಣ
********************
(ಅಡಿಬರಹದತ್ತ ಕಣ್ಣಾಯಿಸಿ )-
ಬೆನ್ನ ಹಿಂದೆ
ಮಂದಿಗಳೆದಿರು
ನಿಂದಿಸುವವರ
ಸಂಧಿಸಿ ವಂದಿಸುವೆ,
ಅರಿವಿಲ್ಲದ
ಅರಿವಾಗದ
ವಿಷಯ
ಪರಿ ಪರಿಯಾಗಿ
ವಿವರಿಸಿ ಅರಿವಾಗಿಸಿದ
ಗುರುಗಳೆಂದು.-
ಹೃದಯಂತರಾಳದ ಧನ್ಯವಾದಗಳು
ಜೋಗಿಯವರಿಗೆ,
🌹🌹🌹🌹🌹🌹🌹🌹🌹🌹🌹
ಇಂದಿಗೆ ಯುವರ್ ಕೋರ್ಟ್ನ
ಶಾರದಾಲಯಕ್ಕೆ ನನ್ನ
ಮೂರು ವರ್ಷದ ಬರವಣಿಗೆಯ
ಯಾನವ ಪೂರ್ಣಗೊಳಿಸಿರುವೆ,
ಈ ಬರಹಗಳಿಗೆ ಕಾರಣರಾದ
ಜೋಗಿಯವರು ಹಾಗೂ ಯುವರ್ಕೋಟ್ಗೆ
ನನ್ನ ಹೃತ್ಪೂರ್ವಕವಾದ
ಧನ್ಯವಾದಗಳು.
🙏🙏💐💐🙏 🙏
(ಅಡಿ ಬರಹ ಓದಿ)
👇👇👇👇-
ಹೃದಯಪೂರ್ವಕ ವಂದನೆಗಳು ಜೋಗಿಯವರಿಗೆ
🌹🌹🌹🌹🌹🌹🌹🌹🌹🌹🌹🌹🌹🌹
ಬರವಣಿಗೆಯ ಪಯಣವು
ಇಂದಿಗೆ ಎರಡು ವರುಷವು
ಕಲ್ಪಿಸಿದೆ ಬರೆಯಲು ಅವಕಾಶವು
ಹೃದಯಕ್ಕಿದು ಪ್ರೀತಿಯ ಹರ್ಷವು
ಯುವರ್ ಕೋಟ್ ಬರೆಯಲು
ಹಂಬಲವಿರುವವರಿಗೆ ಕನ್ನಡದ ವೇದಿಕೆ
ಮರೆಸಿತು ನೋವ ನಮ್ಮ ಜೀವಕೆ
ಮೂಡಿತು ಹೊಸ ಹೊಸ ಭಾವನೆಗಳು
ಬರೆಯಲು ಹೊರಟಿತು ಕಲ್ಪನಾ ಲೋಕಕೆ
🙏🙏🙏🙏💐💐💐🙏🙏🙏🙏
_ಶೃತಿ ಶೈವ
-
ಅರಸಿ ಬಂದ
ಅದೃಷ್ಟಲಕ್ಷ್ಮಿಯೇ,
ಆಸೆಯಿಂ ಮನೆಗೆ ಬಂದ
ಮಹಾಲಕ್ಷ್ಮಿಯೇ
ಅಕ್ಕರೆ ತೋರಿದ ನಿನಗಿದೋ
ಅನಂತ ಒಂದಿಸುವೆ
ಕರ ಮುಗಿದು
ಆತ್ಮೀಯತೆಯಿಂದ ನಮಗೆ
ಕೈ ಜೋಡಿಸಿ
ಅನ್ನದ ದಾರಿದ್ರ್ಯ ನೀಗಿಸಿ, ನಮ್ಮನೆ
ಆನಂದಕ್ಕೆ ಕಾರಣೀಭೂತಳಾದೆನೆಗೆ
ಆಯುಧಪೂಜೆಯಂದು ಶಿರಬಾಗಿ
ಒಂದಿಸುವೆ,ನಾ ಪೂಜೀಸುವೆ,,,
-
ಲೋಕದ ಜ್ಞಾನವೆ ಇಲ್ಲದ
ಮುಗ್ದತೆಯ ಕುಸುಮಗಳಿಗೆ
ಶಿಕ್ಷಣದ ಮೂಲಕ ಅರಿವು ಮೂಡಿಸುತ್ತಾ
ಕಂಗಳಲಿ ಕನಸುಗಳನು ಬಿತ್ತುವ ಗುರುಗಳಿಗೆ ವಂದನೆಗಳು🌹-
2600 ಬರಹಗಳು ಅಪ್ಪ ಅಮ್ಮಗೆ ಅರ್ಪಣೆ
💐💐💐💐💐💐💐💐💐💐💐💐
ಬರವಣಿಗೆಯ ಲೋಕದಲ್ಲಿ ಅದು ಹೇಗೋ ಸಾಗಿತು ನನ್ನ ಪಯಣ ಹೇಗೆಂತಾನು ಗೊತ್ತಿಲ್ಲ ನಂಗೆ, ಈಗ ಬರೀತಾ ಇರ್ತೇನೆ ಕಂಡಿದ್ದು, ಕೇಳಿದ್ದು, ಹೇಳಿದ್ದು, ನೋಡಿದ್ದು, ಅರ್ಥವಾಗಿದ್ದು, ಅನುಭವಕ್ಕೆ ಬಂದಿದ್ದು ನನ್ನ ಪ್ರಕಾರ ಮನಸಾದಾಗಲೆಲ್ಲಾ ಮನದ ಏರಿಳಿತಗಳ ತಿಳಿಸಲು ಬರವಣಿಗೆ ಲೋಕ ಒಂದು ಒಳ್ಳೆಯ ಸ್ನೇಹಿತನಿದ್ದಂತೆ,
ಉಳಿ ಪೆಟ್ಟು ತಿಂದಾಗಲೇ ಕಲ್ಲೊಂದು ಶಿಲೆಯಾಗಿ ಮಾರ್ಪಡೋ ರೀತಿ ನನ್ನ ಬರಹ ಇನ್ನೂ ಕೂಡ ಬರೆಯುವ ಪ್ರಯತ್ನದಲ್ಲಿದ್ದೇನೆ ಕಾಣದ ಉಳಿಪೆಟ್ಟಿನೊಂದಿಗೆ ಬರೆಯುತ್ತಾ...ಕಲಿಯುತ್ತಾ!!
ತಪ್ಪುಗಳಿದ್ದರೆ ನಿಸ್ಸಂದೇಹವಾಗಿ ತಿಳಿಸಿ ಅಡ್ಡಿಯಿಲ್ಲ, ಅಕಸ್ಮಾತ್ ಇಷ್ಟವಾದರೆ ಪ್ರೋತ್ಸಾಹಿಸಿ ನಂಗೆ, ಅವರವರ ಲೈಕ್ಸ್, ಕಾಮೆಂಟ್ಸ್ ಅವರವರ ಸ್ವಇಚ್ಛೆ.
ನನ್ನ ಬರಹಗಳಿಗೆ ಮೆಚ್ಚುಗೆ ಸೂಚಿಸೋ ನನ್ನೆಲ್ಲಾ ಆತ್ಮೀಯ ವೈಕ್ಯೂ ಸ್ನೇಹಿತರಿಗೆ/ಸ್ನೇಹಿತೆಯರಿಗೆ ಹೃತ್ಪೂರ್ವಕ ವಂದನೆಗಳು.
🙏🙏🙏🙏🙏🙏🙏🙏🙏🙏🙏🙏-