Tulasi Bhat   (▶ Writer Sindhu Bhargava)
245 Followers · 456 Following

Happy writing
Joined 27 August 2021


Happy writing
Joined 27 August 2021
29 JAN 2023 AT 10:39

ಇನ್ನೊಬ್ಬರ ಸಮಸ್ಯೆಗಳಿಗೆ ಸಲಹೆ ನೀಡುವ ನಾವು
ನಮ್ಮ ಸಮಸ್ಯೆಗಳ ಬಗೆಹರಿಸಲು ತಡಕಾಡುವೆವು.
ಒತ್ತಡ ಚಿಂತೆ ದುಗುಡ ದೂರವಾಗಿಸಿರಿ. ಸಮಸ್ಯೆಗೆ ಪರಿಹಾರ ಕಂಡು ಹುಡುಕಿರಿ. ನುಡಿಸಿಂಧು🍁

-


9 JAN 2023 AT 13:32

ಪುಗ್ಗ ಬೇಕೆಂದು ಮಗು ಹಟಮಾಡಿದಾಗ
ಅಮ್ಮ ಕಡಲತೀರದ ತಟದಲ್ಲಿ ಬಲೂನು ಮಾರುತ್ತ ನಿಂತಿದ್ದವನ ಬಳಿ ಹೋಗಿ ಕೇಳಿದಳು
ಹತ್ತು ಬಲೂನಿಗೆ ಎಷ್ಟೆಂದು?
ಹಿಗ್ಗಿ ಹೋದ ಆ ಹುಡುಗ ನೂರು ರೂಪಾಯಿ ಎಂದ.
ನಷ್ಟವಾದರೂ ಪರವಾಗಿಲ್ಲ ಎಂದು ಭಾವಿಸಿದ‌‌‌.
ನೂರರ ನೋಟನ್ನು ತೆಗೆದು ಕೊಂಡು ಹೋಗಿ ಹೋಟೆಲಿನಲ್ಲಿ ಐದು ದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. - ಸಿಂಧುಸಣ್ಕತೆ

-


29 NOV 2022 AT 17:37

ಕಂಪನ

ನೀ ಸನಿಹ ಬಂದಾಗ
ನಡುಗುವುದು ಮೈಮನ
ಎದೆಯಲ್ಲಿ ಕಂಪನ

ಮಾತು ತಡವರಿಸಿ
ಕಂಗಳು ಮುಚ್ಚುವವು
ಸಿಹಿಮುತ್ತನೊಂದು
ಅದರಗಳು ಬೇಡುವವು

ಸಿಂಧು ಭಾರ್ಗವ ಬೆಂಗಳೂರು

-


7 NOV 2022 AT 17:03

ಓಂಕಾರ ರೂಪನೇ

ಓಂಕಾರ ರೂಪನೇ ಪರಶಿವನೇ
ಓ ಎನ್ನುವೆ ನಾನು ಕರೆದಾಗ
ಸೋಲನು ಉಂಡರೂ ಧೃತಿಗೆಡದೆ
ನಂಬಿಕೆಯನ್ನು ಬಲಪಡಿಸೆ
ಬಾಳಿನ ಉದ್ದಕೂ ಜೊತೆ ನಿಂತೆ
ನೆನೆದವರ ಮನದಲಿ ನೆಲೆ ನಿಂತೆ

ಸಿಂಧು ಭಾರ್ಗವ ಬೆಂಗಳೂರು

-


7 NOV 2022 AT 16:56

ಒಮ್ಮತ

ಒಮ್ಮತ ಇರಲಿ ನಿಲುವಿನಲಿ
ಸತಿಪತಿಗಳ ನಡುವೆ ಸ್ನೇಹವಿರಲಿ
ಅರಿತು ಬೆರೆತು ಬಾಳಿದರೆ ಒಲವು
ಎಲ್ಲರು ಭಾವನೆಗಳಿಗೆ ಬೆಲೆ ಸಿಗಲಿ..

ಸಿಂಧು ಭಾರ್ಗವ ಬೆಂಗಳೂರು

-


7 NOV 2022 AT 16:54

ಐಕ್ಯತೆ

ಐಕ್ಯತೆ ಸಾರಿ ಕೈಯನು ಜೋಡಿಸಿ
ಮುನ್ನಡೆಯೋಣ ಹೆಜ್ಜೆಯ ಹಾಕಿರಿ
ಕಷ್ಟಗಳಿಲ್ಲಿ ಯಾರಿಗೆ ಇಲ್ಲ
ಎದೆಗುಂದದೆ ಧೈರ್ಯದಿ ಎದುರಿಸಿ
ಒಬ್ಬರಿಗೊಬ್ಬರು ಜೊತೆಯಲಿ ಸೇರಿ
ಬಾಳಿನ ಸರಪಳಿ ಭದ್ರಗೊಳಿಸಿರಿ..

ಸಿಂಧು ಭಾರ್ಗವ ಬೆಂಗಳೂರು

-


5 NOV 2022 AT 21:14

ಸೀರೆಯ ವ್ಯಾಮೋಹ ನನಗಿಲ್ಲ.
ಅಪರೂಪಕ್ಕೆ ಸೀರೆ ಉಡುವುದು.
ನನ್ನಲ್ಲಿ ಸೀರೆ ಕೂಡ ಕಡಿಮೆಯೇ ಇದೆ.

-


4 NOV 2022 AT 8:52

ನುಡಿಸಿಂಧು🍁 ಶುಭದಿನ🌞

ಕನಸುಗಳನ್ನು ಕಾಣಬೇಕು
ಹೊಸದಾಗಿ ಯೋಜನೆಗಳನ್ನು
ಹಾಕಿಕೊಂಡು
ಹೊಸ ಹೆಜ್ಜೆಯನ್ನಿಡಬೇಕು
ಹೆದರಬಾರದು.
ಉತ್ಸಾಹಹೀನರಾಗಬಾರದು.
ಬದುಕು ನಿಂತನೀರಾಗದೇ
ಸದಾ ಹರಿಯುತ್ತಲೇ‌ ಇರಬೇಕು.

-


3 NOV 2022 AT 7:59

ಜನುಮದ ದಿನದ ಆಚರಣೆ ಎಂದರೇನೆ ಮರಣದ ಗಡಿಯ ತಲುಪುವುದಕ್ಕೆ ಆಹ್ವಾನ ಬಂದಂತೆ.
ತಮ್ಮ ಕರ್ತವ್ಯ ,ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತೆರಳಿದರೆ ಚೆನ್ನಾಗಿರುತ್ತದೆ. ಎಲ್ಲರ ಅಭಿಪ್ರಾಯವೂ ಹೀಗೆಯೇ.
- ನುಡಿಸಿಂಧು🍁

-


3 NOV 2022 AT 7:56

ಮನೆಗೆ ಆಹ್ವಾನಿಸಿದ ಅತಿಥಿಗಳನ್ನು ಅವಮಾನಿಸಿ ಕಳುಹಿಸಬೇಡಿ.
ನೀವು ಮಾಡುವ ಸತ್ಕಾರ ಮನದಲ್ಲಿ ಅಚ್ಚಳಿಯುವಂತಾಗಲಿ.
- ನುಡಿಸಿಂಧು🍁

-


Fetching Tulasi Bhat Quotes