ಇನ್ನೊಬ್ಬರ ಸಮಸ್ಯೆಗಳಿಗೆ ಸಲಹೆ ನೀಡುವ ನಾವು
ನಮ್ಮ ಸಮಸ್ಯೆಗಳ ಬಗೆಹರಿಸಲು ತಡಕಾಡುವೆವು.
ಒತ್ತಡ ಚಿಂತೆ ದುಗುಡ ದೂರವಾಗಿಸಿರಿ. ಸಮಸ್ಯೆಗೆ ಪರಿಹಾರ ಕಂಡು ಹುಡುಕಿರಿ. ನುಡಿಸಿಂಧು🍁-
ಪುಗ್ಗ ಬೇಕೆಂದು ಮಗು ಹಟಮಾಡಿದಾಗ
ಅಮ್ಮ ಕಡಲತೀರದ ತಟದಲ್ಲಿ ಬಲೂನು ಮಾರುತ್ತ ನಿಂತಿದ್ದವನ ಬಳಿ ಹೋಗಿ ಕೇಳಿದಳು
ಹತ್ತು ಬಲೂನಿಗೆ ಎಷ್ಟೆಂದು?
ಹಿಗ್ಗಿ ಹೋದ ಆ ಹುಡುಗ ನೂರು ರೂಪಾಯಿ ಎಂದ.
ನಷ್ಟವಾದರೂ ಪರವಾಗಿಲ್ಲ ಎಂದು ಭಾವಿಸಿದ.
ನೂರರ ನೋಟನ್ನು ತೆಗೆದು ಕೊಂಡು ಹೋಗಿ ಹೋಟೆಲಿನಲ್ಲಿ ಐದು ದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. - ಸಿಂಧುಸಣ್ಕತೆ
-
ಕಂಪನ
ನೀ ಸನಿಹ ಬಂದಾಗ
ನಡುಗುವುದು ಮೈಮನ
ಎದೆಯಲ್ಲಿ ಕಂಪನ
ಮಾತು ತಡವರಿಸಿ
ಕಂಗಳು ಮುಚ್ಚುವವು
ಸಿಹಿಮುತ್ತನೊಂದು
ಅದರಗಳು ಬೇಡುವವು
ಸಿಂಧು ಭಾರ್ಗವ ಬೆಂಗಳೂರು-
ಓಂಕಾರ ರೂಪನೇ
ಓಂಕಾರ ರೂಪನೇ ಪರಶಿವನೇ
ಓ ಎನ್ನುವೆ ನಾನು ಕರೆದಾಗ
ಸೋಲನು ಉಂಡರೂ ಧೃತಿಗೆಡದೆ
ನಂಬಿಕೆಯನ್ನು ಬಲಪಡಿಸೆ
ಬಾಳಿನ ಉದ್ದಕೂ ಜೊತೆ ನಿಂತೆ
ನೆನೆದವರ ಮನದಲಿ ನೆಲೆ ನಿಂತೆ
ಸಿಂಧು ಭಾರ್ಗವ ಬೆಂಗಳೂರು-
ಒಮ್ಮತ
ಒಮ್ಮತ ಇರಲಿ ನಿಲುವಿನಲಿ
ಸತಿಪತಿಗಳ ನಡುವೆ ಸ್ನೇಹವಿರಲಿ
ಅರಿತು ಬೆರೆತು ಬಾಳಿದರೆ ಒಲವು
ಎಲ್ಲರು ಭಾವನೆಗಳಿಗೆ ಬೆಲೆ ಸಿಗಲಿ..
ಸಿಂಧು ಭಾರ್ಗವ ಬೆಂಗಳೂರು-
ಐಕ್ಯತೆ
ಐಕ್ಯತೆ ಸಾರಿ ಕೈಯನು ಜೋಡಿಸಿ
ಮುನ್ನಡೆಯೋಣ ಹೆಜ್ಜೆಯ ಹಾಕಿರಿ
ಕಷ್ಟಗಳಿಲ್ಲಿ ಯಾರಿಗೆ ಇಲ್ಲ
ಎದೆಗುಂದದೆ ಧೈರ್ಯದಿ ಎದುರಿಸಿ
ಒಬ್ಬರಿಗೊಬ್ಬರು ಜೊತೆಯಲಿ ಸೇರಿ
ಬಾಳಿನ ಸರಪಳಿ ಭದ್ರಗೊಳಿಸಿರಿ..
ಸಿಂಧು ಭಾರ್ಗವ ಬೆಂಗಳೂರು-
ಸೀರೆಯ ವ್ಯಾಮೋಹ ನನಗಿಲ್ಲ.
ಅಪರೂಪಕ್ಕೆ ಸೀರೆ ಉಡುವುದು.
ನನ್ನಲ್ಲಿ ಸೀರೆ ಕೂಡ ಕಡಿಮೆಯೇ ಇದೆ.-
ನುಡಿಸಿಂಧು🍁 ಶುಭದಿನ🌞
ಕನಸುಗಳನ್ನು ಕಾಣಬೇಕು
ಹೊಸದಾಗಿ ಯೋಜನೆಗಳನ್ನು
ಹಾಕಿಕೊಂಡು
ಹೊಸ ಹೆಜ್ಜೆಯನ್ನಿಡಬೇಕು
ಹೆದರಬಾರದು.
ಉತ್ಸಾಹಹೀನರಾಗಬಾರದು.
ಬದುಕು ನಿಂತನೀರಾಗದೇ
ಸದಾ ಹರಿಯುತ್ತಲೇ ಇರಬೇಕು.-
ಜನುಮದ ದಿನದ ಆಚರಣೆ ಎಂದರೇನೆ ಮರಣದ ಗಡಿಯ ತಲುಪುವುದಕ್ಕೆ ಆಹ್ವಾನ ಬಂದಂತೆ.
ತಮ್ಮ ಕರ್ತವ್ಯ ,ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತೆರಳಿದರೆ ಚೆನ್ನಾಗಿರುತ್ತದೆ. ಎಲ್ಲರ ಅಭಿಪ್ರಾಯವೂ ಹೀಗೆಯೇ.
- ನುಡಿಸಿಂಧು🍁-
ಮನೆಗೆ ಆಹ್ವಾನಿಸಿದ ಅತಿಥಿಗಳನ್ನು ಅವಮಾನಿಸಿ ಕಳುಹಿಸಬೇಡಿ.
ನೀವು ಮಾಡುವ ಸತ್ಕಾರ ಮನದಲ್ಲಿ ಅಚ್ಚಳಿಯುವಂತಾಗಲಿ.
- ನುಡಿಸಿಂಧು🍁-