ಶಶಿಕಾಂತ ಪಿ ದೇಸಾಯಿ   (ಏನು ತಂದೆ?)
2.4k Followers · 784 Following

read more
Joined 17 August 2017


read more
Joined 17 August 2017

ಅಲ್ಲಿ ಕಿಚ್ಚು, ಇಲ್ಲಿ ಕಿಚ್ಚು
ಎಲ್ಲೆಡೆ ಹರಡುತ್ತಿದೆ ಕಾಳ್ಗಿಚ್ಚು,
ಚಾಚುತಿದೆ ಎಲ್ಲೆಡೆ ತನ್ನ ಕೆನ್ನಾಲಿಗೆ
ಬಿಡಿಸುವವರಾರಿಲ್ಲ ಬುದ್ಧಿ ಹೇಳುವವರಿಲ್ಲ
ಬೂದಿ ಮುಚ್ಚಿದ ಕೆಂಡವು
ಯಾವ ಹುಲ್ಲುಗಾವಲಿಗೆ
ಅಪ್ಪಿಕೊಳ್ಳಲೆಂದು ಅಬ್ಬರಿಸುತ್ತಿದೆ
ಒಂದು ಕ್ಷಣದಿ ಎಲ್ಲ ಘಟಿಸಿಬಿಡುತ್ತದೆ
ಎಲ್ಲೆಡೆ ರಕ್ತದೋಕುಳಿ, ಹೆಣಗಳ ರಾಶಿ
ಜೀವವಿದ್ದೂ ಇರದಂತೆ, ಮಾಂಸ ಎಲುಬುಗಳ
ಕುಕ್ಕುವ ರಣಹದ್ದುಗಳಿಗೆ ಭರ್ಜರಿ ಬಾಡೂಟ
ಕಳೆದುಕೊಂಡವರ ನೆನೆದು ಪ್ರಲಾಪ ಎಲ್ಲೆಡೆ
ಮೂಲಸ್ಥಿತಿಗೆ ಬರಲಾಗದು ಎಂಬರಿವಿನಲ್ಲೂ
ಎಲ್ಲೋ ಪಾರಿವಾಳವೊಂದು ಹೂವನ್ನು ಹಿಡಿದು
ಹೊಸ ಮನ್ವಂತರಕ್ಕೆ ಕಾಯುತಿಹುದು.

-



ಅಂದು ಭಾವನೆಗಳ ಕೋಟೆಯ ಮೇಲೆ
ದಾಳಿ ನಡೆಸಿ, ಹೃದಯ ಘಾಸಿಗೊಳಿಸಿ
ದೂರದ ದೇಶಕ್ಕೆ ತೆರಳಿ, ಹೊಸ ಹೂವಿನ
ಜೊತೆಯಲ್ಲಿ ಬಂದು, ಏನೂ ಅರಿಯದಂತೆ
ನನ್ನೆಡೆಗೆ ನೋಡದೇ ಹೋದ ನೀ ನಿಜವಾದ
ಯುದ್ಧಕೈದಿ ಆಗಿದ್ದು ನಿನಗೇ ತಿಳಿಯಲಿಲ್ಲ.

-



ನಿರೀಕ್ಷೆಗಳೇ ಕ್ಲಿಷ್ಟ
ಪ್ರಶ್ನೆ ಪತ್ರಿಕೆಯ
ತಯಾರಿಸುತ್ತಿವೆ,
ಪೂರ್ವ ಸಿದ್ಧತೆಗಳು
ಇರದೇ ಪರೀಕ್ಷೆಗೆ ಕುಳಿತು,
ಕಡಿಮೆ ಅಂಕಗಳ
ಫಲಿತಾಂಶದಿಂದ
ಮನ ದುಃಖಿಸುತ್ತಿದೆ,
ಓದುವುದು ಅನಿವಾರ್ಯ
ಆದಾಗ, ಬೆಸರಿಸದೇ
ಕ್ರಿಯಾಶೀಲರಾಗುವುದೊಂದೇ
ಕೊನೆಯ ಆಯ್ಕೆ.

-



ಕನಸಿನ್ಯಾಗ ಯಾಕ ತಡಾ ಮಾಡಿ ಬರ್ತಿ, ಹೋಗಲಿ ಬಿಡು ಅಂದ್ರ, ಏಟ ದೌಡ ಮಾಯ ಆಗ್ತಿ, ಕುಂತು ಮಾತಾಡ್ಲಿಕ್ಕೂ ಪುರಸೊತ್ತ ಇಲ್ಲಂದ್ರ, ಬಂದ್ಯಾಕ? ಹೋದ್ಯಾಕ? ಎರಡ ತಾಸ ವ್ಯಾಳ್ಯಾ ಇಟಗೊಂಡು ಬಂದಿ ಅಂದ್ರ, ಕನಸಿನ ನಾವಿನೊಳಗ ಹೂವಿನ ಹಾಸಿಗೆ ಮ್ಯಾಲ ಕುಂತು ಮಾತಾಡುನು, ನಗಮ್ಮು, ಮನಸ ಹಗರ ಮಾಡಕೊಳ್ಳೋನು, ನೀ ಹೇಳುವಾಗ ನಾ ಕೇಳ್ತೀನಿ, ನಾ ಹೇಳುವಾಗ ನೀ ಕೇಳು.

-



ಮರೆಯಬೇಕೆಂದರೂ ಮತ್ತೆ ಮತ್ತೆ ಕಾಡುವ ನೆಂಟರಂತೆ
ಮರಳಿಸಬೇಕೆಂಬ ಸಾಲ ಮರೆತಾಗ ಕಾಡೋ ಸಾಲಿಗರಂತೆ
ಮಿದುಳಿನಿಂದ ಹೋದರೂ ಕಣ್ಮುಂದೆ ಬಂದು ನಿಂತಂತೆ
ಮರೆತರೂ, ಕರೆಯದಿದ್ದರೂ, ಮಾತನಾಡಿಸೋ ಗೆಳೆಯನಂತೆ
ಈ ಜೀವನ ಹೀಗೇಕೆ ಎಂಬ ಚರ್ಚೆಯಲ್ಲೇ ಮುಪ್ಪು ಬರುವಂತೆ
ಪ್ರತಿ ಘಳಿಗೆಯಲ್ಲಿ ಅಳಿಸೋ, ಸಂತೈಸೋ ಈ ನೆನಪುಗಳು
ಕೊರಳಿಗೆ ಜೋತು ಬಿದ್ದ ದೆವ್ವಗಳೆಂದು ಮಾತ್ರ ಹೇಳಲಾರೆ.

-



ದಿಕ್ಕು ದೆಸೆಯಿಲ್ಲದೇ ಮನವೆಂಬೋ ದುಂಬಿ ಹಾರಾಡುತಿದೆ ಎಲ್ಲೆಂದರಲ್ಲಿ, ಸ್ಪಷ್ಟ ಬೆಳಕನ್ನು ಧಿಕ್ಕರಿಸಿ, ಕತ್ತಲೆಯಲ್ಲಿ ದೀಪಕ್ಕೆ ಗುದ್ದಿ ಉಸಿರು ಚೆಲ್ಲಿದೆ.

-



ಹೇಗೆ ಹೋಗಬೇಕು, ಏಕೆ ಹೋಗಬೇಕೆಂಬ ಅರಿವಿಲ್ಲ
ಹೆಜ್ಜೆಗಳು ಸಾಗುತ್ತಿವೆ ದಿಕ್ಕು ತೋರಿದಂತೆ, ಗುರಿಯಿಲ್ಲ.

-



ಚಂದಿರನ ಭಾರ ಹೊತ್ತ ನಿನಗೆ ನಾನು ಭಾರವೇ?
ಒಂದು ಬಾರಿ ನನ್ನೆಡೆಗೆ ನೋಡಲೂ ವೈಯ್ಯಾರವೇ.

-



ಚುಕ್ಕಿಗಳ ರಂಗೋಲಿಯಲ್ಲಿ ನಿನ್ನ ಕಲೆಯ ಕಂಡೆ ಭಗವಂತ
ಸೂರ್ಯನಂತೆ ಅದೆಷ್ಟು ನಕ್ಷತ್ರಗಳ ಬ್ರಹ್ಮಾಂಡವು ಅನಂತ.

-



ಕಿರು ಕತ್ತಲೆಯಲ್ಲಿ ಬಾಯಿ ಅಗಲಿಸಿ
ನಗುತಿಹ ಚಂದ್ರಮನು, ಆಗಸದಿ
ನಗುವಿನಲೆ ಸೃಷ್ಟಿಸಿ, ಪುಟ್ಟ ಕಂದಮ್ಮಗಳ
ಕೈ ತುತ್ತಿಗೆ ಪ್ರೇರಣೆಯಾಗಿಹನು.

-


Fetching ಶಶಿಕಾಂತ ಪಿ ದೇಸಾಯಿ Quotes