ನಮ್ಮಿಬ್ಬರ
ಹೊಂದಾಣಿಕೆ,
ಪರಸ್ಪರ ಅರಿಯುವಿಕೆ,
ಅದೇ ಅನುರಾಗಕ್ಕೆ
ಹೊಸ ಮುನ್ನುಡಿಯಂತೆ.-
ಯಾವ ಅಪೇಕ್ಷೆಗಳಿರಿಸದೇ
ಮುಗ್ಧ ಮನಸ್ಸಿನ ಮಗುವಾಗಿ
ಮುಂದೆ ನಡೆದು ದಾರಿ ತೋರಿಸುತ್ತ
ಹಿಂದೆ ನಿಂತು ಬೆನ್ನು ಕಾಯುತ್ತ
ಇರುವ ಒಂದು ಜೀವಿ ಎಂದರೆ
ಗೆಳೆಯನಲ್ಲದೇ ಮತ್ತಾರು ಇರಲು ಸಾಧ್ಯ.-
ಕಣ್ಮುಚ್ಚಿ ನಿನ್ನ ನೆನೆಯುವಾಗ
ಎದುರಿಗೆ ನೀ ಬಂದು ನಿಂತ
ಅನುಭವ ಆಗುತ್ತಿಲ್ಲ ಗೆಳೆಯ,
ನಿದಿರೆಗೆ ಜಾರಿ ಹೋದಾಗಲೂ
ಕನಸಿನಲ್ಲಿ ಬಂದು ಸಂತೈಸಲು
ನೀ ಕೊನೆಗೂ ಬರಲಿಲ್ಲ ಗೆಳೆಯ,
ಕಣ್ತೆರೆಯಲು ಏಕೋ ಭಯ
ಎದುರಿಗೆ ಬಂದರೂ ನೋಡದಿರೆ
ಎನ್ನ ಗತಿಯೇನು ಹೇಳು ಗೆಳೆಯ.-
ಕಂಬನಿಗಳಿಂದ ಅನುಕಂಪ ಬಯಸೋ ಕಾಲವು ಜಾರಿದೆ ದೋಸ್ತ
ತಪ್ಪಿರದವರ ಕಣ್ಣೀರ ಕಂಡು ದೇವನೂ ಸಹ ಪರೇಶಾನ್.-
ಅವರಿವರನ್ನು ದೂರುವುದಕ್ಕಿಂತ,
ಅವರಿಂದ ದೂರವಾಗಿ,
ನೆನೆಯುತ್ತ ಕೂಡುವುದರಲ್ಲಿ
ಯಾವ ಅರ್ಥವೂ ಇಲ್ಲ,
ಇರುವುದು ಕೇವಲ
ನಾಲ್ಕು ದಿನಗಳು, ಅದರಲ್ಲಿ
ಮಾನಸಿಕವಾಗಿ ಕುಗ್ಗಿ
ಬದುಕುವುದಕ್ಕಿಂತ, ಎಲ್ಲರೊಂದಿಗೆ
ಒಂದಾಗಿ ಬೆರೆತು ಹಿಗ್ಗಿ ಹಿಗ್ಗಿ
ಬದುಕುವುದು ಒಂದು ಸಾಧನೆ.-
ಕಣ್ಣಿನಿಂದ ಸೂಸುವ ಸುಪ್ತ ಭಾವಗಳೇ ಎಲ್ಲ ನಿವೇದಿಸುತ್ತಿವೆ
ನಗುವಿನ ಚಕ್ರವ್ಯೂಹದಿಂದ ಹೊರಬರಲು ತನು ಹೆಣಗಾಡುತ್ತಿದೆ.-
ಕಣ್ಣೋಟದಿಂದ ಇರಿದು ರಕ್ತಪಾತವಿರದೇ ಕೊಲ್ಲಬೇಡ
ನಿನ್ನ ಇರಿತವೋ ನೇರ ನನ್ನೆದೆಗೆ ಇದೆ, ನಿಧಾನವಾಗಿ ಚುಚ್ಚು.-
ಸದ್ವಿಚಾರಗಳ ಪ್ರಭಾವಳಿಯಲ್ಲಿ
ಜಗಕೆ ವ್ಯಕ್ತಿತ್ವದ ಅನಾವರಣ,
ಮನವು ಬಾಹ್ಯ ಅನಾಚಾರಗಳಿಗೆ
ಶರಣಾಗಲು, ಬದುಕೇ ರಣ ರಣ.-