ಘಮ್ಮನೆ ಸುಗಂಧ ಸೂಸುವ
ಮಲ್ಲಿಗೆ ಮನದವಳು
ಶುದ್ಧ ಭಾವನೆಗಳ ಗೌರವಿಸೋ
ಕಮಲಿನಿಯವಳು
ಮುದ ನೀಡೋ ಪದಗಳ
ಉಲಿಯೋ ಕುಮುದಿನಿಯವಳು
ಪ್ರಖರ ಬೆಳಕಿನಲ್ಲೂ
ಗೋಚರಿಸದ ಯಾಮಿನಿಯವಳು.-
ಗಾಳಿಯೊಡನೆ ಚೆಲ್ಲಾಟ ಸಲ್ಲ ಎಂದು
ಹಣತೆ ಎಚ್ಚರಿಸಿದರೂ, ತಂಗಾಳಿಗೆ
ಮೈಮರೆತು ದೀಪವು ನೃತ್ಯ ಮಾಡುವಲ್ಲಿ
ಅಂಕದ ಪರದೆ ಜಾರುತ್ತದೆ, ಎಣ್ಣೆ ಅಳುತ್ತದೆ.-
ದಣಿವರಿಯದ ಜಗತ್ತಿನಲ್ಲಿ
ಸದಾ ಜೀವಂತಿಕೆಯ ತಾಂಡವ,
ಸೂರ್ಯ ಚಂದಿರರ ಭುವಿಯಲ್ಲಿ
ಮನುಕುಲದ ಕಲರವವೇ ನಿತ್ಯ ನೂತನ.-
ಪ್ರೇಮಪತ್ರವೆಂದೇಕೆ ಗುರುತಿಸಲಿ, ಅದೊಂದು ಭಾವಪತ್ರ
ಹೃದಯದಿ ಉದಯಿಸೋ ಭಾವನೆಗಳ ಎಲ್ಲಿ ದಾಖಲಿಸಲಿ?
ಚಿತ್ತದಿ ಮೂಡಿದ ಅಸಂಖ್ಯ ಯೋಚನೆಗಳ ಯಾರಿಗೆ ಹೇಳಲಿ?
ಇಂದಲ್ಲ ನಾಳೆ ನೀ ಬಂದಾಗ ಬಿಡುವು ಮಾಡಿಕೋ, ರಾಶಿ ರಾಶಿ ಪತ್ರಗಳನ್ನೆಲ್ಲಾ ಓದಿಬಿಡು, ಎಲ್ಲ ಅಲ್ಲಿ ದಾಖಲಾಗಿದೆ.-
ಎಲ್ಲವನ್ನು ದಕ್ಕಿಸಿಕೊಳ್ಳಬೇಕೆಂಬ
ಹಟದಲ್ಲಿಯೇ ಸಾಗಿದೆ ಜೀವನ,
ಸಿಕ್ಕಿದ್ದನ್ನು ಸಹ ಅರಗಿಸಿಕೊಳ್ಳದಿದ್ದರೆ
ಆಗದು ಜನ್ಮ ಪಾವನ.-
ನಾವು ಯಾವ ರೀತಿಯಾಗಿ ಮಾತನಾಡಬೇಕು ಎಂಬುದನ್ನು ಕಲಿಸುವ ತರಗತಿಗಳು ಇಲ್ಲ. ನಮ್ಮ ಮನಸ್ಸೇ ನಮ್ಮ ಗುರು. ನಾವು ಮಾತನಾಡುವ ರೀತಿಯನ್ನು ನೋಡಿದ ಜನ ನಮ್ಮ ವ್ಯಕ್ತಿತ್ವವು ಯಾವ ಮಟ್ಟದಲ್ಲಿದೆ ಎಂಬುದನ್ನು ನಿರ್ಧರಿಸುತ್ತಾರೆ. ಒಳ್ಳೆಯ ಮಾತು ಮುತ್ತಿನಂತೆ. ಮಾತು ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಾರವನ್ನು ಹೇಳುತ್ತದೆ. ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಅಂದೇ ದಾಸರು ಘಂಟಾಘೋಷವಾಗಿ ಹೇಳಿದ್ದಾರೆ, ಶುಭೋದಯ.🙏💐🤝🌹😊👏
-
ಯಾವ ಸಿಂಗಾರವೂ ನಿನ್ನಂತರಂಗದ ಕಂಗಳಿಗೆ ಗೋಚರಿಸಲಿಲ್ಲ
ನನ್ನಂತರಂಗದ ಮಿಡಿತಗಳಲ್ಲಿ ಸದಾ ನಿನ್ನ ಹೆಸರೇ ಇದೆ.-
ಅನಂತ ಬಯಕೆಗಳಿವೆ, ಈಡೇರವು ಎಂಬ ದುಃಖವಿದೆ
ಈಡೇರಿದವುಗಳಿಂದ ಸುಖವೂ ದಕ್ಕಲಿಲ್ಲ ಎಂಬ ಕೊರಗಿದೆ.-