*ಕುಸುಮ ಷಟ್ಪದಿ*
ಮಂಜು ಮುಸುಕಿದ ಹಾಗೆ
ನಂಜು ಅಂತರಾಳದಿ
ಪಂಜಿನಂತೆ ಉರಿದು ಖುಷಿಯ ದಹಿಸಲು !
ಜಂಜಾಟದ ಬದುಕಿದು
ಅಂಜಬೇಡ ಯಾರಿಗು
ಬಂಜತನದ ಕಹಿಮನವೆ ತುಂಬಿರಲು !
ಕೆಲ ಕ್ಷಣಗಳೆ ಹೀಗೆ
ಛಲವು ಇರಲು ಜೀವನ
ಗೆಲುವಹಾದಿಯು ಚಿಮ್ಮಿತು ಭುಗಿಲಂತೆ !
ಬಲ ಕುಗ್ಗಲು ಬಾಳಲಿ
ನೆಲೆಕಾಣದೆ ಹೋದೆನು
ಅಲೆಮಾರಿ ಬದುಕು ತಿಳಿದ ಮುಗಿಲಂತೆ !
-
ಊರು ಚಾಮರಾಜನಗರ,,
ಬರಹಗಾರನೇನಲ್ಲ,
ಮನದಿ ಮೂಡಿದ , ಕಣ್ಣಿಗೆ ಕಂಡ ಚಿತ್ರಣವ
ಹಾಳೆಯ ಮೇಲೆ ಬಿತ... read more
** ಮುಕ್ತಕ **
ಯುವಜನರ ಬದುಕಿನಲಿ ಉತ್ಸಾಹ ತುಂಬುತಲಿ ನವದಿನಕೆ ಬೆಳಕೀವ ಬೆಂಕಿಚೆಂಡಿವರು !
ಜವವಿರಲಿ ಗುರಿಯೆಡೆಗೆ ನಡೆಮುಂದೆ ಎನ್ನುತಲಿ ವಿವೇಕರಮರ ಜಗದಿ - ನೀಲಕಂಠ....
-
*"ಕಾಸಿನ ಗಿಡ''*
(ಅಜ್ಜಿ ಹಾಗೂ ಮೊಮ್ಮಗನ ಭಾಂದವ್ಯದ ಸಂಭಾಷಣೆ)
(Read caption)
👇👇👇👇👇
ಭಾಗ ೧-
ಮಮತೆಯ ತೋರುತಲಿ ಪಾಲನೆಯ ಮಾಡುವಳು
ತಮವನೋಡಿಸಿ ತಾಯಿ ಬೆಳಗುತಲಿ ಬಾಳು
ಜಮಸೋತು ಶರಣಾದ ತ್ಯಾಗಮಯಿ ಸೇವೆಗೇ
ಅಮ್ಮ ಗೋಚರ ದೈವ - ನೀಲಕಂಠ....
-
* ~ ಮುಕ್ತಕ ~*
ಮನದಲ್ಲಿ ಮೂಡುತಿಹ ಬಯಕೆಯದು ನೂರಿರಲು
ಧನಕನಕ ಸರ್ವವನು ಕೊಂಡುಣಲು ತರವೆ
ಹೃನ್ಮನದ ಒಲುಮೆಯನು ಓಲೈಸೊ ಭಾವವಿದೆ
ಹೊನ್ನಿನಿಂದಸಾದ್ಯವು -- ನೀಲಕಂಠ...
-
ಜೀವನವದು
ಸುಖಮಯ,ಆದರೆ
ನಿರೀಕ್ಷೆ ಬಿಡು,,
ಬದುಕಿನಲಿ
ತಾಳ್ಮೆಯಿರಲಿ,ನಡೆ
ಕೋಪವ ಸುಡು,,,,
ಆಳಾಗಿ ದುಡಿ
ಅರಸ ನೀ, ಆದರೆ
ಆಸೆಯ ಬಿಡು,,,
ಬಯಸಿದ್ದೆಲ್ಲಾ
ದಕ್ಕದು,ಇದ್ದದುಂಡು
ತೃಪ್ತಿಯ ಪಡು,,,,
ಖಾಲಿಕೈ ಯಾತ್ರಿ
ಮರೆಯದೆ,ದೋಚಲು
ಹಕ್ಕಿಲ್ಲ ಬಿಡು,,,,-
''💐ವೀರ ಧೀರ ರಕ್ಷಕ, ದೇಶ ಕಾಯೋ ಸೈನಿಕ💐'',,
ಬಿಸಿಲು-ಮಳೆಯೆನ್ನದೆ ಬಿರುಗಾಳಿಗೂ ಜಗ್ಗದೆ,
ಹಗಲು-ಇರುಳೆ ಆಗಲಿ ವೈರಿಪಡೆಗೆ ಅಂಜದೆ
ಕಣ್ಣಮುಂದೆ ಮೃತ್ಯುವಿರಲು ಎದೆಯನೊಡ್ಡಿ ನಿಲ್ಲುವ
ವೀರ ಧೀರ ರಕ್ಷಕ, ದೇಶ ಕಾಯೋ ಸೈನಿಕ,,,!!
ಸೋಲು-ಗೆಲುವು ನಂತರ, ಕಾಯಕವು ನಿರಂತರ,
ಪ್ರೀತಿ ಬುತ್ತಿ ಮನೆಯಲಿ, ದೇಶಸೇವೆ ಮನದಲಿ
ಆಸೆ ಅಳಿಸಿ ತ್ಯಾಗ ಮೆರೆದು ದೂರ ಸಾಗಿ ನಿಂತನು
ವೀರ ಧೀರ ರಕ್ಷಕ, ಗಡಿಯ ಕಾಯೋ ಸೈನಿಕ,,,!!
ಹುಟ್ಟು-ಸಾವು ಶಾಶ್ವತ, ಬಿಟ್ಟು ಹೋದೆ ನಿನ್ನ ಗುರುತ
ಹುತಾತ್ಮರ ಸಾಲಲಿ ನೀನೆಂದೆಂದಿಗೂ ಅಜರಾಮರ
ಏ ಖಾಲಿ ಕೈಯ ಸವಾರ, ದ್ವೇಷಬಿಟ್ಟು ಗೌರವಿಸು ಇವರು
ವೀರ ಧೀರ ರಕ್ಷಕ, ದೇಶ ಕಾಯೋ ಸೈನಿಕ,,,!!
-