ಅವಮಾನ
ಸಹಿಸಿಕೊಂಡು
ಕನಿಷ್ಟನಾಗುವ
ಬದಲು;
ಅವಮಾನವನ್ನೇ
ಮೆಟ್ಟಿ ಬಲಿಷ್ಠನಾಗು.!-
ಯಾರೋ ಒಬ್ಬರು
ನಿಮ್ಮನ್ನ
ತಿರಸ್ಕರಿಸಿದರೆಂದು
"ದುಃಖಿಸುವ ಅಥವಾ ಚಿಂತಿಸುವ"
ಅವಶ್ಯಕತೆ ಇಲ್ಲ
ಯಾಕಂದ್ರೆ..
ದುಬಾರಿಯಾದುದ್ದನ್ನು
ಕೊಳ್ಳಲು ಎಲ್ಲರಿಗೂ
ಸಾಧ್ಯವಿರುವುದಿಲ್ಲ..-
ಸಾಧನೆಯ
ಹಾದಿಯಲ್ಲಿ
ಸಾವಿರಾರು
ಅವಮಾನವೇ
ಬಹುಮಾನಗಳು
ಬೆಂದು-ಬದುಕಿ
ಭರವಸೆ ನೀಡಿ
ಬೇಸರ ಪಡೆಯಬೇಡಿ.
-Gayatri CD
-
ಮನಬಿಚ್ಚಿ ಮಾತನಾಡುವ ವ್ಯಕ್ತಿಗಳಕ್ಕಿಂತ
ಚುಚ್ಚಿ ಮಾತನಾಡುವ ಜನರ ಹಾವಳಿ ಹೆಚ್ಚಾಗಿದೆ
ತಿರಸ್ಕಾರವಾದ ಕ್ರೋಧಕೆ ಪ್ರತೀಕಾರ ನೀಡಲೇಬೇಕು.
ಕಾಲವಂಚನೆ ಮಾಡುವ ಭಾವನೆಗಳಿಗೆ
ಕಾವ್ಯಲೋಕದ ಸೊಬಗಿನ ಅರಿವು ಮೂಡಿಸಿ
ಬರವಣಿಗೆಯ ಪಾತ್ರದ ಮಹತ್ವ ತಿಳಿಸಲೇಬೇಕು.
ಪ್ರತಿಭೆಯಿಂದ ಬಂದ ಪ್ರಮಾಣಿಕತೆ
ಪರರ ಉದ್ಧಾರಕೆ ಹೊರತು
ಪ್ರೇಕ್ಷಕರಿಗೆ ಪೀಡಿತವಾಗಿರಬಾರದು.
-Gayatri CD
-
ನನ್ನ ಹಿತ ಶತ್ರುಗಳು ಅಥವಾ ವಿರೋಧಿಗಳು ನನ್ನನ್ನ ಎಷ್ಟು ತುಳಿಯಲಿಕ್ಕೆ ಪ್ರಯತ್ನ ಪಡ್ತಾರೊ ಅಷ್ಟೇ ವೇಗವಾಗಿ, ರಭಸವಾಗಿ ಮತ್ತು ಆತ್ಮವಿಶ್ವಾಸದಿಂದ ಮರಳಿ ಮೇಲೆದ್ದು ಬರ್ತೀನಿ. ಮತ್ತೆ ಎಷ್ಟು ಅವಮಾನ ಮಾಡ್ತಾರೊ ಅದಕ್ಕಿಂತ ಜಾಸ್ತಿ ಸನ್ಮಾನಿಸಿಕೊಳ್ಳಲು ಶತಪ್ರಯತ್ನ ಮಾಡೇ ಮಾಡ್ತೀನಿ, ಯಾಕಂದ್ರೆ ನಾನು ನನ್ನ ಜೀವನದಲ್ಲಿ ಸುಲಭವಾಗಿ ಸೋಲು ಒಪ್ಪಿಕೊಂಡ ಉದಾಹರಣೆಯೇ ಇಲ್ಲ. ಮೊದಲನೆಯದಾಗಿ ಸೋಲೊದಿಲ್ಲ, ಅಕಸ್ಮಾತ್ ಸೋತ್ರೆ ಕೈಕಟ್ಟಿ ಕುಡದೆ ಸೋಲಿಸಿದವನ(ರ)ನ್ನ ಜಯಸುವವರೆಗೂ ವಿರಮಿಸುವುದಿಲ್ಲ. ಇದು ನನ್ನ ಗರ್ವದ ಮಾತು ಸೂರ್ಯ ಚಂದ್ರರಷ್ಟೇ ಸತ್ಯ, ಯಾರು ಎನಾದ್ರೂ ಅಂದುಕೊಳ್ಳಿ.
-✍Siddappa S/O Sangappa Kalyani(SSK)🇮🇳-
ಅವಮಾನ ಮಾಡಿದ ಜನರಿಂದ
ಬಹುಮಾನ ಪಡೆದುಕೊಳ್ಳುವ
ದಿನಗಳು ಬರುಬಹುದೆಂದು
ಕಾದು ನೋಡಬೇಕಾಗಿದೆ....-
ನಮಗೆ ಅವಮಾನ ಆಗಲಿ
ಎಂದೇ ಕೆಲವರಿಗೆ ಕೋಪ ಬರಿಸುತ್ತೆವೆ
ಅವರ ಕೋಪದ ಮಾತುಗಳೇ ನಮಗೆ
ಮುಂದಿನ ರಹದಾರಿಯಾಗಲೆಂದು
ನಮಗೆ ಸನ್ಮಾನ ಆಗಲಿ ಎಂದು..
-
ಸಾಧನೆಯ ವಿಧಾನ
ಎಲ್ಲಿ ನಿನಗೆ ಆಗಿದೆಯೋ ಅಪಮಾನ
ಅಲ್ಲಿಯೇ ಆಗಬೇಕು ನಿನಗೆ ಸನ್ಮಾನ
ಅದೇ ನಿನ್ನ ಸಾಧನೆಯ ಗಮ್ಯಸ್ಥಾನ-