ಸಾವಿರಾರು ಮುಗ್ಧ ಮನಸ್ಸುಗಳ
ತಪ್ಪನ್ನು ತಿದ್ದಿ ಅಜ್ಞಾನದಿಂದ
ಸುಜ್ಞಾನವಂತಾರನ್ನಾಗಿಸುವ
ಗುರುಶಿಲ್ಪಿ, ಸಮಾನತೆ ಸಾರುವ
ಸದ್ಗುರುವೇ ನಿಮಗಿದೋ ಸಾವಿರ
ಸಾವಿರ ಶರಣು...
ಸಮಸ್ತ ನನ್ನ ಗುರುವೃಂದಕ್ಕೂ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು-
ನಮ್ದು ಗಿರಿಜಿಲ್ಲೆ ಯಾ... read more
ಮೊದಲು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿರಿ ನಂತರ ಪರರ ತಪ್ಪನ್ನು ಎತ್ತಿ ಹಿಡಿಯಿರಿ
ಪರರ ಮೇಲೆ ಅನುಮಾನ ಪಡಬೇಕು
ಆದರೆ ಅದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಇದ್ದ ಮರ್ಯಾದೆ ಕಳೆದುಕೊಳ್ಳುವಂತಾಗಬಾರದು....-
ಜನ ಸಂಪಾದ್ನೆ ಅಂದ್ರೆ
ನೂರುಪಾಯಿ ಪೆಟ್ರೋಲ್ಗೆ,
ನಾಷ್ಟಾ&ಎಣ್ಣೆ ಹೊಡೆಯೋಕ್ಬರೋ
ರಾಜಕೀಯ ಪುಡಾರಿ ಜನಗಳಲ್ಲ,
ಹೃದಯ ದೇಗುಲದಲ್ಲಿ ದೇವರಾದವ್ರು
ಅವ್ರೇ ನಮ್ಮಪ್ಪು ಮುಂದೆಂದೂ
ಮಾಸದ ಸವಿನೆನ್ಪು....-
ಬೊಗಳೋ ನಾಯಿ ಕಚ್ಚೋಲ್ಲಾ
ಎನ್ನೋದು ಎಷ್ಟು ಸತ್ಯವೋ
ನಮ್ಮನ್ನು ಕಂಡು ಉರ್ಕೋತ್ತಾರೆ
ಅನ್ನೋದು ಅಷ್ಟೇ ಸತ್ಯ!-
****ಹಳೆ ಗಾದೆ****
ನಾಯಿಗಳು ಬೊಗ್ಳಿದ್ರೆ
ದೇವಲೋಕ ಹಾಳಾಗುತ್ತ!
****ಹೊಸ ಗಾದೆ****
ಹೇಟರ್ಸ್ಗಳು ಬೊಗ್ಳಿದ್ರೆ
CSK ಸೋಲುತ್ತ!-
*****ಎಚ್ಚರಿಕೆ*****
_______________________________________
ಸ್ನೇಹಿತ ಅನ್ನೋ ಪದ ಶ್ರೀಮಂತಿಕೆ
ಮತ್ತು ಬಡತನ ನೋಡಿ ಹುಟ್ಟುವಂತ್ಹದ್ದಲ್ಲ;
ಅದು ತಾನಾಗಿಯೇ ಹುಟ್ಟುವಂತ್ಹದ್ದು!
ಕಷ್ಟ ಕಾಲದಲ್ಲಿ ನೆರವಾಗುವವನೇ
ನಿಜವಾದ ಸ್ನೇಹಿತ. ಸ್ನೇಹಿತ ಅನ್ನೋ
ಪದ ಬಳಸಿ ತಮ್ಮ ಅವಶ್ಯಕತೆಗೆ
ನಮ್ಮನ್ನು ಬಳಸಿಕೊಳ್ಳುತ್ತಿರುತ್ತಾರೆ
ಅಂತವರಿಂದ ಜಾಗರೂಕರಾಗಿರಿ!-
*****ನನ್ನವಳ ನೆನಪು*****
ಎದೆಯಾಳದಿ ನೆಲೆಯೂರಿದ
ಬೆಳದಿಂಗಳ ಬಾಲೆ,
ನಗುತ್ತಲೇ ಪ್ರೇಮಲೋಕಕ್ಕೆ
ಆಹ್ವಾನಿಸಿದ ನಲ್ಮೆ,
ಸುಮಧುರ ಕಂಠದಿ ಸೆಳೆದ
ನಲ್ಮೆಯ ಗಾನಕೋಗಿಲೆ,
ಬಂದು ಸೇರೊಮ್ಮೆ ಪರಿ
ಪರಿಯಾಗಿ ಹವಣಿಸುತ್ತಿದೆ
ನಿನ್ನೆಸರು ಕೋಮಲೆ!
-
ನನ್ನ ಸ್ನೇಹ ಒಂತರಾ ಹಾಗಲಕಾಯಿ
ಬೇವಿನ ಎಲೆ ಇದ್ದಂತೆ,
ತಿನ್ನೋಕೆ ಕಹಿಯಾಗಿದ್ರೂ ಆರೋಗ್ಯಕ್ಕೆ
ಒಳ್ಳೆಯದು!-