ಯಾರಿಗೂ ಆದ್ಯತೆ ಅವಶ್ಯಕತೆಗೆ
ಬಳಕೆಯಾಗುವ ರೀತಿ ಬದುಕಬೇಡ.
ಬೇಕೇ ಬೇಕು ಎನ್ನುವ ಅನಿವಾರ್ಯತೆ
ಇರುವವರ ಜೊತೆ ಬದುಕು ಇರಲಿ.!
-
ಅಕ್ಟೋಬರ್ 12ಕ್ಕೆ ಜನನ
ಮೂಲ ಹೆಸರು- ಇಮಾಮ್ ಸಾಬ್ ... read more
ಉತ್ತಮ ಗುಣಗಳು
ಮನಸ್ಸುಗಳನ್ನ ಒಗ್ಗೂಡಿಸುತ್ತದೆ!
ಅತ್ಯುತ್ತಮ ಸಂಬಂಧಗಳು
ಹೃದಯಗಳನ್ನ ಪ್ರಬಲಗೊಳಿಸುತ್ತದೆ.!-
ಮೋಸ ಯಾವ ರೀತಿ ಮಾಡಬೇಕೆಂದು
ಅವಳು ನನಗೆ ಚನ್ನಾಗಿ ಅರ್ಥ ಮಾಡಿಸಿದಳು.
ಅದನ್ನ ಅನುಭವಿಸಿದ ನನ್ನ ಮನಸ್ಸು
ಯಾರಿಗೂ ಮೋಸ ಮಾಡಬಾರದೆಂದು ಅರಿತೆ.!-
ಋಣವಿಲ್ಲದ ಕೆಟ್ಟ ಸಂಬಂಧಗಳ
ಹಿಂದೆ ಹೋದರೆ ತೃಣಕ್ಕೆ ಸಮಾನವಾಗುತ್ತದೆ.
ಆ ಸಂಬಂಧಗಳನ್ನು ಮನಸ್ಸಿಂದ ಕಳೆದು;
ಋಣವಿರುವ ಸಂಬಂಧಗಳಿಗೆ ಕೂಡಬೇಕು..!-
ನಮ್ಮಲ್ಲಿರುವ ಒಳ್ಳೆಯತನ ಯಾವತ್ತಿಗೂ
ಯಾರಿಗೂ ಸಾಬೀತು ಪಡಿಸಲು ಕಷ್ಟ ಪಡಬಾರದು.
ನಾವ್ ಏನ್ ಅಂತಾ ಬೇರೆಯವರಿಗೆ;
ಕಷ್ಟ ಪಟ್ಟು ಅರ್ಥ ಮಾಡಿಸುವುದರಲ್ಲಿ ಕಿಮ್ಮತ್ತಿಲ್ಲ..!-
ಇಬ್ಬರೂ ಕೆಟ್ಟ ಘಳಿಗೆಯಲ್ಲಿ ಭೇಟಿಯಾದೆವು
ಇಲ್ಲದಿದ್ದರೆ ಜೀವನ ಪೂರ್ತಿ ಹೆಚ್ಚಾಗಿ ಪ್ರೀತಿಸುತ್ತಿದ್ದೆವು!
ಇನ್ನೊಂದು ಜನ್ಮದಲ್ಲಾದರೂ ಇಬ್ಬರು ಜನಿಸಿ,
ಒಬ್ಬರಿಗೊಬ್ಬರು ಪರಿಪೂರ್ಣವಾಗಿ ಪ್ರೀತಿಸೋಣ.?-
ತಲೆ ತಗ್ಗಿಸಿ ಕೆಲಸ ಮಾಡಿದರೆ
ತಲೆ ಎತ್ತುವಂತ ಫಲ ನೀಡುತ್ತದೆ
ನಮ್ಮ ಸತತ ಪರಿಶ್ರಮದಲ್ಲಿ,
ಫಲವತ್ತಾದ ಬೆಲೆ & ನೆಲೆ ಅಡಗಿದೆ..!-
ಕೆಲವರ ಜೊತೆಗೆ ನನ್ನ ಮಾತಿಂದ ದೂರಿಲ್ಲ
ನನ್ನ ಮನಸ್ಸಿಂದ ಬಹಳ ದೂರ ಇಟ್ಟಿದೀನಿ ಅಷ್ಟೇ.
ಮುಂದೆ ಹೇಗೆ ಇದೀನಿ ಅಂತಾ ತೋರಿಸಿದಷ್ಟು
ಹಿಂದೆ ಹೇಗೆ ಇದೀನಿ ಅಂತಾ ಹೆಚ್ಚು ತೋರಿಸಿದ್ದಾರೆ..!-
ನಿಮ್ಮ ಬಗ್ಗೆ ಮನಸ್ಸು ಯೋಚಿಸುವುದರಿಂದ,
ನನ್ನ ಅಡಗಿರುವ ನಿಷ್ಠೆಯೆಲ್ಲ ಹಾಳಾಗಿ ಹತ್ತಿ ಬಿತ್ತಿದೆ,
ನಿತ್ಯ ಬೀಳುವ ಈ ಕನಸುಗಳಿಗೂ ಕೆಲಸ ಇಲ್ಲಾ!
ಮತ್ತೆ ನಿಮ್ಮನ್ನು ನೆನಪಿಸಿ ನನ್ನ ಹಾಳು ಮಾಡುತ್ತಿವೆ.!-
ಪ್ರೀತಿಸಿದವರ ಪ್ರೀತಿ ಸಿಗಲಿಲ್ಲ ಅಂತಾ
ಅದೇಷ್ಟೋ ಪ್ರೇಮಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಆದರೆ ಹೆತ್ತವರಿಗಾಗಿ ಯಾರೊಬ್ಬರೂ
ಹುಚ್ಚರಾಗಿಲ್ಲ ಹಾಗೂ ಪ್ರಾಣ ಕಳೆದುಕೊಂಡಿಲ್ಲ...!-