"ನಮ್ಮ ಆಲೋಚನೆಗಳು ನಮಗೆ
ಕೆಡುಕು ತಂದರು ಸರಿಯೇ,
ಆದರೆ,
ಪರರಿಗೆ ಭಾದೆ ತರುವಂತಿರಬಾರದು..!-
ಧರ್ಮಲಂಡರ ಮಾತಿಗೆ ಮರ್ಮವರಿಯದ
ಯುವಪೀಳಿಗೆ ಬಲಿಯಾಗುತ್ತಿದೆ, ಯಾರೆಷ್ಟೇ
ಸತ್ಯವುಣಿಸಲೋದರು ಎಲ್ಲರಿಗೂ ಸ್ವರ್ಣದಿ
ಬಚ್ಚಿತ್ತ ಮಿಥ್ಯದಸಿವೆ ಹೆಚ್ಚಾಗಿದೆ, ತಮ್ಮ ತಾ
ವಿಮರ್ಶಿಸುವವರೆಗು ಅಧರ್ಮದ ಕೊನೆಯುಂಟೆ..-
ಅಂತೆ ಕಂತೆಗಳ ಸಂತೆಯಲಿ ಮಿಥ್ಯಗಳದ್ದೇ ಚೀರಾಟ
ಮುಖವಾಡ ಹೊದ್ದು ಬಣ್ಣದ ಮಾತುಗಳ ಮಾರಾಟ
ಮಿಥ್ಯಗಳ ಕೊಂಡು ಮೆರೆವ ಮನಗಳ ತೊಳಲಾಟ
ಸುಳ್ಳಿನ ಬಣ್ಣ ಮಾಸಿದಾಗ ಸತ್ಯದ ಗೆಲುವಿನ ಆರ್ಭಟ..-
ಅದೊಂದು ವ್ಯವಸ್ಥಿತಾದ ಸೌಧ
ಸುತ್ತಲೂ ಪಟ್ಟು ಬಿಡದೆ ಪಟ್ಟು ಹಾಕಿ
ಬಣ್ಣಮಾತಿನಿಂದ ಕಟ್ಟಿದ ಗೋಡೆ
ಮೇಲೊಂದು ಕಪಟತನದ ಛಾವಣಿ..
ಮುಗ್ದ ಮನದ ಮೇಲೆ ಹುಸಿಯನಾಡಿ
ಕ್ಷಣಕ್ಕೊಮ್ಮೆ ದಿನಕ್ಕೊಮ್ಮೆ ಬದಲಾಗಿ
ಇಟ್ಟಿಗೆಯನ್ನು ಕಟಿದು ಕಟ್ಟಿದ ಸೌಧವದು
ತಕ್ಕಮಟ್ಟಿಗೂ ಸರಿಯೆನಿಸದ ಮನೆಯದು..
ಉಸರವಳ್ಳಿಗೂ ಸವಾಲೆಸೆದವರು
ನಾಲಿಗೆಯ ಮೇಲೆ ಮಚ್ಚೆಯಿದೆಯೆಂದು
ತಮಗಿರುವ ನಾಲಿಗೆಯ ತೋರಿಸಿ ಮೆಚ್ಚಿಸಿದವರು
ಗರ ಬಡಿಸಿ ಆಕಾಶ ಕೈ ಯೊಳಗೆ ತಂದರಿವರು..
ಸತ್ಯದ ಸೋನೆಗೆ ಸುಳ್ಳಿನ ಸೌಧ ಸೋರಿ
ಪಥ ಬದಲಿಸಿ ಪಾರು ಪಥ್ಯ ಸಾಧಿಸಿತು
ಬಣ್ಣದ ಗೋಡೆ ಸಣ್ಣಗೆ ಕುಸಿಯಿತು
ನಿತ್ಯ ಬದುಕಿನಲ್ಲಿ ಸತ್ಯವು ವಿಜಯಿಯಾಯಿತು.
*ರಮೇಶ್ ಹಡಪದ*
-
ಹರದಾರಿ ಸಾಗಬೇಕಿದೆ
ಹರನು ನಮ್ಮೊಂದಿಗಿರುವಾಗ
ಹರಿತ ಮಾತಿಗೆ ಮೊಳಕೆಯೊಡಿಸಬೇಡ ನಿನ್ನುತ್ತರವ
ಹಾರಿ ಹೋಗೋ ಪ್ರಾಣ ಪಕ್ಷಿಗೆ ಎಲ್ಲಿದೆ ಭೇದ ಭಾವವ..
ಲೆಕ್ಕವಿಟ್ಟಿಹನು ನೋಡವನು
ಸೊಕ್ಕಿನಿಂದ ತಿರುಗಿ
ತಕ್ಕುದಾದ ಬದುಕು ಮಿಕ್ಕ ಮಂದಿ ಬಾಯಿಗೆ
ಸಿಕ್ಕ ಬಾಡೂಟವಾಗದಿರಲಿ...
ಅಡಿಗಡಿಗೆಗೂ ಸತ್ಯವೊಂದಕ್ಕೆ
ನಡಿಗೆಯು ಮುಡಿಪಿರಲಿ
ರಾಡಿಗೆ ಕಲ್ಲೆರೆಚುವ ಹುಂಬುತನವ ಸುಳಿಯದಿರಲಿ
ಮಡಿದರು ಸತ್ಯದ ಪೂಜೆ ನಿತ್ಯವಾಗಿರಲಿ.
*ರಮೇಶ್ ಹಡಪದ*
-
ಕಾಯಕವಿಲ್ಲದೆ ಕುಳಿತು ತಿನ್ನುವವನ ಬಾಳು
ಪ್ರಾಣಿ ಪಕ್ಷಿಗಿಂತಲೂ ಕೀಳು
ಬದಲಾಯಿಸಬೇಕು ಜೀವನದ ತಿರುಳು
ಪರರ ನಂಬಿ ಬದುಕಿದರೆ ಮನೆ ಹಾಳು
ಪರಿಶ್ರಮ ಹಾದಿಯ ಸತ್ಯದ ನುಡಿ ಕೇಳು-
ಒಂದು ನಿಮಿಷದ ಖುಷಿಗೋಸ್ಕರ ಒಂದು ಸುಳ್ಳನ್ನು ನುಡಿದರೆ, ಇಡಿ ಜೀವನವೆಲ್ಲಾ ಭಯಪಡುತ್ತಾ ಜೀವಿಸಬೇಕು, ಆದ್ದರಿಂದ ಕಷ್ಟವಾದರು ಸರಿ ಯಾವಾಗಲು ಸತ್ಯವನ್ನೇ ಹೇಳುವುದು ಒಳ್ಳೆಯದು
-
ಸತ್ಯದ ಹಾದಿಯಲಿ ನಡೆದವರಿಗೆ ಅಸತ್ಯದ ದೂಳು ಮೆತ್ತಿಕೊಂಡಿತು
ನಿಸ್ವಾರ್ಥದ ಮನಕೆ ಸ್ವಾರ್ಥದ ಬೆಂಕಿಯಲಿ ಆಸೆ ಬಲಿಯಾಯಿತು
ನ್ಯಾಯದ ತಕ್ಕಡಿಯಲಿ ಅನ್ಯಾಯದ ಅಸರೆಯ ಪಾಲು ಹೆಚ್ಚಾಯಿತು
ಧರ್ಮದ ನುಡಿಮುತ್ತು ನುಡಿದವರಿಗೆ ಆಧರ್ಮದ ಉರುಳು ದಕ್ಕಿತು
ನಡೆ ಮುಂದೆ ನಡೆ ಮುಂದೆ ದಣಿವು ಹಾರುವ ತನಕ ಅವನೊಬ್ಬ
ನಿನಗೆ ಜೊತೆಗಾರನೂ ಎಂದೆಂದಿಗೂ ಆಸರೆಯ ನೀಡುವನವನು...-
ಎಷ್ಟು ಅಸೆ ಪಟ್ಟು ಗಳಿಸಿದರು ಹೋಗೋ ಸಮಯ ಬಂದಾಗ ಎಲ್ಲವನ್ನು ಬಿಟ್ಟು ಹೋಗಲೇಬೇಕು
ಅದಕ್ಕೆ ಯಾಕೆ ಅಸೆ ಅನ್ನೋ ಮಾಯೆಯ ಸುಳಿಗೆ ಸಿಕ್ಕಾಕೊಂಡು ಇನ್ನು ಬೇಕು ಅದು ನನಗೆ ಬೇಕು ಇದು ನನಗೆ ಬೇಕು ಮಕ್ಕಳು ಮೊಮ್ಮೊಕ್ಲು ಅವ್ರಿಗೂ ಬೇಕು ಅನ್ನೋ ದುರಾಸೆಯ ಮುಟೇನ ಬೆನ್ನಿಗೆ ಕಟ್ಕೊಂಡು ಭಾರ ಹೊರೋಕು ಹಾಗ್ದೆ ಬಿಸಾಕಿ ಇರೋಕು ಹಾಗ್ದೆ ದೇವ್ರು ಕೊಟ್ಟಿರೋ ನೆಮ್ಮದೀನೂ ಕಳ್ಕೊಂಡು ಎಲ್ಲರೋಗಗಳ್ನು ಒಟ್ಟಿಗೆ ಬರಿಸ್ಕೊಂಡು ತಿನ್ನೋದನ್ನು ತಿನ್ನೋಕಾಗದೆ ಮಾತ್ರೆಗಳ್ನ ನುಂಕೊಂಡು ರಾತ್ರಿಯೆಲ್ಲಾ ಕಣ್ಣಿಗೆ ನಿದ್ದೆ ಇಲ್ದೆ ಒರಳಾಡಿ ನರಳಾಡಿ ಸಾಯೋದೆ ಬದುಕಾ? ಇಷ್ಟೇನಾ
ಜೀವನ ಅಂದ್ರೆ ಬೆಡ್ಡೆರೋದನ್ನೆಲ್ಲ ಮಾಡ್ತೀವಿ ದುರಾಸೆಯಿಂದ ಬೇಕಿರೋದನ್ನ ಏನು ಮಾಡಲ್ಲ ತಪ್ಪೆಲ್ಲಾ ಮಾಡಿ ಉಂಡಿಗೆ ದುಡ್ಡು ಹಾಕ್ತಿವಿ ದೇವ್ರು ಕೇಳಿತ್ತಾ ದುಡ್ಡು ಕೊಡು ನಿನ್ನ ತಪ್ಪನ್ನ ಮನ್ನಿಸ್ತೀನಿ ಅಂತ? ಭಗವಂತನ ಸ್ಮರಣೆ ಧ್ಯಾನ ಬಿಟ್ಟು ಉಳಿದಿದ್ದೆಲ್ಲ ಮಾಡ್ತೀವಿ ಪ್ರಾಣ ಭಿಕ್ಷೆ ಅವನು ಕೊಟ್ಟಿರೋದು ಅವನಿಗಾಗಿ 10ನಿಮಿಷ ಧ್ಯಾನಿಸೋಲ್ಲ ಎಲ್ಲಾ ಆಡಂಬರ ಮುಕವಾಡದ ಬದುಕಿಗೆ ಶರಣಾಗಿ ವಾಸ್ತವ ಮೂಲವನ್ನೇ ಮರತೊ ಗಿದಿವಿ ಹೋಗೋವಾಗ ಏನನ್ನು ಹೊತ್ಕೊಂಡೋಗಲ್ಲ ಇರೋವಷ್ಟು ದಿನ ಒಳ್ಳೆಯದನ್ನ ಅಂಚಿ ಎಲ್ಲರೂ ನಗುನಗುತ ಇರೋನಾ.-