ಕೆಲವೊಂದು ಅನಿವಾರ್ಯತೆಗಳು
ಅದುಮಿಟ್ಟ,ನೋವುಗಳನ್ನು
ಅನುದಿನವೂ ನುಂಗುವ ಕೂಲಿಗೆ
ಅಡಿಪಾಯವಿಟ್ಟು ನಂಬಿಕೆಯ ಮಹಲನ್ನು
ಅಲುಗಾಡಿಸಿ ಬಿಡುತ್ತವೆ.
ಪ್ರಶ್ನೆಯೇ ತೂಕ ಕಳೆದುಕೊಂಡಾಗ
ಪ್ರಶ್ನಾರ್ಥಕದೇ ಬಲಾಡ್ಯವಂತೆ
ಪ್ರಶ್ನಿಸುವ ಪ್ರಮೇಯೇ ಬಾರದಿದ್ದರೆ
ಪ್ರಶ್ನೆಗೆ ಸಿಗಬೇಕಾದ ಉತ್ತರವೂ ನಿರುತ್ತರವಂತೆ..-
ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣನ ನಾಡು ಕುಂದಾನಗರಿ ನನ್ನೂರು..ವಿಕ... read more
ಹದಿ ಹರೆಯದ ನಮ್ಮೊಲವಿಗೆ
ಕದ ತೆರೆದ ಪರಿ ಬಲು ಚೆನ್ನ
ಹದವಿದ್ದ ಪ್ರಾಯವದು
ಹಾದಿಗುಂಟ ಬೆನ್ನ ಹತ್ತೋ ಕೂಲಿ ನೀಡಿದ ಕಾಲವದು...-
ನಗೆಯ ಬೀರಿ
ಮೊಗವ ತೋರಿ
ಸನಿಹ ಬಾ ಒಂದೇ ಸಾರಿ..
ಭಾವಗಳೆಲ್ಲ ಹೋಗದಿರಲಿ ಕೈ ಜಾರಿ
ನಿರಾಸೆಯ ಮೂಟೆ
ಎಷ್ಟೊಂತು ಹೊರಲಿ ಪ್ರತಿ ಬಾರಿ..
ನಿತ್ಯ ಉಪವಾಸ ಕಣ್ಣಿಗೆ
ಬೇತಾಳನಾಗಲಾರೆ ಬೆನ್ನಿಗೆ
ಬೀಡು ಬಿಟ್ಟಿರುವೆ ನನ್ನೊಳಗೆ ತಣ್ಣಗೆ..-
ಒಂದೇ ಬಾರಿ ಹೇಳಿ ಬಿಡು
ನೆಪಕ್ಕಂತೂ ಸಾಕಾಗಿದೆ
ಅಸೆಯಂತೂ ಬಯಲಾಗಿದೆ
ಹೃದಯಕ್ಕಂತೂ ನೀನೇ ತಾಗಿದೆ
ಎಲ್ಲ ಮೀರಿ, ಎಲ್ಲ ಮರೆಸೋ ಒಲವಾಗಿದೆ..-
ಎದುರಿದ್ದಾಗ ಅದೆನೋ ಮರೆವು
ಉದರಿಸಬೇಕೆಂಬ ಮಾತಿಗೆಲ್ಲ ಗರ ಬಡಿದು
ಸದರದಲ್ಲೇ ಮೂಕನಾಗುವೆ
ಗದರಿಸಬೇಡ ಹೊತ್ತು ಗೊತ್ತಿಲ್ಲದೆ ಮುದ್ದು ಮಾಡುವೆ-
ಹಳಾಹಳಿಗೆ ನೀ ಹುಳಿ ಹಿಂಡಬೇಡ
ಬಳಿ ಇರದಿದ್ದರೇನಂತೆ
ಉಳಿ ಪೆಟ್ಟು ತಿಂದ ಕಲ್ಲಂತಾದರೂ ಸರಿ
ಅಳಿಯದ ಒಲವಿಗೆ ಜೋತು ಬೀಳುವೆ..-
ಯಾಕಾದರೂ ಸಿಕ್ಕಿಕೊಂಡೆ ನಾ
ನಿನ್ನ ಪ್ರೇಮದ ಪರಿಗೆ
ಅಪರಚಿತನಾದೆ ನಾನೀಗ
ಫಲವತ್ತಾದ ಖುಷಿಯ ಪೈರಿಗೆ.-
ಒಲವು ಚಿಗುರಲಿ ಬಿಡಿ ಮರಳಿ
ಹಲವಿರಲಿ ಕಾರಣ ದೂರಾಗಲು
ನಲಿಯುತಲಿರಲಿ ಮನವು ಹಗುರಾಗಲು
ಬೇಲಿ ತೆರೆಯಲಿ ,ಒಲವೊಂದೆ ಬಾಳ್ವೆಗೆ ಹೆಗಲಾಗಲಿ..-
ಸೆಪ್ಟೆಂಬರ್ 5 1940 ರಂದು ಬಿಜ್ಜರಗಿ
ಗ್ರಾಮದೊಳು ಉದಯವಾಯಿತೊಂದು ನಕ್ಷತ್ರ
ಭೂಮಂಡಲದ ಅಜ್ಞಾನ ತೊಲಗಿಸಿ,
ಜ್ಞಾನ ಉಣಬಡಿಸಲು ಭಾವ್ಯಕ್ಯತೆ ಸಾರಲು,.
ಅಡಿ ಬರಹ
👇👇👇
-
ಗುಬ್ಬಿಯ ಮರಿಯೊಂದು ಕಂಡು
ಈಗೀಗ ನಿಬ್ಬೆರಗಾಗುತಿರುವೆವು
ದಿಬ್ಬದ ಮೇಲೊಂದು ಗಿಡವುಂಟು
ಹೆಬ್ಬಾವಿಯೂ ಅಲ್ಲಲ್ಲಿ ಇರುವುದುಂಟು
ಎತ್ತಲೋ ಕಣ್ಮರೆಯಾಗಿ ಕಳಚಿತು
ನಮ್ಮ ಅವರ ನಂಟು
"ಗುಬ್ಬಿಯೆಂದರೆ ಬಿಡಿಸುವಂತಾಗಿದೆ ಚಿತ್ರ
ಗತಕಾಲವಾಯಿತಲ್ಲ "ಗೂಡು" ಎಂತ ವಿಚಿತ್ರ..
-