ಬಾಳಯಾನದಲಿ ಮಿತ್ರರು ಬಲ ತುಂಬಿಸಿದರೆ,ಶತ್ರು ಛಲವನ್ನು ನೀಡುತ್ತಾರೆ.
ಸಂಬಂಧಗಳನ್ನು ಹೇಗೆ ನಿರ್ವಾಹಿಸಬೇಕೆಂದು ನಮ್ಮ ನಾಲಿಗೆಯ ಮಾತುಗಳ ಹಿಡಿತದಿಂದ ಒಳಿತು ಕೆಡಕು ನಿರ್ಧಾರವಾಗುವುದು.-
ಇದ್ದುದ್ದರಲ್ಲೇ ತೃಪ್ತಿ ಪಟ್ಟು ಜೀವನ ನಡೆಸುವವನು ಸಿರಿವಂತ...
ಇನ್ನೊಬ್ಬರ ಐಸಿರಿಯನ್ನು ಕಂಡು ಮರುಗುವವನು ನಿಜವಾದ ಬಡವ.-
ಸುಳ್ಳು ಹೇಳಿ ಜನರನ್ನು ನಂಬಿಸುವವರಿಗೆ ಸತ್ಯ ಎಂದೂ ಕಹಿಯೇ ....ಇಂತವರೇ ಎಲ್ಲರಿಗೂ ಇಷ್ಟಪಾತ್ರರು...ಒಮ್ಮೆ ಸುಳ್ಳಿನ ಕವಚ ಕಳಚಿದಾಗ ನಿಜರೂಪ ಎಲ್ಲರಿಗೂ ಅರ್ಥವಾಗುವುದು.ಇದೇ ಸುಳ್ಳು ಸತ್ಯದ ವ್ಯತ್ಯಾಸಗಳು.
-
ಚಿಂತೆಯ ಗೂಡಿಗೆ ಸಿಲುಕದೆ
ನಗ ಬೇಕಿದೆ ಎಲ್ಲ ಮೆರೆತು
ಹಗೆ ದ್ವೇಷಕ್ಕೆ ನಲುಗದೆ
ಒಲವ ಬಾಂಧವ್ಯದೊಂದಿಗೆ ಬೆರೆತು-
ಒಲವ ಮಾತಿನಿಂದ ಮಾಡಿದೆ ಮೋಡಿ
ಸಿಹಿಜೇನಿನಂತೆ ಅಕ್ಕರೆಯ ಆಶ್ರಯ ನೀಡಿ
ಸಾಗಿದೆ ಹೊಂದಾಣಿಕೆಯ ಸಂಸಾರ ಬಂಡಿ
ಮಧುರವಾಗಿ ಉಳಿದಿದೆ ಬಾಂಧವ್ಯ ಕೊಂಡಿ-
ಸಾಹಿತ್ಯ ಲೋಕದ ಅನರ್ಘ್ಯ ಮುತ್ತು
ಬಂಟ ಶಿರೋಮಣಿ ಬಿರುದಾಂಕಿತ ಗತ್ತು
ಮಮತೆಯ ಪ್ರೀತಿಪ್ರೇಮ ಮಡಿಲ ಹೊತ್ತು
ನಿಮ್ಮ ಆಶೀರ್ವಾದವೇ ಬಾಳಿಗೆ ಕರಾಮತ್ತು
-
ಸುಜ್ಞಾನ ಬೆಳಗುವುದು ಪುಸ್ತಕ
ಚುರುಕುಗೊಳ್ಳುವುದು ಮಸ್ತಕ
ಬಾಳಮೌಲ್ಯ ತಿಳಿಸುವ ದ್ಯೋತಕ
ಅಂಧಕಾರವಿದ್ದರೆ ಬಾಳಿಗೆ ಮಾರಕ-
ಹಸಿರು ಹೊತ್ತ ಮಡಿಲಿನಲಿ
ಭಾವನೆಗಳ ಭವ್ಯ ತೇರಿನಲಿ
ನೆನಪುಗಳ ಸವಿ ಅಲೆಯಲಿ
ಬಾಳ ಬದುಕಿನ ಪಯಣದಲಿ-
ಎಲ್ಲಿ ಪ್ರೀತಿ ಕಮ್ಮಿ ಆಗುತ್ತ ಹೋಗುವುದೋ ಅಲ್ಲಿ ತಪ್ಪುಗಳ ಸರಮಾಲೆಯೇ ಕಾಣಲು ಸಿಗುವುದು ಆದರಿಂದ ಸ್ನೇಹ ,ಒಲವು ,ಪ್ರೇಮವನ್ನು ತಾಳ್ಮೆಯಿಂದ ನಿಭಾಯಿಸಿದರೆ ಬಾರದು ಕೆಡುಕು.
-