🌹ಭಾವ ಶರಧಿ🏹   (✍️ಜಯಶೀಲಾ S🌹)
1.1k Followers · 403 Following

read more
Joined 15 November 2018


read more
Joined 15 November 2018

ಅಂತರಾಳಕ್ಕೂ ಅಂತರಂಗದೊಳಭಾವಕ್ಕೊ
ಆವರಿಸುವ ಚೆಲುವು ಇವಳು
ನಿಸರ್ಗದ ಜೊತೆ ನಿರ್ಗಳವಾಗಿ
ಬೆರೆತ ಮೈಸಿರಿಯವಳು
ಮುಂಗುರುಳು ಮುಗುಳುನಗೆ
ಜೋರು ಸಂಭಾಷಣೆ ನಡೆಸುತ್ತಿರಲು
ಕಾಫಿಯ ಬಟ್ಟಲು ಅವಳಧರಗಳ ಅಪ್ಪಲು
ಒಂದೇ ತುಮುಲು.
ಶ್ವೇತವರ್ಣದ ಉಡುಗೆ
ಅವಳೊಟ್ಟಿಗೆ ಬೇಕೆಂತಲೆ ಸಲಿಗೆ
ಇಬ್ಬನಿಗೂ ಬೇಕೀಗ ಅವಳ
ಅನೌಪಚಾರಿಕ ಬೆಸುಗೆ .
ಅವಳದ್ದೇ ಲೋಕದಲಿ ಏಕಾಂತವಾಗಿರಲು
ತುಂಪುಗಾಳಿಯ ಚುಂಬನದ ಪ್ರಖರ
ಇವಳಂದಕ್ಕೆ ಮಾರುಹೋಗಿ ಬೇಕೆಂತಲೆ ಬಚ್ಚಿಟ್ಟುಕೊಂಡನೇ ನೇಸರ?

-



"ಅವನು"
ತುಂಬಾ...ಸದ್ಗುಣವಂತ ಪ್ರೀತಿ ಮಾಡುವುದರಲ್ಲಿ
"ಅವಳು"
ತುಂಬಾ... ಸಂಸ್ಕಾರವಂತೆ ಭಾವನೆಗಳ ಬಚ್ಚಿಡುವುದರಲ್ಲಿ.

-



ಸುಳ್ಳೇ ಸುಂದರ
ಸುಳ್ಳೇ ಆಧಾರ ನಮ್ಮ ಗ್ರಹಚಾರ ಚನ್ನಾಗಿದ್ದಾಗ.
ನಮ್ಮ ಗ್ರಹಚಾರ ಕೆಟ್ಟಾಗ
ಅಸಲಿ ಸತ್ಯ ಹೊರ ಬಂದಾಗ ಸುಳ್ಳಿಗೊಂದು
ಅಂತ್ಯ ಸಂಸ್ಕಾರ.😂

-



ನಮ್ಮ
ಮನಸನ್ನು
ಪರಿಶುದ್ಧವಾಗಿಡದೆ
ದೇವರಿಗೆ
ಅದೆಷ್ಟೆ ಪೂಜೆ
ಪುನಸ್ಕಾರಗಳ
ಮಾಡಿದರು
ದೈವಾನುಗ್ರಹವಾಗುವುದಿಲ್ಲ.

-



ಜೀವನದಲ್ಲಿ ಎಂದಾದರೊಮ್ಮೆ ಎಲ್ಲವೂ ನಮ್ಮ ಕೈತಪ್ಪಿ ಹೋಗುತ್ತಿದೆ ಎಂದೆನಿಸುವುದು ಸಹಜ.
ಜೀವನದಲ್ಲಿ ಪೂರ್ತಿಯಾಗಿ ಪ್ರತಿ ಆಯಾಮದ ಪರಿಶೋಧನೆಯ ಜೊತೆಗೆ ಬದುಕುವುದು.
ಬರಿಗೈನಿಂದ ಬಂದಿದ್ದೀನಿ ಹೋಗುವಾಗಲು ಹೊತ್ತೋಗುವುದು ಏನು ಇಲ್ಲ .ಇಲ್ಲಿ ನಾವು ಹೇಗೆ ಬದುಕಿದರು ಉತ್ತೀರ್ಣರೇ....ಜೀವನ ಬಂದಂತೆ ಸ್ವೀಕಾರ ಮಾಡಬೇಕು ಅಷ್ಟೆ.

-



ಮನೆ ಮನ
ಎಲ್ಲವೂ ಸೊಗಸು
ಪ್ರಕೃತಿಯ ಜೊತೆ ಬೆರೆತರೆ
ಕರುಣೆ ಧಯೆ ಜೀವನದ
ಬಹುದೊಡ್ಡ ಆಸರೆ.

-



ಅತ್ಮೀಯ ಅನುಬಂಧಕ್ಕೆ ಮುಗುಳು ನಗೆಯ ಸ್ಪಷ್ಟತೆ

ಅಂತರ್ಯದೊಳಗೆ ಅವಲೋಕನ ಮಾಡುವುದೇನಿಲ್ಲ‌ ವಿಶ್ಲೇಷಣೆ.

-



ಬಿಟ್ಟೋದರು, ಕಣ್ಮರೆಯಾಗಲಿಲ್ಲ
ಮನಸ್ಸಿಂದ ದೂರ ಹೋಗಲಿಲ್ಲ.
ಹುಚ್ಚಿಯಾದೆ ನಿನ್ನಿಂದ
ದೂಡುವವರಿಗೆ ಸಲಿಗೆಯಾಗಿ
ದೂಷಿಸುವವರಿಗೆ ಬಲಿಯಾಗಿ.
ಸಂಕಟದ ಸಹವಾಸವೂ ಆಯ್ತು
ಇಷ್ಟಾದರು.... ಮನಸು ಕಲ್ಲಾಗದೆ
ನೆನಪುಗಳ ಜೊತೆ ಸೇರಿ ಸ್ವಾರ್ಥಿಯಾಗಿದೆ .
ಜೀವನದ ಮುಗಿದ ಅಧ್ಯಾಯದಲ್ಲಿ
ಮೌನ ಮರುಕ ಪಡುತ್ತಿದ್ದರೆ
ದುಃಖ ನಿಶಬ್ದವಾಗಿದೆ.

-



ಯಾರದೇ ಮಾತನ್ನು
ಕಡೆಗಾಣಲೂಬಾರದು
ಹೆಚ್ಚು ಕಿವಿಗೊಡಲೂ ಬಾರದು
ಮಾತು ಮುತ್ತು
ಮಾತಿನಿಂದಲೇ ಕುತ್ತು.

-



ಯಾರೋ ಒಬ್ರು ಇದ್ದಕ್ಕಿದ್ದಾಗೆ
ಯಾವುದೋ ರೂಪದಲ್ಲಿ ನಮ್ಮ ಜೀವನಕ್ಕೆ ಬರ್ತಾರೆ
ನಮ್ಮ ಮನಸ್ಸಿಗೆ ಇಷ್ಟನು ಆಗ್ತಾರೆ, ಆವಾಗಲೆ
ನಮ್ಮ ಇಚ್ಚಾಶಕ್ತಿಯನ್ನ ಕಳೆದುಕೊಂಡು
ಅವರಿಗೆ ಒಳ್ಳೆಯವರಾಗಿ ಇರೋದಕ್ಕೆ ನಮ್ಮ ತನವನ್ನೆ ಬಿಟ್ಟು ಅವರಿಗಾಗಿ ಬದುಕ್ತಿರ್ತಿವಿ.
ನಮ್ಮ ಜೀವನದ ಮಹತ್ವವನ್ನ ನಾವೇ ಮರೆತು ಬಿಡ್ತಿವಿ.

-


Fetching 🌹ಭಾವ ಶರಧಿ🏹 Quotes