ನೆಮ್ಮದಿ ಸಿಗದ ಜಾಗ
ಸೆರೆಯಾಗಿರುವುದೇನೋ
ಈ ಜಗ ಎಂದೆನಿಸುವುದು
ನೆಮ್ಮದಿ ಸಿಕ್ಕ ಜಾಗ
ಜಗನ್ನಾಥನ ಸನ್ನಿದಿಯೊಳಗೆ
ಸಂಭ್ರಮಿಸಿದಂತಾಗುವುದು.
-
ಜವಾಬ್ದಾರಿ ಹೊತ್ತ ಹೆಗಲು ಹಗಲಿರುಳೆನ್ನದೆ ದುಡಿದು
ತನ್ನವರ ಸಂತೋಷದೊಳಗೆ ತಾನಾಗಿಯೇ ಉಳಿದು
ಕಳೆದೋಗುವುದೊಂದು ದಿನ ಪಂಚಭೂತಗಳೊಟ್ಟಿಗೆ ಉಸಿರು.
-
ಭಾವನೆಗಳು ಜೀವಿಸುತ್ತಿವೆ
ಬಂಧಗಳು ಬಂಧಿಸಿವೆ
ಕನಸುಗಳು ಕನವರಿಸಿವೆ
ಪರಿಶ್ರಮ ಪ್ರತಿಧ್ವನಿಸಿದೆ
ಬಾಧ್ಯತೆ ಜಾಗ್ರತಗೊಂಡಿತೆ
ಅನಾಗರಿಕತೆ ವಿಪಥವಾಗಿದೆ
ಜೀವನ ಸಮ್ಮಿಶ್ರಣವಾಗಿದೆ
ಸಮಯ ಸ್ವಲಂಬಿಯಾಗಿದೆ.-
ಯಾವುದು ನನ್ನದಲ್ಲ ನನ್ನದಾಗುವುದಿಲ್ಲ ಎಂಬ ಸತ್ಯ ತಿಳಿದು ನನ್ನದಾಗಿಸಿಕೊಳ್ಳುವ ಹಠ ಹೆಚ್ಚಾದಾಗ ಬದುಕೇ ಒಂದು ದುಶ್ಚಟವಾಗಿ ಹತಾಷೆಯಲ್ಲಿ ಅಂತ್ಯಗೊಳ್ಳುತ್ತದೆ
-
ಕೆಲವರಷ್ಟೇ ನಮ್ಮವರಾಗಿರುತ್ತಾರೆ
ನಮ್ಮವರೇ ನಮ್ಮನ್ನು ಕೇವಲವಾಗಿಯೂ ಕಾಣುತ್ತಾರೆ.
ಬದಲಾವಣೆ ಸಂಬಂಧ,ಸನ್ನಿವೇಶ
ಎಲ್ಲವನ್ನೂ ಬದಲಾಯಿಸುತ್ತದೆ .
ಬದಲಾಗದವರು ಬದಲಾದ ಮನಸುಗಳ
ನಡುವೆ ಸಿಲುಕಿ ಬವಣೆ ಪಡುತ್ತಾರೆ-
ನಮ್ಮ ಖುಷಿ ನಾವಾಗಿಯೇ ಹಾಳುಮಾಡಿಕೊಳ್ಳುವುದು
ಬೇರೆಯವರ ಬದುಕಿಗೆ ನಮ್ಮ
ಬದುಕನ್ನ ಓಲೈಕೆ ಮಾಡಿಕೊಂಡಾಗ
ಮತ್ತು ನಿರೀಕ್ಷೆಗಳು ಮಿತಿಮೀರಿ
ಪತಿತಗೊಂಡಾಗ.-
ನನ್ನೊಳಗೆ ನಾ ಹೊಕ್ಕು
ನನ್ನೆನಾ ಕಂಡಾಗ
ಮೌನದೊಳ ಪ್ರಶ್ನೆಗಳು
ತುಂಬಾ ಸರಳ
ಉತ್ತರಿಸುವ ಮನಸು
ಕಹಿ ಸತ್ಯದ ಬೆಳಕಿನಲಿ
ತತ್ತರಿಸಿತು ಬಹಳ .
-
ನಿನ್ನ ಪ್ರೀತಿಯ ಪರಿಯು ಹೃದಯವನ್ನಾವರಿಸಿ
ತುಂಟ ತರಲೆಯ ಮನಸಿಗೆ ಹೊನಲ ಹೂಮಳೆ ಸುರಿಸಿದೆ.
ನಿನ್ನಪ್ಪುಗೆಯ ಸಾಂಗತ್ಯ ಮುತ್ತುಗಳ ಸರಮಾಲೆಯಾಗಿ
ಭಾವದೊನಲಿನ ಮನಕೆ ಬಾಂಧವ್ಯ ಬೆಸುಗೆಯಾಗಿದೆ.-
ಭಗವಂತ ನಮಗಾಗಿ ಕೊಟ್ಟಂತಹ
ಅಮೂಲ್ಯವಾದ ಪ್ರೀತಿಯೆಂದರೆ ಸಮಯ.
ಸಮಯದ ಪ್ರತಿ ಕ್ಷಣಗಳನ್ನು ನಮ್ಮ ಬದುಕಿನ
ಸಂತೋಷದೊಳಗಿರಿಸಿಕೊಳ್ಳುವುದೆ ನಿಷ್ಕಲ್ಮಶ ಭಕ್ತಿ.
-