ಅಕ್ಷರಗಳ ಜೋಡಣೆಯಿಂದ ಶಬ್ದ,
ಶಬ್ದಗಳ ಜೋಡಣೆಯಿಂದ ವಾಕ್ಯ,
ವಾಕ್ಯಗಳ ಜೋಡಣೆಯಿಂದ ಟಿಪ್ಪಣಿ,
ಟಿಪ್ಪಣಿಗಳ ಜೋಡಣೆಯಿಂದ ಪ್ರಬಂಧ,
ಪ್ರಬಂಧಗಳ ಜೊಡಣೆಯಿಂದ ಪುಸ್ತಕ,
ಆ ಪುಸ್ತಕದಲ್ಲಿನ ಜ್ಞಾನ ನಾವು ಓದುವುದರಿಂದ,
ದೇಶ ಸುತ್ತು ಕೋಶ ಓದು ನಿನಗೆ ಅದುವೆ
ಸ್ಪೂರ್ತಿ.
-
ಎನ್ ಮಾಡ್ತಿದ್ದಿ ಚಿನ್ನು,
ಓದುತ್ತಿದ್ದೀನಿ ಅಮ್ಮ
ಎನ್ ಓತ್ತಾಇದ್ದಿ ಚಿನ್ನ,
ಅಮ್ಮನ ಪ್ರೀತಿ ಪುಸ್ತಕ ನಾ
ಮಗನೆ ನನ್ನ ಪ್ರೀತಿ ನೀನು ಪಡದಿಲ್ಲವೆ ಚಿನ್ನು,
ಹಾಗಲ್ಲ ಅಮ್ಮ ಈ ಪುಸ್ತಕದಲ್ಲಿ
ಅಮ್ಮ ಕೊಟ್ಟ ಪ್ರೀತಿನ ಮರಳಿ
ಅಮ್ಮನಿಗೆ ಹೇಗೆ ಕೊಡಬೇಕು ಅಂತ ಇದೆ
ಅದನ್ನೆ ಓದುತ್ತಾ ಇದ್ದೀನಿ ಅಮ್ಮ,
ಅಮ್ಮನ ಕಣ್ಣಲಿ ನೀರು,
ಅಮ್ಮ ಮಕ್ಕಳ ಪ್ರೀತಿ ಹಾಗೆ
ಪುಸ್ತಕ ನನ್ನ ಸಂಬಂಧ ಎಂದಿಗೂ ಮರೆಯೊಹಾಗಿಲ್ಲ.-
ಕಾಮನಬಿಲ್ಲಿಗೂ ಕವನ ಬರೆಯುವ ತವಕ
ಬರೆದೆ ಬಿಟ್ಟಿರುವ ಏಳು ಬಣ್ಣಗಳ ಪುಸ್ತಕ
ಪ್ರತಿ ಪುಟಗಳಲ್ಲಿಯೂ ನನ್ನವಳ ಹೆಸರಿನ ಉಲ್ಲೇಖ
ಕಾಮನಬಿಲ್ಲು ಈಗ , ಜಗತ್ತಿನ ಜನಪ್ರಿಯ ಲೇಖಕ-
ಕಾಮನಬಿಲಿನಲ್ಲಿ ಮಾತ್ರ ಏಳು ಬಣ್ಣಗಳು ಚಂದ,
ಕೆಲವರು ಪ್ರೀತಿಯಲ್ಲಿ ಏಳು ಆಟಗಳನ್ನು ಆಡ್ತಾರೆ.-
****ಪುಸ್ತಕ****
ನಿನ್ನ ನೋಡುತಲಿಂದು
ಜಗವ ಮರೆತೆನೆಂದು
ಸಮಯ ಕಳೆದೆನೆಂದು
ಖುಷಿಯಲೀ ಕೇಳುವೆನಿಂದು
ನಿನ್ನಲ್ಲಡಗಿಹ ಮಾಯೆಯಾವುದೆಂದು..!!?-
ಜಗತ್ತಿನಲ್ಲಿ ಎಲ್ಲರೂ ಮೋಸ ಮಾಡಬಹುದು
ಆದರೆ ನಾವು ನಂಬಿದ ಪುಸ್ತಕ ಯಾವತ್ತೂ
ಮೋಸ ಮಾಡಲ್ಲ.-
ಸಾರ್ಥಾನೂಭವ....
ಸಾರ್ಥದೊಡನೆ ಆರಂಭವಾದ ನಾಗಭಟ್ಟನ ಪಯಣ ಸಾಕಷ್ಟು ತಿರುವು,ತರ್ಕ,ದೇಶಪರ್ಯಾಟನೆ,ಧರ್ಮ ಭೋದನೆಯ ಮೀಮಾಂಸೆ ; ಜೀವನದ ಅನಿವಾರ್ಯತೆಗಳು, ಬದಲಾವಣೆ,ಜಿಜ್ಞಾಸೆ, ಸಾಧೆಯ ವ್ಯಮೋಹ, ದ್ವೇಷದ ಮನಸ್ಸು,ಅಸಾಯಕತೆಯ ಪರಿಸ್ಥಿತಿ, ಶ್ರದ್ಧೆಯ ರೂಪ, ಪ್ರೇಮದ ದಾರಿ , ಹೀಗೆ ಹಲವಾರು ಬದಲಾವಣೆಯೊಂದಿಗೆ ಶೂನ್ಯಭಾವವನ್ನು ಕಂಡು ಎಲ್ಲದರಿಂದ ಹೊರಬರಲು ಎಣಗಾಡಿ ಗುರಿಇಲ್ಲದಂತೆ ಸಾಗಿ ಕೊನೆಗೆ ಶೂನ್ಯಭಾವದಿಂದ ಹೊರಬಂದು ತನಗಾಗಿಯೇ ಜೀವನದಲ್ಲಿ ಏನೋ ಒಂದಿರುತ್ತದೆ ಎಂಬ ಭರವಸೆಯಲ್ಲಿ ಅದು ಸಿಗುವ ಕಾಲ&ದಕ್ಕುವ ಕಾಲಕ್ಕಾಗಿ ಕಾಯಬೇಕು, ಎಲ್ಲಾ ಮೊದಲೇ ಅರಿತುಬಿಡಲು ಹೋದರೆ ಇಲ್ಲಸಲ್ಲದ ತರ್ಕಭಾವನೆ ಶೂನ್ಯ ಭಾವಕ್ಕೆ ನೂಕುತ್ತದೆ.
ಜೀವನದಲ್ಲಿ ಕಲಿಯುವುದು ಮುಖ್ಯ, ಕಲಿತರೇ ಒಂದಲ್ಲ ಒಂದು ದಿನ ಕಂಡಿತ ಅದು ಉಪಯೋಗಕ್ಕೆ ಬರುತ್ತದೆ.ಕಲಿಯುವುದು ಜೀವನದಲ್ಲಿ ಎಂದೂ ವ್ಯರ್ಥವಾಗುವುದಿಲ್ಲ...!!-
ಎಲ್ಲಿಂದ ಸಾಗಿ ಹೋಗಿರುತ್ತೆವೊ ಒಂದಲ್ಲ ಒಂದು ದಿನ ಮತ್ತೆ ಸೇರಲೇಬೇಕು...
ಆ ಮಣ್ಣಿನ ಋಣ ನಮ್ಮಲ್ಲಿದ್ದರೆ ಎಲ್ಲೇ ನೆಲೆಯೂರಿರಲ್ಲಿ..,ಹೇಗೆ ಬದುಕೂತ್ತಿರಲಿ
ನಮ್ಮನ್ನು ಅಲ್ಲಿಂದ ಎಳೆದು ತರುತ್ತದೆ ಋಣವೆಂಬುದು..;
ಅಂತಹದ್ದೇ ಒಂದು ಐತಾಳರ ಕುಟಂಬದ ಕಥೆ-ವ್ಯಥೆ 'ಈ ಮರಳಿ ಮಣ್ಣಿಗೆ' ಸಾಗಷ್ಟು ಸಮಸ್ಯೆಗಳು, ಆಸಾಯಕತೆಯ ಬದುಕು,ನಮ್ಮ ಹಿರಿಯರಿಗಷ್ಟೇ ಈ ನೆಲ ಋಣವಿದ್ದದೂ ನಮಗಿನ್ನು ಈ ಮಣ್ಣಿನ ಋಣವಿಲ್ಲವೆಂದು ತೊರೆದು ಅನೇಕ ವರ್ಷಗಳೇ ಕಳೆದು ಹೇಗೆಗೋ ಬದುಕು ಸಾಗುತ್ತಿತ್ತು ಹೆಚ್ಚಾಗಿಯೂ ಒಮ್ಮೆ, ಇಲ್ಲವಾಗಿಯೂ ಒಮ್ಮೆ ಆದರೆ ಎಂದಿಗೂ ಮನಸ್ಸಿಗೆ ತೃಪ್ತಿಯನ್ನು ನೀಡಲ್ಲಿಲ್ಲ , ಇದು ನಮ್ಮದು ಎಂಬ ಭಾವನೆ ಎಲ್ಲಿಯೂ ಬರಲ್ಲಿಲ್ಲ.. ಮತ್ತೆ ಹೋಗಲಾದಿತ್ತೆ ಎನ್ನುತ್ತಿದ್ದ ಅವರ ನೆಲೆಯನ್ನೆ ಸೇರಿ ಇದ್ದುದ್ದರಲ್ಲೇ ಆತ್ಮ ತೃಪ್ತಿ ಕಾಣುವ ಆ ಮಾಣಿಯ ಬುದ್ದಿ; ಅವನ ಬದುಕಿನ ಬುನಾದಿ ಹಾಕಿ ಬೆಳೆಸಿದ ಆ ಛಲಗಾತಿ ತಾಯಿಯ ಧೈರ್ಯ; ಕಷ್ಟಗಳ ಸುರಿಮಳೆಗಳ ಹೊಳೆಯಲ್ಲಿ ಮಿಂದು ಈಜಿ ದಡ ಸೇರಿ ಅದೇ ನೆಲದಲ್ಲಿ ಮರಳಿ ಬದುಕು ಕಟ್ಟಿಕೊಂಡ ನೆಮ್ಮದಿಯ ಜೀವನ ನಡೆಸುವಂತೆ ಮಾಡಿದ್ದು
ಅವರಿಗಿದ್ದ ಮಣ್ಣಿನ ಋಣ....
ನಮ್ಮ ಜೀವನದ ಪಾಲಿಗೆ ಇರುದನ್ನ ನಾವು ಬೇಡವೆಂದಾಗಲಿ / ನಮ್ಮಿಂದ ಯಾರೋ ಕಸಿದುಕೊಳ್ಳಲಿಕ್ಕಾಗಲಿ ಸಾಧ್ಯವಾಗದು..👉👉-
ಪುಸ್ತಕಗಳು ಹತ್ತಿರದವರೆನ್ನಿಸುತ್ತವೆ...
ಅವು ಕೇವಲ ಪ್ರೀತಿ
ತೋರಿಸುತ್ತವೆ...
ನಮಗೆ ಬೇಕಾದಾಗ
ಹತ್ತಿರ ಮಾಡಿಕೊಳ್ಳುತ್ತೇವೆ..
ಬೇಡವಾದಾಗ ದೂರ
ಮಾಡಿದರೂ...
ಸೆಳೆತವೇನೂ ಕಡಿಮೆಯಾಗುವುದಿಲ್ಲಾ📚
-