ಮನಸ್ಸು ಮತ್ತು ಬಾಯಿ ಶುದ್ದಿ ಇದ್ದರೆ ಸಾಕು.
-
ನಿನ್ನ ಕಣ್ಣೀರಿಗೆ ನಾನ್ಯಾಕೆ ನೆಪವಾಗಲಿ,
ನನಗೆ ಗೊತ್ತಿರೋದು ಒಂದೇ... ಯಾರೇ ನೋವಿನಲ್ಲಿ ಇದ್ದರು ಅವರಿಗೆ ಸಮಾಧಾನ ಹೇಳುವುದು.-
ಬದುಕು ನಿಜಕ್ಕೂ ಸರಳ
ನಗುವುದು
ಅದು ಸರಳವೇ,
ಗೆಲುವು
ಅದು ಸರಳವೇ,
ಮತ್ತೆ ಕಷ್ಟ ಯಾವುದು?
ಸರಳವಾಗಿರೋದೇ ಬಲು ಕಷ್ಟ.-
ಜೀವನ ಪೂರ್ತಿ ನೋವನ್ನು
ಅನುಭವಿಸದೆ ಇರುವವರೆ
ಇಲ್ಲ,
ಸಮುದ್ರದಲೆಗಳು ಬಂಡೆಗೆ
ಅಪ್ಪಳಿಸಿದಂತೆ ತಮಗೆ
ಬಂದೆರಗುವ
ನೋವುಗಳನ್ನು ಮರೆಯಲು
ಬಾಯಿಗೆ ಬಟ್ಟೆಯನ್ನು ತುರುಕಿ
ನಿಟ್ಟುಸಿರು
ಇಟ್ಟವರೆಸ್ಟೋ ಮಂದಿ
ಲೆಕ್ಕವಿಲ್ಲ.....-
ಈಗೀಗ ನನ್ನ ಮನಸ್ಸಿನ ಮೇಲೆ ಅನುಮಾನ ಹೆಚ್ಚಾಗಿ ನನ್ನ ಬುದ್ದಿ ಲದ್ದಿಯಾಗಿದೆ, ಎಷ್ಟೇ ಪ್ರಯತ್ನಿಸಿದರು ಮೊದಲಿನಂತೆ ಇರಲು ಕಷ್ಟವಾಗಿದೆ.
-
ಜೀವನದಲ್ಲಿ ಹಣಕ್ಕಿಂತ
ಗುಣ ಮುಖ್ಯ,
ಏಕೆಂದರೆ
ನಮ್ಮಲ್ಲಿರೋ ಹಣ
ಬಂಗಾರವನ್ನು ನಾವೇ
ಕಾಯಬೇಕು,
ಆದರೆ
ನಮ್ಮ ಒಳ್ಳೆಯ ಗುಣ
ನಡತೆಗಳೇ ನಮ್ಮನ್ನು
ಕಾಯುತ್ತವೆ.-
ನನ್ನದೇ ಕುದುರೆ, ನನ್ನದೇ ಮೈದಾನ ಅನ್ನೋ ಹಾಗೆ,
ನನ್ನದೇ ಹಾಳೆ, ನನ್ನದೇ ಪೆನ್ ನಾನು ಬರೆದೇ ಬರೀತೀನಿ, ಆದರೆ
ಎಲ್ಲರ ಮುಂದಲ್ಲ ನಾನು ಒಬ್ಬನೇ ಇರೋವಾಗ.-
ಒಂಟಿಯಾಗಿ ಇರೋರು
ಯಾವತ್ತು ಚಿಂತಿಸಬೇಡಿ,
ಏಕೆಂದರೆ
ಒಂಟಿಯಾಗಿ ಇರೋದು
ಒಂಟಿಯಾಗಿ ಅಳೋದು
ಜೀವನದಲ್ಲಿ ತುಂಬಾ Strong
ಆಗಿರ್ತಾರೆ.-
ಎಲ್ಲಾ ಬೇಕೆಂಬ ಆಸೆಯಿಂದ
ಶುರುವಾಗಿ, ಕೊನೆಗೆ ಏನು
ಬೇಡವೆಂದು ಕೋರಿಕೊಳ್ಳುವುದೇ ಜೀವನ.-