ನಿನ್ನೆ ಯಾವಾಗಲೋ ಕಳೆದು ಹೋಗಿದೆ
ನಾಳೆಗೆ ಇನ್ನೂ ಅಂತರವಿದೆ
ಇಂದು ಹೀಗೆ ಜೀವಿಸಬೇಕು
ನಮ್ಮ ಸಾವು ಇನ್ನೇನು ಮರುಕ್ಷಣವೇ ಇದೆ ಎಂದು-
ಇನ್ನೂ ಒಂದೇ ಪ್ರಶ್ನೆಯಲ್ಲಿ ಸಿಕ್ಕಿಹಾಕಿಕೊಂಡಿರುವೆ
" ಈಗಲೂ ನಿನ್ನ ಕನಸಿನಲ್ಲಿ ನಾನೇ ಬರುವೆ ನಾ.??? " ಎಂದು..?!?-
ಸುಳ್ಳು ಹೇಳುತ್ತಾರೆ ಜನ ಶೃಂಗಾರ ಮಾಡಿಕೊಳ್ಳುವುದರಿಂದ
ಮುಖ ಅರಳುತ್ತದೆಂದು,
"ಅವನು" ಪಕ್ಕದಲ್ಲಿ ಹಾಯ್ದು ಹೋದರೆ ಮುಖವಷ್ಟೇ ಅಲ್ಲ,
ಮನಸ್ಸೂ ಅರಳುವುದು.
-
ಯಾವ ಅರ್ಥವಿದೆ ಸಾಯುವವರೆಗೂ ತನ್ನೆಲ್ಲ ಅಸ್ಥಿತ್ವ ತೊರೆದು ಗಂಡನಮನೆಗೊಸ್ಕರ ದುಡಿಯುವುದು.
ಕೊನೆಗೆ ಸತ್ತಾಗ ಅವಳ ಕೊನೆಯ ಸೀರೆ ಕೂಡ ತವರುಮನೆಯಿಂದಲೇ ಬರುವುದು. 😒-
ಒಂದು
ವೇಳೆ
ನೀನಿಲ್ಲದೆ
ಬದುಕಲು
ಕಲಿಯಬಹುದು,,,
ಆದರೆ...
ನೀನಿಲ್ಲದೆ
ನಾನು
ಖುಷಿಯಾಗಿರಲು
ಸಾಧ್ಯವಿಲ್ಲ.!!😒-
ಸಾಕಿ...
ಈ ಕವಿತೆಗಳಿಗೂ, ನನಗೂ ಯಾವುದೇ ಸಂಬಂಧವಿಲ್ಲ.
ಹಾಂ... ಅವನನ್ನು ಕೇವಲ ಶಬ್ದಗಳಲ್ಲಿ ಅಲಂಕರಿಸಬೇಕಿದೆ ಅಷ್ಟೇ.!!-
ಯಾವಾಗಲಾದರೂ ಒಮ್ಮೆ ನನಗೆ ನೀ ಕೇಳಿ ನೋಡು,
ನಿನಗೇನು ಬೇಕು ಎಂದು..???
ನಿನ್ನ ಕೈ ನನ್ನ ಕೈಯಲ್ಲಿ ಹಿಡಿದುಕೊಂಡು ಹೇಳುವೆ
"ನನಗೆ ನೀನು, ಮತ್ತೆ ನಿನ್ನ ಪ್ರೀತಿ ಬೇಕು" ಎಂದು.-
ಮಾತು ಮಾತಿಗು ಕಣ್ಣಂಚು ಹಸಿಯಾಗುವುದು
ನನ್ನ ಕಣ್ಣು ಅಶಕ್ತವಾಗಿದೆಯಾ.? ಇಲ್ಲ ಹೃದಯವಾ.?
-