1929 ರ ಕಾಲಘಟ್ಟದಲ್ಲಿ ಬಂಗಾಳಿ ಸಾಹಿತ್ಯ ಲೋಕದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ ಅಪರೂಪದ ಕೃತಿ "ಶಿಕ್ಷಿತ ಪತಿತಾರ್ ಆತ್ಮಚರಿತ".
ಶ್ರೀಮಂತ ಕುಟುಂಬದಲ್ಲಿ ಜನಿಸಿದ ವಿದ್ಯಾವಂತ ಹುಡುಗಿ ಮಾನದಾ, ತಾನು ವೇಶ್ಯೆಯಾಗಿ ಬದಲಾದ ಸನ್ನಿವೇಶವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ತನ್ನ ಜೀವನದಲ್ಲಿನ ಈ ಬದಲಾವಣೆಗೆ ಕಾರಣ, ಸನ್ನಿವೇಶ, ಸುತ್ತಮುತ್ತಲಿನ ವಾತಾವರಣ, ರಾಜಕೀಯ-ಸಾಮಾಜಿಕ ಸ್ಥಿತಿಗತಿ, ಸ್ವಾತಂತ್ರ್ಯ ಹೋರಾಟ, ಪ್ರತಿಷ್ಠಿತ ವ್ಯಕ್ತಿಗಳ ಮುಖವಾಡ, ಹಲವರ ಬೂಟಾಟಿಕೆ..,ಎಲ್ಲವನ್ನೂ ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ವೇಶ್ಯೆಯೊಬ್ಬಳು ತನ್ನ ಬದುಕನ್ನು ಹೀಗೂ ತೆರೆದುಕೊಳ್ಳಬಹುದು, ಮಾದರಿಯಾಗಬಹುದು ಎನ್ನುವುದಕ್ಕೆ ಮಾನದಾ ಉತ್ತಮ ಉದಾಹರಣೆ.
ವೇಶ್ಯಾಲೋಕದ ಅನೇಕ ರಹಸ್ಯಗಳನ್ನು ಜನರ ಮುಂದಿಡುವುದರ ಜೊತೆಯಲ್ಲಿ, ಒಬ್ಬಳು ವೇಶ್ಯೆಯಾಗುವುದರಲ್ಲಿ ಪುರುಷರ ಹಾಗೂ ಸಮಾಜದ ಪಾತ್ರವೇನು ಎನ್ನುವುದನ್ನೂ ಮಾನದಾ ಅದ್ಭುತವಾಗಿ ಬಿಂಬಿಸಿದ್ದಾರೆ . "ಶಿಕ್ಷಿತ ಪತಿತಾರ್ ಆತ್ಮಚರಿತ" ದಲ್ಲಿ ಲೇಖಕಿ ಕಮ್ ಕಥಾನಾಯಕಿ ಮಾನದಾ ದೇವಿ ಪ್ರಣೀತಾ; ಯಾವ ಸೋಗು ಇಲ್ಲದೇ ತನ್ನ ಮುಗ್ದತೆ, ಕಾಮುಕತೆ, ಧೈರ್ಯ, ಬುದ್ಧಿವಂತಿಕೆ, ಔದಾರ್ಯಗಳನ್ನು ಚಿತ್ರಿಸುವ ಈ ಕಥನವು ಓದುಗರಲ್ಲಿ ಏಕಕಾಲಕ್ಕೆ ಅನುಭೂತಿ, ಗೌರವ, ಸಂಕಟವನ್ನು ಹುಟ್ಟಿಸಬಹುದು.
-ಮಧುಶ್ರೀ ಎಂ
-