ಕನಸಿನ ದನಿ   (ಮಧುಶ್ರೀ ಎಂ✍)
356 Followers · 33 Following

ಹವ್ಯಾಸಿ ಬರಹಗಾರ್ತಿ; ಪುಸ್ತಕ - ಬರವಣಿಗೆಯೇ ಪ್ರೀತಿ...💕
ಭಾವನೆಗಳ ನೆನಪಿನ ಜೊತೆ ಬರಹಗಳ ಪಯಣ....😍
Joined 3 April 2019


ಹವ್ಯಾಸಿ ಬರಹಗಾರ್ತಿ; ಪುಸ್ತಕ - ಬರವಣಿಗೆಯೇ ಪ್ರೀತಿ...💕
ಭಾವನೆಗಳ ನೆನಪಿನ ಜೊತೆ ಬರಹಗಳ ಪಯಣ....😍
Joined 3 April 2019

Books are better than the people.!

-



1929 ರ ಕಾಲಘಟ್ಟದಲ್ಲಿ ಬಂಗಾಳಿ ಸಾಹಿತ್ಯ ಲೋಕದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ ಅಪರೂಪದ ಕೃತಿ "ಶಿಕ್ಷಿತ ಪತಿತಾರ್ ಆತ್ಮಚರಿತ".
ಶ್ರೀಮಂತ ಕುಟುಂಬದಲ್ಲಿ ಜನಿಸಿದ ವಿದ್ಯಾವಂತ ಹುಡುಗಿ ಮಾನದಾ, ತಾನು ವೇಶ್ಯೆಯಾಗಿ ಬದಲಾದ ಸನ್ನಿವೇಶವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ತನ್ನ ಜೀವನದಲ್ಲಿನ ಈ ಬದಲಾವಣೆಗೆ ಕಾರಣ, ಸನ್ನಿವೇಶ, ಸುತ್ತಮುತ್ತಲಿನ ವಾತಾವರಣ, ರಾಜಕೀಯ-ಸಾಮಾಜಿಕ ಸ್ಥಿತಿಗತಿ, ಸ್ವಾತಂತ್ರ್ಯ ಹೋರಾಟ, ಪ್ರತಿಷ್ಠಿತ ವ್ಯಕ್ತಿಗಳ ಮುಖವಾಡ, ಹಲವರ ಬೂಟಾಟಿಕೆ..,ಎಲ್ಲವನ್ನೂ ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ವೇಶ್ಯೆಯೊಬ್ಬಳು ತನ್ನ ಬದುಕನ್ನು ಹೀಗೂ ತೆರೆದುಕೊಳ್ಳಬಹುದು, ಮಾದರಿಯಾಗಬಹುದು ಎನ್ನುವುದಕ್ಕೆ ಮಾನದಾ ಉತ್ತಮ ಉದಾಹರಣೆ.
ವೇಶ್ಯಾಲೋಕದ ಅನೇಕ ರಹಸ್ಯಗಳನ್ನು ಜನರ ಮುಂದಿಡುವುದರ ಜೊತೆಯಲ್ಲಿ, ಒಬ್ಬಳು ವೇಶ್ಯೆಯಾಗುವುದರಲ್ಲಿ ಪುರುಷರ ಹಾಗೂ ಸಮಾಜದ ಪಾತ್ರವೇನು ಎನ್ನುವುದನ್ನೂ ಮಾನದಾ ಅದ್ಭುತವಾಗಿ ಬಿಂಬಿಸಿದ್ದಾರೆ . "ಶಿಕ್ಷಿತ ಪತಿತಾರ್ ಆತ್ಮಚರಿತ" ದಲ್ಲಿ ಲೇಖಕಿ ಕಮ್ ಕಥಾನಾಯಕಿ ಮಾನದಾ ದೇವಿ ಪ್ರಣೀತಾ; ಯಾವ ಸೋಗು ಇಲ್ಲದೇ ತನ್ನ ಮುಗ್ದತೆ, ಕಾಮುಕತೆ, ಧೈರ್ಯ, ಬುದ್ಧಿವಂತಿಕೆ, ಔದಾರ್ಯಗಳನ್ನು ಚಿತ್ರಿಸುವ ಈ ಕಥನವು ಓದುಗರಲ್ಲಿ ಏಕಕಾಲಕ್ಕೆ ಅನುಭೂತಿ, ಗೌರವ, ಸಂಕಟವನ್ನು ಹುಟ್ಟಿಸಬಹುದು.

-ಮಧುಶ್ರೀ ಎಂ

-



ಕೊನೆಯ ಪುಟದವರೆಗೂ ಓದುಗನ ಕುತೂಹಲವನ್ನು ಹಿಡಿದಿಡುವ ಪತ್ತೆದಾರಿ ಕಾದಂಬರಿ ಇದಾಗಿದೆ.
ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್‌ ವಿಧ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?, ರಾಮದಾಸನ ಮಗ ಸಾಗರ್‌ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?, ಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?, ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್‌ ಮೋಲ್ಡ್‌ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?, ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ’ಯಾಗಿದೆ, ನರ್ತನ್ ನಾ ಕಾರ್ಯರೂಪ & ರಾಮದಾಸ್ ರವರ ಡಿಟೆಕ್ಟಿವ್ ಅನುಭವ ಪೋಲಿಸರ ಇನ್ವೇಷ್ಟಿಕೇಷನ್ಗೆ ಇವರ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ಅರ್ಥ ಸತ್ಯ ಹೇಳೋಣ, ಇನ್ನಾರ್ಧ ಸುಳ್ಳು ಹೇಳೋಣ ಎಂದು ಗಂಭಿರವಾಗಿ ನಿರ್ಧರ ಮಾಡಿಕೊಂಡಿದ್ದರು.
ಈ ಕಾದಂಬರಿಯೂ ತನ್ನೊಳಗೆ ಅನೇಕ ಜೀವನದ ಕಟು ಸತ್ಯಗಳನ್ನು ಅಡಗಿಸಿಕೊಂಡಿದೆ ಅದನ್ನು ಕೆಲವೇ ಕೆಲವು ಓದುಗರು ಮಾತ್ರ ಅರ್ಥೈಸಿಕೊಳ್ಳಬಹುದೇನೊ..!

-



"ಸ್ವಪ್ನಗಿರಿ ಡೈರೀಸ್" ರೋಚಕ‌ ಕನಸೊಂದನ್ನು ಕಂಡ ಅನುಭವ ನೀಡಿದ ಪುಸ್ತಕ.ಯಾವುದೋ ಒಂದು ಊರನ್ನು ಹುಡುಕುತ್ತಾ ಹೋದಾಗ ಮನಸ್ಸಿನಲ್ಲಿ ಅಡಗಿದ್ದ ಊರೊಂದು ತಟ್ಟನೆ ಎದುರಾಗುವಾಗ ಆಶ್ಚರ್ಯದ ಅಚ್ಚರಿಯನ್ನು ಮುಡಿಸುವ ಕಥೆ. ಹುಡುಕುತ್ತಾ ಅಲೆಯುತ್ತಾ ಮುಂದೆ ಸಾಗುವಾಗ ಅಂತರಂಗವನ್ನು ತೋರಿಸುವ ಕನ್ನಡಿಗೆ ಮುಖಾಮುಖಿಯಾಗಿಸುವ ಕಥನ, ಒಮ್ಮೆ ಭ್ರಮೆ ಎನ್ನಿಸಿದ್ದರೆ; ಮತ್ತೋಮ್ಮೆ ನೈಜತೆ ಎನ್ನಿಸುವಷ್ಟು ರೋಚಕತೆ, ವಸ್ತುನಿಷ್ಠ ನಿರೂಪಣೆ, ತಿದ್ದಿತಿಡಿದ್ದಂತಹ ಪಾತ್ರಗಳು, ಹೊಸಕಾಲದ ಪರಿಭಾಷೆ,ಮಾಯಕದ ದೃಶ್ಯಾವಳಿ, ಓದುಗರಿಗೆ ಬೆರಗಾಗಿಸುವ ವಿಷಯಗಳು ಎಲ್ಲವನ್ನೂ ಧರಿಸಿರುವ ಸೊಗಸಾದ ಒಂದು ಉತ್ತಮ ಕಾದಂಬರಿ.
"ಹುಡುಕಾಟದ ಜೀವನವೇ ಸೊಗಸು"

-



17 ಕಥೆಗಳ ಈ ಪುಸ್ತಕ ದೆವ್ವ, ಪಿಶಾಚಿ ಎಂಬ ಕಥೆಗಳನ್ನು ಒಳಗೊಂಡ ಸ್ಟೊರೀಸ್ ಆಗಿವೆ. ಲೇಖಕರು ತಮ್ಮ ಅನುಭವದ ಕೆಲವು ಘಟನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಅಂತೆ ಕಂತೆಗಳನ್ನು ನಂಬಿ ಭಯಭೀತರಾಗಿ ಅನೇಕ ಬಾರಿ ಭ್ರಮೆಯೇ ನಿಜವೆಂದು ನಂಬಿ ಹೊಂದುವುದು ಮನುಜನ ಸ್ವಾಭಾವಿಕ ಗುಣವೆಂಬುದನ್ನು ಇಲ್ಲಿ ಕಾಣಬಹುದು.

-



ಪುಸ್ತಕ ಓದಿ ಮುಗಿಸಿ ಒಂದು ದೀರ್ಘ ಉಸಿರೆಳೆದು ಬಿಟ್ಟು, ಮನಮುಟ್ಟುವ ತುಂಬು ಜೀವನದ ದರ್ಶನ ಈ ಆತ್ಮವೃತ್ತಾಂತ.; ಮನಸ್ಸು ಒಳಕ್ಕೆ ಸರಿದಾಗೆಲ್ಲ, ಬತ್ತಿದ ಆತ್ಮವಿಶ್ವಾಸವನ್ನ ಮತ್ತೆ ಬಿತ್ತುವುದು ಈ ಪುಸ್ತಕದ ಓದು.
"ಭೈರಪ್ಪನವರ ಬದುಕಿನ ಬುತ್ತಿ - ಭಿತ್ತಿ"
ಯಾರಾದರೂ ಜೀವನ ಕಷ್ಟ, ನನಗಿಂತ ಕಷ್ಟ ಇನ್ನೊಬ್ಬರಿಗಿಲ್ಲ ಅಂದರೆ, ಈ ಪುಸ್ತಕ ಕೊಟ್ಟು ಓದಲು ಹೇಳಬೇಕು, ಒಬ್ಬ ಮನುಷ್ಯ ಇಷ್ಟು ಸಹಿಷ್ಣುನಾಗಿರುತ್ತಾನೆ ಅಂದರೆ ಅವನ ಮನೋಬಲ ಎಷ್ಟು ಗಟ್ಟಿ ಇರಬೇಡ ಹೇಳಿ... ಒಂದೇ ದಿನದಲ್ಲಿ ಅಕ್ಕ, ಅಣ್ಣನ ಸಾವು, ನಂತರ ತಾಯಿಯ ಸಾವು, ತಮ್ಮನ ಸಾವು ತಮ್ಮನ ಹೆಣವನ್ನು ಭುಜದ ಮೇಲೆ ಎತ್ತಿಕೊಂಡು ಮಸಣಕ್ಕೆ ಹೋಗುವ ಭಾರ, ತಂದೆಯ ತೀರ ಅಸಹ್ಯದ ಬೇಜವಾಬ್ದಾರಿತನ, ಹಸಿವು, ತಂಗಿಯ ಜವಾಬ್ದಾರಿ, ಓದಿನ ಹಸಿವು, ಚಿಕ್ಕ ವಯಸ್ಸಿನಲ್ಲೇ ದುಡಿಯಲೇ ಬೇಕಾದ ಅಸಹಾಯಕತೆ.... ಇಷ್ಟೆಲ್ಲರ ನಡುವೆಯೂ ತತ್ವಶಾಸ್ತ್ರದಲ್ಲಿ ಪರಿಣತಿ ಹೊಂದಿ, ಬಹು ದೊಡ್ಡ ಓದುಗವರ್ಗವನ್ನು ಸಂಪಾದಿಸಿದ ಕೀರ್ತಿ ನಮ್ಮ "ಬೈರಪ್ಪರದ್ದು". ಬಹುಶಃ ಇಂತಹ ಕಷ್ಟಗಳನ್ನೆಲ್ಲ ಅನುಭವಿಸಿದ್ದಕ್ಕೋ ಏನೋ ಅವರ ಬದುಕಿನ ವಿವಿಧ ಮಜಲಿನ ಚಿತ್ರಗಳು ನಮಗೆ ಇವರ ಕಾದಂಬರಿಗಳಲ್ಲಿ ಕಾಣಸಿಗುತ್ತವೆ. ಹಮ್ಮುಬಿಮ್ಮು ಇಲ್ಲದ, ರೋಚಕ ಶೈಲಿಯ ಬರವಣಿಗೆಯಲ್ಲದ ಸಾದಾಸೀದ ನಿರೂಪಣೆ ಇಲ್ಲಿದೆ. ಅವರ ಬದುಕಿನಲ್ಲಿ ಕಂಡ ಕಷ್ಟಗಳೇ ಇಂದಿನ ಭೈರಪ್ಪನವರನ್ನು ರೂಪಿಸಿದೆ ಎನಿಸುತ್ತದೆ. ಪ್ರಾಮಾಣಿಕವಾಗಿ ಬದುಕುತ್ತಾ ಯಾರನ್ನು ನೇರವಾಗಿ ನಿಂದಿಸದೆ ತನ್ನ ಜೀವನವನ್ನು ತನಗಿಷ್ಟಬಂದಂತೆ ರೂಪಿಸಿಕೊಂಡ ನಿಷ್ಠುರವಾದಿ ಬೈರಪ್ಪ ನಮಗಿಲ್ಲಿ ಕಾಣಿಸುತ್ತಾರೆ .ಅದಕ್ಕೆ ಮನಸ್ಸಿಗೆ ಮತ್ತೂ ಅಪ್ಯಾಯಮಾನವಾಗಿಯೂ , ಆತ್ಮೀಯರಾಗಿಯೂ ಮನಸ್ಸಿಗೆ ಹತ್ತಿರವಾಗುತ್ತಾರೆ.

-



'ಕಾಲಾಯ ತಸ್ಮೈ ನಮಃ' ಒಂದೇ ಗುಟ್ಟುಕಿನಲ್ಲಿ ಓದಿ ಮುಗಿಸಬಹುದಾದ ರೋಚಕ ಪತ್ತೆದಾರಿ ಕಾದಂಬರಿ . ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಒಂದೇ ರೀತಿಯ ಕಥೆಯನ್ನು ಬರೆದು ಇಬ್ಬರೂ ವಿಭಿನ್ನ ರೀತಿಯ ಶೀರ್ಷಿಕೆ ಇಟ್ಟು ಕೃತಿಚೌರ್ಯ ಆರೋಪದಡಿ ಕೇಸು ದಾಖಲಿಸಲು ಪೋಲಿಸ್ ಠಾಣೆ ಮೇಟ್ಟಿಲೇರಿದಾಗ ಕೇಸ್ ಬಗೆ ಹರಿಸಲು ಪೋಲಿಸ್ ವಿಕ್ರಂ ಬರಹಗಳ ಪ್ರತಿಯನ್ನು ಫಾರೆನ್ಸಿಕ್ ಟೆಸ್ಟ್ ಕಳುಹಿಸಿ ರಿಪೋರ್ಟ್ ಗೆ ನೀರಿಕ್ಷಿಸುತ್ತಿರುವಾಗ ಅಲ್ಪ ಸಮಯದಲ್ಲಿ ಆ ಪ್ರೊಫೆಸರ್ ಬರೆದಿರುವ ಕಾದಂಬರಿ ಕಥೆಯನ್ನು ಕೇಳುತ್ತಾ ಕೇಳುತ್ತಾ, ಸೀರಿಯಲ್ ಕಿಲ್ಲರ್ ಒಬ್ಬನನ್ನು ಪತ್ತೆ ಹಚ್ಚುವ ಹಿಮವಂತ್ ಎಂಬ ಪ್ರೈವೇಟ್ ಡಿಡಕ್ಟಿವ್ ತಿಳಿಯುವ "ನೇತ್ರವಶೀಕರಣಂ" ಎಂಬ ಮಾಂತ್ರಿಕ ವಿದ್ಯೆಯನ್ನು ಸಾಧಿಸಲು ಶ್ರಮಿಸುತ್ತಿರುವ ಇಬ್ಬರು ಅಣ್ಣ ತಮ್ಮ ಸೋದರ ಮಾಂತ್ರಿಕರ ಮತ್ತು ಅವರ ವಿಚಿತ್ರ ವಿಭಿನ್ನ ನಡವಳಿಕೆಯ ನಂಟನ್ನು ಹುಡುಕುತ್ತಾ ಅದನ್ನು ಬಗೆಹರಿಸುವ ಪರಿ ಆ ಕತೆಯನ್ನು ಕೇಳುತ್ತಾ ತಲ್ಲೀನರಾಗಿದ್ದ ವಿಕ್ರಂಗೆ, ಫಾರೆನ್ಸಿಕ್ ರಿಪೋರ್ಟ್ ತಿಳಿಸಿದ ಸತ್ಯ, ಕಾದಂಬರಿಯ ಸತ್ಯ‌ ಸತ್ಯ ತೆ ಬೆಚ್ಚಿಬೀಳಿಸಿತ್ತು ಅಳುಕಿನಿಂದಲೇ ಆ ದಿನದ ಬಗ್ಗೆ ಯೋಚಿಸಿದ ಅಂದು ಅಮಾವಾಸ್ಯೆ ಎಂದು ಕೊನೆಗೆ ಅದರ ಒಳಗುಟ್ಟು ತಿಳಿದು ಮನದಲ್ಲೇ ನಗುತ್ತಾ ಕೇಸ್ ಕ್ಲೋಸ್ ಮಾಡಿ ಮುಗಿಸಿದ..
ವಿಕ್ರಂ ಕೇಸ್ ಕ್ಲೋಸ್ ಮಾಡಲು ಕಾರಣವೇನು? ಕಾದಂಬರಿಗೂ ಅದನ್ನು ಬರೆದ ಆ ಇಬ್ಬರಿಗೂ ಏಕಸ್ವಾಮ್ಯ ವಿಷಯ ಏನು ಎಂಬ ಕೊನೆಯ ರೋಚಕ ಸಂಗತಿಯನ್ನು ಓದಿಯೇ ತಿಳಿಯಬೇಕು.

-



ಕಾರಂತರು ಪುಸ್ತಕವನ್ನು ಬಸ್ರೂರಿನ ಸ್ಥಳಪುರಾಣದೊಂದಿಗೆ ಪ್ರಾರಂಭಿಸಿ, ನಂತರ ಅಲ್ಲಿನ ವಾರಾಂಗನೆಯರ ಬಗ್ಗೆ ಮುಕ್ತವಾಗಿ ಬರೆದಿದ್ದರೆ..
ಈ ಪದ್ಧತಿ ಹೇಗೆ ಹುಟ್ಟಿತು, ಒಂದೂರಿನಲ್ಲಿ ನಿಲ್ಲುವ ಜನ, ಅಲೆದಾಡುವ ಜನರ ಸಂಬಧದ ವಿವರಣೆ ಇದೆ.
ಕಾದಂಬರಿ ಉದ್ದಕ್ಕೂ ಮಹಿಳೆಯೊಬ್ಬಳ ಆತ್ಮ ವೃತ್ತಾಂತ ಸಾಗುತ್ತದೆ. ಎಲ್ಲಿಯೂ ಬೇಸರ ಎನ್ನಿಸೋದಿಲ್ಲ ಅಷ್ಟು ಚಂದವಾಗಿ ಕಟ್ಟಿ ಕೊಟ್ಟಿದ್ದಾರೆ ಕಾರಂತರವರು. ಒಂದು ಪುಟದಲ್ಲಿ ದುಂಬಿಯೊಂದು ಪಾತರಗಿತ್ತಿಯಾಗಿ ಬಣ್ಣ ಬಣ್ಣದ ಹೂವುಗಳಿಂದ ಆಕರ್ಷಣೆಗೊಳಗಾಗಿ ತನ್ನನ್ನು ತಾನು ಮರೆಯುವ ಪರಿಯನ್ನು ವರ್ಣಿಸುವ ರೀತಿಯಂತೂ ಅದ್ಭುತವಾಗಿದೆ.
ಮಂಜುಳಾ ಎಂಬ ಪಾತ್ರದ ಬಗ್ಗೆ ಪ್ರಸ್ತಾಪಿಸಿ ಕಥೆ ಅವಳ ಮಗಳ ಮತ್ತು ಮೊಮ್ಮಗಳ ಕಥೆಯನ್ನು ಹೇಳುತ್ತದೆ. ನಂತರ ಮಂಜುಳಾ ಪ್ರಧಾನ ಪಾತ್ರವಾಗಿ ಒಂದು ಡೈರಿಯ ಮೂಲಕ ಬರುತ್ತಾಳೆ.
ಮಂಜುಳೆಯ ಜೀವನದ ಮತ್ತು ಮನಸ್ಸಿನ ಭಾವನೆಗಳ ಕಥೆಯೇ "ಮೈ ಮನಗಳ ಸುಳಿಯಲ್ಲಿ".

-



“ಗತಜನ್ಮ” ಕಥೆ ಓದುತ್ತಿದ್ದರೆ ಅದನ್ನು ಆಗ ತಾನೇ ವಯಸ್ಸಿಗೆ ಬಂದ ಪೋರ ಬರೆದ ಕಥೆ ಎಂದು ಎಲ್ಲಿಯೂ ಅನ್ನಿಸುವುದಿಲ್ಲ. ಆ ಮಟ್ಟದ ಗಂಭೀರತೆ, ಸ್ವಾರಸ್ಯತೆ ಮತ್ತು ವಸ್ತುನಿಷ್ಠತೆ ಕಥೆಯಲ್ಲಿದೆ.
“ಸತ್ತಿಲ್ಲ” ಕಥೆಯಲ್ಲಿ ತಂದೆಯನ್ನು ಕಳೆದುಕೊಂಡ ಒಬ್ಬ ಸಣ್ಣ ಹುಡುಗನ ತುಮುಲ, ತಳಮಳ, ಮುಗ್ದತೆ, ಅವನ ನಂಬಿಕೆಯನ್ನು ಚಿತ್ರಿಸಲಾಗಿದೆ. ಆತನ ತಂದೆ ಸತ್ತಿದ್ದರೂ ದೇವರ ಬಳಿ ಹೋಗಿದ್ದಾನೆ ಎಂದು ಅವನು ನಂಬಿರುತ್ತಾನೆ. ಹಾಗಂತ ಅವನ ತಾಯಿ ಹೇಳಿರುತ್ತಾಳೆ. ಗಂಡ ಸತ್ತ ಸಂಗತಿ ತನ್ನ ಮಗನಿಗೆ ಹೇಳಲಾಗದ ಅಸಹಾಯಕತೆ ಆಕೆಯದು. ಆದರೆ ಎಷ್ಟು ದಿನ ಹೇಳಿದ್ದನ್ನೇ ಹೇಳುವುದು? ಅವನಿಗೂ ತನ್ನ ತಂದೆಯನ್ನು ಕಾಣುವ ಬಯಕೆ ದಿನಗಳೆದಂತೆ ಸಹಜವಾಗಿ ಗರಿಗೆದರುತ್ತದೆ; ಪುರಾಣ ಕೇಳಿ ತನ್ನ ತಂದೆಗಾಗಿ ಮಂದಿರಕ್ಕೆ ಹೋಗಿ ತಪಸ್ಸನ್ನಾಚರಿಸುವಷ್ಟು ಅಮಾಯಕ, ನಿಷ್ಕಲ್ಮಶ ಮನಸ್ಸು ಆತನದು. ಒಬ್ಬ ತಾಯಿಯಾಗಿ ಅಂತಹ ವಿಷಮ ಸಂದಿಗ್ದತೆಯನ್ನು ಆಕೆ ಹೇಗೆ ಎದುರಿಸಿದಳು? ಅವನ ನಿರೀಕ್ಷೆ ಕೈಗೂಡಿತೆ? ಒಮ್ಮೆ ಓದಬೇಕು.
ಸಂಬಂಧಗಳಿಗಿರುವ ಮೂಲವ್ಯಾಖ್ಯಾನೆಯನ್ನೇ ಪ್ರಶ್ನಿಸುವಂಥಹ ಕಥೆ “ಸಂಬಂಧ”ದಲ್ಲಿದೆ. ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಮಾತ್ರ ತನ್ನ ಸಂಬಂಧವೇ? ಯಾವುದೇ ಪೂರ್ವಾಗ್ರಹವಿಲ್ಲದೆ ಇತರೆ ಮಕ್ಕಳನ್ನು ತನ್ನ ಮಕ್ಕಳೆಂದು ಪ್ರೀತಿಸಲು ಸಾಧ್ಯವಿಲ್ಲವೇ? ಹುಟ್ಟುವ ಮಗು ನಿನಗೇ ಎಂದು ಮಾತು ಕೊಟ್ಟಿದ್ದ ತಂಗಿ ಹಾಗೆ ಮಾತು ಮೀರಲು ಕಾರಣವೇನು? ಬದುಕಿನ ಸಂಜೆಯ ಹೊಸ್ತಿಲಲ್ಲಿ ನಿಂತಿರುವ ಸಮಯದಲ್ಲಿ ದತ್ತಕಕ್ಕೆ ತೆಗೆದುಕೊಳ್ಳುವ ರಗಳೆ, ಗಂಡನ ಅನಾರೋಗ್ಯ, ತಂಗಿ ಮಾಡಿದ ನಂಬಿಕೆ ದ್ರೋಹ..ಕಥೆಯ ಕೊನೆಯಲ್ಲಿ ಹಠಾತ್ತನೆ ತಿರುವು ತರುವ ಗಂಡನ ವಿಲ್ಲ್ ಮತ್ತು ತಂಗಿಯ ನಡೆ..
ಈ ಮೂರು ಕಥೆಗಳ ತಿರುವುಗಳನ್ನು ಓದಿಯೇ ಅರಿಯಬೇಕು.

-



ಸಂಸಾರ ಒಂದು ಮಾಯೆ ಎಂದು ನೆಪ ಹೇಳಿ, ಬದುಕಿನಲ್ಲಿ ಮಾಡಬೇಕಾದ ಕರ್ತವ್ಯಕ್ಕೆ ಅಂಜಿ ದೇವರ ದಾಸನಾಗಲು ಹೋಗಿ ತಾನೇ ದೇವರೆಂದು ತೋರಿಕೆಯ ಜೀವನ ಮಾಡುವ ಪಾತ್ರ ಶಂಕರರಾಯ ಒಂದು ಕಡೆ. ಏನೇ ಆದರೂ ನಗುತ್ತಾ ಎಲ್ಲವೂ ಭಗವಂತನ ಆಟ ಎಂದು ತನ್ನ ಸುತ್ತಲಿನ ಸುಖ ಸಾಧನೆಗೆ ನಿಸ್ವಾರ್ಥ ಸೇವೆಯಿಂದ ಶ್ರಮಿಸುವ ರುಕ್ಮಾಯಿ ಪಾತ್ರ ಮತ್ತೊಂದು ಕಡೆ. ಒಂದು ಇರುವ ನಂಟನ್ನು ಕಳಚಿ ಹೋದರೆ, ಇನ್ನೊಂದು ಇರದ ನಂಟನ್ನು ಕಟ್ಟಿಕೊಳ್ಳುತ್ತದೆ.
ಸಂಪೂರ್ಣ ಕಾದಂಬರಿ ಈ ಎರಡು ಪಾತ್ರಗಳ ನಿಲುವುಗಳ ಅನ್ವೇಷಣೆ ಎಂದು ಹೇಳಬಹುದು, ಯಾವ ಪಾತ್ರದ ನಿಲುವು ಶ್ರೇಷ್ಠ ಎನ್ನುವುದು ಓದುಗರ ತೀರ್ಮಾನಕ್ಕೆ ಬಿಟ್ಟಿದ್ದು.

-


Fetching ಕನಸಿನ ದನಿ Quotes