ಮೇಣದ ಬತ್ತಿಗೆ
ಸಮಯ ಮೀರಿದ ನಂತರ
ಅರ್ಥವಾಯಿತು..
ಇಷ್ಟುದಿನ ಎದೆಯಲ್ಲಿ ಬಚ್ಚಿಟ್ಟು
ಕೊಂಡದ್ದು ,
ತನ್ನನ್ನೆ ಸುಟ್ಟು ಹಾಕುವ
ದಾರವನ್ನು ಎಂದು …-
ಎಷ್ಟೆ ಇಷ್ಟವಿದ್ದರು
ಬೇರ್ಪಡಲೆಂದು ನಿಂತ
ಸಂಬಂಧಗಳಿಗೆ ಅತಿಯಾಗಿ
ಅಂಗಲಾಚದಿರು.
ಅದು ಒಂಥರ ಬದುಕೆಂಬ
ಸಂತೆಯಲ್ಲಿ ನಮ್ಮ ತನವನ್ನು
ಹರಾಜಿಗೆ ಇಟ್ಟಂತೆ…-
ಸಂಭಂದಿಕರಿಂದ
ಆದಂತಹ ಕೆಲವು
ನೋವುಗಳು ಹಾಗೆಯೆ,
ಎಲ್ಲರಿಂದ,ಎಲ್ಲದರಿಂದಲು
ನಮ್ಮನ್ನು
ದೂರಮಾಡಿಬಿಡುತ್ತದೆ…
-
ದೇವರ ಮೇಲಿರುವ
ನಂಬಿಕೆಗಿಂತಲು
ಮನುಷ್ಯರ ಮೇಲೆ ನಂಬಿಕೆ
ಇಡುವಂತವರು
ಬಿಕ್ಷುಕರಲ್ಲದೆ ಮತ್ತೆ ಯಾರು ಇರಲಾರರು
ಅಲ್ವಾ…..?
-
ನನ್ನ ಜೀವನದ ಸಾಗರದಲ್ಲಿ
ಹಣ,ಆಸ್ತಿ, ಅಂತಸ್ತು ಇರಲಿಲ್ಲ,
ಇದೆಲ್ಲದರ ಹುಡುಕಾಟದಲ್ಲಿ
ನೆನಪಿನ ನಡುವೆ ಇದ್ದ
ಪ್ರೀತಿ ಕಣ್ಮರೆ ಯಾಗಿತ್ತು ..-
ಬಡತನ ಅಂದರೆ
ತಟ್ಟೆಗೆ ಊಟ ಸಿಗದಷ್ಟು
ಇರಬಾರದು..!
ತಟ್ಟೆಯಲ್ಲಿ ಊಟವನ್ನು
ಹಾಗೆ ಬಿಟ್ಟು ಏಳುವಷ್ಟು
ಶ್ರೀಮಂತನು ಆಗಿರಬಾರದು…
-
ಜೀವನದಲ್ಲಿ ಹಲವಾರು
ಪುಸ್ತಕಗಳನ್ನು ಸಂಗ್ರಹಿಸಿಟ್ಟು
ಓದುತ್ತಾ ಇದ್ದೆ…
ಅದರಲ್ಲಿ ಕಲಿತಂಥಹ
ವಿಧ್ಯೆ ಜೀವನಕ್ಕೆ ಉಪಯೋಗ
ವಾಗಲಿಲ್ಲ..
ಆದರೆ ಹತ್ತಿರದಿಂದ ಕೆಲವು
ಜನರ ಸಂಭಂದವನ್ನು ಬೆಳೆಸಿದೆ,
ಅವರಿಂದ ನೂರಾರು ಪಾಠ ಕಲಿಯುತ್ತಿರುವೆ…-
ಒಂದು ಮನುಷ್ಯನನ್ನು
ಹೊರಗಿನಿಂದ ನೋಡುವಾಗ
ಬರೀ ಮಳೆಯಂತೆ ಶಾಂತವಾಗಿ
ಕಾಣುತ್ತಿದ್ದಾರೆ ಎಂದರೆ !
ಅವರ ಒಳಗೆ ನೋವುಗಳು,
ಮಿಂಚು ಮತ್ತು ಗುಡುಗಿನಂತಿರುತ್ತದೆ
ಎಂದೆೇ ಅರ್ಥ…-
ನಿನ್ನ ನೆನಪಾದಾಗ ಎಲ್ಲ
ಎದೆಬಡಿತವು ಜೋರಾಗುತಿಹುದು..,
ಏಕೊ ನೀನು ತುಂಬಾನೆ
ಸನಿಹದಲ್ಲಿ ಇದ್ದಂತೆ…
ಆದರೆ
ಇ ಹೃದಯ ದೇವನ
ಸನ್ನಿಧಿಯಂತೆ ಅನಿಸುತ್ತಿದೆ…
ಆ ಹೃದಯದಲ್ಲಿ ನೀನೆ ದೇವರಂತೆ.-
ನೀರಿನಲ್ಲಿ ಬಿದ್ದ ಎಲ್ಲರು
ಮುಳುಗುವುದಿಲ್ಲ..
ಈಜು ಬಾರದವರು
ಮುಳುಗಬಹುದು..
ಜೀವನ ಕೂಡ ಇಷ್ಟೆ..
ಸಮಸ್ಯೆ ಇರುವ ಪ್ರತಿಯೊಬ್ಬರು
ಸೋಲುವುದಿಲ್ಲ..
ಪರಿಹಾರ ಹುಡುಕಲು ಪ್ರಯತ್ನಿಸದವರು
ಸೋಲಬಹುದು…-