ಮೋಸದಿಂದ ಗೆದ್ದೇ ಎಂದು ಬೀಗಬೇಡ,
ನಿನ್ನ ಕರ್ಮ ಸಮಯವೊಂದನ್ನು
ಕಾದು ಕುಳಿತಿರುವುದು,
ಸ್ವಾರ್ಥದಿಂದ ಸಾಧಿಸಿದೇ ಎಂದು
ಹೆಮ್ಮೆ ಪಡಬೇಡ,ಆ ಸ್ವಾರ್ಥವೇ ನಿನ್ನ
ಬಲಿಗಾಗಿ ಹೊಂಚು ಹಾಕುತ್ತಿರುವುದು..
ಹಠದಿಂದ ಪಡೆದುಕೊಂಡೇ ಎಂದು
ನಿಟ್ಟುಸಿರು ಬಿಡಬೇಡ, ಬಿಸಿಯುಸಿರಿನ
ತಾಪವೂ ತಟ್ಟದೇ ಇರಲಾರದು..
ಬುದ್ಧಿವಂತಿಕೆಯಿಂದ ಸಂದರ್ಭವನ್ನೇ
ಬದಲಿಸಿಬಿಟ್ಟೆಯೆಂದು ಒಳಗೊಳಗೇ
ಸಂಭ್ರಮ ಪಡಬೇಡ,
ಆ ಸಂಭ್ರಮವೇ ಸಂತಾಪವಾಗುವ
ದಿನ ತುಂಬಾ ದೂರವಿರಲಾರದು..
ನಿಂದಿಸಿ,ಕಣ್ಣೀರು ಹಾಕಿಸಿಯೇ ಬಿಟ್ಟೆ
ಎಂದು ಸಂತೋಷಪಡದಿರು,
ಹಾಕಿಸಿದ ಒಂದೊಂದೂ ಕಣ್ಣಹನಿಯ
ಬಿಸಿಯೂ ನಿನ್ನನ್ನು ನೆಮ್ಮದಿಯಾಗಿರಲು
ಖಂಡಿತಾ ಬಿಡಲಾರದು..
ನೀ ಕೊಟ್ಟದ್ದೇ ನಿನಗೆ ದುಪ್ಪಟ್ಟಾಗಿ
ನಿನ್ನ ಹುಡುಕಿ ಬಂದೇ ಬರುವುದು,
ಅದು ಪ್ರೀತಿಯಾದರೂ ಸರೀ,
ದ್ವೇಷವಾದರೂ ಸರೀ.. ನಗುವಾದರೂ
ಸರಿ, ನೋವಾದರೂ ಸರಿ.. ವಿನು...🌹
-