ಶಿಕ್ಷಕ ಎಂಬುದು ಬರೆ ಗುರು ಅಲ್ಲ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು...
-
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ
ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||-
ಅಜ್ಞಾನದ ಕಳೆಯ ಕಿತ್ತಿ ಸುಜ್ಞಾನದ ಬೀಜ ಬಿತ್ತಿ ಸದ್ಗುಣಗಳ ಗೊಬ್ಬರ ಹಾಕಿ ನವಚೇತನದ ಫಲವ ಮೂಡಿಸಿ ದೇಶಕ್ಕೆ ಒಳೆತೆಂಬ ಗಾಳಿಯು ಅಳಿಯದೆ ಉಳಿಸಿ ಸಿಗುವಂತೆ ಮಾಡುವವರೇ ನಿಜವಾದ ಗುರು. ಅಜ್ಞಾನದಿಂದ ಸುಜ್ಞಾನದ ಕಡೆ ನಡೆಸಿ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನೀಡಿ ಸ್ಪೂರ್ತಿದಾಯಕ ಮಾತುಗಳನ್ನು ತುಂಬಿ ವಿದ್ಯಾರ್ಥಿಗಳ ಜೀವನದ ಆದರ್ಶ ವ್ಯಕ್ತಿಯಾಗಿರುವ ನಿಮಗೆ ಕೋಟಿ ಕೋಟಿ ಹೃದಯ ವಂದನೆಗಳು
-
ಒಂಬತ್ತು ತಿಂಗಳು ಕಳೆದು ಗರ್ಭದಿಂದ ಬಿಡುಗಡೆ ಪಡೆದು ಬಂದ ಪುಟ್ಟ ಕಂದಮ್ಮನಿಗೆ ಈ ಸ್ವಾಗತ ಕೋರಿ ಈ ಮುದ್ದಾದ ಮುಖಕ್ಕೆ ಒಂದು ನಾಮಕರಣ ಮಾಡಿ.ಈ ನಾಮಕರಣದ ಸಂಭ್ರಮದಲ್ಲಿ ಎಲ್ಲರೂ ಸೇರುವ ಅವಕಾಶ ಮೂಡಿಬಂದಿದೆ
-
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾವಿರಾರು ರಕ್ತ ಸಂಬಂಧಗಳೊಂದಿಗೆ ಪ್ರೀತಿ ಪ್ರೇಮ ಮಮತೆ ವಾತ್ಸಲ್ಯದಿಂದ ನಮ್ಮ ಜೀವನಕ್ಕೆ ಜೀವವಾಗಿ ಇರುವ ನಿಮ್ಮ ನಮ್ಮ ಸ್ನೇಹ ಸಂಬಂಧವು ಯಾವಾಗಲು ಚಿರಕಾಲವು ಚಿರಾಯು ಆಗಿರುವಂತೆ ಕಾಪಾಡಿಕೊಳ್ಳೋಣಾ ಎಲ್ಲರಿಗೂ ಗೆಳೆಯರ ದಿನಾಚರಣೆಯ ಶುಭಾಶಯಗಳು..
-
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ನಾಗರ ಪಂಚಮಿ ಹಬ್ಬದ ಹಾರ್ಧಿಕ ಶುಭಾಶಯಗಳು..ಶ್ರಾವಣ ಮಾಸದ ಮೊದಲ ಶುಕ್ರವಾರ ಮೊದಲ ಶುಕ್ರ ಗೌರಿ ವ್ರತದ ಶುಭಾಶಯಗಳು...
-
ಮನಸ್ಸಿನ ಹಾದಿಯಲ್ಲಿ ಕನಸುಗಳು ಪಯಣ ಬದುಕಿನ ದಾರಿಯಲ್ಲಿ ಪ್ರಶ್ನೆಗಳ ಸರದಿ ಕನಸುಗಳನ್ನು ಬೆನ್ನೇರಿ ನನಸು ಮಾಡುವ ಆಸೆ..ಭಯದ ಆಲೋಚನೆ ಬಿಡು ಜಯದ ಕನಸು ಹೊತ್ತು ನಡೆ ನಿನಗಾಗಿ ಈ ಬದುಕು..
-
ಪುಸ್ತಕ ಕಲಿಸದೆ ಇರುವ ವಿದ್ಯೆಯನ್ನು,ಸಂಸ್ಕಾರವು ಮನುಷ್ಯನಿಗೆ ವಿದ್ಯೆಯನ್ನು ಕಲಿಸುತ್ತದೆ..
-