ವಿಜಯಪ್ರಕಾಶ್ ಕಣಕ್ಕೂರು   (© ವಿಜಯ್💫)
425 Followers · 143 Following

read more
Joined 9 December 2020


read more
Joined 9 December 2020

ಪುಸ್ತಕ ಪರಿಚಯ

-



ಜುಲ್ ಕಾಫಿಯಾ ಗಝಲ್
ನುಡಿತದ ವಹಣಿಯಲಿ ಉಳಿದಿರಲಿ ಅನುಭಾವದ ಗುರುತು
ನಡೆದ ಸುಪಥಗಳಲಿ ಅಳಿಯದಿರಲಿ ಅಭಿಮಾನದ ಗುರುತು

ಕನಸುಗಳು ಚಿಗುರಿದಾಗ ಬದುಕಿನಲಿ ನವ ವಸಂತೋದಯ
ಛಲವ ಬಿಡದಿಹ ಯತ್ನಗಳಿಗೆ ಒಲಿದಿರಲಿ ಗೌರವದ ಗುರುತು

ನೀಡಿದ ಪದಕಗಳಿಗೆ ಬೆಲೆಯು ಅರ್ಹರಿಗೆ ಆಭರಣವಾಗಲು
ಒಲಿದಿಹ ಅರಿವಿಗೆ ವಾಟಿಸದಿರಲಿ ದುರಭಿಮಾನದ ಗುರುತು

ಹರಿವ ತೊರೆಯಂತೆ ಕಲಿಕೆಯು ನಿಲ್ಲದು ಕಾಲವಾಗುವ ತನಕ
ಕಾಲವು ಸರಿದಂತೆ ಮಸುಕಾಗದಿರಲಿ ಪರಮಾರ್ಥದ ಗುರುತು

ವ್ಯಯಿಸಿದ ಕ್ಷಣಗಳ ಸಾರ್ಥ್ಯಕ್ಯವು ವಿಜಯದ ನಗುವಲಿಹುದು
ವ್ಯಂಜಿಸಿದ ಋತದ ಹದನಕೆ ಮಣಿದಿರಲಿ ಅಳೀಕದ ಗುರುತು

-



ಕೇಳು ನೀನಿಂದು ಮಗುವೇ ಕೂಡಿಡು ನೀನಿದ
ಬಾಳ ಹಾದಿಯಲಿ ಸಿಕ್ಕ ಸವಿ ನುಡಿಗಳನೆಲ್ಲ
ದಾರಿದೀಪವದು ಲೋಕದಲಿ ರೂಢಿಯನರಿತು ಎಲ್ಲರೊಳು ಒಂದಾಗಲು
ತೋಳ್ಬಲದಲೇ ಗೆಲ್ಲಲಾಗದೆಲ್ಲವನಿಲ್ಲಿ
ತಾಳ್ಮೆಯಲಿ ಜಯಿಸು ನೀ ಸಜ್ಜನರ ಪ್ರೀತಿಯನು
ತಾರಕ ನುಡಿಗಳಿರಲಿ ಕೆಚ್ಚೆದೆಯ ನಡೆಯಿರಲಿ ಸತ್ಯಕೆ ಜಯವ ಕೊಡಿಸಲು

-



ಅಕ್ಕರೆಯಿಂದಲಿ ಆದರಿಸಿದನು ಅಧರದಿಂದ
ಅವಳಂತರಂಗದಿ ಅಲೆಯೆದ್ದಿತು ಅದರಿಂದ

-



ಗಝಲ್
ಅಕ್ಕರೆಯ ಅಕ್ಕರದಿಂದ ಅನಾಗತವನು ರೂಪಿಸಿದವಳು ಅವಳು
ಅರಿವಿನ ಅಮೃತದಿಂದ ಮರುಜನ್ಮವನು ನೀಡಿದವಳು ಅವಳು

ಬರೆದ ಮೊದಲಕ್ಷರದ ನಂಟು ನಡೆಸುತಿದೆ ಜ್ಞಾನದಾಗರದೆಡೆಗೆ
ಸ್ಫುರಿಸುವ ಭಾವಗಳಲಿ ಸೋಜಿಗವನು ತುಂಬಿದವಳು ಅವಳು

ಅಧಿಗಮವು ಉತ್ಕರ್ಷಿಸುತಿರೆ ಅಳಿಯಿತು ಅವಿದ್ಯೆಯ ತಮವು
ಹೊಳಪಿರದ ಕಪ್ಪುಬಿಳುಪಿನ ಬಾಳಿಗೆ ಬಣ್ಣ ಬಳಿದವಳು ಅವಳು

ವಿಹರಿಸೆ ಭಾವಗಳ ಪಯೋನಿಧಿಯಲಿ ಉಕ್ಕುವುದು ತೋಷವು
ಸ್ತುತಿಸೆ ತಾನೊಲಿದು ಮತಿಯನು ಹರಿತಗೊಳಿಸಿದವಳು ಅವಳು

ತೀರಿಸಲೆಂತು ವಿಜಯಪಥದಲಿ ಮೆರೆಸಿದ ಕನ್ನಡಮ್ಮನ ಋಣವ
ನಡೆ ನುಡಿಗಳನು ಕಲಿಸಿ ಉಸಿರಲಿ ಬೆರೆತುಹೋದವಳು ಅವಳು

-



ಕಥೆ: ಶಿಶಿರದಲ್ಲಿ ವಸಂತ - ಭಾಗ ೨

-



ಹಸಿವೆನ್ನುವ ಭೂತಕ್ಕೆ ಹೆದರಿದಷ್ಟು
ಬೇರೆ ಯಾವುದಕ್ಕೂ ನಾನು ಹೆದರಿರಲಿಲ್ಲ.

ಅವಳ ಅನುಭವ
(ಸಣ್ಣ ಕಥೆ)

-



ಸಣ್ಣ ಕಥೆ: ಮಣೆ

ನಾನು ಎನ್ನುವ ಜೀವಕ್ಕೆ, ಮನಸ್ಸಿಗೆ, ಆತ್ಮಕ್ಕೆ ಕೊನೆಯ ಪಕ್ಷ ನನ್ನ ಅರಿವಿಗೆ ಮಣೆ ಹಾಕುವ ಉದಾರತೆ ತೋರಿರುತ್ತಿದ್ರೂ ಮಣೆ ಎತ್ತುವ ಪ್ರಸಂಗ ಬರುತ್ತಿರಲಿಲ್ಲ.

(ಮುಂದೆ ಕ್ಯಾಪ್ಷನ್ ನಲ್ಲಿ.....)

-



Don't be a phonograph to express yourself. Be a good book. Obviously you will have less number of readers. Remember, at the end the book will be valued by its content.

-



ಜುಲ್ ಕಾಫಿಯಾ ಗಝಲ್
ಅಂತರಂಗದ ತಮವನು ನೀಗಿಸುವ ಸುಜ್ಞಾನದಂದದಲಿ ಬೆಳಗುತಿರಲಿ ದೀಪಾವಳಿ
ಪರಭಾಗಕೆ ನೈಪಥ್ಯವಾಗಿರುವ ಚಿತ್ತವೃತ್ತಿಯ ಕಂಪಿನಲಿ ಶೋಭಿಸುತಿರಲಿ ದೀಪಾವಳಿ

ಮನವ ಮಥಿಸಲು ಪ್ರಕಟವಾಗುತಿರಲಿ ಸದ್ಭಾವಗಳು ನಕಾರಾತ್ಮಕತೆಗಳ ನಡುವಿಂದ
ಹೃದಯದ ಪ್ರಣತೆಯಲಿ ಆಸ್ತೆಯನು ಕನಿಸಿ ನಲ್ಮೆಯಲಿ ದೀಪ್ತಿಸುತಿರಲಿ ದೀಪಾವಳಿ

ಲೋಕವ ಪರಿಚಯಿಸಿದ ಅಭಿಭವಕೆ ಅಂಜಿ ನಡೆದರೆ ಬಾಳನು ಸವೆಸುವುದು ಹೇಗೆ
ಬೆಳಕ ಬಯಸಿ ಇಡುವ ಹೆಜ್ಜೆಗಳಿಗೆ ಕಾವಳದಲಿ ಗತಿದರ್ಶಕವಾಗುತಿರಲಿ ದೀಪಾವಳಿ

ಸಕಲರೊಳೊಂದಾಗು ವಿಕಲ ಚಿಂತನೆಗಳ ಕಳೆದು ಶಿಷ್ಟ ಜೀವನದಲಿ ವಿಶಿಷ್ಟನಾಗು
ಮಿಷ್ಟ ಸೊಲ್ಲುಗಳಿಂದ ಸಂಬಂಧಗಳ ಬೆಸೆಯುತಲಿ ಪ್ರಕಾಶಿಸುತಲಿರಲಿ ದೀಪಾವಳಿ

ನಯನಗಳಲಿ ಅನುಭಾವಿಸಲಿ ಅಕಲಂಕ ಪ್ರದ್ಯುತಿಯು ವಿಜಯದ ಸಂಕೇತವಾಗಿ
ಪರಹಿತವನು ಬಯಸುವ ಹಾರೈಕೆಗಳ ಪ್ರಖರತೆಯಲಿ ಮಿಸುಗುತಿರಲಿ ದೀಪಾವಳಿ

-


Fetching ವಿಜಯಪ್ರಕಾಶ್ ಕಣಕ್ಕೂರು Quotes