Upadhyaya Channdrashekhar   (ಉಪಾಧ್ಯಾಯ , ಧಾರೇಶ್ವ‌ರ‌.)
148 Followers · 33 Following

Joined 31 July 2017


Joined 31 July 2017
31 DEC 2020 AT 6:39

ವರುಷ ಪಂಚಮಕೆ ಹರುಷದಿ ಕಾಲೂರಿ
ಅಜ್ಜ ಅಜ್ಜಿಯರ ಮನದಾಳದಲಿ ಬೇರೂರಿ
ನಗುತ ನಗಿಸುತ ಸುಖವಾಗಿ ನೀ ಬಾಳು ಕಂದ
ನೀಡು ಮನೆಮಂದಿಗೆಲ್ಲ ಮಹದಾನಂದ

ಪಾಟಿ ಚೀಲವ ಹೊತ್ತು ಪಾಠಶಾಲೆಗೆ ಹೊಗಲುಂಟು
ಮಗಳು ತುಂಟಿಯೆಂದು ಅಮ್ಮ ಬೈಸಿಕೊಳಲುಂಟು
ಹೆದರದಿರು ಅಜ್ಜ ಅಜ್ಜಿಯರು ನಿನ್ನ ಪಾರ್ಟಿ
ಜಾಣತನದಲಿ ನಿನಗೆ ಯಾರಿಲ್ಲ ಸಾಟಿ👍👍

ಜನುಮ ದಿನದ ಶುಭಾಶಯಗಳು..

💕ಅಜ್ಜ + ಅಜ್ಜಿ.


https://youtu.be/hTGK_ynby44

-


31 DEC 2020 AT 6:37

ಜನುಮ ದಿನದ ಶುಭಾಶಯಗಳು..

ವರುಷ ಪಂಚಮಕೆ ಹರುಷದಿ ಕಾಲೂರಿ
ಅಜ್ಜ ಅಜ್ಜಿಯರ ಮನದಾಳದಲಿ ಬೇರೂರಿ
ನಗುತ ನಗಿಸುತ ಸುಖವಾಗಿ ನೀ ಬಾಳು ಕಂದ
ನೀಡು ಮನೆಮಂದಿಗೆಲ್ಲ ಮಹದಾನಂದ

ಪಾಟಿ ಚೀಲವ ಹೊತ್ತು ಪಾಠಶಾಲೆಗೆ ಹೊಗಲುಂಟು
ಮಗಳು ತುಂಟಿಯೆಂದು ಅಮ್ಮ ಬೈಸಿಕೊಳಲುಂಟು
ಹೆದರದಿರು ಅಜ್ಜ ಅಜ್ಜಿಯರು ನಿನ್ನ ಪಾರ್ಟಿ
ಜಾಣತನದಲಿ ನಿನಗೆ ಯಾರಿಲ್ಲ ಸಾಟಿ👍👍

ಜನುಮ ದಿನದ ಶುಭಾಶಯಗಳು..

💕ಅಜ್ಜ + ಅಜ್ಜಿ.

-


20 MAY 2020 AT 22:28

ಶ್ಲೋಕ:

ಅರ್ಥಾಗಮೋನಿತ್ಯರೋಗಿತಾ ಚ
ಪ್ರಿಯಾಚ ಭಾರ್ಯಾ ಪ್ರಿಯವಾದಿನೀ ಚ
ವಶ್ಯಶ್ಚ ಪುತ್ರೋsರ್ಥಕರೀ ಚ ವಿದ್ಯಾ
ಷಡ್ ಜೀವ ಲೋಕಸ್ಯ ಸುಖಾನಿ ರಾಜನ್

ಶ್ಲೋಕಾರ್ಥ:

ಧನಪ್ರಾಪ್ತಿ , ಆರೋಗ್ಯ , ಪ್ರಿಯಳೂ ಪ್ರಿಯಂವದೆಯೂ ಆದ ಹೆಂಡತಿ, ವಿನೀತನಾದ ಮಗ, ಧನಾರ್ಜನೆಗೆ ಉಪಯುಕ್ತವಾದ ವಿದ್ಯೆ ಇವು ಆರು ಜನರಿಗೆ ಸುಖಕರವಾದುದು.

(ಸಂಗ್ರಹ)

-


9 AUG 2019 AT 9:14



ಸುರಿಯುತಿದೆ ಮಳೆ‌ ಎಡಬಿಡದೇ
ಬೇಸರ ಹೆಚ್ಚಾಗಿದೆ ಮನೆ ಹೊರಗೆ ಬರದೇ
ಕಾದಿರುವೆ ವರಮಹಾಲಕ್ಷ್ಮಿಯ ದರುಶನಕಾಗಿ
ಶುಚಿರ್ಭೂತನಾಗಿ ಗ್ರೃಹಲಕ್ಷ್ಮಿ ಜೊತೆಯಾಗಿ


ಸರ್ವರಿಗೂ ಶುಭವಾದಾಗ
ಅವರಲಿ ನಾನೂ ಸೇರಿರುವಾಗ
ಬೇರೆ ಹರಕೆ ಏಕೆ ದೇವಿಯ ಪಾದದಲಿ?
ಸಕಲರಾ ಮೊಗದಲಿ ನಲಿವಿರಲಿ ನಗುವಿರಲಿ


ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು


-


17 JUN 2019 AT 19:52

ಅಮ್ಮ

ಅಮ್ಮ ನಿನ್ನೊಡಲಲ್ಲಿ ನವಮಾಸ ವಾಸ
ಅಮ್ಮ ನಿನ್ನ ಹೆಸರಡಿಯಲ್ಲಿ ನನ್ನ ಆವಾಸ
ಮನದಲ್ಲಿ ನಿನ್ನ ನೆನಪು ಮನೆಗೆ ನಿನ್ನ ನಾಮ ಫಲಕ
ನೋಡಿದಾಗಲೆಲ್ಲ ನೆನಪಾಗುವುದು ನಿನ್ನ ದೊಡ್ಡ ತಿಲಕ


ಉಚ್ವಾಸ ನಿಶ್ವಾಸವೆಲ್ಲ ನೀ ಕೊಟ್ಟ ಉಸಿರು
ಅಂತರಾಳದಿ ನಿನ್ನ ಸ್ಮರಣೆ ಸದಾ ಹಸಿರು
ಹೊಕ್ಕಳಾ‌ಬಳ್ಳಿ ಹರಿದು ನೀ ಜನ್ಮ ಕೊಟ್ಟೆ
ಎಂದಿಗೂ ಮರೆಯದ ಸಂಸ್ಕಾರವಿತ್ತೆ

ಅಮ್ಮ ಮತ್ತೆ ನಿನ್ನ ಮಡಿಲಲ್ಲಿ ಮಗುವಾಗುವಾಸೆ
ಮರೆಯ ಬೇಕು ಈ ಜಗದ ಆಶೆ ಪಾಶೆ
ಯಾರೇ ಪ್ರೀತೀಸಲಿ ,ಕೋಪಿಸಲಿ ನನಗಿಲ್ಲ ಬೇಧ
ಮುಗ್ದವಾಗಿ ನಗುವೆ ನಿನ್ನ ತೋಳಲ್ಲಿ ಬೇಗ

ಪರರು ಪ್ರೀತಿಸಿ ಗೌರವಿಸ ಬೇಕೆಂಬ ಹಠವೇಕೆ ನನಗೆ
ಎಲ್ಲವನು ಮರೆತು ಆತ್ಮಸಂತೋಷದಿ ತೇಲಬಾರದೇಕೆ
ಅಮ್ಮನ ಮಮತೆಗೆ‌ ಹೋಲಿಕೆಯೇ ಇಲ್ಲಮ್ಮ
ನಿರ್ವಾಜ್ಯ ಪ್ರೇಮ ನಿಷ್ಕಾಮ ಕರ್ಮಕ್ಕೆ ಪುರಾವೆ ಅಮ್ಮ

-


6 NOV 2018 AT 11:54

ಬಾಂಧವ್ಯ

ಪ್ರೀತಿಯ ಮಿಂಚು ಕಣ್ಣಲ್ಲಿ
ಹೊಸ ಬಟ್ಟೆ ಸಿಹಿ ತಿಂಡಿ ಬ್ಯಾಗಲ್ಲಿ
ಬಸ್ಸಿನಿಂದ ಇಳಿಯಿತೊಂದು ಕುಟುಂಬ
ಚಿಮ್ಮಿತ್ತು ಸಂತಸ ಮನದ ತುಂಬ

ಹೆತ್ತವರ ನೋಡಲು ಮಗಗೆ ಕಾತುರ
ಅಜ್ಜಿಯ ಮಡಿಲು ಸೇರಲು ಮೊಮ್ಮಕ್ಕಳ ಆತುರ
ಅತ್ತೆ ಮಾವರ ಶುದ್ಧ ಪ್ರೇಮವ ನೆನೆಸಿ
ಆದೃವಾಯಿತು ಸೊಸೆಯ ಹ್ರೃದಯ ದ್ರವಿಸಿ

ಅಪ್ಪಿದರು ಮಗನ ಮೊಮ್ಮಕ್ಕಳ
ಉಕ್ಕಿತು ಸಂತಸ ಬಂತು ಬಿಕ್ಕಳಿಕೆ
ಉದುರಿದವು ಹನಿಗಳು ಕಣ್ಣಿನಿಂದ
ತುಂಬಿತು ಮನಸು ಆನಂದದಿಂದ

ತಿನ್ನುವ ಉಣ್ಣುವ ತೊಡುವ ತಿರುಗುವ
ಆಸೆ ತಣಿದಿದೆ ಕೈಲಾಸ ಯಾತ್ರೆ ಮಾತ್ರ ಉಳಿದಿದೆ
ಕರ್ಪೂರ ಉರಿದು ಕರಗಿದರು ಕಂಪುಳಿಯುವಂತೇ
ಕರ್ತವ್ಯ ಮುಗಿದರೂ ಕುಟುಂಬದ ಉತ್ಕರ್ಷದ ಚಿಂತೆ

ಆಸೆ ಅನಂತ ಪ್ರೇಮಕ್ಕೆ ಗಡಿ ದಿಗಂತ
ಏನಿದೆ ಬದುಕಲ್ಲಿ ಒಲವು ಬತ್ತಿದರೆ
ವಾತ್ಸಲ್ಯದ ಬಂಧನಕಿಲ್ಲ ದೂರ ಸಮೀಪ
ಸೇರುವಿಕೆಗೆ ಹಬ್ಬ ಒಂದು ನೆಪ ಮಾತ್ರ










-


28 OCT 2018 AT 19:37

ಮ್ರೃಗಜಲ

ತಂಪಾಗಿ ತಂಬುಳಿ ಉಂಡು ತುಂಡು ಪಂಚೆಯ ಹೊದ್ದು
ಮಧ್ಯಾಹ್ನ ಒರಗಿದ್ದೆ ಕವಳ ಜಗಿಯುತ್ತ ದೇಶ ನೆನೆಸುತ್ತ
ನಮ್ಮೂರ ಸರ್ಕಾರಿ ಶಾಲೆಯಲಿ ಸೀಟಿಲ್ಲವಂತೆ
ಪ್ರತಿ‌ಮನೆಯಲ್ಲೂ ಶಾಲೆಗೋಗೋ ಮಕ್ಕಳಾ ಸಂತೆ

ಯುವತಿಯರೆಲ್ಲ ಹಳ್ಳಿ ವರನಿಗಾಗಿ ಕಾಯುತಿರುವರಂತೆ
ಗಣಕ ತಂತ್ರಜ್ಞನಿಗೆ ತನ್ನ ಮದುವೆದೇ ಚಿಂತೆ
ನಡೆಯಲಿದೆ ಊರಲ್ಲಿ ಭಜನೆ ರಂಗೋಲಿ ಸ್ಪರ್ಧೆ
ಅತ್ತೆಯ ಉಡುಗೊರೆ ಇದೆ ತನ್ನ ಸೊಸೆ ಗೆದ್ರೆ

ಪೋಲೀಸ್ ಸ್ಟೇಷನ್ ಕೋರ್ಟಲ್ಲಿ ಕೇಸೇ ಇಲ್ವಂತೆ
ಸರ್ಕಾರಿ ಆಪಿಸಲ್ಲಿ ಲಂಚ ಮುಟ್ಟೋದಿಲ್ವಂತೆ
ಎಲ್ಲೆಲ್ಲೂ ಹಸಿರು ಸಂತಸದ ಉಸಿರು
ಎಲ್ಲರಾ ಬಾಯಲ್ಲೂ ಮೋದಿಯದೆ ಹೆಸರು

ಮಸೀದೆಯಲಿ ಗಂಟೆ ತೂಗುವ ಬ್ರಾಹ್ಮಣ
ಚರ್ಚಿನಲಿ ಮಾವು ತುಳಸಿ ತೋರಣ
ಸಂತಸದಿ ಎದ್ದು ಹೊಡೆದೆ ಚಪ್ಪಾಳೆ
ಎದ್ದಾಗ ಅರಿವಾಯ್ತು ಎಲ್ಲ ಕನಸಲ್ಲೇ.

-


25 OCT 2018 AT 14:35

ಬೇಡಿಕೆ.

ಭಕ್ತಿ ರಸವ ಹರಿಸಿ ಹರಿಸಿ
ದೇವಿಯನ್ನು ಸ್ತುತಿಸಿ ಸ್ತುತಿಸಿ
ಶಾಂತಿಯನ್ನು ಗಳಿಸಿ ಗಳಿಸಿ
ಆಸ್ತಿಕತೆಯ ಉಳಿಸಿ ಉಳಿಸಿ

ದೇವರಿಗೆ ಸ್ತೋತ್ರವಿಲ್ಲ
ಮನದ ತುಂಬಾ ಕ್ಷೋಭೆಯೆಲ್ಲ
ಕಿರಿಯರಿಗೆ ಬುದ್ಧಿ ಇಲ್ಲ
ಹಿರಿಯರಿಗೆ ಪುರುಸೊತ್ತಿಲ್ಲ

ಹಿಂಗೇ ಆದ್ರೇ ಮುಂದೇ ಹೇಗೆ
ಧರ್ಮ ಸಂಸ್ಕೃತಿ ಉಳಿಸೂದು ಹೆಂಗೇ
ಅಯ್ಯೊ ದೇವ್ರೇ ನೀನೇ ಕಾಯಿ
ಒಡೆಸುವೆನು ಜೋಡುಗಾಯಿ.

-


25 OCT 2018 AT 14:33

ಹಣತೆ--ಮಿಡತೆ.

ಸಮಾನತೆ , ಸ್ವಾತಂತ್ರ್ಯ ಬಿಸಿ ಬಿಸಿ ಪದಪುಂಜಗಳು
ಘೋಷಣೆ ,ಶೋಷಣೆ ಅದರ ನಂಜುಗಳು
ಸ್ತ್ರೀಯರಿಗೆ ಗೌರವ ಕೊಡಲು ನಾವು ಎಂದೂ ಹಿಂದಿಲ್ಲ
ಕೊಟ್ಟ ಪ್ರೀತಿಯನು ಅವರು ಉಳಿಸಿಕೊಳ್ಳ ಬೇಕಲ್ಲ

ಸ್ವಾತಂತ್ರ್ಯ ಸ್ವೇಚ್ಛೆ ಆಗಬಾರದು
ಶ್ರೃಗಾರ ಅಶ್ಲೀಲ ವಾಗಬಾರದು
ಆಸೆ ಮಿತಿಯಲ್ಲಿದ್ದರೆ ಚೆಂದ
ಪ್ರೇಮ ತ್ಯಾಗದ ಜೊತೆಯಾದಾಗ ಆನಂದ

ಹೆಣ್ಣೇ ಎಷ್ಟು ಕೂಗಾಡಿದರೂ ನೀ ಅಬಲೆ
ನಿನಗಾಗಿ ಹಾಕಿಟ್ಟಿರುವರು ಮೋಹದ ಬಲೆ
ಸುರತಿಯಲ್ಲಿ ಪಾಲು ಇಬ್ಬರಿಗೂ
ಪ್ರಸೂತಿಯ ನೋವು ನಿನಗೊಬ್ಬಳಿಗೇ

ನಿನ್ನ ಪ್ರೀತಿಸುವ ಅಪ್ಪ ಗಂಡ ಮಗ ಗಂಡಲ್ಲವೇ
ಅವರಿರದ ಬದುಕು ನಿನಗೆ ಸಾಧ್ಯವೇ?
ಬಾಗಿದರೆ ಬದುಕು ಸೊಕ್ಕಿದರೆ ಒಡಕು
ಮಾಡ ಬೇಡ ಬಾಳನ್ನು ಕೆಡುಕು

ಪಶ್ಚಿಮದ ಗಾಳಿ ಒಳಿತಲ್ಲ ಅದರಲ್ಲಿ ಬದುಕಿನ ತಿರಳಿಲ್ಲ
ನಮ್ಮ ನೆಲ ನಮ್ಮ ಜನರ ಮರೆತರೆ ಸುಖವಿಲ್ಲ
ಬಾಳ ಬೆಳಕಾಗು ಹಣತೆಯಂತೆ
ಸುಟ್ಟು ಕರಕಾಗ ಬೇಡ ಮಿಡತೆಯಂತೆ.

-


4 OCT 2018 AT 0:04


ಶುಭಾಶಯ

ಹತ್ತು ತುಂಬಿತು ಇಂದು ಮತ್ತೆ ಮುಗಿಯಿತು ಬಾಲ್ಯ
ಕಡಿಮೆ ಮಾಡಬೇಕಿನ್ನು ಕುಚೋದ್ಯ
ವಿದ್ಯಾ ಬುದ್ಧಿಯ ಗಳಿಸಿ ಲಲಿತಕಲೆಗಳಲ್ಲಿ ತೊಡಗಿಸಿ
ಶುದ್ಧ ಮನದಲ್ಲಿದ್ದರೆ ಬಂದೀತು ಕೀರ್ತಿ ನಿನ್ನನರಸಿ

ಆಟ ಪಾಠಗಳಿರಲಿ ಗಾನ ನ್ರತ್ಯಗಳಿರಲಿ
ಭಾಷಣ ಗೀತಾ ಕಂಠಪಾಟವಿರಲಿ
ಎಲ್ಲದಲು ನಿನಗೊಂದು ಬಹುಮಾನ ಬರಲಿ
ಅಪ್ಪ ಅಮ್ಮನಿಗೆ ಅಜ್ಜ ಅಜ್ಜಿಯರಿಗೆ ಸಂತಸವ ತರಲಿ

ಎಷ್ಟು ದಿನ ಪಾಲಕರು ಏಣಿಯನು ಹಿಡಿದಾರು
ಇನ್ನು ಎತ್ತರವ ನೀನೇ ಏರಬೇಕು
ಆಲಸ್ಯವನು ಮರೆತು ಚಾರಿತ್ರ್ಯವನು ಮೆರೆಸಿ
ಸೊಗಸಾಗಿ ಬಾಳೆಂದು ಹರಸುವೆವು ಇಂದು

ಆಶೀರ್ವಾದಗಳು....
ಅಜ್ಜ + ಅಜ್ಜಿ.

-


Fetching Upadhyaya Channdrashekhar Quotes