ಸಂಸ್ಕೃತ ಕನ್ನಡದ ತಾಯಿ...
ಕನ್ನಡ ಪದ್ಗಳ್ನ್ ಬಳಸಿ
ಕನ್ನಡನ ಉಳಿಸಿ
ಸಂಸ್ಕೃತ ಪದ್ಗಳ್ನ್ ಬಳಸಿ
ಸಂಸ್ಕೃತ ಬೆಳ್ಸೋದ್ ನಿಲ್ಲಿಸಿ
ತಪ್ಪು ನಮ್ಮಲ್ಲೆ ಇದೆ...
-
ನಿನ್ನ ಜಾತಿ ಕೀಳೆಂದವರ ಮುಂದೆ ನಾನು ನನ್ನ ಜಾತಿ ಮೇಲೆಂದು ಸಾಬೀತು ಪಡಿಸಿಕೊಳ್ಳುವುದು ಜಾತಿವಾದವಾದರೆ ನಾನು ಜಾತಿವಾದಿಯಾಗಲು ಹಿಂಜರಿಯುವುದಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಜಾತಿವಾದಿ ಅಷ್ಟೇ ನನ್ನ ದೃಷ್ಟಿಯಲ್ಲಲ್ಲ.
-
ಅಯ್ಯೋ ಮೂರ್ಖರೇ...
ಮುಕ್ಕೋಟಿ ದೇವತೆಗಳು ನಿಮ್ಮನ್ನ ಕಾಯುವ ಆಗಿದ್ದರೆ ದೇಶದ ಗಡಿಗೆ ಸೈನಿಕರು ಏಕೆ ಬೇಕಿತ್ತು ಆ ನಿಮ್ಮ ದೇವರುಗಳೇ ಸಾಕಿತ್ತು.-
ಹಿರಿಯ ಕುಲವೆಂದು ದಲಿತರನ್ನು ಸಂಬೋಧಿಸುವುದು ಇವು ದಲಿತರ ಘನಚರಿತ್ರೆಗೆ ಸಲ್ಲಿಸಿದ ಗೌರವವೆಂದೇ ಹೇಳಬೇಕು. ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ ಮೊದಲಾದ "ವೀರರ" ಪ್ರಯತ್ನವಿದ್ದಿಲ್ಲದಿದ್ದರೆ 'ವೀರಶೈವ'ವೇ ಹುಟ್ಟುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣ ಮಾದರ ಚನ್ನಯ್ಯನನ್ನು ಅಪ್ಪ, ಬೊಪ್ಪ, ಕುಲದ ಮೂಲಪುರುಷ ಮುಂತಾಗಿ ಹಾಡಿ ಹೊಗಳಿದ್ದಾನೆ.
-
ಯುದ್ಧ ಬೇಕು ಎನ್ನುವ ಪೆದ್ದರು ಯುದ್ಧ ಎಂದರೆ PUBG ಯಲ್ಲಿ ಆಡಿದಂಗೆ ಎಂದುಕೊಂಡುಬಿಟ್ಟಿದ್ದಾರೆ.
-
ಯುದ್ಧ ಬೇಕು ಎನ್ನುವವರು ಹೋಗಿ ನೀವೆ ಯುದ್ಧ ಮಾಡಿ. ನಿಮ್ಮಗಳ ತೀಟೆಗೆ ಬೇರೆಯವರ ಮನೆಯ ಅಮಾಯಕ ಸೈನಿಕರು ಬಲಿಯಾಗುವುದು ಬೇಡ, ಅವರ ಹೆಂಡತಿಯರು ವಿಧವೆ ಆಗುವುದು ಬೇಡ, ಅವರ ಮಕ್ಕಳು ತಂದೆ ಕಳೆದುಕೊಳ್ಳುವುದು ಬೇಡ.
-
ಮನುಷ್ಯ ಮಾಡಬಾರದ ಪಾಪವನ್ನೆಲ್ಲ ಮಾಡಿ ಕಡೆಗೆ ದೇವರ ಬಳಿಗೆ ಹೋಗಿ ತಪ್ಪುಕಾಣಿಕೆ(ಹಣ,ಒಡವೆ,ಇತ್ಯಾದಿ) ಕೊಟ್ಟು ಪಾಪವನ್ನೆಲ್ಲ ಮಾಫಿ ಮಾಡಿಸಿಕೊಂಡು ಬಂದು ಪುನಃ ಪಾಪದ ಕೆಲಸದಲ್ಲಿ ತೊಡಗುವುದು ಬಹುಶಃ ಹಿಂದೂ ಧರ್ಮದಲ್ಲಿ ಮಾತ್ರ ಎಂದೆನಿಸುತ್ತದೆ.
-
೧೪೦ ಕೋಟಿ ಜನಸಂಖ್ಯೆ ಹೊಂದಿದ ಭಾರತ ದೇಶವನ್ನ ಮುನ್ನಡೆಸುತ್ತಿರುವ ಸಂವಿಧಾನವನ್ನ ರಚಿಸಲು ನೂರಾರು ಧರ್ಮ ಶಾಸ್ತ್ರ, ಪುರಾಣಗಳನ್ನು ಬರೆದುಕೊಂಡ ಯಾವ ಹಿಂದೂವಿನ ಕೈಯಲ್ಲೂ ಸಾಧ್ಯವಾಗಲಿಲ್ಲ ಅಸ್ಪೃಶ್ಯತೆಯ ಕೂಪದಿಂದ ಎದ್ದು ಬಂದ ಒಬ್ಬ ದಲಿತನೆ ರಚಿಸಬೇಕಾಯಿತು.
-