ಮಗು ಇದ್ದಾಗ ಎಲ್ಲರಿಗೂ ಇಷ್ಟ,
ಬೆಳೆದಮೇಲೆ ಮಾತು ಆಡುವುದು ಕಷ್ಟ.
ಬಾಳಿನಲ್ಲಿ ಬರುವ ಕಷ್ಟಗಳಲ್ಲಿ ಕೆಲವರು ಮಾತ್ರ ಹತ್ತಿರ ಇರುವರು,
ಮುಗಿಯುವ ಹೊತ್ತಿಗೆ ಯಾರಿಗೆ ಯಾರು ಇರೋರು?
-
"ಇಲ್ಲಿ ಗೀಚುವ ಎಲ್ಲ ಪದಗಳು ಕಾಲ್ಪನಿಕ.
ಇವು ಯಾವುದೇ ಜೀವಂತ ಹಾಗೂ ಮೃತ ವ್ಯಕ್ತಿಗೆ ಸಂ... read more
ಇಲ್ಲಿ ಮನುಷ್ಯನ ಮುಖವಲ್ಲ, ಅವನ ಬ್ಯಾಂಕ್ ಬ್ಯಾಲೆನ್ಸ್ ನೋಡ್ತಾರೆ.
ಮನೆ ಇದ್ದ್ರೆ "ಒಳ್ಳೆಯ ಹುಡುಗ" ಅಂತ ಸೀಲ್ ಹಾಕ್ತಾರೆ.
ಕಾರು ಇತ್ತು ಅಂದ್ರೆ ಬೆಸ್ಟ್ ಮೆಚಿಂಗ್.
ನೀನು ಎಷ್ಟು ನಿನ್ನನ್ನು ಹತ್ತಿರ ಇಟ್ಟುಕೊಳ್ಳಬಹುದು ಅನ್ನೋದು ನಿನ್ನ ಕಂತು ತೀರಿದ ಹಂತ ನೋಡೋದು.
ಪ್ರೀತಿ? ಪ್ರೇಮ? ಪ್ರಣಯ?
ಬರೀ ಮಾಯೆ ಮತ್ತೆ ಶಬ್ದಗಳಷ್ಟೆ ಈಗ.
ವಾಟ್ಸಾಪ್ ಸ್ಟೇಟಸ್ಲ್ಲಿ ಹೊಂದಿಕೊಂಡ ಕವನದ ಸಾಲು,
ಸತ್ಯ ಜೀವನದಲ್ಲಿ – ‘Seen’ ಆದ ಮೇಲೆ ಮರೆಯಲ್ಪಡುವ ಮೆಸೇಜ್.-
ಒಂಟಿಯಾಗಿ ಸಾಗಿದ ಬದುಕು ಒಂದೇ ಒಂದು ಪದ,
ಪದ ಪದವಾಗಿ ಬೆಸೆದರೆ ಹುಟ್ಟುತ್ತದೆ ಕವನ.
ಪ್ರೀತಿಯ ಶಬ್ದದಲ್ಲಿ ನಿರಂತರ ಸುದಿನ,
ಆಗ ಕವನವಾಗುವುದು ಮಧುರ ಸಂಗೀತದ ನಿನಾದ!
ದ್ವೇಷದ ಧ್ವನಿಯಲಿ ತುಂಬಿದರೆ ಮನ,
ಅದು ಕವನವಲ್ಲ ಕರ್ಕಶವಾದ ಸಂಗೀತದ ಶಬ್ದದ ಚುಕ್ಕಾಣಿ.
ಬಾಳು ಹಾದಿಯಲ್ಲಿ ನುಡಿಗಳ ಲಯ,
ಆ ಲಯವೇ ಹೇಳುತ್ತದೆ ನಿನ್ನ ಕಥೆಯ ಜಯ!-
ಅನುಕೂಲ ಬೇಕೆಂದು ಹುಡುಕಿದನು,
ಅನುಕೂಲವೇ ಅವನಿಗೆ ಮುಳ್ಳಾಯಿತು.
ಹಾಳಾದ ಪ್ರಪಂಚ ಸರಿಪಡಿಸಲು ಹೋದನು,
ಆ ಪ್ರಪಂಚವೇ ಅವನಿಗೆ ದಾರಿ ತಪ್ಪಿಸಿತು.-
ನಾಟಕವಾಡುತ್ತ ಬದುಕುವುದು ಮನುಷ್ಯನ ಸ್ವಭಾವ,
ದ್ವೇಷದ ಕಣ್ಣಿನಿಂದ ಇತರರನ್ನು ನೋಡುವುದು ಅವನ ದುರ್ಬಲತೆ,
ಸ್ವಾರ್ಥ ಸಾಧನೆಗಾಗಿ ಕೆಲಸಮಾಡುವುದು ಅವನ ಅಗತ್ಯ,
ಬದುಕಿನ ಪಾಠಗಳನ್ನು ದಿನದಿಂದ ದಿನಕ್ಕೆ ಕಲಿಯುವುದು ಅವನ ಯಾತ್ರೆ,
ಆದರೆ ಯಾವ ದಾರಿಗೆ ತಿರುಗಬೇಕು ಎಂಬುದನ್ನು ತಾನೇ ಆಯ್ಕೆಮಾಡುವುದು ಅವನ ಧರ್ಮ.-
ಇಂದಿನ ಕಾಲದಲ್ಲಿ ಎಲ್ಲರಿಗೂ ಬೇಕು ಅವರಿವರ ಕಥೆ
ಯಾರಿಗೂ ಬೇಡ ಇನ್ನೊಬ್ಬರ ವ್ಯಥೆ
ಬದುಕುತ್ತಿರುವವನು ಹೊತ್ತಿರುವ ದುಃಖದ ಪರಂಪರೆ
ಆದರೂ ನಗು ಹಿಡಿದು ಸಾಗುತ್ತಾನೆ ಹೆಮ್ಮರಂತೆ
ಸತ್ಯವಿರುವಾಗಲೂ ಕೇಳಿಸೋದು ಸುಳ್ಳಿನ ಸದ್ದಂತೆ
ನಿನ್ನ ನಡಿಗೆಗೆ ತಾಕಷ್ಟು ಪ್ರಶ್ನೆಗಳ ಸುತ್ತಲೆ
ಹೃದಯದೊಳಗಿನ ಹೊತ್ತಿನ ಕಥೆ
ಕೊನೆಗೆ ನೀನು ಆಗುವೆ ಕೇವಲ ಒಂದು ಕಥೆ-
I’m not looking for motivation.
I am the motivation.
I don’t react to insults, I outgrow them. I don’t listen to noise, I move in silence when I rise, I make sure they feel it.-
ಗುರಿ ಇದ್ದಾಗ ಕಣ್ಣಿಗೆ ಎಲ್ಲ ಕತ್ತಲೆ
ಗುರಿ ಇಲ್ಲದಾಗ ಜಗತ್ತು ಬೆತ್ತಲೆ
ಕೊನೆಗರ್ಥ ಆಗುವುದು ಮನುಷ್ಯನೇ ಬೆತ್ತಲೆ-