ನಾನು ಬರೆದ ಕಥೆ
ಒಂದಾನೊಂದು ಊರಲ್ಲಿ ಶಿವಾಯ್ ಎಂಬ ಹೆಸರಿನ ಹುಡುಗ ವಾಸವಾಗಿದ್ದ. ಆತ ಅತ್ಯಂತ ಚತುರ, ವಿದ್ಯಾವಂತನೂ ಆಗಿದ್ದ.ಆತನಿಗೆ ಒಬ್ಬ ರಿಷಾನ್ ಎಂಬ ಹುಡುಗ ತನ್ನ ಕಚೇರಿಯಲ್ಲಿ ಪರಿಚಯವಾದ. ರಿಷಾನ್ ಮೋಡಿ ಮಾಡುವುದರಲ್ಲಿ ಚುರುಕು ಮತ್ತು ಮೋಸಗಾರನಾಗಿದ್ದ. ಆತನಿಗೆ ಶಿವಾಯ್ ಎಂದರೆ ಅಷ್ಟಕಷ್ಟೆ.ಆ ಕಛೇರಿಯ ಧಣಿ ಶಿವಾಯ್ ನ ಕೆಲಸ ಕಾರ್ಯವನ್ನು ರಿಷಾನ್ ಮುಂದೆ ಹಾಡಿ ಹೊಗಳುತ್ತಿದ್ದರು. ಅಲ್ಲದೆ, ರಿಷಾನ್ ಮಾಡುವ ಕೆಲಸವನ್ನು ತೆಗಳುತ್ತಿದ್ದರು. ಶಿವಾಯ್ ಗೆ ಪ್ರಮೋಷನ್ ಸಿಕ್ಕಿತು. ಆತನಿಗೆ ಹೊರ ದೇಶದಲ್ಲಿ ಕೆಲಸವಾಯಿತು. ಆತ ಹೊರಡಲು ಸಿದ್ಧವಾದ. ರಿಷಾನ್ ಗೆ ಕೂಡ ಹೊರದೇಶಕ್ಕೆ ಹೋಗಬೇಕು ಎಂದು ಅನಿಸಿತು. ಆತನು ಧಣಿಯಲ್ಲಿ ಬೇಡಿಕೊಂಡ. ಧಣಿ ಒಮ್ಮೆ ಒಪ್ಪಲಿಲ್ಲ.ಆದರೆ ರಿಷಾನ್ ತನಗೆ ದೂರದ ಸಂಭಂದಿಯಾದ ಕಾರಣ ಒಪ್ಪಬೇಕಾಯಿತು. ಶಿವಾಯ್ ಮತ್ತು ರಿಷಾನ್ ಇಬ್ಬರು ಹೊರದೇಶಕ್ಕೆ ಹೊರಟರು. ಶಿವಾಯ್ ಗೆ ಇಂಗ್ಲಿಷ್ ಭಾಷೆ ಗೊತ್ತಿದ್ದ ಕಾರಣ ಆ ದೇಶ ಮತ್ತು ಕಂಪನಿಯಲ್ಲಿ ಒಮ್ಮೆ ಕಷ್ಟವಾದರೂ ಮತ್ತೆ ಅಲ್ಲಿ ಇರಲು ಸುಧಾರಿಸದನು.ರಿಷಾನ್ ಮಾತ್ರ ಇಂಗ್ಲಿಷ್ ಭಾಷೆ ಮಾತನಾಡುತ್ತಿರಲಿಲ್ಲ. ಆತ ಕೇವಲ ಶಿವಾಯ್ ನೋಡಿ ಹೊಟ್ಟೆಕಿಚ್ಚು ಪಡುತಿದ್ದ. ಕೊನೆಗೆ ಆ ದೇಶದ ಕಂಪನಿಯವರು ರಿಷಾನ್ ನ್ನು ಹೊರಹಾಕಿದರು. ಸಪ್ಪೆ ಮೋರೆ ಹಾಕಿ ರಿಷಾನ್ ತನ್ನ ದೇಶಕ್ಕೆ ಬಂದ. ತನ್ನ ದೇಶದಲ್ಲಿಯೂ ಕೆಲಸ ಕಳೆದುಕೊಂಡ.
ನೀತಿ :ಹೊಟ್ಟೆಕಿಚ್ಚು ಒಳ್ಳೆಯದಲ್ಲ. ತನ್ನ ಪರಿಮಿತಿ ನೋಡಿ ಹೆಜ್ಜೆ ಇಡಬೇಕು.-
My dea best friend Bhavya 🥰
You are the best one 😍
I'm very happy to thank u
for being myside.. ✨
-
ಮನದಲ್ಲಿನ ನೋವು ಬೆಂದು,
ಬೆಸೆದು ಝರಿಯಾಗಿ ಹರಿದು ಹೋಯಿತು..
ಕೆಲವೇ ಸಮಯದಲ್ಲಿ ಭಾರವಿದು,
ತಣ್ಣೀರ ಹನಿಯಂತೆ ತಣ್ಣನಾಯಿತು...
-
ಮತ್ಸರವೆಂಬುವುದು ಮನಸ್ಸಿನ ಒಂದು ಖಿನ್ನತೆ.
ಮಾನಸಿಕ ಆರೋಗ್ಯವನ್ನು ಬಲಹೀನಗೊಳಿಸುವ ರೋಗವಾಗಿದೆ.
-
ಮೂಡಿದ ಗೆಳೆತನ ವರುಷಗಳಿಂದವೇನಲ್ಲ.
ಒಂದೇ ಒಂದು ದಿನದಿಂದ....
ನೆನಪಿನ ದೋಣಿ ಮರೆಯಬಾರದು.
ವೇಗದ ಜಗತ್ತಲ್ಲಿ ಕ್ಷಣಕ್ಕೆ ಮರೆತರೂ...
ಮತ್ತೆ ಸಂದೇಶಗಳು ಬರುವುದು ನೆನಪಿಸಲು.
ದಿ ಬೆಸ್ಟ್ ಫ್ರೆಂಡ್. miss you ಭವ್ಯ...
-
ಐಶು
ಸ್ನೇಹದ ಕಡಲಿನ ಐಶು....
ಚುರುಕು ಮಾತಿನ ರೂಪು ರೇಷು.
ಮಾತೇ ಮಾತು ಕಣ್ಮಣಿ....
ನಿಷ್ಕಲ್ಮಶ ಚಿತ್ತ ರಾಣಿ.
ಈಕೆಯನ್ನು ಆಳವಾಗಿ ಅರಿತವಳಲ್ಲ....
ಈಕೆಗೆ ಕಾರ್ಯದಲ್ಲಿ ಭೇದವಿಲ್ಲ.
ಅರಿಯಲು ದಿನಸಾಲದು....
ವಿಶಿಷ್ಟ ಭಾವನೆಯ ಮಂದಹಾಸವು.
ಕವಿತೆಯೊಳಗಿನ ಮಿಡತೆಯಂತೆ....
ಸ್ನೇಹದ ಕೀರ್ತಿಯ ಒಡತಿಯಂತೆ.
ನನ್ನೀ ಹಾಸ್ಟೆಲ್ ಸಹೋದರಿ....
ಚಿನ್ನದ ಗೆಲುವಿನ ಕುವರಿ.
-
ಅನಿಸಿಕೆಯೊಂದ ಹೇಳಬೇಕಾಗಿದೆ....
ಕಳೆದ ಕ್ಷಣಗಳ ಪುಟಗಳನ್ನೂ ತಿರುವುದಾರೂ?
ಅದೆಷ್ಟೋ ನೆನಪುಗಳು ಉರುಳಿಹೋಗಿವೆ...
ಮನದಾಳದಲ್ಲಿ ಅದೆಷ್ಟೋ ಸಿಟ್ಟುಗಳು, ನೋವುಗಳು
ಬದುಕಲು ಸುಂದರ ನಗುವೊಂದು ಎಲ್ಲವನ್ನು ಮರೆಸಿವೆ...
ಸ್ನೇಹಿತೆಯರ ಒಡನಾಟ ಮಧುರ.
ಕುಳಿತು ಉಂಡ, ನಕ್ಕ ನೆನಪುಗಳಂತೂ ಸುಮಧುರ.
ಅಕ್ಕನೆಂದು ಅಕ್ಕರೆಯಿಂದ ಕರೆಯುವ ತಂಗಿಯರ ಪ್ರೀತಿ.
ಹಾಸ್ಟೆಲ್ ನಲ್ಲಿ ನಾವು ನಡೆದು ಬಂದ ನೀತಿ.
ನಮ್ಮೀ ಮೇಲ್ವಿಚಾರಕರ ಹುರಿದಿಂಬಿಸುವ ಮಾತುಗಳು.
ಹಸಿವಾದಾಗ ಅನ್ನ ನೀಡುವ ಕೈಗಳು.
ನಗೆ ತೋರಿ ಮಾತನಾಡುವ ಕಿರಿಯರು.
ಇವೆಲ್ಲವನ್ನು ಬಿಟ್ಟುಹೋಗಲು ಮನಬಾರದು.
ಆದರೂ ಬಿಟ್ಟು ಹೋಗುವುದು ಖಚಿತ.
ಬಾರ್ಕೂರ್ ಹಾಸ್ಟೆಲ್ ನ ಋಣ ತೀರಿಸಲಾಗದಷ್ಟು ಅಪರಿಮಿತ...
-
ಪರರಿಗೆ ನೋಯಿಸಲು ಮನ ಹಿಂಜರಿಯುವುದು....😞 ಅದೇ ತನಗೆ ನೋಯಿಸಿದವರನ್ನೂ ;ನೋವನ್ನು ಮರೆಯುವುದಾದರೂ ಹೇಗೆ???
ತನ್ನ ನೋವನ್ನು ಯಾರಲ್ಲೂ ಹೇಳಲಾರದೇ ಕೊರಗಿರಬೇಕೇ?😊
ಭಗವಂತನಿಗೆ ಮೊರೆ ಕೋರುವೆ🙏
ಸುತ್ತ ಪ್ರೀತಿಸುವವರೂ ಇರುವರೆಲ್ಲವೇ???😍 ಕೊನೆಯದಾಗಿ ಅಣು ಅನುವಿನಲ್ಲೂ ನಗುವನ್ನು ಕಂಡು🤩 ಇನ್ನು ಬರುವ ಅವನಿಗಾಗಿ ಕಾಯುವಿಕೆ....🥰-
ನಿಮಗೆ ವ್ಯಕ್ತಿ ಎಷ್ಟೇ ಹತ್ತಿರವಾದರೂ,
ಅವರಲ್ಲಿ ನಿಮ್ಮ ರಹಸ್ಯ ಮತ್ತು ಎದುರಾಳಿಗಳ ಬಗ್ಗೆ ಹೇಳಿಕೊಳ್ಳುವುದು ಸರಿಯಲ್ಲ.
ಸಮಯ ನಿಂತ ನೀರಲ್ಲ.
ಒಮ್ಮೆ ನಿಮ್ಮ ಒಳಿತಿನ ಜನರಿಗೆ
ನಿಮ್ಮ ಮೇಲೆ ಕಾರಣವಿಲ್ಲದೆಯೂ ಅಸಮಾಧಾನವಾದಲ್ಲಿ;
ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದ ಅವರು;
ನಿಮ್ಮ ಮೇಲೆ ಸುಲಭವಾಗಿ ಅಪವಾದ ಹೇರುವರು.
ಹಾಗೆಯೇ ನಿಮ್ಮ ಎದುರಾಳಿಗಳ ಜೊತೆಗೂಡಿ
ನಿಮ್ಮ ಅಸ್ತಿತ್ವದ ಮೇಲೆಯೇ ಕಲ್ಲು ಹೊಡೆಯುವರು.
ಜೀವನದುದ್ದಕ್ಕೂ ಕಿಡಿಗೇಡಿಗಳ ನಂಟು ಬೇಡ.
ಎದುರಾಳಿಗಳು ದೂರವಿರಲಿ, ಒಡನಾಡಿಗಳು ಜೊತೆಯಿರಲಿ....-
ನಾಳೆಯ ದಿನದ ಯಶಸ್ಸು ಇವತ್ತಿನ ಪರಿಶ್ರಮದ ಮೇಲೆ ನಿಂತಿರುವುದು.
ಇಂದಿನ ಯಶಸ್ಸು ಇಂದಿಗೆ ಗೌಜು.
ಉಳಿದ ದಿನಗಳಿಗೆ ಅದು ನೆನಪಿನ ಮೆರವಣಿಗೆಯಷ್ಟೇ.
ಪ್ರತಿ ದಿನ ಹೊಸತನ, ಹುಮ್ಮನಸ್ಸು ಮೂಡುವಂತಿರಬೇಕು;ಜೀವನದುದ್ದಕ್ಕೂ ಪ್ರಯತ್ನಪಡುತ್ತಲೇ ಇರಬೇಕು....
-