swathi T   (ಸ್ವಾತಿ 🍁)
102 Followers · 24 Following

ಬದುಕಿನ ಹಾದಿಯಲ್ಲಿ ಎಷ್ಟೋಂದು ಕಲಿಯಲು ಇವೆ....
ನಮ್ ಕುಂದಾಪ್ರ, ನಮ್ ಕುಂದಾಗನ್ನಡ ಭಾಷಿ... ಎಷ್ಟ್ ಸಾಪ್❤️
Joined 17 August 2020


ಬದುಕಿನ ಹಾದಿಯಲ್ಲಿ ಎಷ್ಟೋಂದು ಕಲಿಯಲು ಇವೆ....
ನಮ್ ಕುಂದಾಪ್ರ, ನಮ್ ಕುಂದಾಗನ್ನಡ ಭಾಷಿ... ಎಷ್ಟ್ ಸಾಪ್❤️
Joined 17 August 2020
14 JUL 2022 AT 19:46

ಕಣ್ಣ ಮುಚ್ಚಿದರೂ
ನಿನ್ನ ಆಂತರ್ಯ ತಿಳಿಯುವುವು,
ನಿನ್ನೊಳಗೆ ಇರೋ ಶಕ್ತಿ
ಆಂತರ್ಯದ ಕಣ್ಣನ್ನೇ ಮುಚ್ಚಿದರೆ,
ನಿನ್ನ ಶಕ್ತಿ ಹೇಗೆ ಅರಿಯುವೆ
ಬರಡಾಗುವುದು ನೀ ತಿಳಿಯದೇ,
ಆಂತರ್ಯದ ಕಣ್ಣ ತೆರೆಯದೆ ಹೋದರೆ
ಬರಿದಾಗುವುದು ನಿನ್ನೋಳಗಿರುವ ಶಕ್ತಿ...

-


11 JUN 2022 AT 12:19

ನೆನಪಾಗುವ ಮಾತುಗಳಿಗೆ
ಗುಣಿಗಿದೆ ಹೃದಯವು ತನ್ನೊಳಗೆ,
ಮರಿಚಿಕೆ ಆಗಿದೆ ಪ್ರೀತಿಯು...

ಹೇಳದೆ ಕಾಣೆಯಾಗುವುದು ಇನ್ನೇನು
ಮತ್ತೆ ಬಯಸುವ ಹಂಬಲವಿಲ್ಲ,
ಇನ್ನು ಮಾತಿನ ಪರಿಪಾಠವಿಲ್ಲ...

ಹೃದಯದ ತೀರವ ಸೇರಲು
ಹಿಂದಕ್ಕೆ ಇರಿಸುವೇ ಹೆಜ್ಜೆಯ ಸಾಲು,
ಮೌನವೇ ಇನ್ನು ನನ್ನೊಳಗೆ ಯಾವಾಗಲೂ..‌.

-


27 MAY 2022 AT 9:47

ಬಾನಂಗಳದಲ್ಲಿ ಹಾರಾಡುವ ಹಕ್ಕಿಗೇನು ಗೊತ್ತು
ಅಂಗಳದಲ್ಲಿ ಓಡಾಡುವ ಹಕ್ಕಿಯ ಬಗ್ಗೆ,
ಆಕಾಶದೆತ್ತರಕ್ಕೆ ತಾನು
ಹಾರಬೇಕು ಅನ್ನುವ ಹಂಬಲ,
ಹಾರದೇ ನೆಲದಲ್ಲೇ ಅಡ್ಡಾಡುವ ವ್ಯಥೆ...

-


24 APR 2022 AT 8:09

ಮನೆಯ ಅಡಿಪಾಯ ಗಟ್ಟಿಯಾಗಿ ಇಲ್ಲದಿದ್ದಲ್ಲಿ
ಸೂರು ಉಳಿಯುವುದೇ...
ಹಾಗೆ ಸಂಬಂಧದಲ್ಲಿ ನಂಬಿಕೆ ಮತ್ತು ಹೊಂದಾಣಿಕೆ
ಇರದ ಮೇಲೆ ಸಂಬಂಧ ಉಳಿಯುವುದೇ...

-


14 APR 2022 AT 8:40

ಆಕಾಶದೆತ್ತರಕ್ಕ್ ಏಣಿ
ಹಾಕಂದ್ ಹೇಳಿಲ್ಲಾ,
ಆದ್ರೆ ಕೈಯಗ್ ಇಪ್ಪುದ್
ಕಳಕಂಬೇಡಾ ಅಂದಿದಳ್...

-


6 APR 2022 AT 9:36

ಬರುವವರು ಬರಲಿ
ಬೇಡ ಅಂದೊರನ್ನ ತಡೆಯದಿರಿ,
ನೀವೇ ಬೇಕು ಅನ್ನೋರನ್ನ ಬಿಡಬೇಡಿ....
ನೀವ್ ಲೆಕ್ಕಕ್ಕೆ ಇಲ್ಲದೆ ಹಾಗೇ
ಮಾಡಿದವರನ್ನ ದೂರ ಇಟ್ಟು ಬಿಡಿ...

ಕಷ್ಟಕ್ಕೆ ಆಗದಿರುವವರು
ಸುಖದಲ್ಲಿ ಬಂದಂರೆ ನಂಬದಿರಿ....
ಬೇರೆಯವರ ಮಾತು ಕೇಳಿ
ನಿಜವಾದ ಪ್ರೀತಿ ತೋರಿದರು,

ಅವರು ಮನಸ್ಸ ಮಾತಿಗಿಂತ ಅವರ ಕಿವಿಗೆ ಊದಿದ ಪುಂಗಿದಾಸರ ಹಿಂದೆ ಹೋಗಲಿ ಬಿಡಿ,
ಇರಲಿ ಅನ್ನುವುದಕ್ಕೆ ನಾನ್ಯಾರು...
ಜೀವ ಹೋದ ಮೇಲೆ ಅಯ್ಯೋ ಅನ್ನೋದ್ಯಾಕೆ ಜೀವ ಇರುವಾಗ ಕರುಣೆ ತೋರದ ಮೇಲೆ🙂

-


30 MAR 2022 AT 11:24

ಬೇಡ ಎಂದು ಹಿಂದೆ ಸರಿದವರನ್ನ
ಬನ್ನಿ ಎಂದು ಒತ್ತಾಯಿಸದಿರಿ,
ಅವರ ತಿಳುವಳಿಕೆಯಲ್ಲಿ ನಮ್ಮ ವ್ಯಕ್ತಿತ್ವ
ಮುಖವಾಡದ ಹೊದಿಕೆ ತೋರಿರಬಹುದು,
ಅದು ಅವರ ತಪ್ಪೇನಲ್ಲ
ಈ ಯುಗದಲಿ ಮುಖವಾಡದ ಜನರ ನಡುವೆ ಮೋಸ ಹೋದವರು ,
ನೊಂದು ನಂಬಿಕೆ ಕಳೆದುಕೊಂಡವರು
ಬರುವುದಾದರೆ ಬರುವವರು,
ಹೋಗುವುದಾದರೆ ಹೋಗುವರು
ಇರಲಿ ಅನ್ನುವುದಕ್ಕೆ ನಾನ್ಯಾರು...

-


1 MAR 2022 AT 11:29

ಮಡಿ ಶುದ್ಧಿ ಮಾಡಿದರೇನಾಯಿತು
ಕಷ್ಟಗಳು ತಪ್ಪಲಿಲ್ಲ,
ಜಪ ತಪ ಮಾಡಿದರೇನಾಯಿತು
ಕಣ್ಣಿರು ಹಾಕೋದು ತಪ್ಪಲಿಲ್ಲ,
ಉಪವಾಸ ಹರಕೆ ಮಾಡಿದರೇನಾಯಿತು
ಸಮಸ್ಯೆಗಳ ನಡುವೆ ಸಿಲುಕುವುದು ತಪ್ಪಲಿಲ್ಲ,
ನಿನ್ನ ಧ್ಯಾನ ಮಾಡಿದರೇನಾಯಿತು
ಬಂದ ಆಪತ್ತನ್ನು ತಪ್ಪಿಸಲಾಗಲಿಲ್ಲ,
ನೀನೇ ಎಲ್ಲಾ ಅನ್ನುವಾಗ
ಕೈ ಜಾರಿ ಹೋದ ಬದುಕನ್ನು ಸರಿಪಡಿಸಲಾಗಲೇ ಇಲ್ಲ...
-ಸ್ವಾತಿ 🍁




-


26 FEB 2022 AT 21:09

ತಿಂಗಳ ಬೆಳಕಿನ ಚಂದಿರ ಬಾಲೆ
ಕಣ್ಸನ್ನೆ ಯಲ್ಲೇ ಕರೆಯೋಳು ಓ ನನ್ನ ನಲ್ಲೆ,
ಮುದ್ದಾದ ಮೋರೆಯ ನೋಡುತ
ನನ್ನೆ ನಾ ಮರೆಯುವೆ ನಿಂತಲ್ಲೆ,
ಕತ್ತಲ ಕವಿದರೆ ಬೆಳುಕು ಹರಿಸುವ ಬೆಳದಿಂಗಳ ಬಾಲೆ
ಮಂದಹಾಸ ಬೀರುತ್ತಾ ಮನಸ್ಸೆ ಕದ್ದವಳು ನನ್ನವಳೇ ,
ಅವಳೆ ನನ್ನ ನಲ್ಲೆ ಕೂತವಳು ಮನಸಲ್ಲೇ...

-


24 FEB 2022 AT 20:57

ವಿಷಯ ಚಿಕ್ಕದೆನಿಸಬಹುದು
ಆದರೆ ನೋವು ಮಾತ್ರ ಅತಿಯಾಗಿದೆ...

-


Fetching swathi T Quotes