ಸ್ವಾಭಿಮಾನಿಯಾಗಿ ಬದುಕು ನಡೆಸಿ
ಯಾರಿಗೂ ಕೇಡು ಬಯಸದೇ
ನಮ್ಮಷ್ಟಕ್ಕೇ ನಾವಿದ್ದರೂ ಜನರಿಗೆ ನಮ್ಮನ್ನು
ನೋಡಿ ಸಹಿಸಲು ಆಗಲ್ಲ ಇಂತಹ ಪ್ರಪಂಚದಲ್ಲಿ
ಕಣ್ಣಿದ್ದು ಕುರುಡರಾಗಿ ಕಿವಿಯಿದ್ದು ಕಿವುಡರಾಗಿ
ಬಾಯಿಯಿದ್ದು ಮೂಗರಾಗಿ ಬದುಕಲೇಬೇಕು
ಇದುವೇ ನಮ್ಮೀ ಜೀವನ-
**********❣️************
ವಿದ್ಯಾಭ್ಯಾಸ: ಎಂ.ಎ ರಾಜ್ಯಶಾಸ್ತ್ರ ವಿಭಾಗ. ವ್ಯಾಸ... read more
ಅದೃಷ್ಟವು ಕೈ ಕೊಟ್ಟಾಗ ಬದುಕೇ ಕಳೆಗುಂದುತ್ತದೆ
ಆಸೆ ಕನಸುಗಳು ದೂರವಾಗುತ್ತಾವೆ
ಆಡುವ ಮಾತುಗಳು ಮೌನವಾಗುತ್ತಾವೆ
ಎಲ್ಲವೂ ಇದ್ದು ಇಲ್ಲದಂತಿರಬೇಕಾಗುತ್ತದೆ-
ಶೀರ್ಷಿಕೆ:ಜ್ಞಾನ ದೀವಿಗೆ(ಚುಟುಕು)
ಜ್ಞಾನವೆಂಬ ಅಲಂಕಾರದ ದೀವಿಗೆಗೆ
ಅಕ್ಷರವೆಂಬ ಎಣ್ಣೆಯನ್ನು ಸುರಿದಾಗೆ
ವಿದ್ಯೆಯೆಂಬ ಬೆಳಕು ಝೇಂಕರಿಸಿದಾಗೆ
ವಿಶಾರದೆಯು ಅನವರತ ಬಾಳಿನಾಗೆ
-
ಶೀರ್ಷಿಕೆ:ಪ್ರೀತಿಯ ಯಜಮಾನ
ನನ್ನ ಪ್ರೀತಿಯ ಯಜಮಾನ
ನಿನಗಿಲ್ಲ ಸ್ವಲ್ಪನೂ ಬಿಗುಮಾನ
ಅಮ್ಮನಂತೆ ವಾತ್ಸಲ್ಯವನ್ನು ಕೊಟ್ಟೆನು
ಅಪ್ಪನಂತೆ ಕಾಳಜಿ ವಹಿಸಿದೆನು//
ನೋವಿಗೆ ಸ್ಪಂದಿಸುವ ಜೀವ ನೀನು
ಕಷ್ಟ ಸುಖಗಳ ಸಮಾನಾಗಿ ಸ್ವೀಕರಿಸಿದೆನು
ಮಮತೆಯ ತುತ್ತನ್ನಿತ್ತು ಸಾಕಿದೆನು
ಮನದ ಭಾವನೆಗಳನ್ನು ಗೌರವಿಸಿದೆನು//
ನವಿರಾದ ಒಲವೇ ನೀ ಕೊಟ್ಟ ಉಡುಗೊರೆ
ಸದಾ ಅದನ್ನು ಉಳಿಸಿಕೊಳ್ಳುವೆ ದೊರೆ
ನಾನಾಗಲಿಲ್ಲ ಎಂದಿಗೂ ನಿನಗೆ ಹೊರೆ
ಸ್ವಾಭಿಮಾನವ ನಿನ್ನೊಳು ಕಂಡಾಗ ಬಲು ಅಕ್ಕರೆ//
ನಿತ್ಯ ಮೊಗದಲ್ಲಿ ನಗುವ ತುಂಬುತ್ತಿರೆ
ಮನೆಯೆಲ್ಲಾ ನಿತ್ಯ ಸಂಭ್ರಮದ ತೊರೆ
ಎನಗೆ ನೀನೇ ಅಭಿಮಾನದ ಚಂದ್ರ ತಾರೆ
ಸಂಸಾರದ ಸಾಗರವಾಗಲಿ ಹಾಲು ಸಕ್ಕರೆ//
-
ರುಬಾಯಿ (ವಿರಾಮ)
ಜನರ ಹೊಟ್ಟೆಯ ತುಂಬಲು
ವಿರಾಮ ಇಲ್ಲದೆ ದಿನಾಲು
ದುಡಿವ ರೈತನ ಮನವು
ನೋವನ್ನೇ ತುಂಬಿದ ಕಡಲು
(೯ ಅಕ್ಷರಗಳು)-
ಈ ಬದುಕಲ್ಲಿ ನಾನು,ನನ್ನದು ಎನ್ನುವುದು ಏನೂ ಇಲ್ಲ
ಎಲ್ಲಾ ದೇವರ ನಿರ್ಧಾರವೇ ಇಲ್ಲಿ ನಡೆಯುವುದೆಲ್ಲ
ಕಟ್ಟಿದ ಕನಸು ಆಸೆಗಳು ಯಾವುದೂ ಶಾಶ್ವತವಲ್ಲ
ಇವತ್ತನ್ನು ಸಂತೋಷವಾಗಿ ಸ್ವೀಕರಿಸುತ್ತಾ
ನಾಳೆ ಏನಾಗುತ್ತದೆ ಎಂಬುದನ್ನು ಮರೆತು
ಬಾಳಲೇ ಬೇಕು ನಾವು ಈ ಕರ್ಮ ಭೂಮಿಯಲ್ಲಿ…..-
ಶೀರ್ಷಿಕೆ:ಶಿಸ್ತು
ಬಾಲ್ಯದಿಂದಲೇ ಮಕ್ಕಳ ಮನದಲಿ
ಶಿಸ್ತಿನ ಪಾಠವನ್ನು ವಿರಚಿಸುತಲಿ
ನಡೆದಾಗ ಬೆಳೆಯುತವರ ಬದುಕಲಿ
ಉತ್ತಮ ನಿಷ್ಠಾವಂತ ವ್ಯಕ್ತಿಗಳಾಗುವರು
ಸಮಾಜಕ್ಕೆ ಹೊಳೆವ ಬೆಳಕಾಗುವರು
ಹೆತ್ತವರ ಬಾಳಿಗೆ ಮುತ್ತುಗಳಾಗುವರು-
ಶೀರ್ಷಿಕೆ:ಹಾಲು ಜೇನು
ಉತ್ತಮ ಅಭ್ಯಾಸ ಹೊಂದಿದವ
ಹಾಲು ಜೇನ ಸವಿ ಉಂಡವ
ಕೆಟ್ಟ ಚಟಗಳ ದಾರಿ ಹಿಡಿದವ
ಬಾಳಿನುದ್ದಕ್ಕೂ ನೆಮ್ಮದಿ ಇಲ್ಲದವ-
ಶೀರ್ಷಿಕೆ:ಪ್ರೀತಿಯ ಗೂಡು
ಸುಂದರ ಸೊಬಗಿನ
ಹಕ್ಕಿಯ ನೋಡು
ಹೆಣೆಯುತ್ತಿದೆ ಬನದಲಿ
ಪ್ರೀತಿಯ ಗೂಡು//
ಪ್ರಕೃತಿಯ ಮಡಿಲಲ್ಲಿ
ಚಿಲಿಪಿಲಿ ಹಾಡು
ಕೇಳುತ ಸಿಗುವುದೆಮಗೆ
ಶಾಂತಿಯ ಜಾಡು//-
ಶೀರ್ಷಿಕೆ:ಬಾಳು ಜೇನ ಹನಿ
ಸಂಸಾರವೆಂಬ ಸಾಗರದಲಿ
ಹೊಂದಾಣಿಕೆಯ ದೋಣಿ
ಸೊಗಸಾಗಿ ಸಾಗುತಲಿ
ಒತ್ತಡದಲ್ಲೂ ಬಾಳು ಜೇನಹನಿ
ನಿತ್ಯ ಕಾದಾಟ,ಜಗಳ ಇಲ್ಲದಿರೆ
ಮನೆ ಮನವು ತಾಳ್ಮೆಯ ಗಣಿ
ಸಂಸ್ಕೃತಿ,ಧರ್ಮದಿ ನಡೆದರೆ
ಬದುಕಲ್ಲಿ ಬಾರದೆಂದೂ ಕಂಬನಿ-