✧••ಸವಿತಾ ಸತೀಶ್ ಶೆಟ್ಟಿ••✧   (✍♥..ಸವಿತಾ (ಸವಿಸತಿ)‌..♦)
6.5k Followers · 6.5k Following

read more
Joined 2 July 2020


read more
Joined 2 July 2020


ಶೀರ್ಷಿಕೆ:ಮುದ್ದು ಕಂದ

ಓ ಎನ್ನ ಮುದ್ದು ಕಂದ
ಅಮ್ಮನ ಮಾತು ಕೇಳಬೇಕು
ಹೇಳಿಕೊಟ್ಟ ನೀತಿಯಿಂದ
ನಿನ್ನ ಬಾಳು ಬೆಳಗಬೇಕು//

ಮುಂಜಾನೆ ಬೇಗನೇಳುತ
ಸ್ನಾನ ಮಾಡಿ ದೇವರ ನೆನಯಬೇಕು
ಪಾಠಗಳ ಚೆನ್ನಾಗಿ ಓದುತ
ಸಾಧನೆಯ ಪಥ ಹಿಡಿಯಬೇಕು//

ಬುತ್ತಿ ಗಂಟು, ಪಾಟಿ ಚೀಲ ಹೊತ್ತು
ನಗುತ ಶಾಲೆಗೆ ನಡೆಯಬೇಕು
ವಿದ್ಯೆ ಬುದ್ಧಿ ನಿಷ್ಠೆಯಿಂದ ಕಲಿತು
ಎಲ್ಲದರಲ್ಲೂ ಜಾಣನಾಗಬೇಕು//

ಗುರು ಹಿರಿಯರಿಗೆ ನಮಿಸುತ
ಸಂಸ್ಕಾರವಂತನಾಗಿ ಬಾಳಬೇಕು
ಹೆತ್ತವರಿಗೆ ಗೌರವ ಸಲ್ಲಿಸುತ
ನಿನ್ನ ಬದುಕು ಬಂಗಾರವಾಗಬೇಕು//

ಕೇಳುವೆನವ್ವ ಸವಿ ನುಡಿಯ
ಸಮಾಜಕ್ಕೆ ನಾ ದೀಪದಂತಿರಬೇಕು
ಹಿಂದಿಡಲಾರೆ ಮುಂದಿಟ್ಟ ಹೆಜ್ಜೆಯ
ನೀ ಕಂಡ ಕನಸು ನನಸು ಮಾಡಬೇಕು//

-



ಮನಸ್ಸನ್ನು ಖುಷಿಯಾಗಿಸುತ್ತೆ
ಕೆಟ್ಟ ಮಾತು ಯಾವತ್ತೂ ಮುಳ್ಳಿನಂತೆ
ಸದಾ ನಮ್ಮ ಮನವ ಚುಚ್ಚುತ್ತಿರುತ್ತೆ

-



ಯಾರಿಗೂ ಒಳ್ಳೆಯದು ಮಾಡದಿದ್ದರೂ
ಪರ್ವಾಗಿಲ್ಲ ಕೆಟ್ಟದಂತೂ
ಮಾಡ್ಲೇಬೇಡಿ

-



ಮಗುವೇ ದೇವರಲ್ಲಿ ನಿಜವಾದ ಭಕ್ತಿ ತುಂಬಿರಲಿ
ಮುಂಜಾವಲ್ಲಿ ಮನಸಿಟ್ಟು ಕಲಿಯುವ ಗುರಿಯಿರಲಿ
ಸಾಧನೆಯಲ್ಲಿ ಕಠಿಣವಾದ ಪರಿಶ್ರಮವಿರಲಿ
ಓದಿದ್ದನ್ನು ಮನನ ಮಾಡುವ ಅಭ್ಯಾಸವಿರಲಿ
ಹಿರಿಯರನ್ನು ಗೌರವಿಸುವ ಗುಣವಿರಲಿ
ಕಂಡ ಕನಸನ್ನು ನನಸಾಗಿಸುವ ಛಲವಿರಲಿ
ಆಗಲೇ ಯಶಸ್ಸು ಯಾವಾಗಲೂ ನಿನ್ನ ಜೊತೆಲಿ

-




ಪ್ರಕಾರ:ಹಾಯ್ಕು ರಚನೆ

೧.ಸತ್ವ

ಸತ್ವ ತುಂಬಿದ
ಆಹಾರ ಶರೀರಕ್ಕೆ
ಶಕ್ತಿದಾಯಕ.

೨.ಸತ್ಯ

ಸತ್ಯದ ನಡೆ
ಬಾಳನ್ನು ಬೆಳಕಿನ
ಕಡೆ ಒಯ್ಯುತ್ತೆ.

-



ಹೃದಯದ ಪುಟದಲ್ಲಿ ಹರಿಸಿದೆ ಭಾವಗಳ ಹೊಳೆ
ಬರೀ ನೆನಪುಗಳಲ್ಲೇ ಸುರಿಸಿದೆ ಒಲವಿನ ಮಳೆ

-




ಶೀರ್ಷಿಕೆ:ಬಾವಿಯ ರಾಟೆ

ಹಳ್ಳಿಗಳ ಬಾವಿಗಳಲ್ಲಿ
ಕಾಣುವೆವು ಅರಘಟ್ಟ
ಎಳೆವಳು ನೀರೇ ರಾಟೆಯಲ್ಲಿ
ನೀರನ್ನು ದಿನಾ ಪಟ ಪಟ
ಅದ ನೋಡುವ ಸೊಬಗಲ್ಲಿ
ಕಲಿಯುವ ಬದುಕಿನ ಪಾಠ

-



ಶೀರ್ಷಿಕೆ:ಸುಮಗಳ ಸಖ

ಹೂವುಗಳ ಮುತ್ತಿಕ್ಕುತಿದೆ
ಬಣ್ಣ ಬಣ್ಣದ ಚಂಚರೀಕ
ಮಧುವನ್ನು ಹೀರುತ್ತಿದೆ
ಒಲವ ಸುಮಗಳ ಸಖ
ಸಂಗೀತ ಹಾಡುತ್ತಿದೆ
ಬೃಂದಾವನದ ಗಾಯಕ.

-



ರುಬಾಯಿಗಳು

೧.ಸಂಸ್ಕಾರ


ಗುರು ಹಿರಿಯರಿಂದ ಬಂದ ಸಂಸ್ಕಾರ
ಮಕ್ಕಳ ಬಾಳಿಗೆ ಉತ್ತಮ ಶ್ರೀಕಾರ
ವಿಚಾರವಂತರಾಗಿ ಮುಂದೆ ಸಾಗಲು
ಆಚಾರವೇ ಅವರಿಗೆ ಅಲಂಕಾರ


೨.ವ್ಯಕ್ತಿತ್ವ

ತಾಳ್ಮೆ ಗುಣವೊಂದು ನಮ್ಮಲ್ಲಿರಲು
ವಕ್ತಿತ್ವ ವಿಕಸನದ ಹೊನಲು
ಸ್ವಾಭಿಮಾನವು ಬದುಕಲ್ಲಿದ್ದರೆ
ಬಾಳು ಸುಖ ಸಮೃದ್ಧಿಯ ಕಡಲು

-




ಕಿರುಲೇಖನ


ಶೀರ್ಷಿಕೆ:ಕೀಳರಿಮೆಯೆಂಬ ಅಸಮರ್ಪಕ ಭಾವನೆ 👇

-


Fetching ✧••ಸವಿತಾ ಸತೀಶ್ ಶೆಟ್ಟಿ••✧ Quotes