ಶೀರ್ಷಿಕೆ:ಮುದ್ದು ಕಂದ
ಓ ಎನ್ನ ಮುದ್ದು ಕಂದ
ಅಮ್ಮನ ಮಾತು ಕೇಳಬೇಕು
ಹೇಳಿಕೊಟ್ಟ ನೀತಿಯಿಂದ
ನಿನ್ನ ಬಾಳು ಬೆಳಗಬೇಕು//
ಮುಂಜಾನೆ ಬೇಗನೇಳುತ
ಸ್ನಾನ ಮಾಡಿ ದೇವರ ನೆನಯಬೇಕು
ಪಾಠಗಳ ಚೆನ್ನಾಗಿ ಓದುತ
ಸಾಧನೆಯ ಪಥ ಹಿಡಿಯಬೇಕು//
ಬುತ್ತಿ ಗಂಟು, ಪಾಟಿ ಚೀಲ ಹೊತ್ತು
ನಗುತ ಶಾಲೆಗೆ ನಡೆಯಬೇಕು
ವಿದ್ಯೆ ಬುದ್ಧಿ ನಿಷ್ಠೆಯಿಂದ ಕಲಿತು
ಎಲ್ಲದರಲ್ಲೂ ಜಾಣನಾಗಬೇಕು//
ಗುರು ಹಿರಿಯರಿಗೆ ನಮಿಸುತ
ಸಂಸ್ಕಾರವಂತನಾಗಿ ಬಾಳಬೇಕು
ಹೆತ್ತವರಿಗೆ ಗೌರವ ಸಲ್ಲಿಸುತ
ನಿನ್ನ ಬದುಕು ಬಂಗಾರವಾಗಬೇಕು//
ಕೇಳುವೆನವ್ವ ಸವಿ ನುಡಿಯ
ಸಮಾಜಕ್ಕೆ ನಾ ದೀಪದಂತಿರಬೇಕು
ಹಿಂದಿಡಲಾರೆ ಮುಂದಿಟ್ಟ ಹೆಜ್ಜೆಯ
ನೀ ಕಂಡ ಕನಸು ನನಸು ಮಾಡಬೇಕು//-
**********❣️************
ವಿದ್ಯಾಭ್ಯಾಸ: ಎಂ.ಎ ರಾಜ್ಯಶಾಸ್ತ್ರ ವಿಭಾಗ. ವ್ಯಾಸ... read more
ಮನಸ್ಸನ್ನು ಖುಷಿಯಾಗಿಸುತ್ತೆ
ಕೆಟ್ಟ ಮಾತು ಯಾವತ್ತೂ ಮುಳ್ಳಿನಂತೆ
ಸದಾ ನಮ್ಮ ಮನವ ಚುಚ್ಚುತ್ತಿರುತ್ತೆ-
ಯಾರಿಗೂ ಒಳ್ಳೆಯದು ಮಾಡದಿದ್ದರೂ
ಪರ್ವಾಗಿಲ್ಲ ಕೆಟ್ಟದಂತೂ
ಮಾಡ್ಲೇಬೇಡಿ-
ಮಗುವೇ ದೇವರಲ್ಲಿ ನಿಜವಾದ ಭಕ್ತಿ ತುಂಬಿರಲಿ
ಮುಂಜಾವಲ್ಲಿ ಮನಸಿಟ್ಟು ಕಲಿಯುವ ಗುರಿಯಿರಲಿ
ಸಾಧನೆಯಲ್ಲಿ ಕಠಿಣವಾದ ಪರಿಶ್ರಮವಿರಲಿ
ಓದಿದ್ದನ್ನು ಮನನ ಮಾಡುವ ಅಭ್ಯಾಸವಿರಲಿ
ಹಿರಿಯರನ್ನು ಗೌರವಿಸುವ ಗುಣವಿರಲಿ
ಕಂಡ ಕನಸನ್ನು ನನಸಾಗಿಸುವ ಛಲವಿರಲಿ
ಆಗಲೇ ಯಶಸ್ಸು ಯಾವಾಗಲೂ ನಿನ್ನ ಜೊತೆಲಿ
-
ಪ್ರಕಾರ:ಹಾಯ್ಕು ರಚನೆ
೧.ಸತ್ವ
ಸತ್ವ ತುಂಬಿದ
ಆಹಾರ ಶರೀರಕ್ಕೆ
ಶಕ್ತಿದಾಯಕ.
೨.ಸತ್ಯ
ಸತ್ಯದ ನಡೆ
ಬಾಳನ್ನು ಬೆಳಕಿನ
ಕಡೆ ಒಯ್ಯುತ್ತೆ.-
ಹೃದಯದ ಪುಟದಲ್ಲಿ ಹರಿಸಿದೆ ಭಾವಗಳ ಹೊಳೆ
ಬರೀ ನೆನಪುಗಳಲ್ಲೇ ಸುರಿಸಿದೆ ಒಲವಿನ ಮಳೆ-
ಶೀರ್ಷಿಕೆ:ಬಾವಿಯ ರಾಟೆ
ಹಳ್ಳಿಗಳ ಬಾವಿಗಳಲ್ಲಿ
ಕಾಣುವೆವು ಅರಘಟ್ಟ
ಎಳೆವಳು ನೀರೇ ರಾಟೆಯಲ್ಲಿ
ನೀರನ್ನು ದಿನಾ ಪಟ ಪಟ
ಅದ ನೋಡುವ ಸೊಬಗಲ್ಲಿ
ಕಲಿಯುವ ಬದುಕಿನ ಪಾಠ-
ಶೀರ್ಷಿಕೆ:ಸುಮಗಳ ಸಖ
ಹೂವುಗಳ ಮುತ್ತಿಕ್ಕುತಿದೆ
ಬಣ್ಣ ಬಣ್ಣದ ಚಂಚರೀಕ
ಮಧುವನ್ನು ಹೀರುತ್ತಿದೆ
ಒಲವ ಸುಮಗಳ ಸಖ
ಸಂಗೀತ ಹಾಡುತ್ತಿದೆ
ಬೃಂದಾವನದ ಗಾಯಕ.-
ರುಬಾಯಿಗಳು
೧.ಸಂಸ್ಕಾರ
ಗುರು ಹಿರಿಯರಿಂದ ಬಂದ ಸಂಸ್ಕಾರ
ಮಕ್ಕಳ ಬಾಳಿಗೆ ಉತ್ತಮ ಶ್ರೀಕಾರ
ವಿಚಾರವಂತರಾಗಿ ಮುಂದೆ ಸಾಗಲು
ಆಚಾರವೇ ಅವರಿಗೆ ಅಲಂಕಾರ
೨.ವ್ಯಕ್ತಿತ್ವ
ತಾಳ್ಮೆ ಗುಣವೊಂದು ನಮ್ಮಲ್ಲಿರಲು
ವಕ್ತಿತ್ವ ವಿಕಸನದ ಹೊನಲು
ಸ್ವಾಭಿಮಾನವು ಬದುಕಲ್ಲಿದ್ದರೆ
ಬಾಳು ಸುಖ ಸಮೃದ್ಧಿಯ ಕಡಲು
-