ಶೀರ್ಷಿಕೆ:ಕಲ್ಲೆಂದರು
ಬದುಕಲ್ಲಿ ಕಷ್ಟಗಳನ್ನೇ ಎದುರಿಸಿದರು
ನೋವುಗಳ ನುಂಗಿಯೇ ಬಾಳಿದರು
ಮೊಗದಲ್ಲಿ ನಗುವನ್ನೇ ಚೆಲ್ಲಿದರು
ಆದರೆ ಅವರನ್ನ ಕಲ್ಲೆಂದರು//
ಬಯಸಿದ್ದನ್ನು ತ್ಯಾಗ ಮಾಡಿದರು
ಬೇರೆಯವರ ನಲಿವಲ್ಲಿ ಖುಷಿಪಟ್ಟರು
ದೇವರನ್ನೇ ನಂಬಿ ಬದುಕಿದರು
ಅವರ ಹಿತೈಷಿಗಳೇ ಕಲ್ಲೆಂದರು//
ಕೇಡನ್ನು ಯಾರಿಗೂ ಬಗೆಯದವರು
ಅವಮಾನವ ಸಹಿಸಿ ದಿನದೂಡಿದರು
ಸ್ವಾಭಿಮಾನದಿಂದ ಸಂಸಾರ ನಡೆಸಿದರು
ಇಷ್ಟಪಡದವರು ಹೃದಯವನ್ನೇ ಕಲ್ಲೆಂದರು//-
**********❣️************
ವಿದ್ಯಾಭ್ಯಾಸ: ಎಂ.ಎ ರಾಜ್ಯಶಾಸ್ತ್ರ ವಿಭಾಗ. ವ್ಯಾಸ... read more
ಶೀರ್ಷಿಕೆ:ಜೀವನವೊಂದು ಬೇವು ಬೆಲ್ಲದಂತೆ
ಜನನ,ಜೀವನ, ಮರಣ
ಎನ್ನುವ ಮೂರು ದಿನದ ಬದುಕು
ಹುಟ್ಟಿದಾಗ ಅತ್ತರೂ ಜಗಕೆ ಸಂತಸ ಆ ಕ್ಷಣ
ಬೆಳೆಯುತ್ತಾ ಕಷ್ಟ ಸುಖಗಳ ಮೆಲುಕು//
ದಿನ ನಿತ್ಯವೂ ಬರೀ ಜಂಜಾಟ
ಸಂಸಾರವೆಂಬ ಸಾಗರದಲ್ಲಿ ತೇಲಾಡುತ
ಕಲಿಯುವೆವು ನೋವು ನಲಿವಿನ ಪಾಠ
ಬಾಳುವೆವು ಅಪಮಾನ ಅವಮಾನವ ನುಂಗುತ//
ನಾನು ನೀನೆಂಬ ಬಿಗುಮಾನ ತೋರದೆ
ಬಂದ ಸಮಸ್ಯೆಗಳನ್ನು ಆಗಲೇ ನಿವಾರಿಸಿ
ಕಲ್ಲು ಮುಳ್ಳುಗಳನ್ನು ಮೆಟ್ಟಿ ನಿಂತು ಹೆದರದೆ
ಸಾಗಿದರೆ ನಮಗೆ ಸಿಗುವುದು ಬಲು ಖುಷಿ//
ಜೀವನವೊಂದು ಬೇವು ಬೆಲ್ಲದಂತೆ ಸವಿಯುತ
ಇರುವಷ್ಟು ದಿನ ನೆಮ್ಮದಿಯಾಗಿ ಕಾಣುವಂತೆ
ಇತರರಿಗೆ ಮಾದರಿಯಾಗಿ ಅನವರತ ಜೀವಿಸುವ
ಉಸಿರು ನಿಂತ ಮೇಲೂ ನಮ್ಮ ಹೆಸರು ಉಳಿವಂತೆ//-
ಶೀರ್ಷಿಕೆ: ಅಮಾಯಕರು
ಕಾಶ್ಮೀರದಲ್ಲಿದೆ ಬೃಹದಾಕಾರದ ಹಿಮ ಬೆಟ್ಟ
ಸುಂದರವಾದ ಸೊಬಗಿನ ಪ್ರಕೃತಿಯ ನೋಟ
ಚೆಲುವ ಕಣ್ತುಂಬಿಕೊಳ್ಳಲು ಸೇರುವರು ಜನದಟ್ಟ
ಪ್ರವಾಸಿಗರು ಸೌಂದರ್ಯ ಸವಿಯುತ ಆಡುವರು ಆಟ
ಮನಸ್ಸಿನ ಖುಷಿಗಾಗಿ ಹಲವು ಮಂದಿ
ಚಳಿಗಾಲ ಬೇಸಿಗೆಯಲ್ಲಿ ಮಾಡುವರು ಪ್ರವಾಸ
ಹಿಮಪಾತದ ಅದ್ಭುತ ದೃಶ್ಯ ನೋಡುತ ಮನದಿ
ಕುಣಿಯುತ ನಿತ್ಯವೂ ಕಳೆಯುವರು ಆಯಾಸ//
ಆದರೆ ಪಹಲ್ಗಾಮ್ ನ ಉಗ್ರರ ದಾಳಿಗೆ ಬಲಿಯಾದರು
ಪಾಪ ತಪ್ಪೇ ಮಾಡದ ಇಪ್ಪತ್ತಾರು ಅಮಾಯಕರು
ಧರ್ಮ ಹೇಳಿದ ಕ್ಷಣದಲ್ಲೇ ಪ್ರಾಣ ಕೊಟ್ಟರು ಗುಂಡೇಟಿಗೆ
ಏನನ್ನು ಅರಿಯದ ಮುಗ್ಧ ಜೀವಿಗಳು ದೇವರ ಪಾದ ಸೇರಿದರು//-
ಹನಿಗವನ
ಶೀರ್ಷಿಕೆ:ಪ್ರೇಮಾಯಣ
ಇಂದು ಕಳೆದು ನಾಳೆ ಬರಲಿ
ಮುಗಿಯದಿರಲಿ ಮಾತು
ಹರಿಯುತ್ತಿರಲಿ ಪ್ರೇಮ ಹೊಳೆ
ಒಲವಿನೋಟಕ್ಕೆ ಮೈಮರೆತು.
-
ಹನಿಗವನ
ಶೀರ್ಷಿಕೆ:ಪ್ರೇಮದ ಮಿಡಿತ
ಗೆಳೆಯ ಬರಡಾದ ನನ್ನ ಹೃದಯದಲ್ಲಿ
ಒಲವ ಚಿತ್ತಾರ ಬಿಡಿಸಿದವ ನೀನು
ರಂಗು ರಂಗಿನ ಈ ಮುಸ್ಸಂಜೆಯಲ್ಲಿ
ಮೌನವನ್ನು ಮುರಿದು ಮಾತಾಡಬಾರದೇನು
ಶಾಂತವಾದ ಕಡಲ ತೀರದಲ್ಲಿ
ನಿನ್ನ ಪ್ರೇಮದ ಮಿಡಿತ ಬಯಸುವೆ ನಾನು
ರಾಣಿಯಾಗಲು ಬರಲೇ ಮನದರಮನೆಯಲ್ಲಿ
ನೀ ಒಪ್ಪಿದರೆ ನಮ್ಮೀ ಬಾಳು ಹಾಲು ಜೇನು-
ಶೀರ್ಷಿಕೆ:ಸಂಜೆಗೆಲ್ಲ ಗೊತ್ತಿದೆ
ನನ್ನ ನಿನ್ನ ಮನದಲಿ
ಒಲವ ಅನುರಾಗ ಶುರುವಾಗಿದೆ
ಮಂದಿಗೇನು ತಿಳಿದೇ ಇಲ್ಲ
ಈ ಸಂಜೆಗೆಲ್ಲ ಗೊತ್ತಿದೆ//
ರವಿ ಜಾರಿದ ಹೊತ್ತಲ್ಲಿ
ನಮ್ಮೀ ಭಾವಗಳು ಹಾಡಾಗಿದೆ
ಮೌನವಾಗಿವೆ ಕಡಲ ಅಲೆಗಳೆಲ್ಲ
ಆದರೆ ಸಂಜೆಗೆಲ್ಲ ಗೊತ್ತಿದೆ//
ಪ್ರಕೃತಿಯ ಸುಂದರ ಮಡಿಲಲಿ
ಬೆಸೆದ ಪ್ರೇಮ ಚಿರವಾಗಿದೆ
ನನಸಾಗಿದೆ ಕಂಡ ಕನಸುಗಳೆಲ್ಲ
ಸಿಹಿ ಸಂಜೆಗೆಲ್ಲ ಗೊತ್ತಿದೆ//-
ಚಿತ್ರಕ್ಕೊಂದು ಚುಟುಕು
ಇವಳು ಯಾವೂರ ಮುದ್ದು ಚೆಲುವೆ
ಮಳೆ ಬಂದರೂ ಅವಳಿಗಿಲ್ಲ ಗೊಡವೆ
ಕೈಯಲಿದ್ದ ಛತ್ರಿ ಅವಳಿಗೆ ನೇಪಮಾತ್ರವೇ
ಭಾವಗಳೇ ಅವಳ ಮೈ ಮರೆಸಿವೆ-
ಪುಸ್ತಕವೆಂಬ ಆಭರಣ ಕೈಯ್ಯಲ್ಲಿದ್ದರೆ
ಮಸ್ತಕದಲ್ಲಿ ಜ್ಞಾನವೆಂಬ ಭಂಡಾರದ
ಬೆಲೆ ಹೆಚ್ಚುವುದೆನ್ನುವುದನ್ನು ಅರಿತರೆ
ಬಾಳೆಲ್ಲ ಅರಳುವ ಸುಮದಂತೆ ಸದಾ-
ಹನಿಗವನ
ಶೀರ್ಷಿಕೆ:ಅತ್ತೃಪ್ತ ಮನಸ್ಸು
ಅವಳ ಹೂವಿನಂತ ಮುದ್ದು ಹೃದಯ
ಶುರುವಾಯ್ತಲ್ಲಿ ಅವನ ಪ್ರೀತಿಯ ಉದಯ
ಇಬ್ಬರಲ್ಲೂ ಒಲವ ಸೆಳೆತದ ಅಭಯ
ಪ್ರತಿ ಕ್ಷಣವೂ ಕನಸುಗಳು ಆನಂದಮಯ //
ದಿನಗಳೆದಂತೆ ಯಾಕೋ ಮೂಡಿತು ನಿರಾಳತೆ
ಬಡವ-ಸಿರಿವಂತಿಕೆ ಅನ್ನುವ ಅಹಂಭಾವತೆ
ಹೆಚ್ಚಿತು ಅತ್ತೃಪ್ತ ಮನಸ್ಸಿನ ತೀವ್ರತೆ
ಮುಗಿದೇ ಹೋಯ್ತು ಅವರಿಬ್ಬರ ಪ್ರೇಮಕತೆ //-