✧••ಸವಿತಾ ಸತೀಶ್ ಶೆಟ್ಟಿ••✧   (✍♥..ಸವಿತಾ (ಸವಿಸತಿ)‌..♦)
6.5k Followers · 6.5k Following

read more
Joined 2 July 2020


read more
Joined 2 July 2020

ಸ್ವಾಭಿಮಾನಿಯಾಗಿ ಬದುಕು ನಡೆಸಿ
ಯಾರಿಗೂ ಕೇಡು ಬಯಸದೇ
ನಮ್ಮಷ್ಟಕ್ಕೇ ನಾವಿದ್ದರೂ ಜನರಿಗೆ ನಮ್ಮನ್ನು
ನೋಡಿ ಸಹಿಸಲು ಆಗಲ್ಲ ಇಂತಹ ಪ್ರಪಂಚದಲ್ಲಿ
ಕಣ್ಣಿದ್ದು ಕುರುಡರಾಗಿ ಕಿವಿಯಿದ್ದು ಕಿವುಡರಾಗಿ
ಬಾಯಿಯಿದ್ದು ಮೂಗರಾಗಿ ಬದುಕಲೇಬೇಕು
ಇದುವೇ ನಮ್ಮೀ ಜೀವನ

-



ಅದೃಷ್ಟವು ಕೈ ಕೊಟ್ಟಾಗ ಬದುಕೇ ಕಳೆಗುಂದುತ್ತದೆ
ಆಸೆ ಕನಸುಗಳು ದೂರವಾಗುತ್ತಾವೆ
ಆಡುವ ಮಾತುಗಳು ಮೌನವಾಗುತ್ತಾವೆ
ಎಲ್ಲವೂ ಇದ್ದು ಇಲ್ಲದಂತಿರಬೇಕಾಗುತ್ತದೆ

-



ಶೀರ್ಷಿಕೆ:ಜ್ಞಾನ ದೀವಿಗೆ(ಚುಟುಕು)

ಜ್ಞಾನವೆಂಬ ಅಲಂಕಾರದ ದೀವಿಗೆಗೆ
ಅಕ್ಷರವೆಂಬ ಎಣ್ಣೆಯನ್ನು ಸುರಿದಾಗೆ
ವಿದ್ಯೆಯೆಂಬ ಬೆಳಕು ಝೇಂಕರಿಸಿದಾಗೆ
ವಿಶಾರದೆಯು ಅನವರತ ಬಾಳಿನಾಗೆ

-



ಶೀರ್ಷಿಕೆ:ಪ್ರೀತಿಯ ಯಜಮಾನ

ನನ್ನ ಪ್ರೀತಿಯ ಯಜಮಾನ
ನಿನಗಿಲ್ಲ ಸ್ವಲ್ಪನೂ ಬಿಗುಮಾನ
ಅಮ್ಮನಂತೆ ವಾತ್ಸಲ್ಯವನ್ನು ಕೊಟ್ಟೆನು
ಅಪ್ಪನಂತೆ ಕಾಳಜಿ ವಹಿಸಿದೆನು//

ನೋವಿಗೆ ಸ್ಪಂದಿಸುವ ಜೀವ ನೀನು
ಕಷ್ಟ ಸುಖಗಳ ಸಮಾನಾಗಿ ಸ್ವೀಕರಿಸಿದೆನು
ಮಮತೆಯ ತುತ್ತನ್ನಿತ್ತು ಸಾಕಿದೆನು
ಮನದ ಭಾವನೆಗಳನ್ನು ಗೌರವಿಸಿದೆನು//

ನವಿರಾದ ಒಲವೇ ನೀ ಕೊಟ್ಟ ಉಡುಗೊರೆ
ಸದಾ ಅದನ್ನು ಉಳಿಸಿಕೊಳ್ಳುವೆ ದೊರೆ
ನಾನಾಗಲಿಲ್ಲ ಎಂದಿಗೂ ನಿನಗೆ ಹೊರೆ
ಸ್ವಾಭಿಮಾನವ ನಿನ್ನೊಳು ಕಂಡಾಗ ಬಲು ಅಕ್ಕರೆ//

ನಿತ್ಯ ಮೊಗದಲ್ಲಿ ನಗುವ ತುಂಬುತ್ತಿರೆ
ಮನೆಯೆಲ್ಲಾ ನಿತ್ಯ ಸಂಭ್ರಮದ ತೊರೆ
ಎನಗೆ ನೀನೇ ಅಭಿಮಾನದ ಚಂದ್ರ ತಾರೆ
ಸಂಸಾರದ ಸಾಗರವಾಗಲಿ ಹಾಲು ಸಕ್ಕರೆ//

-



ರುಬಾಯಿ (ವಿರಾಮ)

ಜನರ ಹೊಟ್ಟೆಯ ತುಂಬಲು
ವಿರಾಮ ಇಲ್ಲದೆ ದಿನಾಲು
ದುಡಿವ ರೈತನ ಮನವು
ನೋವನ್ನೇ ತುಂಬಿದ ಕಡಲು

(೯ ಅಕ್ಷರಗಳು)

-



ಈ ಬದುಕಲ್ಲಿ ನಾನು,ನನ್ನದು ಎನ್ನುವುದು ಏನೂ ಇಲ್ಲ
ಎಲ್ಲಾ ದೇವರ ನಿರ್ಧಾರವೇ ಇಲ್ಲಿ ನಡೆಯುವುದೆಲ್ಲ
ಕಟ್ಟಿದ ಕನಸು ಆಸೆಗಳು ಯಾವುದೂ ಶಾಶ್ವತವಲ್ಲ
ಇವತ್ತನ್ನು ಸಂತೋಷವಾಗಿ ಸ್ವೀಕರಿಸುತ್ತಾ
ನಾಳೆ ಏನಾಗುತ್ತದೆ ಎಂಬುದನ್ನು ಮರೆತು
ಬಾಳಲೇ ಬೇಕು ನಾವು ಈ ಕರ್ಮ ಭೂಮಿಯಲ್ಲಿ…..

-



ಶೀರ್ಷಿಕೆ:ಶಿಸ್ತು

ಬಾಲ್ಯದಿಂದಲೇ ಮಕ್ಕಳ ಮನದಲಿ
ಶಿಸ್ತಿನ ಪಾಠವನ್ನು ವಿರಚಿಸುತಲಿ
ನಡೆದಾಗ ಬೆಳೆಯುತವರ ಬದುಕಲಿ
ಉತ್ತಮ ನಿಷ್ಠಾವಂತ ವ್ಯಕ್ತಿಗಳಾಗುವರು
ಸಮಾಜಕ್ಕೆ ಹೊಳೆವ ಬೆಳಕಾಗುವರು
ಹೆತ್ತವರ ಬಾಳಿಗೆ ಮುತ್ತುಗಳಾಗುವರು

-





ಶೀರ್ಷಿಕೆ:ಹಾಲು ಜೇನು

ಉತ್ತಮ ಅಭ್ಯಾಸ ಹೊಂದಿದವ
ಹಾಲು ಜೇನ ಸವಿ ಉಂಡವ
ಕೆಟ್ಟ ಚಟಗಳ ದಾರಿ ಹಿಡಿದವ
ಬಾಳಿನುದ್ದಕ್ಕೂ ನೆಮ್ಮದಿ ಇಲ್ಲದವ

-



ಶೀರ್ಷಿಕೆ:ಪ್ರೀತಿಯ ಗೂಡು

ಸುಂದರ ಸೊಬಗಿನ
ಹಕ್ಕಿಯ ನೋಡು
ಹೆಣೆಯುತ್ತಿದೆ ಬನದಲಿ
ಪ್ರೀತಿಯ ಗೂಡು//

ಪ್ರಕೃತಿಯ ಮಡಿಲಲ್ಲಿ
ಚಿಲಿಪಿಲಿ ಹಾಡು
ಕೇಳುತ ಸಿಗುವುದೆಮಗೆ
ಶಾಂತಿಯ ಜಾಡು//

-



ಶೀರ್ಷಿಕೆ:ಬಾಳು ಜೇನ ಹನಿ

ಸಂಸಾರವೆಂಬ ಸಾಗರದಲಿ
ಹೊಂದಾಣಿಕೆಯ ದೋಣಿ
ಸೊಗಸಾಗಿ ಸಾಗುತಲಿ
ಒತ್ತಡದಲ್ಲೂ ಬಾಳು ಜೇನಹನಿ
ನಿತ್ಯ ಕಾದಾಟ,ಜಗಳ ಇಲ್ಲದಿರೆ
ಮನೆ ಮನವು ತಾಳ್ಮೆಯ ಗಣಿ
ಸಂಸ್ಕೃತಿ,ಧರ್ಮದಿ ನಡೆದರೆ
ಬದುಕಲ್ಲಿ ಬಾರದೆಂದೂ ಕಂಬನಿ

-


Fetching ✧••ಸವಿತಾ ಸತೀಶ್ ಶೆಟ್ಟಿ••✧ Quotes