*Yogi 🪷 Chetana*
An empty pocket is better than an empty head and an empty heart.*
*An empty pocket is not dangerous to anyone, but an empty head and an empty heart are dangerous to oneself and society.*
*Become wise🙏-
*Humanity is Religion and knowledge is caste*
*ಯೋಗಿ 🪷 ಚೇತನಾ*
ನಾನು ಎಂದರೆ ವಾದ ...
ನಾವು ಎಂದರೆ ಚರ್ಚೆ ...
ಚರ್ಚೆಯಿಂದಲೇ ಸಮಸ್ಯೆಗೆ ಪರಿಹಾರ ... .
"ತಿಳಿದು ಬದುಕು ತುಳಿದು ಬದುಕಬೇಡ" 🌲-
🕉️ *ಯೋಗಿಚೇತನಾ* 🏵️
" *ಎಲ್ಲರಿಗೂ ಬೇಕಾಗುವ " ಹಣ್ಣು" ಕೈ , ಬಾಯಿ ಸೇರುತ್ತದೆ. ಯಾರಿಗೂ ಬೇಡವಾದ ಬೀಜ, ಭೂಮಿ ಸೇರುತ್ತದೆ.
ಬೇಡವಾದ ಬೀಜದೊಳಗೆ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು. ತಿರಸ್ಕಾರ ಗೊಂಡವರೇ ಮುಂದೊಮ್ಮೆ ಪುರಸ್ಕರಿಸುವಂಥ ಕಾಲ ಬಂದೇ ಬರುತ್ತದೆ.
ಆ ಕಾಲ ಬರುವವರಿಗೆ ಕಾಯಲೇ ಬೇಕು. ಇದೇ ಸಾಧನೆಯ ಬದುಕು.
-
ಸೊಸೆ ದೇವತೆ ತರಹ ಇರಬೇಕು?
*ಪ್ರತಿಯೊಬ್ಬರು ಮನೆಗೆ ಬರುವ ಸೊಸೆ ದೇವತೆ ತರಹ ಇರಬೇಕು ಅಂತ ಬಯಸುತ್ತಾರೆ.
ಬಯಸುವುದು ಖಂಡಿತ ತಪ್ಪಲ್ಲ.*
*ಆದರೆ ಮೊದಲು ಅವಳಿಗೋಸ್ಕರ ನಿಮ್ಮ ಮನೆ ಮತ್ತು ಮನಸ್ಸನ್ನು ಸ್ವರ್ಗದ ತರಹ ಇಟ್ಟುಕೊಳ್ಳಬೇಕು.
ಏಕೆಂದರೆ ದೇವತೆ ಸ್ವರ್ಗದಲ್ಲಿ💃🏼 ವಾಸಮಾಡುತ್ತಾಳೆ ವಿನಃ ನರಕದಲ್ಲಿ ಅಲ್ಲ.*
-
ಗಂಡನ ಮೇಲಿರುವ ಪ್ರೀತಿಗೆ ಹೆಂಡತಿ ಕೋಪಗೊಳ್ಳುತ್ತಾಳೆ. ಮತ್ತು ಗಂಡನನ್ನು ಬಿಟ್ಟು ಬೇರೆ ಯಾರ ಮೇಲೂ ಕೋಪಗೊಳ್ಳದ ಜೀವಿ ಎಂದರೆ ಅದು ಹೆಂಡತಿ.*
*ಹೆಂಡತಿ ಕೋಪಗೊಂಡಾಗ ಗಂಡ ತುಂಬಾ ತಾಳ್ಮೆಯಿಂದ ಇದ್ದರೆ, ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾನೆ ಅಂತಾ ಅರ್ಥ.
-
*ಹರಿ ಸ್ಮರಣೆ ಮಾಡುವರು ನರರಲ್ಲವೋ* |ಪ.|ಶರೀರವು ಎಲ್ಲರಂತಲ್ಲವರದು* ||ಅ.ಪ.||
*ಮುರಹರಿಗೆರಗುವ ಶಿರ ದ್ವಾರಕಾಪುರವು* | ಚರಿತೆ ಕೇಳುವ ಕರ್ಣ*ಗೋಕರ್ಣವೋ* ||
*ಬರಿದು ಹೊಗಳುವ ಜಿಹ್ವೆ ನಿಜಕ್ಷೀರ ಸಾಗರವು*ಚರಣ ಪೂಜಿಸುವ ಕರಗಳೇ ರಾಮೇಶ್ವರ*||1||
*ವಿಷ್ಣು ನಿರ್ಮಾಲ್ಯಾಘ್ರಾಣಿಸುವ ನಾಸಿಕ ಕಂಚಿ* |ಕೃಷ್ಣನ ನೋಡುವ ದೃಷ್ಟಿ ಶ್ರೀಮುಷ್ಣವು* |
*ವಿಠಲಗರ್ಪಿತವೆಂಬ ಉದರವೇ ಬದರಿ* |
*ಘಟ್ಯಾಗಿ ಇರುತಿಪ್ಪ ಹೃದಯವೇ ವೈಕುಂಠ* ||2||
*ವರ ಜಂಘೆ ಪದ ಗಂಗೆ ತುಂಗೆ ಎನಿಸುವವು*ಸರ್ವಾಂಗ ಅನಂತಾಸನ ಶ್ವೇತದ್ವೀಪ*
|
*ಬರಿಯಮಾತಲ್ಲವಿದು ಶೃತಿ ಪುರಾಣಗಳುಕ್ತಿ|*ಪುರಂದರ ವಿಠಲನು ಅವರ ವಶದೊಳಿರುತಿಹನು*
||3||— % &-
-- ಮಹಾಭಾರತ, ಉದ್ಯೋಗಪರ್ವ--
*ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಂ |*
*ವಾಚಾ ದುರುಕ್ತಂ ಭಿಭತ್ಸಂ ನ ಸಂಹೋರತಿ ವಾಕ್ ಕ್ಷತಮ್ ||*
ಬಾಣಗಳಿಂದಾದ ಗಾಯ ಗುಣಹೊಂದುತ್ತದೆ. ಕೊಡಲಿಯಿಂದ ಕಡಿದ ವನವು ಚಿಗುರುತ್ತದೆ. ಆದರೆ ಕೆಟ್ಟ ಮಾತಿನಿಂದಾದ ಗಾಯ ತೀವ್ರವಾದದ್ದು. ಅದು ಗುಣ ಹೊಂದುವದಿಲ್ಲ.
— % &-
-- ಸುಭಾಷಿತ ರತ್ನಭಾಂಡಾಗಾರ--
ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾಂಧವಾಃ |*
ಜಿಹ್ವಾಗ್ರೇ ಬಂಧನಂ ಪ್ರಾಪ್ತಂ ಜಿಹ್ವಾಗ್ರೇ ಮರಣಂ ದ್ರುವಂ|*
ನಾಲಗೆಯ ತುದಿಯಲ್ಲಿ ಲಕ್ಷ್ಮೀ ನೆಲಸಿದ್ದಾಳೆ ; ಮಿತ್ರರೂ ಬಾಂಧವರೂ ನಾಲಗೆಯ ತುದಿಯಲ್ಲಿಯೇ ; ಬಂಧನವೂ ಅದರಿಂದಲೇ ; ನಿಜವಾಗಿ ಮರಣವೂ ಅದರದಲೇ.
— % &-
*ಕತ್ತೆ ಕುದುರೆ ಯಾಗಿ ಹರಿಗೆ ಶರಣೆನಲುಂಟೆ*|
*ಹಂದಿ ನಾಯಿಯಾಗಿ ಹರಿಗೆ ಶರಣೆನಲು ಉಂಟೆ*|
*ಕ್ರಿಮಿ ಕೀಟವಾಗಿ ಹರಿಗೆ ಶರಣೆನಲು ಉಂಟೆ*|
*ಮರೆತೆಯಾ ಮಾನವ ಹಿಂದಿನನುಭವಗಳನು*|
*ನಿನಗೆ ಮಾನುಷ ಜನ್ಮ ವು ಬರಲಾಗಿ*|
*ಪುರಂದರ ವಿಠ್ಠಲನ್ನ ನೆನಿ ಕಂಡ್ಯ*|
*ಎರಗು ಕಂಡ್ಯ*||.— % &-
ಬಹುತೇಕ ಜನರು ದೇವರನ್ನು
ಕಲ್ಲಿನಲ್ಲಿಟ್ಟು ಪೂಜಿಸಿದರು ,
ಹಲವರು ಬೆಳ್ಳಿಯಲ್ಲಿಟ್ಟು
ಪೂಜಿಸಿದರು, ಇನ್ನು ಕೆಲವರು
ಚಿನ್ನದಲ್ಲಿಟ್ಟು ಪೂಜಿಸಿದರೂ
ದೇವರು ಒಲಿಯುವುದಿಲ್ಲ ,
ಆದರೆ ದೇವರು ಒಲಿಯುವುದು
ಮನಸ್ಸಿನಲ್ಲಿಟ್ಟು ಪೂಜಿಸಿದಾಗ ಮಾತ್ರ.
-