SUVARANA YOGI   (www.yoursyogi.com)
108 Followers · 3 Following

💐 Man for good Society🙏.
*Humanity is Religion and knowledge is caste*
Joined 16 February 2020


💐 Man for good Society🙏.
*Humanity is Religion and knowledge is caste*
Joined 16 February 2020
1 FEB 2022 AT 9:53

*ಹರಿ ಸ್ಮರಣೆ ಮಾಡುವರು ನರರಲ್ಲವೋ* |ಪ.|ಶರೀರವು ಎಲ್ಲರಂತಲ್ಲವರದು* ||ಅ.ಪ.||

*ಮುರಹರಿಗೆರಗುವ ಶಿರ ದ್ವಾರಕಾಪುರವು* | ಚರಿತೆ ಕೇಳುವ ಕರ್ಣ*ಗೋಕರ್ಣವೋ* ||

*ಬರಿದು ಹೊಗಳುವ ಜಿಹ್ವೆ ನಿಜಕ್ಷೀರ ಸಾಗರವು*ಚರಣ ಪೂಜಿಸುವ ಕರಗಳೇ ರಾಮೇಶ್ವರ*||1||

*ವಿಷ್ಣು ನಿರ್ಮಾಲ್ಯಾಘ್ರಾಣಿಸುವ ನಾಸಿಕ ಕಂಚಿ* |ಕೃಷ್ಣನ ನೋಡುವ ದೃಷ್ಟಿ ಶ್ರೀಮುಷ್ಣವು* |

*ವಿಠಲಗರ್ಪಿತವೆಂಬ ಉದರವೇ ಬದರಿ* |
*ಘಟ್ಯಾಗಿ ಇರುತಿಪ್ಪ ಹೃದಯವೇ ವೈಕುಂಠ* ||2||

*ವರ ಜಂಘೆ ಪದ ಗಂಗೆ ತುಂಗೆ ಎನಿಸುವವು*ಸರ್ವಾಂಗ ಅನಂತಾಸನ ಶ್ವೇತದ್ವೀಪ*
|
*ಬರಿಯಮಾತಲ್ಲವಿದು ಶೃತಿ ಪುರಾಣಗಳುಕ್ತಿ|*ಪುರಂದರ ವಿಠಲನು ಅವರ ವಶದೊಳಿರುತಿಹನು*
||3||— % &

-


1 FEB 2022 AT 9:48

-- ಮಹಾಭಾರತ, ಉದ್ಯೋಗಪರ್ವ--

*ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಂ |*
*ವಾಚಾ ದುರುಕ್ತಂ ಭಿಭತ್ಸಂ ನ ಸಂಹೋರತಿ ವಾಕ್ ಕ್ಷತಮ್ ||*

ಬಾಣಗಳಿಂದಾದ ಗಾಯ ಗುಣಹೊಂದುತ್ತದೆ. ಕೊಡಲಿಯಿಂದ ಕಡಿದ ವನವು ಚಿಗುರುತ್ತದೆ. ಆದರೆ ಕೆಟ್ಟ ಮಾತಿನಿಂದಾದ ಗಾಯ ತೀವ್ರವಾದದ್ದು. ಅದು ಗುಣ ಹೊಂದುವದಿಲ್ಲ.
— % &

-


29 JAN 2022 AT 17:22


-- ಸುಭಾಷಿತ ರತ್ನಭಾಂಡಾಗಾರ--
ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾಂಧವಾಃ |*
ಜಿಹ್ವಾಗ್ರೇ ಬಂಧನಂ ಪ್ರಾಪ್ತಂ ಜಿಹ್ವಾಗ್ರೇ ಮರಣಂ ದ್ರುವಂ|*

ನಾಲಗೆಯ ತುದಿಯಲ್ಲಿ ಲಕ್ಷ್ಮೀ ನೆಲಸಿದ್ದಾಳೆ ; ಮಿತ್ರರೂ ಬಾಂಧವರೂ ನಾಲಗೆಯ ತುದಿಯಲ್ಲಿಯೇ ; ಬಂಧನವೂ ಅದರಿಂದಲೇ ; ನಿಜವಾಗಿ ಮರಣವೂ ಅದರದಲೇ.
— % &

-


28 JAN 2022 AT 17:23

*ಕತ್ತೆ ಕುದುರೆ ಯಾಗಿ ಹರಿಗೆ ಶರಣೆನಲುಂಟೆ*|
*ಹಂದಿ ನಾಯಿಯಾಗಿ ಹರಿಗೆ ಶರಣೆನಲು ಉಂಟೆ*|
*ಕ್ರಿಮಿ ಕೀಟವಾಗಿ ಹರಿಗೆ ಶರಣೆನಲು ಉಂಟೆ*|
*ಮರೆತೆಯಾ ಮಾನವ ಹಿಂದಿನನುಭವಗಳನು*|
*ನಿನಗೆ ಮಾನುಷ ಜನ್ಮ ವು ಬರಲಾಗಿ*|
*ಪುರಂದರ ವಿಠ್ಠಲನ್ನ ನೆನಿ ಕಂಡ್ಯ*|
*ಎರಗು ಕಂಡ್ಯ*||.— % &

-


28 JAN 2022 AT 11:17

ಬಹುತೇಕ ಜನರು ದೇವರನ್ನು
ಕಲ್ಲಿನಲ್ಲಿಟ್ಟು ಪೂಜಿಸಿದರು ,
ಹಲವರು ಬೆಳ್ಳಿಯಲ್ಲಿಟ್ಟು
ಪೂಜಿಸಿದರು, ಇನ್ನು ಕೆಲವರು
ಚಿನ್ನದಲ್ಲಿಟ್ಟು ಪೂಜಿಸಿದರೂ
ದೇವರು ಒಲಿಯುವುದಿಲ್ಲ ,
ಆದರೆ ದೇವರು ಒಲಿಯುವುದು
ಮನಸ್ಸಿನಲ್ಲಿಟ್ಟು ಪೂಜಿಸಿದಾಗ ಮಾತ್ರ.

-


27 JAN 2022 AT 21:02

----ಸುಭಾಷಿತ----
ನಮ್ಮ ಕಷ್ಟಕಾಲದಲ್ಲಿ ನಮಗೆ ಯಾರಾದ್ರು ಉಪಕಾರ ಮಾಡಿದರೆ,*
*ಉಪಕಾರಕ್ಕೆ ಪ್ರತಿಯಾಗಿ ಧನ್ಯವಾದವನ್ನು ಮಾತ್ರ ಹೇಳಬೇಕು..*..
ಪ್ರತ್ಯುಪಕಾರ ಮಾಡುತ್ತೇನೆ ಎಂದು ಆಶ್ವಾಸನೆ ಕೊಡಬಾರದು..*..

"ಮಯ್ಯೇವ ಜೀರ್ಣತಾಂ ಯಾತು|
ಯತ್ತ್ವಯೋಪಕೃತಂ ಮಮ|
ನರಃ ಪ್ರತ್ಯುಪಕಾರಾರ್ಥೀ
ವಿಪತ್ತಿಮನುಕಾಂಕ್ಷತಿ||
-
*ನೀನು ನನಗೆ ಮಾಡಿದ ಉಪಕಾರ ನನ್ನಲ್ಲಿಯೇ ಜೀರ್ಣವಾಗಿಹೋಗಲಿ..*
**ಉಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡಲು ಬಯಸುವ ಮನುಷ್ಯನು ಪರೋಕ್ಷವಾಗಿ ವಿಪತ್ತನ್ನೇ ನಿರೀಕ್ಷಿಸುತ್ತಾನೆ*..(ಅಂದರೆ ಅವನಿಗೆ ಸಹ ಕಷ್ಟ ಕಾಲ ಬಂದಾಗ ನಾನು ಸಹಾಯ ಮಾಡುವೆ ಅಂತ ಅಂದುಕೊಳ್ಳುವದು ಅಥವಾ ಬಂದಾಗ ಕೇಳು ಅಂತ ಹೇಳುವದು)
*ಉಪಕಾರ ಸ್ಮರಣೆ ಮಾನವನ ಅಗತ್ಯ ಗುಣ.*

-


24 JAN 2022 AT 12:25


-- ಮನುಸ್ಮೃತಿ--
ಯಸ್ಯ ವಾಙ್ಮನಸೀ ಶುದ್ಧೇ ಸಮ್ಯಗ್ಗುಪ್ತೇ ಚ ಸರ್ವದಾ |
ಸ ವೈ ಸರ್ವಮವಾಪ್ನೋತಿ ವೇದಾಂತೋಪಗತಂ ಫಲಂ||
.
ಯಾರ ಮಾತು, ಮನಸ್ಸು ಶುದ್ಧವಾಗಿಯೋ,
ಚನ್ನಾಗಿ ಹತೋಟಿಯಲ್ಲಿವೆಯೋ ಅವನು
ವೇದಾಂತದ ಎಲ್ಲ ಫಲವನ್ನೂ ಪಡೆಯುತ್ತಾನೆ.

-


18 MAY 2020 AT 9:35

*”आहार-शुद्धि”* नामक पुस्तक के *”आहार-शुद्धि”* नामक लेख से –
(परमश्रद्धेय स्वामीजी श्रीरामसुखदासजी महाराज)

प्रश्न‒ आयुर्वेद और धर्मशास्त्रमें विरोध क्यों है ? जैसे, आयुर्वेद अरिष्ट, आसव, मदिरा, मांस आदिका विधान करता है और धर्मशास्त्र इनका निषेध करता है; ऐसा क्यों ?

उत्तर‒

*गतांक से आगे*-
आयुर्वेदमें शरीरकी ही मुख्यता रहती है । अतः किसी भी तरहसे शरीर स्वस्थ, नीरोग रहे ‒ इसके लिये आयुर्वेदमें जड़ी-बूटियोंसे बनी दवाइयोंके तथा मांस, मदिरा, आसव आदिके सेवनका विधान आता है ।

धर्मशास्त्रमें सुखभोगकी मुख्यता रहती है; अतः उसमें भी स्वर्ग आदिकी प्राप्तिके लिये किये जानेवाले अश्वमेध आदि यज्ञोंमें पशुबलिका, हिंसाका वर्णन आता है । वैदिक मन्त्रोंके द्वारा विधि-विधानसे की हुई (वैदिकी) हिंसाको हिंसा नहीं माना जाता । *हिंसा न माननेपर भी हिंसाका पाप तो लगता ही है*।* इसके सिवाय मांसका सेवन करते-करते मनुष्यका स्वभाव बिगड़ जाता है । फिर उसमें परलोककी प्रधानता न रहकर स्थूलशरीरकी प्रधानता हो जाती है और वह शास्त्रीय विधानके बिना भी मांसका सेवन करने लग जाता है ।

*शतक्रतु इन्द्र (सौ यज्ञ करके इन्द्र बननेवाला) भी दुःखी होता है, उसपर भी आफत आती है । उसके मनमें भी ईर्ष्या, भय, अशान्ति आदि होते हैं कि मेरा पद कोई छीन न ले आदि । यह वैदिकी हिंसाके पापका ही फल है ।

-


2 MAY 2020 AT 8:54

🎭 *ನಮ್ಮ ಒಂದೊಳ್ಳೆಯ ನುಡಿ* 🎭


☕ *ಯಾರು ನನಗಿಂತ _ಮುಂದಿದ್ದಾರೆ_, ಯಾರು ನಮಗಿಂತ _ಹಿಂದಿದ್ದಾರೆ_ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ. ಯಾರು _ನಮ್ಮ ಜೊತೆಗಿದ್ದಾರೆ_ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು...!!!*
▬▬▬▬▬ஜ۩۞۩ஜ▬▬▬▬▬

-


19 JAN 2022 AT 10:31

ಸಹೃದಯರೇ 🙏,*

ನೋಡೀ ಈ *ಪ್ರತ್ಯಕ್ಷ , ಅನುಮಾನ , ಆಗಮ , ಉಪಮಾನ , ಅರ್ಥಾಪತ್ತಿ , ಅಭಾವ , ಐತಿಹ್ಯ , ಸಂಭವ , ಪರಿಶೇಷ* ಗಳೆಂದು ಸಾಮಾನ್ಯವಾಗಿ ಒಟ್ಟು 9 ಜ್ಞಾನಸಾಧನ ಪ್ರಮಾಣಗಳು *ಪೂರ್ವಮೀಮಾಂಸಾದರ್ಶನ* ವೂ ಆಗಮ ಪ್ರಾಮಾಣ್ಯವನ್ನು ಅಂಗೀಕರಿಸಿ ಧರ್ಮಾಧರ್ಮಗಳು ವೇದಗಳಿಂದಲೇ ತಿಳಿಯಲ್ಪಡಬೇಕು. *ಅದ್ವೈತ-ವಿಶಿಷ್ಟಾದ್ವೈತ-ದ್ವೈತ* ಗಳೆಂದು ಮೂರು ಪ್ರಧಾನವಾದ ಮತಗಳಿವೆ

-


Fetching SUVARANA YOGI Quotes