ನೋವಿಗೆ ಕಣ್ಣಂಚಲ್ಲಿ
ಸುರಿದ ಕಣ್ಣಿರಿಗಿಂತ
ತುಟಿಯಂಚಲ್ಲಿ ಮೂಡಿದ
ಹುಸಿನಗುವೇ ಹೆಚ್ಚು...-
ಕನ್ನಡ ಸಂಗೀತ, ಸಾಹಿತ್ಯ,ಹೋರಾಟಕ್ಕೆ ಅಪಾರ ಕೊಡಿಗೆ ನೀಡಿದ ವಿಧ್ಯಾಕಾಶಿ ಎಂದೇ ಪ... read more
ನಮಗೆ ವಿಶೇಷ ಎಂದೆನಿಸಿರುವ
ವ್ಯಕ್ತಿಗಳಿಗೆ ನಾವು ವಿಶೇಷ ಎನಿಸದಿದ್ದಾಗ,
""ನಮ್ಮನ್ನು ವಿಶೇಷಚೇತನರು ಎಂದೆನ್ನಬಹುದು""-
ಬಯಸುತಿದೆ ಮನಸು,
ಕನಸಲ್ಲೂ ಕನವರಿಸುತ,
ಗಮನಿಸದೆ ಹೋದೆ
ನಾನಿರುವದನ್ನೆ ಮರೆತು,
ಚುಚ್ಚಿದಂತಾಗುತಿದೆ ಎದೆಗೆ
ಬಿಚ್ಚಿ ಹೇಳಲು ಇನ್ನೆನಿಲ್ಲ ಮಾತು,
ನಿನ್ನಚ್ಛೆಯಂತೆ ಇರು
ಸದಾ ನಗುತ ನಲಿಯುತ...-
ಇನ್ನೊಬ್ಬರ ಉನ್ನತಿಯನ್ನ ಸಹಿಸದೇ,
ಅವರನ್ನು ಶಪಿಸುವ ಹೀನ ಮನಸಿನ ಕೆಟ್ಟ ಭಾವವೇ
"ಕೆಡಕು".-
ನೀ ನನ್ನ ಎದೆಗಪ್ಪಿದಾಗ ಹೇಳದೇ
ಉಳಿದ ಮಾತೆಲ್ಲ ಉಸಿರಾಡತೊಡಗಿತು,
ಹೇಳುವಷ್ಟರಲ್ಲಿ ನಿನ್ನದರದ ಚುಂಬನ
ನನ್ನ ಮಾತುಗಳೆನ್ನೆಲ್ಲ ಮಂಪರುಗೊಳಿಸಿಬಿಟ್ಟಿತು.
ಕತ್ತಲಯಲ್ಲಿಯೂ ಕಣ್ತೇರೆಯದಂತೆ
ಆವರಿಸಿದೆ ಆ ನಿನ್ನ ಆಲಿಂಗನದ ಮತ್ತು,
ನಿನ್ನ ಸೇರಿದಾಗೆಲ್ಲ ನನ್ನ ಮನಸು ಜೋರಾಗಿ
ಕೂಗಿ ಹೇಳುತಿತ್ತು ನೀನು ಅವಳ ಸೊತ್ತು.
ಎತ್ತ ಹಾರಿ ಕಳಚಿ ಬಿತ್ತೆಂಬ
ಅರಿವಿಲ್ಲ ತೊಟ್ಟ ವಸ್ತ್ರ,
ನನ್ನ ಬಲವ ಹೀನಗೊಳಿಸಿದ್ದು
ನಿನ್ನ ಪ್ರೀತಿಯಂಬ ಅಸ್ತ್ರ,
ಚಿತ್ತ ಕೆಟ್ಟು ಕತ್ತಿಗೆ ಮುತ್ತಿಡುವ ಹೊತ್ತಿಗೆ
ಮತ್ತೆ ಬಿತ್ತೊಂದು ಬೆತ್ತದ ಏಟು,
ಅರಿಯದ ಮನಸಿಗೆ ಹೀಗೊಂದು
ಮರಿಯದ ಕನಸಿನ ಹುಡಗಿಯ ಘಾಟು.-
ಅರಿವಿಲ್ಲದ ಓ ನನ್ನ ಬದುಕೇ,
ಅವರಿವರು ಏನೆನ್ನುವರೆನ್ನುವ ಅಂಜಿಕೆ,
ನಿತ್ಯ ಅಸುನಿಗುತಿವೆ ಅದೆಷ್ಟೋ ಬಯಕೆ,
ಕೊನೆಯಿಲ್ಲದೆ ಆಸೆಗಳು ಈ ಜೀವಕೆ,
ಯಾರಲ್ಲೂ ಏನನ್ನು ನೀರಿಕ್ಷಿಸದಿರು ಎಂಬ ಸಣ್ಣ ಕೋರಿಕೆ ...😇-
"ಮತ್ತೆ ಬಾಲ್ಯಕ್ಕೆ ಮರಳುವಾಸೆ"
ಬಾಲ್ಯದಲ್ಲಿ ಅರಿವಿರಲ್ಲ
ಎಂಬುದು ನಮ್ಮ ತಪ್ಪು ಕಲ್ಪನೆ,
ಅಂತರಂಗ ಶುದ್ಧವಾಗಿರುತ್ತೆ.
ಅನುಬಂಧ ಹಾಗೂ ಆತ್ಮೀಯತೆ
ಬಲವಾಗಿರುತ್ತೆ, ಯಾವುದೇ ನಿರೀಕ್ಷೆಗಳಿಲ್ಲದೆ.-
""ನಾಳೆ ಎಂಬುದು ಕೇವಲ ಕನಸು""
ಎಚ್ಚರವಾದರೆ ಜೀವನ ಪಯಣ,
ಇಲ್ಲದಿದ್ದರೆ ಶವ ಯಾಣ...-