ಸುನೀತಗೌಡ   (✍️ಉಸಿರು❤️)
3.3k Followers · 19 Following

read more
Joined 26 July 2019


read more
Joined 26 July 2019

ಬಣ್ಣ ಬಣ್ಣದ ಕನಸು ತುಂಬಿ
ಬಲಗಾಲಿಟ್ಟು ನನ್ನೆದೆಯೊಳಗೆ
ಬಂದವನು..
ಎಡಗಾಲಿಟ್ಟು ಹೊರ ಹೋಗುವಾಗ
ಎಡವಿ ಬಿದ್ದನು..
ಆದರೆ,ಬಿದ್ದವನೇನೋ ಬಿದ್ದ
ಅತ್ತ ಹೊರಗೂ ಹೋಗದೆ,
ಇತ್ತ ಒಳಗೂ ಬಾರದೆ ನನ್ನೆದೆಗೆ
ಭಾರವಾಗಿಯೆ ಉಳಿದುಬಿಟ್ಟನು..
ಕೈ ಹಿಡಿದು ಒಳಗೆ ಕರೆದೊಯ್ಯೋಣವೆಂದರೆ
ಸಂದರ್ಭ ಒಪ್ಪುತ್ತಿಲ್ಲ..
ಅವನನ್ನೇ ಆಚೆ ಹಾಕೋಣವೆಂದರೆ
ನನ್ನ ಹೃದಯ ಒಪ್ಪುತ್ತಿಲ್ಲ..
ನಾನೇನು ಮಾಡಲಿ..😥

-



Kyu na badlu mein,
tum wohi ho kya..??

Chalo mein galat hoon,
tum sahi ho kya..??

-



ಎದೆಯಲ್ಲಿ ಸುಡುವ ಬೆಂಕಿಯ ಆರಿಸಲು ಅಳುತ್ತಿರುವೆ,
ಸತ್ತ ನೆನಪುಗಳ ಮರೆಯಲಾಗದೆ ದಿನವೂ ನರಳುತ್ತಿರುವೆ..

-



ನನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಭರದಲ್ಲಿ
ನನ್ನ ಆತ್ಮಗೌರವ ಆತ್ಮಹತ್ಯೆ ಮಾಡಿಕೊಂಡಿತ್ತು..
ಯಾರ ಮಾತಿಗೂ ಸೋಲದ ನನ್ನ ವ್ಯಕ್ತಿತ್ವ ನಿನ್ನ ಕಾಲಡಿಯ ಧೂಳಾಗಿತ್ತು..

-



ನನ್ನೆಲ್ಲಾ ನೋವುಗಳನ್ನು ಒಂದು ಕ್ಷಣ ಮರೆತುಬಿಡುವೆನು
ನೀ ಕೊಡಿಸುವ ಉಡುಗೊರೆಗೆ..
ಉಳಿದ ಆಸೆಗಳನ್ನು ಬರೆದು ಇಡುವೇ ನಿನ್ನ ಪಾದದ ಕೆಳಗೆ..

-



ಮಳೆ ಇಷ್ಟ ಎನ್ನುತ್ತಿಯ
ಮಳೆಯಲ್ಲಿ ನೆನೆಯಲು ಹೆದರುತ್ತಿಯ..
ಅಬ್ಬಾ ಬಿಸಿಲು ಬೇಕು ಎನ್ನುತ್ತೀಯ,
ನೋಡಿದ್ರೆ ನೆರಳಿರುವ ಜಾಗದಲ್ಲಿ ನಡೆಯುತ್ತಿಯ..
ಚೆಂದ ಗಾಳಿ ಎನ್ನುತ್ತಿಯ,
ಕಿಟಕಿ ಬಾಗಿಲು ಮುಚ್ಚುತ್ತಿಯ..
ನೀನಂದ್ರೆ ನನಗೆ ಪ್ರಾಣ ಕಣೇ ಎನ್ನುತ್ತಿಯ,
ಆರು ತಿಂಗಳು ಮಾತನಾಡುವುದು,
ಮೂರು ತಿಂಗಳು ಮಾತು ಬಿಡ್ತಿಯ..
ಹೇಗೆ ಅರ್ಥ ಮಾಡಿಕೊಳ್ಳಲಿ ನಾನು
ಇತ್ತೀಚೆಗೆ ನಿನ್ನ ವರ್ತನೆಯಿಂದ
ನನ್ನಲ್ಲಿ ತುಂಬಾ ಆವರಿಸಿದೆ ಭಯ..

-



ಹೊರಗೆ ಧಗಧಗಿಸುವ ಬಿಸಿಲಿನ ಬೇಗೆ,
ದಟ್ಟವಾದ ನೋವಿನ ಕಾರ್ಮೋಡ ಮನದೊಳಗೆ..
ದಗೆ ತಾಳದ ದೇಹ ಸುರಿಸಿರೆ ಬೆವರು,
ಮನದ ನೋವಿನ ಕಂಬನಿಗೆ ಕಂಗಳೇ ತವರು..
ಮಳೆಯಾದರೆ ಧರಣಿ ಆಗಬಲ್ಲದು ತಂಪು,
ಎಷ್ಟು ಅತ್ತರು ಮನದ ನೋವು ಆಗಲೊಲ್ಲದು ಮೂಲೆಗುಂಪು..

-



ನಮಸ್ಕಾರ..🙏
✍️ಉಸಿರು❤️ your quote ನಂಬರ್ 1 ಕನ್ನಡ ಆಪ್..
ಇಂದಿನ ಮನಸಿನ ವಾತಾವರಣದ ಮುಖ್ಯಾಂಶಗಳನ್ನು ಓದುತ್ತಿರುವವರು
ಸುನೀತಾಗೌಡ ಪಾಟೀಲ್..
ಎದೆಯಲ್ಲಿ ನೋವಿದ್ದು ಮನಸು ಮಡುಗಟ್ಟಿದ ವಾತಾವರಣವಿದೆ..
ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿದ್ದು
ಯಾವಾಗ ಬೇಕಾದರು ಭಾರಿ
ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ..
ಮಳೆ ನಿಲ್ಲುವವರೆಗೂ ದಯವಿಟ್ಟು ಹೊರಬರದೆ
ಗುಡುಗು ಮಿಂಚಿಗೆ ಮನಸು ಸಿಡಿಯದಂತಿರಲಿ
ಏಕಾಂತದಲ್ಲಿ ಸುರಿಸಿದ ಕಣ್ಣೀರು
ದಯವಿಟ್ಟು ಯಾರಿಗೂ ಕಾಣದಂತಿರಲಿ..
ಮನಸು ಹಗುರವಾದ ಬಳಿಕ ನಿತ್ಯದ
ಬದುಕಿನತ್ತ ಜೀವ,ಜೀವನ ಸಾಗಲಿ..
ಇಂದಿನ ಮುಖ್ಯಾಂಶಗಳು ಮುಗಿದಿದೆ..ನಮಸ್ಕಾರಗಳು..

-



ಬಾಳಿಗೊಂದು ನಕ್ಷೆಯ ಗೀಚಲು
ಬಾಳ್ವೆಗೊಂದು ಗುರಿಯ ತೋರಲು
ಸಂಗಾತಿಯು ಬೇಕು
ಅವನ ಜೊತೆ ಕೊನೆಯವರೆಗೂ ಇರಬೇಕು..

ಮನಸಿಗಿಷ್ಟು ಪ್ರೀತಿಯ ತಿಳಿಸಲು
ಮೌನಕೆ ಮಾತು ಕಲಿಸಲು
ಸಂಗಾತಿಯು ಬೇಕು
ಅವನೊಂದಿಗೆ ಜೀವನ ಸಾಗಬೇಕು..

ಏಕಾಂತದ ಬಂಧನವ ಬಿಡಿಸಲು
ಅರೆ ನಿದ್ರೆಗೆ ರೋಮಾಂಚನವ ನೀಡಲು
ಸಂಗಾತಿಯು ಬೇಕು
ಅವನನ್ನು ಅಪ್ಪಬೇಕು..

ಏತಕ್ಕಾಗಿ ಈ ಯೌವ್ವನ
ಅವನಿಗೋಸ್ಕರ ಅಲ್ಲವೇ
ಏತಕ್ಕಾಗಿ ಈ ಜೀವನ
ಅವನ ಬರುವಿಕೆಗಾಗಿ ಅಲ್ಲವೇ..

-



ವಯಸ್ಸಲ್ಲದ ವಯಸ್ಸಲ್ಲಿ
ಹೆಗಲೇರಿ ಜವಾಬ್ದಾರಿಗಳು
ಜೊತೆಯಾದವು..
ಕೈ ಬೀಸಿ ಕರೆದ
ಜವಾಬ್ದಾರಿಯ ಸಂಕಟಕೆ
ಕಂಡ ಕನಸುಗಳೆಲ್ಲವು
ಧೂಳಿಪಟವಾದವು..
ನೋವುಗಳೇಲ್ಲ ಭುಜದ
ಮೇಲೆ ಕೈಯಿಟ್ಟು
ಬಾರೆ ಸುನೀತಾ
ನಾವಿದಿವಿ ಎಂದವು..
ಸದಾ ನಗುವಂತೆ
ನಾಟಕ ಮಾಡುವುದ
ಹೇಳಿಕೊಟ್ಟವು..

-


Fetching ಸುನೀತಗೌಡ Quotes