ನಮ್ಮ ಸುತ್ತಲಿನವರ ಜೊತೆ ನಾವು ಹೇಗೆ ಇರ್ಬೇಕು ಅಂದ್ರೆ,
ನಾಲಿಗೆ ಮತ್ತೆ ಹಲ್ಲಿನಂತೆ. ಅಷ್ಟು ಹಲ್ಲುಗಳ ನಡುವೆ ಒಂಟಿಯಾಗಿ ಇದ್ದರು ಅವುಗಳ ಮಧ್ಯೆ ಸಿಲುಕಿ ನರಳದಂತೆ.-
ಕಿಟಕಿಯಾಚೆಗಿನ ಜಗತ್ತು ಸುಂದರವಾಗಿಯೇ ಕಾಣುವುದು ಅದರೊಳಗಿನ ನೋವು ನಾಲ್ಕು ಗೊಡೆಗಳ ನಡುವೆಯೇ ರೋಧಿಸುವುದು ಯಾರಿಗೂ ಕಾಣದಂತೆ.
-
ಇದ್ದಾಗ ಹೇಗಿದ್ದೀಯ ಎಂದು ಕೇಳದವರು
ಸತ್ತಾಗ ಶವಕ್ಕೆ ಹೆಗಲು ಕೊಡಲು ಬರುವರು..
ಮುಂದೆ ಬಂದಾಗ ಒಂದು ಸಣ್ಣ ನಗೆಯನ್ನು ಬೀರದವರು
ಉಸಿರಿಲ್ಲದ ದೇಹ ನೋಡಲು ಹೂವಿನ ಹಾರದೊಂದಿಗೆ ಬರುವರು..
ಕಷ್ಟದ ದಿನಗಳಲ್ಲಿ ಬೆನ್ನ ಹಿಂದೆ ಮಾತನಾಡಿದವರು
ಸತ್ತಾಗ ಅವನ ಗುಣಗಳ ಗುಣಗಾನ ಮಾಡಿ ಮರುಗುವರು...5
ಅದೇ ದೇಹ ಶವಯಾತ್ರೆ ಹೊರಟಾಗ ನಾಲ್ಕು ಹೆಜ್ಜೆ ಸ್ಮಶಾನದವರೆಗೂ ಬರುವ ಜನರು
ಉಸಿರಿದ್ದಾಗ ನೋಡಿದರೆ ಮಾತನಾಡಿಸಬೇಕೆಲ್ಲ ಎಂದು ತಿರುಗಿ ನೋಡದಂತೆ ಹೋಗುವರು..
ಏನು ಉಳಿಯುವುದು ಶವವಾದ ಈ ದೇಹ ಅಗ್ನಿ ಸ್ಪರ್ಶದಿ ಸುಟ್ಟು ಬೂದಿಯಾದ ಮೇಲೆ ಏನು ಇಲ್ಲ,
ಬಿಟ್ಟುಬಿಡಿ ಒಮ್ಮೆ ನಿಮ್ಮ ಬಿಗುಮಾನ ನಗುವಲ್ಲಿ ಅಪ್ಪಿಬಿಡಿ, ಅವನು ಸೋತಾಗ ನಾಲ್ಕು ಮಾತಾಡಿ,
ಈ ಉಸಿರು ಯಾವಾಗ ದೇಹ ತೊರೆಯುವುದೋ
ಬಲ್ಲವರಾರು.........-
ಗೆಳತಿ ನನ್ನಿಂದ ದೂರಾದೆ
ಏಕೆ...? ಒಲವು
ಒಮ್ಮೆಲೆ
ಕೈಜಾರಿದ್ದೇಕೆ.., ಕನಸುಗಳು ಸೋತು
ಸೊರಗಲೇಕೆ... ಹೃದಯ
ನೋವಲ್ಲಿ
ನಲುಗುವಾಗ ಬದುಕು ಸಾಗಲಾರದೆ
ಮುಳುಗಿಸುತ್ತಿದೆ ತನ್ನ
ನೌಕೆ...-
ಮರೆತರಷ್ಟೇ ಅಲ್ಲವೇ ಮರುಕಳಿಸಲು ನೆನಪಾಗಿ
ಮನದಲ್ಲಿ ಉಳಿದಿವೆ ಅನುಕ್ಷಣವು ಜೊತೆಯಾಗಿ....
ಸಿಹಿ ಕಹಿಗಳ ಅನುಭವಗಳ ಜತೆಗೆ
ಬೆರೆತಿಹವು ರಸದೌತಣದಂತೆ ಬಾಳ ಕತೆಗೆ...
ಇರಲೇ ಬೇಕು ಬಾಳ ಲತೆಯಲಿ
ಮರೆಯಬೇಕೆಂದರೂ ಮರೆಯಲಾಗದೆ
ಉಳಿದ ಅದೆಷ್ಟೋ ನೆನಪುಗಳು ನೆನಪಾಗಿ .....
-
ಪ್ರಾಮಾಣಿಕ ಬದುಕನ್ನು ಜನರು ಗುರುತಿಸದೆ ಇರಬಹುದು ಆದರೆ, ನಾವು ಮಾಡುವ ಕರ್ಮ ಎಂತದ್ದು ಎಂಬುದನ್ನು ಆ ದೇವ್ರು ಗುರುತಿಸಬಲ್ಲ.
-
ನಿನ್ನ ಆಗಮನಕ್ಕಾಗಿ ಸಿಂಗಾರಗೊಂಡಿಹೆನು ಇನಿಯಾ...
ಕಂದೀಲು ಬೆಳಕಲ್ಲಿ ಶುರುವಾಗಲಿ ಹೊಸ ಅಧ್ಯಾಯ....
ಕಂಗಳ ಮಂಜಾಗಿಸಿ ಅರಳಲಿ ಒಲವು,
ಒಲವ ಉದ್ವೇಗದಿ ನಲಿಯಲಿ
ತನುವು....
ಎಲ್ಲೆಯೇತಕೆ ಉತ್ತುಂಗಕ್ಕೆರಿ ಉನ್ಮಾದದಿ ತನು ನಲಿಯುವಾಗ ,
ಬೇಡ ಯಾವುದೇ ಅಂಜಿಕೆ ನೀ ನನ್ನಲ್ಲಿ ಪೂರ್ಣ ಬೆರೆತಿರುವಾಗ....-
ಕಹಿಯಂಚಿನಲಿ ಶುರುವಾಗಲಿ ಹೊಸ ಅಧ್ಯಾಯ,
ಸಿಹಿ ತುಂಬಲಿ ಬಾಳಲ್ಲಿ ಹೊಸ ಭರವಸೆಯ..
ಸಿಹಿ ಕಹಿಯ ಸಮನಾಗಿ ಸ್ವೀಕರಿಸಿ
ಯುಗದ ಆದಿಗೆ ಹೊಸ ಹೆಜ್ಜೆ ಇಡೋಣ.
ಬದುಕಿನ ಏಳಿಗೆಗೆ ನಾಂದಿ ಆಡೋಣ.
ಈ ಬಾಳಲ್ಲಿ ಹೊಸ ವರುಷದ ಹರುಷ
ಕಳೆಯದಿರಲಿ ನಿಮಿಷ.
ಬೇವಿನಂತ ನೋವುಗಳ ನಡುವೆ
ಬೆಲ್ಲ ದಂತ ನಲಿವು ಜೊತೆಗಿರಲಿ.
ಮಾವು ಬೇವು ಚಿಗುರಿ ನಕ್ಕಂತೆ
ನಿಮ್ಮ ಮೊಗದಲ್ಲಿ ಸದಾ ಸಂತಸ ನಲಿಯಲಿ..
ಯುಗಾದಿಯ ಹಾರ್ದಿಕ ಶುಭಾಶಯಗಳು.😊🌹-