ಯುವ ಮನಸ್ಸಿನ ಹುಮ್ಮಸಿರಲಿ
ಗಾಳಿಯ ಹಾಗೆ ಮನ ಹಗುರಿರಲಿ
ದಿಗಂತದಷ್ಟು ವಿಶಾಲ ವಿಚಾರವಿರಲಿ
ವಿಶ್ವಾವಸು ನಾಮ ಸಂವತ್ಸರ
ಹೊಸ ವರುಷದ ಈ ಯುಗಾದಿಯು
ನಿಮಗೂ ನಿಮ್ಮ ಹಿತೈಷಿಗಳೆಲ್ಲರಿಗೂ ಶುಭತರಲಿ.-
ಪ್ರೀತಿ ಪ್ರೇಮದ ಬರಹಗಳ ಕಡೆ ತುಸು ಒಲವು ಹೆಚ್ಚು
ಇದ ನೋಡಿ ನನ್ನ ಪತಿರಾಯ ... read more
ನರಕವನು ಅಪ್ಪಿರುವೆ ನೀ ಜೊತೆ ಇರುವ ಕಾರಣ
ಅಪರೂಪದ ನಿನ್ನೊಲವೆ ನನ್ನ ಬಾಳಿಗೆ ತೋರಣ
ನಿನ್ನ ಬಿಡುವಿಲ್ಲದ ಕೆಲಸದಲ್ಲಿ ನನ್ನ ನೆನಪು ಬಾರದು
ನಿನ್ನ ಮಾತಿಗೆ ಹರ್ಷಿಸಲು ಕಾಯುವುದು ನನ್ನ ಕರಣ
ನಿನ್ನ ಮುಗ್ಧ ಮೊಗದ ಮಗುವಿನಂತಹ ನಗು ಚಂದ
ನಿನ್ನ ಪೇಚಾಟ ಹಿಡಿಸುವುದು ನನ್ನ ಮಾತಿಗೆ ಗ್ರಹಣ
ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ
ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ
ಯಾರೇನೇ ಹೇಳಲಿ ನೀ ನನ್ನ ಸರ್ವಸ್ವ ಎಂದೆಂದಿಗೂ
ನಿನ್ನಲ್ಲಿರುವ ನಂಬಿಕೆ ಭರವಸೆ ಆಗದೆಂದೂ ಹರಣ
ವಸ್ತ್ರ ಒಡವೆಗಳ ಆಸೆ ನನಗಿಲ್ಲ ನಿನ್ನೊಲುಮೆ ಸಾಕಲ್ಲ
ನಿನ್ನೊಂದಿಗಿನ ಕ್ಷಣಗಳು ನನ್ನ ಜೀವಕೆ ಆಶಾ ಕಿರಣ
ಮಲ್ಲಿಗೆ ಸುಮದ ಪರಿಮಳ ಭಗವಂತನಿಗೆ ಮೀಸಲು
ದೇವರಲಿ ಮೊರೆಯಿಷ್ಟೇ ನಿನ್ನ ಮಡಿಲಲ್ಲಿರಲಿ ಮರಣ.-
ಬಹಳ ಇಷ್ಟ ನೋಡುವುದು ನಕ್ಷತ್ರಗಳ
ಕಾರಣವಿಷ್ಟೇ
ನನ್ನಲ್ಲಿ ಸಂವಾದಿಸುವುದು
ನೀ ಅಲ್ಲಿ ಸಲ್ಲಾಪಿಸಿದ ನಕ್ಷತ್ರಗಳು.-
ಹಣದಿಂದ ಬರುವುದಲ್ಲ,
ವಸ್ತುಗಳಲ್ಲಿ ಕಾಣುವುದಲ್ಲ,
ಶಾಂತ ಮನ,
ನೆಮ್ಮದಿಯ ದಿನ,
ಇದ್ದಲ್ಲಿ ಸಿಗುವುದೇ ಸಂತೋಷ.-
ತಾವರೆ ಮೇಲಿನ ನೀರಿನಂತಿರಲಿ ದೃಷ್ಟಿ
ಪಕ್ಷಪಾತವಿಲ್ಲದ ಪ್ರಕೃತಿಯಂತಿರಲಿ ಕಿವಿ
ಸೂರ್ಯ ಚಂದ್ರರಂತಿರಲಿ ಕೃತಿ-
ಹೆಂಗರುಳಿನ ಪುರುಷನವನು
ಅನ್ಯ ಹೆಂಗಸರ ನೋವಿಗೆ ಮರುಗುವನು
ತನ್ನ ಸತಿಯ ನೋವು ಸಹಜ,
ಅತಿಯಾಲೋಚನೆ ಎನ್ನುವನು.
ಪುರುಷ ದ್ವೇಷಿ ಅಲ್ಲ ಇವಳು
ಪರ ಪುರುಷರ ಪರೋಪಕಾರ ಶ್ಲಾಘಿಸುವಳು
ತನ್ನ ಪತಿಯ ಸಹಾಯ ಗುಣಕೆ
ಪ್ರಚಾರ ಪ್ರಿಯ ಎನ್ನುವಳು.
ಅನ್ಯರ ಸೊಸೆ ಮುಗ್ಧೆ ಮಿತ ಭಾಷಿಣಿ ಎನ್ನುವ ಅತ್ತೆ
ತನ್ನ ಸೊಸೆಯ ವಿಧೇಯತೆಗೆ ಪೆದ್ದು
ಯಾರೊಂದಿಗೂ ಬೆರೆಯದ ಮೂದೇವಿ ಎನ್ನುವಳು
ಅಳಿಯ ಮಗಳ ಓಲೈಸಿದರೆ ಪ್ರೀತಿ ಎನ್ನುವ ಮಾವ
ಮಗ ಸೊಸೆಯ ಅಕ್ಕರೆಸಿದರೆ ಗುಲಾಮ ಎನ್ನುವನು
ಜಗದ ನಿಯಮವೇ ಇದೇನಾ ಗಾಲಿಬ್
ಪರರ ಅವಗುಣಗಳೂ ಮೆಚ್ಚಿ
ತಮ್ಮವರ ಸುಗುಣಗಳು ಕಾಣದ
ಜಾಣ ಕುರುಡರೆ ಹೆಚ್ಚು.-