Sujatha Gupta   (Sujatha)
585 Followers · 213 Following

Joined 7 August 2018


Joined 7 August 2018
7 APR AT 20:47

ಶೀರ್ಷಿಕೆ : ಗೆಲುವಿನ ಹಾದಿ
ಕಂಡ ಕನಸು ಸಾಕಾರಗೊಳಿಸೊ ಛಲವಿರಲಿ
ಛಲವಿದ್ದರೆ ದಿಟದೆ ಗೆಲುವುಂಟು ಗೆಳೆಯಾ
ಗೆಲುವಿನ ಬಾಳಿಗೆ ಚೇತೋಹಾರಿ ಚೆಲುವುಂಟು
ಚೆಲುವಿನ ಬಾಳಿಗೆ ಕೆಚ್ಚೆದೆಯ ನಂಟುಂಟು.

ಸಾಧನೆಯ ಹಾದಿ ಅಲ್ಲವಲ್ಲ ಹೂ ಪಥ
ಇರಲಿ ಕಂಟಿ ಸರಿಸಿ, ಸುಮ ಹಾಸೋ ಮತ
ಸ್ವೇದ ಹರಿಸುವ ದೃಢ ಚಿತ್ತವಿರಲು ಸತತ
ಸವೆಸುವೆ ಮಾರ್ಗ ಸಫಲತೆಯ ಅಪ್ಪುತ.

ಅಜ್ಞನಾಗದಿರು ನೀ ಸುಗುಮದಲಿ ಸಾಗುವಾಗ
ಜಾಣನಾಗು ವಿಘ್ನಗಳ ಸರಮಾಲೆ ಬೇಧಿಸುವಾಗ
ಆತ್ಮನಿರ್ಭರವಿರೆ ಸೋಲಿಗೆ ವಿರಾಮವಾಗ
ವಕ್ರ ಹಾದಿಯ ಗೆಲುವು ಅಂತರಂಗಕೆ ಅಹಿತವಾಗೆ.

ಕನಸಿಗಿಲ್ಲ ರೆಕ್ಕೆಗಳು ಗುರಿಯ ಸ್ಪರ್ಶಕೆ
ಪರಿಶ್ರಮದ ಬೆನ್ನೇರು ಸತ್ಫಲದ ಗ್ರಹಣಕೆ
ಛಲದ ರುಧಿರ ಹರಿಯಲಿ ದಿಗ್ವಿಜಯಕೆ
ದಿಟ್ಟೆಜ್ಜೆಯ ಅಡಿಯಿಡು ಮುನ್ನಡೆಗೆ.

ಸೋತ ಹೆಜ್ಜೆಗಳಲಿ ಬಲ ತುಂಬಿ ಧೀಮಂತನಾಗು
ದಾರಿಗಡ್ಡಗಟ್ಟೊ ಧೂರ್ತರ ಪಾಲಿನ ಧುರಂಧರನಾಗು
ಆಲಸ್ಯಕ್ಕೆಡೆಗೊಡದೆ ಏಕಾಗ್ರ ಚಿತ್ತನಾಗು
ಅರಸಿ ಬಂದ ಗೆಲುವಿಗೆ ಹರುಷದೆಒಡೆಯನಾಗು.

-


7 APR AT 20:36

💚ಪುಟ್ಟ ಅಭಿಯಂತರ 💚

ಸೃಷ್ಟಿಯ ವಿಸ್ಮಯವೇ ಹಕ್ಕಿಯ ಈ ಗೂಡು
ನಿಸರ್ಗದಲೇ ಸೊಗಸು ಹಕ್ಕಿಯ ಈ ಬೀಡು.

ಎರಡೂ ಕಣ್ಣರಳಿಸಿ ಈಗಲೆ ನೋಡು
ಕಣ್ಮನ ಸೆಳೆಯುವ ವಿಹಗದ ಗೂಡು.

ಹುಲ್ಲು ಕಡ್ಡಿಯಲಿ ಹೆಣೆದಿದೆ ಗೀಜಗ ಪಕ್ಷಿ
ನೋಡಲು ಸಾಲದು ನಮ್ಮೀ ಎರಡು ಅಕ್ಷಿ.

ಲೀಲಾಜಾಲದ ಅದ್ಭುತ ಈ ಕಲೆಯು
ಅವುಗಳ ಬಾಳ್ವೆಗೆ ಸುಂದರ ನೆಲೆಯು.

ಮೆತ್ತನೆ ಹಾಸುಗೆಯು ಗೂಡಲಿ ಉಂಟು
ಸುತ್ತಲು ಹುಲ್ಲಿನ ಭದ್ರ ಗೋಡೆಯು ಉಂಟು.

ಬಲು ಬಲು ಸೋಜಿಗವು ಈ ಮಾಡ
ಎಂದೂ ಇದರ ಗೋಜಿಗೆ ಹೋಗ ಬೇಡ .

-


7 APR AT 19:57

ಶೀರ್ಷಿಕೆ : 🌹ನನ್ನ ಭಾರತ🌹
ನಮ್ಮದು ನಮ್ಮದು ಈ ದೇಶ ನಮ್ಮದು
ಭವ್ಯತೆಯ ಮೆರೆದ ಈ ಮಣ್ಣು ನಮ್ಮದು
ಸುಂದರ ಸುಂದರ ಈ ನುಡಿಮುತ್ತು ಸುಂದರ
ಬಂಧುರ ಬಂಧುರ ಈ ಭಾವ ಬಂಧುರ.

ಸೊಗಸಾಗಿ ಹರಡಿ ನಿಂತಿದೆ ಈ ನಾಡ ವೃಕ್ಷವು
ರೆಂಬೆಕೊಂಬೆಯಂತೆ ಚಾಚಿವೆ ಹಲವು ಧರ್ಮವು
ಉಲಿದಿವೆ ಹಲವು ಭಾಷೆಗಳ ಶುಕಪಿಕಗಳು
ಐಕ್ಯತೆಯ ಭಾವ ಮೆರೆದು ಹಾಡಿ ನಲಿದಿವೆ.

ಝುಳು ಝುಳು ಹರಿವ ಕಾವೇರಿ ಗಂಗೆ-ತುಂಗೆ
ಮಾರ್ದನಿಸಿ ಮೊರೆತಿವೆ ನಾಡ ಕೀರ್ತಿಯ
ಋಷಿವರಿಯರು ಜನಿಸಿದ ತಪೋಭೂಮಿಯು
ಆಲಿಸಿರಿ ವೇದಘೋಷಗಳ ನಿನಾದವು.

ಹಾರೋ ಹಕ್ಕಿಗೂ ಪ್ರಿಯವಂತೆ ಈ ಭಾರತ
ನರ್ತಿಸುವ ನವಿಲೂ ಮೆಚ್ಚಿದೆ ಈ ಭಾರತ
ನನ್ನ ನಿನ್ನ ಉಸಿರಿನ ಹೆಸರೇ ಈ ಭಾರತ
ಹೇಳು ನೀನೊಮ್ಮೆ' ನನ್ನ ಹೆಮ್ಮೆ ನನ್ನ ಭಾರತ' .

ಮೇಲಿಹನು ನಮ್ಮ ನಾಡ ಕಾಯ್ವ ದಾತಾರ
ಮೋದಿಯವರೇ ನಾಡ ಪ್ರಗತಿಯ ಕರ್ತಾರ
ನಾಡಿಗೆ 'ವಿಶ್ವ ಗುರು' ಪಟ್ಟ ತಂದ ನೇತಾರ
ನಾಡೆಂಬ ನಭದೆ ಹೊಳೆಯಲಿ ಈ ಸಿತಾರ.

-


2 APR AT 10:13


ಸಾಹಿತ್ಯ ಪ್ರಕಾರ: ಟಂಕಾ
🌸ದತ್ತ ಪದ: ಪರಿಸರ🌸

ನಿಸರ್ಗ ತೃಪ್ತಿ
ಪರಿಸರ ಚೆಲುವು
ಸ್ವಾಸ್ಥ್ಯ ದ್ವಿಗುಣ
ಕೊಡಲಿಯ ಎತ್ತಲು
ಖುಷಿ ಮಾರಣ ಹೋಮ .

🌸ಅಭಿವ್ಯಕ್ತಿ🌸

ಮಾತು ಸೋತಿದೆ
ಅಭಿವ್ಯಕ್ತಿ ಭಾವಕೆ
ನೇತ್ರ ಸಾಲದೇ;
ಕಂಗಳು ತುಟಿ ಬಿಚ್ಚೆ
ಮಾತು ನಿಬ್ಬೆರಗು.

-


21 MAR AT 11:02

ಶೀರ್ಷಿಕೆ : ನಿರೀಕ್ಷಣೆ
ಗೆಳತಿ..ನೀ ನನ್ನ ಜೀವದ ಒಡತಿ
ಮಾತೇ ಮೌನವಾಗಿ,ಮೌನವೇವೇದ್ಯವಾಗೆ
ಕರೆದು ನಿನ್ನ ನನ್ನೆದೆಯ ಪುಟವ ತೆರೆಯಲೇನು?
ಅನುರಾಗದೆ ಅಕ್ಕರೆಯ ಅಕ್ಕರವ ಬರೆಯುವೆಯೇನು..

ಗೆಳೆಯಾ..ನೀ ನನ್ನ ಭಾವದ ಒಡೆಯ
ಮಾತು ಮೌನವಾದರೂ,ಎದೆಯು ಪಿಸುಮಾತು
ಮರೆತರೂ
ನನ್ನ ಹೃದಯದ ಸ್ಪರ್ಶಕೇ, ನಿನ್ನ ಕಣ್ಣೋಟ
ಸಾಲದೇನು..ಹೇಳು ನೀನು..

ಮಂದಾರವಾಗಿ ಮುದದೆ ಅರಳಿ ನಗುವೆ
ನಿನಗಾಗಿ ಎದೆ ತುಂಬ ಜೇನಿಟ್ಟು ಕಾಯುವೆ
ಸೂರ್ಯಕಾಂತಿಯಾಗಿ ನಿನ್ನೆಡೆಗೆ ನೋಟ ನೆಟ್ಟುವೆ
ನಿರುಪಮ ಅನುರಾಗದ ಅನುಗ್ರಹಕೆ ನಿರುಕಿಸುವೆ.

ನೀನು ಹೂವಾದ ಮೇಲೆ ,ನಾನು ದುಂಬಿಯಾಗಲೇನು?
ಪರಿತೋಷದೆ ನಿನ್ನ ಪರಿಭ್ರಮಿಸಿ ಝೇಂಕರಿಸಲೇನು?
ನಿನ್ನೆದೆಯ ರಸಗವಳಕೆ ಅತಿಥಿಯಾಗಿ ಆಗಮಿಸಲೇ..
ಅನುದಿನದ ಸಂರಕ್ಷಣೆಗೆ ಭೃತ್ಯನಾಗಿ ಬರಲೇ..

ಕಡಲ ಚಿಪ್ಪಂತೆ ನಿನ್ನೆದೆ ತೆರೆದಿರಲು ಸಖಿ
ಸ್ವಾತಿಯ ಹನಿಯಾಗಿ ನಿನ್ನೆದೆಯ ಮುತ್ತಾಗುವೆ..
ನಿನ್ನ ಬಾಳಿನ ಜ್ಯೋತಿಯಾಗಿ ನಾ ಬರುವೆ ಸಖ
ಬಾಳ ಪಯಣದ ಜೊತೆಗಾರನಾಗಿ — % &





— % &

-


13 JAN AT 12:21

ಸ್ವಾರ್ಥದ ಕೆಸರಲಿ ಕಳೆದು ಹೋಗಬೇಡ
ಯಾರದೋ ನೋವಿನ ಹನಿಗಳ ಸುರಿದು
ಮೊಗದೆ ನಗೆ ಹೂವೆಂದೂ ಅರಳಿಸಬೇಡ
ಆಡುವ ದರ್ಪದ ಮಾತು ವ್ಯಕ್ತಿತ್ವಕ್ಕೆ ತೂತು.

ಅಂತರಾತ್ಮದ ಪರಮಾತ್ಮನ ನೆನೆ ನೆನೆದು ಬಾಳು
ಮೂರು ದಿನದ ಬಾಳಲಿ ಒಳಿತನೇ ಅರ್ಜಿಸು
ಮನವದು ಶಾಂತಿ-ನೆಮ್ಮದಿಯ ಗೂಡಾಗುವುದು
ನಿನ್ನಿಂದ ಪರರಿಗೂ ಸಂತಸವು ಕೈಗೂಡುವುದು.

-


11 JAN AT 19:15

ಮುಕ್ತಕ

ಹರಿದಿರಲು ಅಮೃತದಾ ವಾಹಿನಿಯು ಎದೆಯಲ್ಲಿ
ಹರಿಸುತಿರು ಎದೆಯಿಂದ ಪರರೆದೆಗೆ ಸತತ
ಮರಗೆಟ್ಟ ಮನುಜತನ ಮರುಚಿಗುರೆ ಸೌಖ್ಯವಿದೆ
ವರವಾಗಿ ನಿನ್ನನುಡಿ- ಪವನಪುತ್ರ

-


10 JAN AT 11:00


ಸಾಹಿತ್ಯ ಪ್ರಕಾರ: ಹನಿಗವನ

ಶೀರ್ಷಿಕೆ : ಅಕ್ಷರ ಪ್ರಣತೆ
ಸಾಕ್ಷಾತ್ಕಾರಿಸಿದಳು ವಾಗ್ದೇವಿಯಂತೆ ಸಾವಿತ್ರಿ ಪುಲೆಯು
ಅಕ್ಷರ ಕ್ರಾಂತಿಗೆ ಟೊಂಕ ಕಟ್ಟಿದಳು ನಾರಿ ಮಣಿ
ಸಾಕ್ಷರತೆಗೆ ಪೀಠವ ಹಾಕಿ ತಣಿದಳು ಆ ರಮಣಿ
ಅಕ್ಷಯವಾಯ್ತು ಜ್ಞಾನ ಸುಧಾ ಕ್ಷೀರ
ಸಾಕ್ಷರ ಮನುಜ ನಡೆದಿಹ ದಿವ್ಯ ಪಥದೆ
ರಕ್ಷಕನಾಗಲು ಭಾರತಾಂಬೆಯ ಹೊನ್ನ ಪ್ರಗತಿಗೆ.

-


10 JAN AT 10:56

ಹನಿಗವನ
ಶೀರ್ಷಿಕೆ : ವಧಿಸು ಸ್ವಾರ್ಥವ

ಸುಧಾರಿಸು ಸ್ವ-ವ್ಯಕ್ತಿತ್ವವ ಆತ್ಮಾವಲೋಕನದೆ
ಅಧಮನಾಗಿ ಜೀವಿಸಲು ಜನ್ಮ ವ್ಯರ್ಥವು
ಆಧರಿಸಿ ಜ್ಞಾನಯೋಗವ ಅರ್ಜಿಸು ಮೇರು ವ್ಯಕ್ತಿತ್ವ
ಅಧಿಪತ್ಯ ಬೇಡವೇ ಬೇಡ ಸ್ವಾರ್ಥ ಚಿಂತನೆಗೆ
ವಧಿಸಲು ಅರಿಷಡ್ವರ್ಗಗಳ ಅಧಿಕ್ಯತೆಯ
ಮಧುಸೂದನನ ಚರಣಗಳಲಿ ನೆಲೆ ಸ್ಥಿರವು.

-


14 DEC 2023 AT 21:02

घन संदेश
" वसुधैव कुटुम्बकम " का तत्व है
पूरी पृथ्वी एक परिवार में बाँधना ।
आओ भाई, कदम बढ़ाकर आओ बहिनें
सत्कर्तव्य पालन करने कमर कसके आओ।

समानता व भाईचार का संदेश देता है
दया की धारा बहाने की प्रेरणा देता है
जाति की दीवार तोडने का पाठ पढाता है
बेहतर दुनिया के निर्माण का आदेश देता है।

सृष्टि के अचर-सचर सदैैव कर्मनिरत है
तो तुम क्यों कामचोर बन बैठा है ?
माता मही से उऋण होने का गाँठ बाँध लो
कार्योन्मुख होकर लक्ष्य की ओर बढ चलो ।

-


Fetching Sujatha Gupta Quotes