Sudharani  
1.3k Followers · 4 Following

read more
Joined 30 December 2019


read more
Joined 30 December 2019
8 APR 2021 AT 21:04

ಪ್ರತಿಕ್ಷಣವೂ ನೀ ಕೊಡಬೇಕು ಆದ್ಯತೆ,
ನಿನ್ನ ಪ್ರತಿಫಲಕ್ಕೆ ಸಿಗುವುದು ತಕ್ಕ ಮಾನ್ಯತೆ,
ನಿನ್ನ ತಾಳ್ಮೆಯ ಅಮೂಲ್ಯ ಕೋಟೆಗಿರಲಿ ಭದ್ರತೆ,
ಸದಾ ಸಾಗುತಿರಲಿ ವಿಜಯದ ಪತಾಕೆ ಇರದೇ ಖಿನ್ನತೆ.
ಆತ್ಮಸ್ಥೈರ್ಯದ ಮುಂದೆ ಎಲ್ಲವೂ ಫಲಿಸುವುದು ಸಾಧ್ಯತೆ,
ಸ್ಫೂರ್ತಿಯಾಗಿದೆ ಕಾರಣವಿಲ್ಲದೆ ನಿಮ್ಮ ಕವಿತೆ.

-


18 DEC 2020 AT 20:12

ಬೆತ್ತಲೆ ಕನಸ್ಸು ಕಾಣುವ ಕಣ್ಣುಗಳಿಗೆ,
ಬತ್ತಿಹೋಗುತ್ತಿರುವ ಬದುಕು ತಿಳಿಯುವುದಿಲ್ಲ.

ಗುಪ್ತವಾಗಿ ಗರಿಬಿಡುವ ಕಾಮದ ಕಲ್ಪನೆಗೆ,
ಗುರಿಸಾಧನೆಯ ಗಮ್ಯತೆ ನೆನಪಾಗುವುದಿಲ್ಲ.

ಕ್ಷಣದ ಆಸೆಯ ಅರಸುವ ಅಜ್ಞಾನಿಗಳಿಗೆ,
ಕ್ಷಿಣಿಸುತ್ತಿರುವ ಆಧ್ಯಾತ್ಮದ ಅರಿವಾಗುವುದಿಲ್ಲ.

ಸಿರಿವಂತಿಕೆಯ ಸುಖೋಪ ಭೋಗಿಗಳಿಗೆ,
ಸೃಷ್ಟಿಯ ಸಂಚಲನೆಯ ಸ್ಥಗಿತತೆ ಸಾಧ್ಯವಾಗುವುದಿಲ್ಲ.

ಅಹಂಕಾರದ ಅರಮನೆಯ ಅರಗಿಣಿಗಳಿಗೆ,
ಅನ್ನದ ಬಳಕೆಯ ಬೆಲೆಯು ಗೊತ್ತಾಗುವುದಿಲ್ಲ.

ಪುಣ್ಯ ಸಂಪಾದನೆಯ ನಿಜ ಅರ್ಥ ತಿಳಿಯದ ಮನುಷ್ಯನಿಗೆ,
ಪೂರ್ಣತೆಯಿಂದ ಪರಮಾತ್ಮನಲ್ಲಿ ಎಂದಿಗೂ ಲೀನವಾಗುವುದಿಲ್ಲ.

-


4 NOV 2020 AT 13:46

ನಾವು ಬರೀ ಪಾತ್ರಧಾರಿ,
ಏನು ಮಾಡೋದಕ್ಕೆ ಆಗೋಲ್ಲ ಹೆಚ್ಚುವರಿ,
ನಿಭಾಯಿಸಬೇಕು ನಮ್ಮ ಜವಾಬ್ದಾರಿ,
ಮಾಡಬೇಡ ನೀ ಹೆಚ್ಚು ಪತ್ತೇದಾರಿ,
ಹುಡುಕಬೇಕು ಸರಿಯಾದ ಕಾಲುದಾರಿ,
ಸಮಯಕ್ಕನುಗುಣವಾಗಿ ಬಾರಿಸುವುದು ರಣಭೇರಿ,
ನಡೆಯೋದಿಲ್ಲ ಸಮಯದ ಮುಂದೆ ನಮ್ಮ ಪಿತೂರಿ,
ಎಚ್ಚರ ಎಚ್ಚರ ಎಚ್ಚರ ಈ ಸಮಯವೆಂಬುದು ತುಂಬಾ ದುಬಾರಿ.

-


5 OCT 2020 AT 9:50

ಹುಳಿಯ ಅಂಶವಿಲ್ಲದೆ
ಹಾಲೊಡೆದು ಮೊಸರಾದಂತೆ,
ಮಳೆನಿಂದ ಭುವಿಯ ಮೇಲೆ
ಬಿರುಕೊಂದು ಬಿಟ್ಟಂತೆ,
ಚಿಗುರಿನಿಂದ ವೃಕ್ಷದಲ್ಲಿ
ಫಲವೊಂದು ಕೆಟ್ಟಂತೆ,
ಹಚ್ಚ-ಹಸಿರಾದ ಗಿಡದಲ್ಲಿ
ಹೂವೊಂದು ಬಾಡಿದಂತೆ,
ಸದೃಢ ಮನಸ್ಸಿನಲ್ಲಿ
ಸಾವೊಂದು ನೆಲಸಿದಂತೆ.

"ಮತ್ತೆ ಮೊದಲಿನಂತೆ ಆಗುವುದು ಕಷ್ಟ,
ಕೆಲವೊಮ್ಮೆ ಅಸಾಧ್ಯ ".

-


26 JUL 2020 AT 10:00

🇮🇳ಕಾರ್ಗಿಲ್ ವಿಜಯ ದಿವಸ(ಜುಲೈ 26)🇮🇳

ಅನೇಕ ಹುತಾತ್ಮರಿಗೆ,ನಮ್ಮ ದೇಶದ ಯೋಧರಿಗೆ ಶಿರಬಾಗಿ ನಮಿಸೋಣ 🙏:

ನಮ್ಮ ಭಾರತದ ಯೋಧರು,
ಅವಿಸ್ಮರಣೀಯ ಇತಿಹಾಸ ಸೃಷ್ಟಿಸುವರು,
ರಾಷ್ಟ್ರದ ಪ್ರೆಮತ್ವವನ್ನು ಮೆರೆಸುವರು,
ಹಗಲಿರುಳು ನಮಗೆ ರಕ್ಷಾ ಕವಚವಾಗಿ ನಿಂದಿಹರು,
ದೇಶವೆಲ್ಲಾ ಒಂದೇ ಪರಿವಾರವೆಂದು ಶ್ರಮಿಸುವರು,
ಪ್ರಜೆಗಳ ಸುಖ,ಸುರಕ್ಷತೆಗಾಗಿ ರಕ್ತಹರಿಸುವರು,
ತಲೆಗಳುರುಳಿದರೂ,ಕಗ್ಗತ್ತಲೆದುರಾದರೂ ಛಲಬಿಡದವರು,
ನರಕದ ಯಾತನೆಯಿದ್ದರೂ ಸ್ವಾರ್ಥತೆಯ ಮರೆತಿಹರು,
ಶತ್ರುಗಳ ಹೃದಯ ನಡುಗಿಸುವ ವೀರ ಪುರುಷರು,
ನಮ್ಮ ಭೂತಾಯಿಯ ರಕ್ಷಣೆ ಹೊತ್ತವರು,
ಬರಸಿಡಿಲೇ ಬರಲಿ, ಹಿಮ ಪರ್ವತವೇ ಉರಳಲಿ,
ಬಂಡೆಗಲ್ಲಿಗಿಂತಲೂ ಮೀರಿದ ಗುಂಡಿಗೆ ಉಳ್ಳವರು,
ಯುದ್ಧದಲ್ಲಿ ಜಯ-ಪರಾಜಯ,ಮರಣ,
ಲೆಕ್ಕಿಸದೆ ಮುನ್ನುಗ್ಗುವ ವೀರ ಮಹಾತ್ಮರು.

"ಪ್ರತಿಯೊಂದು ಕ್ಷಣ ನಾವು ಭಾರತ ಯೋಧರನ್ನು ಸ್ಮರಿಸಿದರೆ,ಪೂಜಿಸಿದರೆ ತಪ್ಪೇನಿಲ್ಲ,ನಾವು ಸ್ವತಂತ್ರವಾಗಿ ಉಸಿರಾಡುವುದು ಆ ಮಹಾ ಯೋಧರಿಂದಲೆ ಅಲ್ಲವೇ?"
🌸ಯುದ್ಧ ಭೂಮಿಯಲ್ಲಿ ಹೋರಾಡಿ,ವೀರ ಮರಣ ಹೊಂದುವ ಪ್ರತಿಯೊಂದು ಜೀವಿಯ ಆತ್ಮವು ಪರಮಾತ್ಮದಲ್ಲಿ ಲೀನವಾಗುವುದು🌸

-


13 APR 2020 AT 20:52

*ನನ್ನ 101ನೆ ಕವನ ನನ್ನ ತಾಯಿಗೆ ಸಮರ್ಪಣೆ *

ನಾನಾವ ಸಾಹಿತ್ಯ ಭಂಡಾರ ಪುಸ್ತಕ ಓದಿಲ್ಲ,
ನನಗಾವ ಸಾಹಿತಿಗಳ ಪರಿಚಯವೂ ಇಲ್ಲ,
ಆದರೂ ನನ್ನ ಕವನಗಳಿಗೆ ಅಂತ್ಯವಿಲ್ಲ,

#ದೈವೀ ಸ್ವರೂಪಿಯಂತಿರುವ ನನ್ನ ತಾಯಿಯೇ, ನನ್ನೆಲ್ಲ ಕವನಗಳಿಗೆ ಸ್ಫೂರ್ತಿ 🙏 #

ಅಂಬೆಗಾಲಿಡುವ ಮುನ್ನವೇ ಆಧ್ಯಾತ್ಮಿಕ ಸಸಿ ನೆಟ್ಟವಳು,
ಪುಟ್ಟ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಸಿದವಳು ,
ಸ್ವಲ್ಪ ಬಾಲ್ಯತನ ಬಂದಾಗ ಬದುಕಿನ ಬದಲಾವಣೆಗಳ
ಭಾವಚಿತ್ರ ತೋರಿದವಳು,
ಸಮಾಜದ ರೀತಿ ನೀತಿಗಳ ಅರಿವು ಮೂಡಿಸಿದವಳು,
ಸ್ವಲ್ಪ ಪ್ರಾಯಕ್ಕೆ ಬಂದಾಗ ಪುರಾಣ ಪುಣ್ಯಕಥೆಗಳನ್ನ ಹೇಳಲಾರಂಭಿಸಿದವಳು,
ಜೀವನದಲ್ಲಿನ ಸರಿ ತಪ್ಪುಗಳ ಸಮದೂಗುವಿಕೆ ಹೇಗೆಂದು ಕಲಿಸಿದವಳು,
ಎಷ್ಟೇ ಕಷ್ಟಗಳಿರಲಿ ಗುರಿ ತಲುಪುವವರೆಗೂ ನಿಲ್ಲದಿರೆಂದು ಪ್ರೇರೇಪಿಸಿದವಳು,
ನಾನೂ ಎಡವಿದ್ದಲ್ಲಿ ತಿದ್ದಿ ಸರಿದಾರಿಗೆ ತಂದವಳು,
ನಾನು ನನ್ನದು ಎಂಬ ಅಹಂಕಾರ ಬಿಟ್ಟಲ್ಲಿ ನಿನಗೆ ನೀನೆಂಬುವುದು ಅರಿವಾಗುದೆಂದವಳು.

"ತಾಯಿಯೇ ಮೊದಲ ದೇವರು ಎಂದು ಸುಮ್ಮನೆ ಹೇಳಿಲ್ಲ, ಅಂತಹ ದೇವರನ್ನ ಎಷ್ಟೇ ವರ್ಣನೆ ಮಾಡಿದರು ಸಾಲುವುದಿಲ್ಲ,
ಕಣ್ಣಿಗೆ ಕಾಣುವ ದೇವರು, ಗುರು, ಪ್ರಪಂಚ, ಪ್ರಕೃತಿ ಎಂದರೆ ಅದು ತಾಯಿ ಮಾತ್ರ,
ಮನದಲ್ಲಿ ಭಯ-ಭಕ್ತಿ, ಪೂಜ್ಯನೀಯ ಭಾವನೆ ಹುಟ್ಟುವುದು ತಾಯಿ ಎಂಬ ಪದ ಕೇಳಿದಾಗ "

*ಪ್ರತಿಯೊಂದು ಹೆಣ್ಣಿನಲ್ಲೂ ತಾಯಿಯ ಗುಣವಿರುವುದು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ *.

-


8 MAR 2020 AT 11:39

ಹೆಣ್ಣು ಹೆರುವ ತಾಯಿ ಆಗುತ್ತಾಳೆ,
ಹೆಣ್ಣು ಮನೆಯ ನಡುಸ್ತoಭ ಆಗುತ್ತಾಳೆ,
ಹೆಣ್ಣು ಗಂಡಿನ ಸರಿಸಾಟಿಯಾಗಿ ನಿಲ್ಲುತ್ತಾಳೆ,
ಹೆಣ್ಣು ಕರುಣಾಮಯಿ,ಹೃದಯವಂತೆ,
ಇಡಿ ಪ್ರಪಂಚದಲ್ಲಿ ಹೆಣ್ಣಿಗೆ ಇರುವ ಸಾಮರ್ಥ್ಯ ಯಾರಿಗೂ ಇರಲು ಸಾಧ್ಯವಿಲ್ಲ,
ಏಕೆಂದರೆ ಹೆಣ್ಣು ತಾಯಿ ಆಗುತ್ತಾಳೆ,ಗಂಡನಿಗೆ ಸಂಗಾತಿ ಅಲ್ಲದೆ ಎರಡನೇ ತಾಯಿಯೂ ಆಗುತ್ತಾಳೆ,
ಅಕ್ಕ, ತಂಗಿ ಪ್ರೀತಿ ವಾತ್ಸಲ್ಯ ತೋರುತ್ತಾಳೆ,
ಜೀವನಲ್ಲಿ ಎಷ್ಟೇ ಕಷ್ಟ ಬಂದರು ಮೆಟ್ಟಿ ನಿಲ್ಲುವ ಶಕ್ತಿ ಅವಳಲ್ಲಿದೆ, ತ್ಯಾಗಮಯಿ ಸ್ವರೂಪಿ ಹೆಣ್ಣು,
ಈ ಸಾಲುಗಳು ಈ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ,
ಪ್ರತಿ ದಿನದ ಪುಷ್ಪಾರ್ಚನೆ,

ನಮ್ಮ ಭಾರತದಲ್ಲಿ ಹೆಣ್ಣಿಗೆ ತುಂಬಾ ಮಹತ್ವವಾದ ಸ್ಥಾನವಿದೆ ಅದನ್ನು ಉಳಿಸಿಕೊಂಡು ಹೋಗೋಣಾ,

ಹೆಣ್ಣನ್ನ ಅವರು ಹಾಕಿಕೊಳ್ಳುವ ವಸ್ತ್ರಾಭರಣಗಳಿಂದ ಅಳಿಯಬೇಡಿ ಬದಲಾಗಿ ಅವಳಲ್ಲಿರು ವಿಶೇಷ ಗುಣಗಳನ್ನು ಅಳವಡಿಕೊಳ್ಳಿ.

"ಹೆಣ್ಣು ಮಕ್ಕಳ ಶೋಷಣೆ ತಡೆಯಿರಿ, ನಮ್ಮ ಸಂಸ್ಕೃತಿ ಉಳಿಸಿ "

"ಹೆಣ್ಣು ಒಂದು ಬೃಹತ ಶಕ್ತಿ
ಒಲಿದರೆ ನಾರಿ ಮುನಿದರೆ ಮಾರಿ"

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು 🙏

-


23 OCT 2021 AT 18:36

***ಚಿಟ್ಟೆಯ ಮನಸ್ಸು***

ಚಂಚಲ ಮನಸ್ಸಿನಲ್ಲಿ,
ಚಿಗುರೋಡೆದ ಪ್ರೇಮಾಂಕುರ
ಚಟಪಟಿಸಿದೆ ಹಗಲಿರುಳು....

ಗೊಂದಲ ಶುರುವಿನಲ್ಲಿ,
ಗಡಿಬಿಡಿಯ ಅವತಾರ
ಗುರುತಿಸಲಾಗದಂತಾಗಿದೆ ತಿರುವುಗಳು...

ಅಚಲ ನಂಬಿಕೆಯಲ್ಲಿ,
ಅರ್ಥವಿರುವುದು ಸಾವಿರ
ಅನುಮತಿಸುತಿದೆ ಕಾರಣಗಳು...

-


19 OCT 2021 AT 20:20

ಬೀಸೋ ಗಾಳಿ,
ತಂಪಾಗಿರಲಿ ಅಥವಾ
ಬಿಸಿಯಾಗಿರಲಿ...
ಅಮ್ಮ ನಿನ್ನ ಉಸಿರು ಮಾತ್ರ,
ನನ್ನ ಜೀವನಕ್ಕೆ ಆಸರೆಯಾಗಿರಲಿ...

-


19 OCT 2021 AT 19:59

**ಖುಷಿಯಾಗಿದೆ ಈ ಮನ **

ನೆಪವೊಂದೇ ಸಾಕು
ಕಣ್ಮುಚ್ಚಿ ನೆನೆಯೋಕೆ...

ಸಲಿಗೆಯೊಂದು ಬೇಕು
ಸನಿಹ ಬರುವುದಕೆ...

ಜಾಗರಣೆಗೆ ಜಾರಿದೆ
ಮನದ ಭಾವ...

ಮುಗಿಲಿಗೆ ಏರಿದೆ
ಸಂತಸದ ಜೀವ...

-


Fetching Sudharani Quotes