ಸಮಯವು ತಿರುಗಿ ನೋಡಿದೆ
ತಿರುಗಿ ನೋಡಲಾಗದ ಕ್ಷಣಗಳ
ಮತ್ತೆ ಮರುಕಳಿಸಿ..-
ಹಳೆಯದರಿಂದ ಹೊಸ ಸೃಷ್ಠಿ
ಹಳೆಯ ಬೀಜದಲ್ಲಿ
ಹೊಸ ಚಿಗುರಿನ ಸೃಷ್ಠಿ,
ತಾಯಿಯ ಗರ್ಭದಲಿ
ಹೊಸ ಜೀವ ಸೃಷ್ಠಿ,
ಹಳೆಯ ಮೋಡದಲಿ
ಹೊಸ ಮಳೆಯ ಸೃಷ್ಠಿ,
ಹಳೆಯ ಚಿಂತೆಗೆ
ಹೊಸತನದ ನಗುವ ಸೃಷ್ಠಿ,
ಹಳೆಯ ದಿನ ಕಳೆದರೆ
ಹೊಸ ದಿನದ ಸೃಷ್ಠಿ,
ಪ್ರತಿದಿನವೂ ಹಳೆಯದರಲ್ಲಿ ಹೊಸತನದ ಸೃಷ್ಠಿ...
-
ನಿಲುಕದ ಕೈಯ್ಯಲ್ಲಿ ನೀಗಿಸುವ ಆಸೆ ಏಕೆ?
ಬರಿದಾದ ಕನಸುಗಳ ನನಸಾಗಿಸುವ ಹುಚ್ಚು ಹಠವೇಕೆ?
ನೆಮ್ಮದಿಯ ಜೀವನ ನಟನೆಯಲಿ ಸಿಲುಕಿ ಮುಚ್ಚುಮರೆಯಾಯಿತೆ?
ಇರುವುದರೆಡೆಗೆ ತಿರುಗಿ ನೋಡದಂತೆ ದಂತಕಥೆಯಾಗುವುದೇ?
-
ನಾನು ಕನ್ನಡತಿ,
ನನ್ನ ಭಾಷೆ ಕನ್ನಡ
ನನ್ನ ನುಡಿ ಕನ್ನಡ
ನನ್ನ ಸಂಸ್ಕೃತಿ ಕನ್ನಡ
ನನಗೆ ಪ್ರೀತಿ ಕನ್ನಡ
ನನಗೆ ಉಸಿರು ಕನ್ನಡ
ನನಗೆ ಹೆಮ್ಮೆ ಕನ್ನಡ
ನಾವು ಕನ್ನಡಿಗರು,
ಕರುನಾಡ ಕನ್ನಡಿಗರು
ಕವಿಗಳ ತವರೂರಿನ ಕನ್ನಡಿಗರು
ಇತಿಹಾಸದ ಚರಿತ್ರೆಯಿರುವ ಕನ್ನಡಿಗರು
ನೀವು ಕನ್ನಡಿಗರು,
ಕಲಿಯಿರಿ ಕನ್ನಡ
ಕಲಿಸಿರಿ ಕನ್ನಡ
ನುಡಿಯಿರಿ ಕನ್ನಡ
ಎಲ್ಲಿಯೂ ಕನ್ನಡ..ಎಲ್ಲೆಲ್ಲಿಯೂ ಕನ್ನಡ ಕನ್ನಡ..
-ಸೌಂದರ್ಯ.
-
ಕನಸುಗಳು ಬೆನ್ಬಿಡದೆ ಕಾಡುವವು ಕಣ್ಮುಚ್ಚಿದಾಗೆಲ್ಲ
ಆದರೆ, ಮಾಯವಾಗುವವು ಕಣ್ತೆರೆದಾಗೆಲ್ಲ..!-
ನನಗೆ..!!
ಮೀನಾಗಿ ಈಜುವಾಸೆ,
ಸಮುದ್ರದ ಆಳವ ನೋಡುವೆ.
ಹಕ್ಕಿಯಾಗಿ ಹಾರುವಾಸೆ,
ಆಗಸದಲ್ಲಿ ತೇಲುವೆ.
ನವಿಲಾಗಿ ನಾಟ್ಯವಾಡುವಾಸೆ
ಗರಿಬಿಚ್ಚಿ ರಂಗುರಂಗಾಗುವೆ.
ಕೋಗಿಲೆಯ ಕಂಠವಾಗುವಾಸೆ,
ಕುಹೂ ಕುಹೂ ಎಂದು ಹಾಡುವೆ.
ಹಸಿರ ನೀಡುವ ಮರವಾಗುವಾಸೆ,
ಎಲ್ಲರಿಗೂ ನೆರಳ ನೀಡುವೆ.
ಬೆಳದಿಂಗಳ ಚಂದಿರನಾಗುವ ಆಸೆ,
ಮುದ್ದು ಮಕ್ಕಳ ಗೆಳೆಯನಾಗುವೆ.
ಮಗುವಾಗಿ ಮಲಗುವಾಸೆ,
ಅಮ್ಮನ ಮಡಿಲಲಿರುವೆ...
-
ಕೆಲವೊಮ್ಮೆ ದುಃಖಕ್ಕೂ ಕೂಡ ಗೊತ್ತಾಗುವುದಿಲ್ಲ ಎಷ್ಟು ನೋವಿದೆ ಎಂದು,
ಮರೆತು ಅಳುವುದನ್ನೇ ನಿಲ್ಲಿಸಿಬಿಡುತ್ತದೆ..!!-
ಹೊಂದಿಕೊಳ್ಳಬೇಕು..
ಜೀವನದ ಪ್ರತಿ ಹಂತದಲ್ಲೂ ನೋವುಗಳು ಸದಾ ನಮ್ಮನ್ನು ಕಾಡುತ್ತಿರುತ್ತವೆ ಆದರೆ ನಾವು ಮಾಡುವ ಕರ್ತವ್ಯ ತಪ್ಪಿದ್ದಲ್ಲ,ಮನಸ್ಸು ಶಾಂತವಾಗಲು ಬಯಸಿದಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಬಿಡಿ,ನಿಮ್ಮ ದೀಘ೯
ಉಸಿರಿನೊಂದಿಗೆ ಒಂದು ಬಾರಿ ಶ್ವಾಸವನ್ನು ಎಳೆದು ಬಿಟ್ಟುಬಿಡಿ...-