Soujanya Pratinidhi   (Shrishu)
36 Followers · 9 Following

read more
Joined 20 October 2019


read more
Joined 20 October 2019
26 JAN 2022 AT 23:26

ಸಾಗರಕೆ ಎಷ್ಟೇ ಮಳೆಯ ಹನಿ ಬಿದ್ದರೂ ಮುತ್ತಾಗಲು ಸ್ವಾತಿ ಮಳೆಯೇ ಬೇಕು...
ಕನಸಿಲ್ಲಿ ಎಷ್ಟೇ ಕಲೆ ಬಿಡಿಸಿದರೂ ಬಣ್ಣ ತುಂಬಲು ಅವನ ಬೆರಳುಗಳೆ ಬೇಕು....

-


24 JAN 2022 AT 21:51

ಅತ್ತಿರುವ ಕಣ್ಣಿಗೂ ಬತ್ತಿರುವ ಮೋಡಕ್ಕು ಅದೇನು ಅಂತರವಿಲ್ಲ...
ಕಣ್ಣೀರು ಮೋಸದ ಪ್ರೀತಿಯ ಕೊಡುಗೆ ಆದರೆ...
ಮಳೆನೀರು ತನ್ನವರೆ ನೀಡಿದ ಏಟಿನ ಕೊಡುಗೆ...

-


4 OCT 2020 AT 18:00

ಅನೇಕ ಬಾರಿ ಯೋಚಿಸುವೆ
ಅವರು ಹಾಗೆಯೇ ನೀನು ಹಾಗಾಗಬೇಡ ಎಂದು
ಆದರೆ ವಿಧಿಯು ಪುನಃ ಪುನಃ ಅದೇ ಸ್ತರಕ್ಕೆ ನನ್ನನ್ನು ಕರೆದೊಯ್ಯಲು ಬರುವುದು

-


3 MAY 2021 AT 19:42

ಹೇ ತಂಗಾಳಿಯೇ ಅದೇನು ಖುಷಿ ನಿನಗೆ ನನ್ನ ಕಾಡಿದರೆ
ಅವನಿಲ್ಲದ ಸಮಯವ ಮೂದಲಿಸಿ ಹೇಳಿದರೆ
ಹೇ ಮುಂಗುರುಳೇ ಹೀಗೇಕೆ ಕಣ್ರೆಪ್ಪೆಯ ಸವೆಸುವೆ
ಅವನ ಬೆರಳ ಸ್ಪರ್ಷವ ಕಂಡು ಹೀಗಾಗಿರುವೆ
ಮುದ್ದಾದ ಸೊಕ್ಕು ನಿನಗೆ ಅವನೆಂದರೆ

-


2 MAY 2021 AT 20:32

ಸಲುಗೆ ಬಯಸಿದೆ ಮನವು ನಿನಲ್ಲಿ ಇಂದು
ಹಲವು ಬಗೆಯ ನೋವ ನನಲ್ಲಿ ಹೇಳೆಂದು
ನಿನ್ನ ದುಃಖಕ್ಕೆ ಸಾಂತನ್ವದ ಹೆಗಲ ನೀಡೆಂದು
ನಿನ್ನ ಲಾಲಿಸಿ ಪಾಲಿಸಿ ಮಗುವಂತೆ ನೋಡಿಕೋ ಎಂದು

-


21 APR 2021 AT 17:31

ಎಂತ ಮಾಯಾಗಾರ ನೀನು ಓ ಮಾಯಾವಿಯೇ
ಕಷ್ಟವ ನೀಡಿ ನಿನ್ನ ಪಾದಗಳಲ್ಲಿ ಮೊರೆ ಇಡಿಸುವಂತೆ ಮಾಡುವೆ
ಸುಖದ ಹೊನಲು ನೀಡಿ ನಿನ್ನ ಕರುಣೆ ಎಂದು ನುಡಿಸಿಕೊಳ್ಳುವೆ
ಕಳ್ಳನೆಂದು ನಗುತ್ತಾ ಹೇಳಿಸಿಕೊಳ್ಳುವೆ ಎನ್ನ ಕಾಯುವ ರಕ್ಷಕನೆಂದು ಬಣ್ಣಿಸಿಕೊಳ್ಳುವೆ
ಮಗುವ ರೂಪದೀ ಲಾಲನೆ ಪಾಲನೆ ಮಾಡಿಸಿಕೊಂಡು
ತಂದೆ ತಾಯಿ ಸರ್ವವೂ ನೀನೇಯಾಗಿ ಜಗವ ಪೊರೆಯುವೆ
ಬಣ್ಣಿಸಲಿ ಹೇಗೆ ಏನೆಂದು ನಿನ್ನ ನಾ ಬರೆದ ಪ್ರತಿ ಪದದಲ್ಲೂ ನೀನೇ ಅಡಗಿರುವೆ
ನೀನೇ ಮೂಡಿಸಿದ ಈ ಸಾಲುಗಳಲ್ಲಿ ನೀನೇ ಆರ್ಥವಾಗಿರುವೆ
ನೀನೇ ಅನರ್ಥವಾಗಿರುವೆ
ಅರ್ಥ ಅನರ್ಥ ಎಂಬ ಜ್ಞಾನವ ನೀಡಿ ಎಲ್ಲವೂ ನೀನೇ ಎಂದು ಸಾರುವೆ
ಯಾವುದು ನಿನ್ನದಲ್ಲ ನನ್ನದು ಎಂದೂ ಕೂಡ ಹೇಳುವೆ
ಏನು ಮಾಯೆ ಕಲಿತಿರುವೆ ಓ ಮಾಯಾವಿಯೇ
ಹೇ ಮಾಯಾವಿಯೇ

-


20 APR 2021 AT 18:47

ಖಾಲಿ ರಸ್ತೆಯ ಮೇಲೆ ಇರುವ ಒಬ್ಬಂಟಿ ಕಲ್ಲು ನಾನು
ಕೆಲವೊಬ್ಬರು ತುಳಿದರೆ ಕೆಲವೊಬ್ಬರು ಒದೆಯುವರು
ಏನೆಂದು ಹೇಳಲಿ ಯಾರಿಗೆ ಹೇಳಲಿ ಈ ದುಃಖವ ನಾನು
ಕಲ್ಲಾಗಿ ಇರುವ ನನಗೆ ಭಾವನೆಗಳ ಆಸರೆ ಉಂಟೇನು...?!

-


9 APR 2021 AT 16:42

ಆ ಗುಡುಗು ಸಡಿಲು ನಿನ್ನ ಬಿಗಿದು ತಬ್ಬಿಕೊಳ್ಳುವಂತೆ ಮಾಡುತ್ತಿದೆ
ತಂಪಾದ ಗಾಳಿ ನಿನ್ನ ಬಿಸಿ ಉಸಿರಿನ ಚಿಲುಮೆಯ ಕಡೆ ನಡೆಸುತ್ತಿದೆ
ಎನ್ನ ಮುದ್ದು ಇನಿಯನ ಸ್ಪರ್ಶದ ಸವಿ ಪ್ರತಿ ಹನಿಯೂ ನೀಡುತ್ತಿದೆ
ಇನಿಯನ ಕಣ್ಣೋಟದ ಬಲೆಗೆ ಈ ಸೃಷ್ಟಿಯು ನನ್ನ ದೂಡುತ್ತಿದೆ
ಇನ್ನೂ ನಾಚಿಕೆಯ ಹಾದಿಯಲಿ ನಡೆಯಬೇಕೇ....?!
ನನ್ನ ಮನದರಸನ ಪ್ರೀತಿಯ ಸೆರೆಯಲ್ಲಿ ಬಂಧಿಯಾಗಬೇಕೆ....?!

-


9 APR 2021 AT 14:32

ನಿನ್ನ ಕೋಪ ಮೂಡಿಸುವುದು ಅಚ್ಚಳಿಯದ ಭಯಂಕರ ಕಂಪನವ
ಎನ್ನ ಹೃದಯವೇ ಕಿತ್ತು ಹೊರಬರುವುದು ಕಂಡಾಗ ಆ ರೋಷದಿಂ ತುಂಬಿದ ನಯನ ನರ್ತನವ
ಮಾತೂ ಹೊರಡದು ಇನ್ನೂ ಮೂಕಿಯಾಗಿಹೆ ನಾನು
ಪ್ರೀತಿಯ ಕಣ್ಣಲ್ಲಿ ಇನ್ನೂ ಕೋಪದ ತಾಂಡವ ಕಂಡೆ ನಾನು

-


24 MAR 2021 AT 17:17

ನೀ ನೀಡುವೆ ಕಣ್ಣೀರು ನೀ ನೀಡುವೆ ಪನ್ನೀರು
ನೀ ನೀಡುವೆ ಎನ್ನ ಬದುಕಿಗೆ ಉಸಿರು
ಉಸಿರು ಹಸಿರು ಎಲ್ಲ ನಿನ್ನ ದೇಣಿಗೆ ಆದೊಡೆ
ಇದು ನನಗೆ ಸೇರಿದ್ದು ಎಂದು ಹೇಗೆ ಹೇಳಲಿ ಜಗದೊಡೆಯ
ನಿನ್ನ ಅಧಿನತೆಯ ಕೈಗೊಂಬೆ ನಾನಾದಾಗ ಜಗವ ಗೆಲ್ಲುವೆ ಎಂಬುದು ಎಷ್ಟು ಸಮಂಜಸ

-


Fetching Soujanya Pratinidhi Quotes