ಯುಗಾದಿಯ ಹೆಸರೇ ಹೇಳುವಂತೆ
ಯುಗದ ಆದಿ.. ಹೊಸ ಸಂವತ್ಸರ
ಬ್ರಹ್ಮದೇವನು ಈ ದಿನದಂದೇ
ಸೃಷ್ಟಿ ಪ್ರಕ್ರಿಯೆ ಆರಂಭಿಸಿದ ಸುದಿನ....
ಸೂರ್ಯನ ಹುಟ್ಟು ಸಡಗರ ತಂದಿದೆ
ಪ್ರಕೃತಿಯ ಎಲೆ ಎಲೆಗೂ ಹಚ್ಚ ಹಸಿರು
ಬರಹದ ಬಳಕೆಗೆ ಶಬ್ದವೇ ಸಾಲದು
ಬೆಳಗನು ಬಣ್ಣಿಸಲು.....
ಬೇವು ಬೆಲ್ಲದ ಸಮಗಮದಲ್ಲಿ
ಖುಷಿಯನ್ನು ಅಂಚಿ ಪಡೆಯೋಣ
ತಿಳಿ ತಂಪಿನ ಬೆಳದಿಂಗಳಲ್ಲಿ
ನಾ ಮುಂದೆ ತಾ ಮುಂದೆ ಎಂದು
ಚಂದ್ರನ ಹುಡುಕೋಣ....
ಬಾನಂಗಳದಲ್ಲಿ ಕಂಡ ಚಂದ್ರನಿಗೆ
ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದು
ಬೇವು ಬೆಲ್ಲ ಅಂಚಿ ಶುಭ ಹರಸಿ
ಪ್ರೀತಿಯಿಂದ ಬಾಳೋಣ......
ಸಿಂಧೂ. ಎಮ್. ಸಿದ್ದಾಪುರ.
-