Shruthi Shindoli   (ಹೃದಯವಾಸಿ ( ಶೃತಿ. R. S))
506 Followers · 465 Following

read more
Joined 30 June 2018


read more
Joined 30 June 2018
4 MAY AT 15:53


ನಾನು
ಅವಳಂತೆ
ಅವನ ವೃತ್ತಿಗೆ ಸೋತವಳಲ್ಲ
ಅವನ ಪ್ರೀತಿಗೆ ಸೋತವಳು.

ನಾನು
ಅವಳಂತೆ
ಅವನು ಧರಿಸುವ 'ಸೈನ್ಯದ ಉಡುಗೆ' ಯನ್ನು ಪ್ರೀತಿಸಿದವಳಲ್ಲ
"ಸೈನ್ಯ"ವನ್ನು
ಅವನು ಸೇರುವ
ಮೊದಲಿನಿಂದ ಅಗಾಧವಾಗಿ ಪೂಜಿಸಿದವಳು..

-


2 MAY AT 17:33

ಬೇರೆಯವರ ಬಲವಂತಕ್ಕೆ ಮಣಿದು ತಮ್ಮ ಬದುಕನ್ನೇ ಹಾಳು ಮಾಡಿಕೊಂಡವರಿಂದ ಒಂದಷ್ಟು ಬದುಕಿನ ಪಾಠಗಳನ್ನ ಕೇಳಬೇಕು ಬಹುಶಃ ಆಗ ಅರ್ಥವಾಗಬಹುದು ಬದುಕೆಂದರೇನೆಂದು..

-


21 APR AT 8:13

ಇಲ್ದೇ ಇರೋದನ್ನ ಇದೆ ಅಂತ ತೋರ್ಸ್ಕೋಳೋದ್ರಲ್ಲಿ ಈ ಜನ ತೃಪ್ತಿ ಪಡ್ತಿದಾರೆ ಗುರು, ಅದೇನಂದ್ರೆ "ಪ್ರೀತಿ-ಗೀತಿ" ಇತ್ಯಾದಿ.

-


19 OCT 2024 AT 11:16

ಅವನು ಪ್ರೀತಿಸಿದ್ದು ನನ್ನನ್ನಲ್ಲ
ಅವನು ಒಂಟಿಯಾಗಿದ್ದಾಗ ನಾನು
ಅವನಿಗೆ ಕೊಟ್ಟಂತಹ ಸಮಯವನ್ನ..

-


14 OCT 2024 AT 10:13

*ಹೊಳೆ ದಾಟುವ ತನಕ ಅಂಬಿಗ ಗಂಡ, ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ.*

ನಮ್ ಜೀವನದಲ್ಲಿ ಹೀಗೆ ಆಗೋದು.. ನಮ್ಮ ಅವಶ್ಯಕತೆ ಇರೋವರ್ಗೂ ನಾವ್ ಒಳ್ಳೆವ್ರೆ ಆಗಿರ್ತೀವಿ, ಅವಶ್ಯಕತೆ ಮುಗಿತು ಅಂದ್ರೆ ನಮ್ಮಿಂದ ಅವರಿಗೆ ಆದ ಒಳ್ಳೇದೆಲ್ಲಾ ಮರ್ತ್ಹೋಗಿ ನಮ್ಮಲ್ಲಿರೋ ತಪ್ಪುಗಳನ್ನ ಹುಡುಕಿ ಎತ್ತಿ ಆಡ್ತಾರೆ..ಇಷ್ಟೇ ಮತ್ತು ಹೀಗೆ ನಮ್ಮ ಲೈಫಲ್ಲಿರೋ ಎಲ್ರೂ ಕೂಡ.. ನಮ್ಮನ್ನ ಅವಶ್ಯಕತೆಗೆ ಬಳಸ್ಕೊಂಡಿರೋದನ್ನ ಅವರು ಮರಿಬಹುದು ನಮ್ಗೆ ನೆನ್ಪಿರುತ್ತೆ ಅಲ್ವಾ?..ಇರಲಿ ಅದೆಲ್ಲ ಹೇಳ್ಕೊಳೋದ್ರಲ್ಲಿ ಯಾವ ಅರ್ಥನು ಇಲ್ಲ, ಪರವಾಗಿಲ್ಲ ಗುರು ನಾವ್ ಕೆಟ್ಟೋವ್ರು ಅದ್ಕೆ ನಾವ್ ಕೆಟ್ಟ ಟೈಮಲ್ಲೇ ಅವಶ್ಯಕತೆಗೆ ಬರೋದು ಅಂದ್ಕೋಳೋಣ. ಏನಂತೀರಾ?

-


30 SEP 2024 AT 14:07

ಯಾರೂ ನಿನಗೋಸ್ಕರ ಬರ್ತಾರೆ, ಬದಲಾಗ್ತಾರೆ ಅಂತ ನಿರೀಕ್ಷೆ ಇಟ್ಕೋಬೇಡ.. ಅವರು ಅವರಿಗೋಸ್ಕರ ಅವರಿಗೆ ಬೇಕಾದವ್ರಿಗೋಸ್ಕರ ಬದಲಾಗಿ ಹೋಗಿರ್ತಾರೆ, ಒಂದು ಹಂತದವರೆಗೆ ಇದ್ದ ನಿನ್ನ ಅವಶ್ಯಕತೆ ಅವರಿಗೆ ಮುಗ್ದಿರತ್ತೆ, ಯಾರೋ ನನಗೋಸ್ಕರ ಇದಾರೆ ಬರ್ತಾರೆ ಬದಲಾಗ್ತಾರೆ ಅಂತ ಕಾಯೋದನ್ನ ಬಿಟ್ಟು ನೀನೂ ಬದಲಾಗು ಆದ್ರೆ ಆ ಬದಲಾವಣೆ ನಿನಗೋಸ್ಕರ ಆಗಿರಬೇಕು ಅಷ್ಟೇ.

-


30 SEP 2024 AT 14:01

ಎದುರಿಗಿರೋ ವ್ಯಕ್ತಿ ನಮ್ಮ ನಂಬಿಕೆ ಜೊತೆ ಮನಸನ್ನೂ ಮುರಿದು ತಾನೇನೂ ಮಾಡೇ ಇಲ್ಲ ಅನ್ನೋ ಥರ ಆರಾಮಾಗಿ ಅವರ ಲೈಫಲ್ಲಿ ಇದ್ಬಿಡ್ತಾರೆ ಯಾವಾತ್ತು ನಾವ್ ಪ್ರಶ್ನೆ ಮಾಡೋದಿಕ್ಕೆ ಶುರು ಮಾಡ್ತೀವೋ ಅವತ್ತು ನಾವ್ ಅವರಿಗೆ ಹಿಂಸೆ ಮಾಡ್ತೀದಿವಿ ಕಿರಿಕಿರಿ ಮಾಡ್ತೀದಿವಿ ಅಂತ ನೇರವಾಗಿನೇ ಹೇಳ್ತಾರೆ, ಅವರಿಗೆ ಬೇಕಿದ್ದಾಗ ಆದ್ಯತೆಯಾಗಿದ್ದ ನಾವು ಅವರಿಗೆ ಬೇಡದೇ ಇದ್ದಾಗ ಆಪ್ಷನ್ ಆಗೋಗ್ಬಿಡ್ತೀವಿ.ಎಲ್ಲಾ ಸಹಿಸ್ಕೊಂಡು ನಾವ್ ಸುಮ್ನೆ ಇರ್ತೀವಿ ಅಂದ್ರೆ ಇವರಿಂದ ಏನು ಮಾಡ್ಕೋಳೋಕಾಗಲ್ಲ ಅನ್ನೋ ಕಾನ್ಫಿಡೆನ್ಸ್ ಅವರಿಗೆ ತುಂಬಾ ಜಾಸ್ತೀನೇ ಇರತ್ತೆ..ನಮ್ಮ ಸೈಲೆನ್ಸ್ ಗೆ ಕಾರಣ ಅವರ ಮೇಲಿರೋ ಪ್ರೀತಿ ಅಥವಾ ನಮ್ಮ ಅತಿಯಾದ ಕಾಳಜಿ ಅನ್ನೋದನ್ನ ಮರ್ತೇ ಬಿಟ್ಟಿರ್ತಾರೆ. But ನೆನಪಿರಲಿ ಎಲ್ಲದಕ್ಕೂ ಒಂದು ಕೊನೆ ಅನ್ನೋದು ಇದ್ದೇ ಇದೆ. ಅವರಿಗೆ ನಮ್ಮ ಮೇಲಿನ ಆಸಕ್ತಿಗೆ ಹೇಗೆ ಕೊನೆ ಇತ್ತೋ ಹಾಗೆ ನಮ್ಮ ತಾಳ್ಮೆಗೂ ಕೂಡ ಕೊನೆ ಇರತ್ತೇ.

-


10 SEP 2024 AT 7:26

ಕೆಲವೊಂದು ವ್ಯಕ್ತಿಗಳ ಜೀವನದಲ್ಲಿ ನಾವು ಆಯ್ಕೆಯಾಗಿ ಇರಬಾರದು, ಅದ್ಯತೆಯಾಗಿರಬೇಕು ಅಂದ್ಕೊತೀವಿ ಆದರೆ ಆ ವ್ಯಕ್ತಿಯಿಂದ ನಾವು ಏನನ್ನೇ ನಿರೀಕ್ಷೆ ಮಾಡಿದರೂ ಪ್ರತಿ ಬಾರಿಯೂ ನಿರಾಸೆನೇ ಅದರ ಪ್ರತಿಫಲವಾದಾಗ ಅಲ್ಲಿ ಕೇವಲ ಆಯ್ಕೆ ಆಗಿ ಉಳಿಯೋದಕ್ಕಿಂತ ನಮ್ಮ ಜೀವನದಲ್ಲಿ ನಮಗೆ ನಾವೇ ಮೊದಲ ಆದ್ಯತೆಯಾಗಿ ಬದುಕೋದನ್ನ ಕಲಿತು ಬಿಡೋಣ..

#ಆಯ್ಕೆ ಅಲ್ಲ ಆದ್ಯತೆಯಾಗಿ ಬದುಕು.

-


8 SEP 2024 AT 18:28

ಅವನ ಜೊತೆಗಿರುವ ಆಸೆ ಕನಸುಗಳನ್ನ ದೇವರು ಕೊಟ್ಟ
ಆದರೆ ಅವನು ನನಗಾಗಿ ಅಗಾಧ ಪ್ರೇಮದ ನೆನಪುಗಳನ್ನುಳಿಸಿ ಅಗಲಿ ಬಿಟ್ಟ

-


5 JUL 2024 AT 5:05

ಕೆಲವರು ಅವರ ಅವಶ್ಯಕತೆಗೆ ನಮ್ಮನ್ನ ಹಚ್ಕೊಂಡಿರ್ತಾರೆ ಅಂತಹ ಯಾರನ್ನಾದ್ರೂ ನಾವು ನಮ್ಮ ಬದುಕಲ್ಲಿ ಅವರು ನಮಗೆ ಅನಿವಾರ್ಯ ಅನ್ನೋವಷ್ಟರ ಮಟ್ಟಿಗೆ ಹಚ್ಕೊಂಡ್ರೆ ಅವರ ಅವಶ್ಯಕತೆಯ ನಂತರ ಒಂಟಿತನವನ್ನು ಅನಿವಾರ್ಯವಾಗಿಯೇ ರೂಢಿಸಿಕೊಳ್ಳಬೇಕಾಗುತ್ತದೆ.

-


Fetching Shruthi Shindoli Quotes