ಅಯ್ಯಾ, ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ.
ಅಯ್ಯಾ, ನಿಮ್ಮ ಶರಣರ ಬರವಿಂಗೆ ಮುಡುಹಿನಲ್ಲಿ ಪಟ್ಟವ ಕಟ್ಟುವೆ.
ಅಯ್ಯಾ, ನಿಮ್ಮ ಶರಣರೆನ್ನ ಮನೆಗೆ ಬಂದಡೆ
ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.— % &-
ಈ ವಿಶ್ವಕ್ಕೆ ಮನುಷ್ಯ ಯಾವ ರೀತಿಯಿಂದಲೂ ಅನಿವಾರ್ಯವಲ್ಲ ಎನ್ನುವುದನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ನಾವು ಇಲ್ಲದೇ ಆದರೂ ಭೂಮಿಯು ಸೂರ್ಯನ ಸುತ್ತ ಸುತ್ತುತ್ತಲೇ ಇರುತ್ತದೆ.
- ಐವರ್ ಲಿಸ್ನರ್— % &-
ಇಂದ್ರಿಯವ ಬಿಟ್ಟು ಕಾಯವಿರದು ;
ಕಾಯವ ಬಿಟ್ಟು ಇಂದ್ರಿಯವಿರದು.
ಎಂತು ನಿ ಕಾಮಿಯೆಂಬೆ,
ಎಂತು ನಿರ್ದೋಷಿಯೆಂಬೆ
ನೀನೊಲಿದಡೆ ಸುಖಿಯಾಗಿಪ್ಪೆ,
ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.-
ಇವತ್ತಿಗೂ, ಒನ್ ವೇ ಲವ್ ಮಾಡೋಕೆ ಸಂಬಂಧಪಟ್ಟವರ ಅನುಮತಿ ಅಗತ್ಯವಿಲ್ಲ ಅನ್ನೋದು ಎಷ್ಟು ವಂಡರ್ಫುಲ್ ಅಲ್ವಾ?!
-
ಎಲ್ಲಿ ಗೌರವವಿರುವುದಿಲ್ಲವೋ ಅಲ್ಲಿ ಪ್ರೀತಿ ಮನೆಮಾಡುವುದಿಲ್ಲ.
- ಫ್ಯೂದೊರ್ ದಸ್ತೋವಸ್ಕಿ.-
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟೆದ್ದಿತ್ತಯ್ಯಾ!
ಆಗಮ ಹೊರತೊಲಗಿ ಅಗಲಿದ್ದಿತ್ತಯ್ಯಾ!
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.-
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ
ನಾಯಿ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.-
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ.
- ಜಿ ಎಸ್ ಎಸ್-
ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯಾ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲಯ್ಯಾ
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯ್ತು,
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.-