ಕೆಲವು ಸಂಬಂಧಗಳೇ ಹೀಗೆ
ನಾವು ಅದೆಷ್ಟೇ ತ್ಯಾಪೆ ಹಚ್ಚಿ
ಸರಿಪಡಿಸಿ ಕೊಂಡು ಹೋದರು
ನಮ್ಮ ಬೆನ್ನ ಹಿಂದೆ ಮಾತನಾಡುವವರೇ ಹೆಚ್ಚು,
ಮತ್ತೆ ಮತ್ತೆ ಕಿತ್ತು ಹೋಗುವ
ಅಂತಹ ಸಂಬಂಧ ಗಳಿಂದ ದೂರ ಉಳಿಯುವುದೇ ಒಳ್ಳೇದು.
Shilpa nagaraj-
ಯುಗಾದಿಯ ಶುಭಾಶಯಗಳು
**--***----****----**---***
ವರುಷ ಕಳೆದರೂ ಮರಳಿ ಬರುವುದು
ಯುಗಾದಿಯು ನೋವು - ನಲಿವಿನ
ಬಾಳ ಪಯಣದಲಿ, ಬೇವು - ಬೆಲ್ಲ ದ
ಸಿಹಿ -ಕಹಿಯನುಣಿಸಿ , ಮರೆಯಗದ
ನೋವನಿಟ್ಟು , ಅದ ಮರೆಸಿ ಸಿಹಿ ಕೊಡುವ ಹಬ್ಬವೇ
ಯುಗಾದಿ ..
ಸಾಗಲಿ ಬದುಕು ಏರಿಳಿತಗಳ ಕಡಲಂತೆ
ರಕ್ಕಸ ಅಲೆಗಳಿಗೂ ಜಗ್ಗದಂತೆ,
ಬರಲಿ ಅಲೆಗಳು ಬಂದು ಎದೆಗೆ ಅಪ್ಪಳಿಸಿದರು
ಇರಬೇಕು ಕಲ್ಲು ಬಂಡೆಯಂತೆ,
ಇರು ನೀ ಕಲ್ಲು ಬಂಡೆಯಂತೆ ಅಲೆಯೇ ಹೆದರಿ
ಓಡುವಂತೆ...
. ಶಿಲ್ಪ ನಾಗರಾಜ
-
ಎಲ್ಲರ ಬದುಕಲ್ಲೂ ಇರುವುದು ಹೇಳಿಕೊಳ್ಳಲಾಗದ ವ್ಯಥೆ ,
ಜೀವನದುದ್ದಕ್ಕೂ ವ್ಯಥೆ ಪಡುತ್ತಿದ್ದರೆ ಸೇರುವೆವು ಒಂದಲ್ಲ ಒಂದು ದಿನ ಚಿತೆ.
ಶಿಲ್ಪ ನಾಗರಾಜ-
ಇನ್ನೊಬ್ಬರನ್ನು ಪುಕ್ಕಟೆಯಾಗಿ ಮನಬಂದಂತೆ
ನಿಂದಿಸಿ ತಾನೇ ಸರಿ ಎಂದು ನಡೆದುಕೊಳ್ಳುವುದು
Shilpa nagaraj-
ನೀ ನನ್ನೊಂದಿಗಿದ್ದರೆ ಬರುವುದು ನೂರನೇ ಬಲವು
ನನ್ನ ಧೈರ್ಯ ವೇ ನೀನು ನನ್ನ ಬಲವೇ ನೀನು
ಜೀವಕ್ಕೆ ಜೀವವಾದ ನೋವಲ್ಲಿದ್ದಾಗ ಬರುವುದೇ ಧೈರ್ಯ,
ನೋವಲ್ಲಿ ಕುಗ್ಗದೆ ಮನದ ಧೈರ್ಯ ವೇ ಮನದ ಧೈರ್ಯ.
Shilpa nagaraj-
ಬಗೆಹರಿಯದ ಬವಣೆಗಳಿಂದ
ಕೊಂಚ ಬಿರುನುಡಿಗಳನ್ನಾಡಿ
ಬಿಂಕ -ಬಿಗುಮಾನದಿಂದ
ಭೀಗುತ ನೀ ಮುನ್ನೆಡೆ.
Shilpa nagaraj
ಕನಸಿನ ರಾಧೇ-