ಸೂರ್ಯನ ಕೋಪಕ್ಕೆ ಬೆಳಕೇ ಬೀಳದ ಜಾಗದಲ್ಲಿ ಮಗನನ್ನು ಬಚ್ಚಿಡಲು ಅವನ ತಾಯಿ ಜಾಗ ಹುಡುಕಿದಳು,
ಶಿವನ ಅನುಗ್ರಹದಿ ಹುಟ್ಟಿ ಬೆಳದ ಮಗುವೆ ಆ ಸೂರ್ಯನ ಕರ್ಮಗಳ ಅನುಸಾರವಾಗಿ ಶಿಕ್ಷೆ ನೀಡಿದ್ದ.— % &-
ಊರಿಗೆ ಹೋಗುವ ಮುನ್ನ... ಹೋಗಿ ಬರುವೆ ಎಂದು ಹೇಳಿದಾಗ "ಸರಿ ಉಷಾರು"ಎಂದು ಸಣ್ಣ ದನಿಯಲ್ಲಿ ಅವಳ ಮಾತು ಕೇಳುತ್ತಿತ್ತು.
ಬಿಡದೆ ದೈವ ಕರೆದಾಗ ಅವಳ ಮಾತಿಗೆ ಮತ್ತೆ ಜನ್ಮ ಪಡೆದು ಅವಳ ನಗುವ ನೋಡುವ ಆಸೆ ನನಗಿತ್ತು.-
ದಾರಿ ಉದ್ದಕ್ಕೂ ಕಾಣುವ ಮೈಲುಗಲ್ಲಿನ ಮೇಲೆ ನನ್ನವಳ ಹೆಸರೇ ಬರೆದಹಾಗಿತ್ತು,
ಮುಂದೆ ಸಾಗಿದಂತೆಲ್ಲ ಅವಳ ಬಳಿ ಸೇರಲು ಮೈಲುಗಲ್ಲಿನ ಮೇಲಿನ ಸಂಖ್ಯೆ ಕಡಿಮೆ ಆದಂತಿತ್ತು.-
ಗಾಳಿ ಬಿಸದೆ ಸ್ಥಬ್ದವಾಗಿ ನಿಂತಿತ್ತು
"ಗಾಳಿ ಮಾತು" ಎನ್ನುವ ಬಿರುದಿಗೆ ಕಾರಣ ತಿಳಿಯಲು,
ಸತ್ಯ ತಿಳಿದ ಗಾಳಿ ಮತ್ತೆ ಗಾಳಿ ಬಿಸತೊಡಗಿತ್ತು.
ಕಾರಣ......ಉಸಿರು ನಿಂತರೂ ಮಾತು ಜೀವಂತವಾಗಿ ಇತ್ತು.-
ಬಿತ್ತಿ ಹೋದ ಪ್ರೀತಿಯ ಬೀಜವ ಮೊಳಕೆ ಒಡೆಯುವ ಮುನ್ನವೇ ಮರೆಯಾದೆಯಾ ಗೆಳತಿ,😔
ಆದರೇನಾಯಿತು... ಈ ಹೃದಯ ಇನ್ನೂ ಹದವಾಗಿದೆ ಹೇಳಿಬಿಡು ಗೆಳತಿ ಆ ನಿನ್ನ ಗೆಳತಿಗೆ ಆಗಲು ನನ್ನ ಮನದ ಒಡತಿ.😉-
ಬರಲಿ ಹೊಸ ವರುಷದ ಹೊಸ ಕಾಂತಿ
ಬದುಕಲಿ ಸಿಗಲಿ ಸುಖ ಶಾಂತಿ
ಶುಭವಾಗಲಿ ಎಲ್ಲರಿಗೂ ಈ ಸಂಕ್ರಾಂತಿ.-
ತೆಪ್ಪದೊಳಗೆ ಕುಳಿತು ದಡ ಸೇರುವ
ತವಕದಲ್ಲಿದ್ದೆ
ಕಾಣದ ಸುಳಿಯೊಳಗೆ ಸಿಲುಕಿ
ಸುತ್ತೋಡೆದು ಮುಳುಗಿಹೋದೆ.-
ಮತ್ತೆ ಮತ್ತೆ ಹೆಚ್ಚುತ್ತಿದೆ ಕೊರೊನಾ
ಮಾಸ್ಕ್ ಹಾಕೊಂಡ್ರು ಎಚ್ರ ಇರಬೇಕಪಾ ಅಣ್ಣ
ದೂರ ದೂರ ಇದ್ರು ಸನಿಕ್ ಬಂದ ಸಿನತಾರ್ ಎತ್ತಲಿ ಅವರ ಹೆಣ
ಆಸಿಡ್ ಹಾಕಿ ಕೈ ತೊಳಕೊಂಡ್ರು ಸಾಯುದಿಲ್ಲ ಈ ಕೊರೊನಾ.-
ದಟ್ಟಣೆ ಕಾಡು ಎಲ್ಲಡೆ ಹಬ್ಬಿ ಹೂ ಅರಳುವ ಸಮಯದಿ ನಿ ಬಂದರೇ... ನಿ ಬರುವ ದಾರಿಗೆ ಹೂಗಳೆಲ್ಲ ನಿನ್ನ ಪಾದಕೆ ಮುತ್ತಿಟ್ಟವು.
-
ಒಂದು ಕ್ಷಣ ಕುಶಿ ಕೊಟ್ಟು ನೆನಪೇ ಉಳಿಯದ ಕನಸುಗಳು ಕಣ್ಣು ತೆರೆದಾಗ ಮುಖದಲ್ಲಿ ಏನೋ ಒಂಥರಾ ಮಂದಹಾಸ ಉಲ್ಲಾಸ,
ಬೆವರಿಳಿಸುವ ಮೈ ನಡುಗಿಸುವ ಕನಸುಗಳು ಜೊತೆಗಿದ್ದವರು ನಮ್ಮನ್ನ ಎಚ್ಚಿರಸಿದರೂ ಭಯದಿ ಒದ್ದು ಮತ್ತೆ ಕ್ಷಮೆ ಕೇಳುವುದು ವಿಪರ್ಯಾಸ.-