ಜೀವನ ಹೆಂಗ್ ಆಗ್ಯಾದ ಅಂದ್ರ ನಾಯಿ ನನ್ನ ಮುಂದ ಬೊಗಳಿ ಹೋದ್ರೆ
ನನಗೆ ಬುದ್ದಿವಾದ ಹೇಳಿ ಹೋಯ್ತನೊ ಅನ್ಸಕತ್ತಾದ.-
“ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ.“
ಎಂದು ಅಲ್ಲಮಪ್ರಭುದೇವರು ಹೇಳುವಲ್ಲಿ ವಿಶ್ವದ ವಿರಾಟ್ ಸ್ವರೂಪದ ಕಲ್ಪನೆ ಇದೆ. ಚೈತನ್ಯವು ವಸ್ತುವಾಗಿ ರೂಪುಗೊಳ್ಳುವ ಕ್ರಮವಿದೆ.
ಇದೇ ವಸ್ತು ರಹಸ್ಯ.-
ಇದ್ದಲ್ಲೇ ಬಿದ್ದು ಸತ್ತರು ಜನ ಗುರುತಿಸದು,
ಜಗತ್ತು ವಿಶಾಲವಿದೆ,
ನಾಲ್ಕು ದಿಕ್ಕಿಗೂ ಸಾಧನೆಯ ಮೆಟ್ಟಿಲು ಗಳಿವೆ,
ಪ್ರಯತ್ನ ನಮ್ಮದಾಗಿರಬೇಕು,
ಒಮ್ಮೆ ಸಾಧಿಸಿದರೆ,
ಇತಿಹಾಸ ಓದಬಹುದು, ಇತಿಹಾಸನ ತಿರುಚಿ ಬರೆಯಬಹುದು.-
(ಒಂಟಿ ನಕ್ಷತ್ರ- ನನ್ನ ಕಲ್ಪನೆ )
ನನ್ನೊಳು ನನ್ನವಳು ನನ್ವಲವು
ಎಂತ ಚಂದ ಈ ಪ್ರಕೃತಿ ಸೊಬಗಿನವಳು,
ಯಾರಿಟ್ಟರೆ ನಕ್ಷತ್ರದ ಕಣ್ಣ ಮಿನುಗು,
ಮಿನುಗುತ್ತಾ ಹಾರಲೆಂದೆ ಹಾರಿದೆ ಅಂದು ಇಂದು ನಿನ್ನ ಮನದ ಮಳೆಯ ಹೊಳೆಯೆಂದು.-
ಆಧುನಿಕತೆ ಬೆಳೆದಂತೆ ಪ್ರಾಮಾಣಿಕತೆ, ಪ್ರಾಮುಖ್ಯತೆ, ಮೂಲ ಮೌಲ್ಯತೆ ಕಳೆದು ಹೋಗುತಿದೆ, ಉದಾ :- ಇತಿಹಾಸ ತಿಳಿಸುವ ಸ್ಮಾರಕವನ್ನ ಕೆಡವಿ, ಕಾಂಕ್ರೆಟ್ ಕಟ್ಟಡ ನಿರ್ಮಾಣ ಮಾಡುವುದು,ಹೊಸತನ ಎಷ್ಟೇ ಹೊಸದಾಗಿ ಬಂದರು, ತನ್ನ ಹಳೆತನ ಕಳೆದುಕುಳ್ಳುತ್ತಿದೆ, ಸಂಸ್ಕೃತಿ ಅಲ್ಲಿಯೇ ಕಳೆದು ಹೋಗುತಿದೆ,
ಮನುಷ್ಯನ ಮನಸ್ಸುಗಳು ಕೂಡ ಆ ಗೋಡೆಯಂತೆ ಮೂಲ ಮೌಲ್ಯಗಳನ್ನ ಕೆಡವಿ ಸಣ್ಣತನ, ಅಹಂ, ಅಹಂಕಾರ, ನಾನು ನನ್ನದೇ ಎನ್ನುವ ಗುಣ ಬೆಳೆಸಿಕೊಂಡು ಗುಣದಲ್ಲಿ ಬಡವನಾಗುತ್ತಿದ್ದಾನೆ.-
"ಸಂಬಂಧ"
ಅನ್ನುವುದು ಪೆನ್ನು ಅದರ ಮುಚ್ಚಳ ದಂತೆ ಇರ್ಬೇಕು.
ಪೆನ್ನು ತನ್ನ ಅವಶ್ಯಕತೆ ಇದ್ದಾಗ, ಆ ಮುಚ್ಚಳ ವನ್ನು ಕಡೆಗಾಣಿಸುತ್ತೆ, ಆದ್ರೆ ಆ ಮುಚ್ಚಳ ಬ್ಯಾಸರ ಗೊಳ್ಳದು ಕಾರಣ ಅದಕ್ಕೆ ಗೊತ್ತು, ಮುಚ್ಚಳ ಅಂದು ಕೊಳ್ಳುತ್ತೆ, ಪೆನ್ನು ನನ್ನನ್ನು ಕಡೆಗಾಣಿಸಿದರು, ಅದಕ್ಕೆ ಮುಂದೊಂದು ದಿನ ನನ್ನ ಅವಶ್ಯಕತೆ ಇದ್ದೆ ಇದೆ.
ನಾ ಇದ್ದರೆ ಆ ಲೇಖನಿ ಎಂಬ ಸಂಬಂಧ ಕ್ಕೆ ಶೋಭೆ, ಕಾಲ ಕೂಡಿ ಬರುವವರೆಗೂ ಮೌನ ದಿಂದ ಕಾಯಬೇಕು.ಅದು ಪ್ರೀತಿ ಯಾಗಲಿ, ಸ್ನೇಹ ಆಗಲಿ, ಇನ್ನಾವುದೇ ಸಂಬಂಧ ವಿರಲಿ, ಕಡೆಗಾಣಿಸುವ ಮುಂಚೆ ಚೂರು ಯೋಚಿಸಿದರೆ ಉತ್ತಮ 😊.-
ಅರಗದ ದ್ವೇಷಕ್ಕೆ
ಮರುಗುವುದೇ ಬೆಳಗುವ ಜ್ಯೋತಿ
ಬೆಳಕು ನೀಡಿದ ಮಾತ್ರಕ್ಕೆ ಸುಖದಿಂದಿರುವುದೇ
ತಾನು ನಿಂತದ್ದು ಕತ್ತಲಲ್ಲಿ ಎಂದು ಮರೆತು ಮೌನವಾಗಿದ್ದರು ಕೂಡ , ನೋವು ಪಡುವುದೇ,
ಇಲ್ಲಾ ತಾನೇ ಕೆಲವೊಬ್ಬರ ಜೀವನವು ಹಾಗೆ.-
ಪ್ರಶ್ನಿಸದೆ ಏನನ್ನು ಒಪ್ಪಬೇಡ,
ಪರೀಕ್ಷಿಸದೆ ಏನನ್ನು ನಂಬ ಬೇಡ,
ಅಂತಿಮ ಉತ್ತರಕ್ಕೆ ಕಾದು ನೋಡಾ,
ಫಲಿತಾಂಶ ಒಳ್ಳೇದೇ ಬರುವುದು ನೋಡಾ.-
ಸತ್ಯ, ಧರ್ಮ,ಪ್ರಾಮಾಣಿಕತೆ, ದಕ್ಷತೆ ,ಸೂರ್ಯನಂತೆ ಸ್ವಲ್ಪಕಾಲ ಮರೆಮಾಚಬಹುದು. (ಅವಮಾನ, ಹಗೆತನ, ದ್ವೇಷ, ವೈರತ್ವ ಹುಟ್ಟಬಹುದು ) ಆದರೆ ಅದರ ಪ್ರಾಮುಖ್ಯತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.(ಎಲ್ಲವನ್ನು ಎದುರಿಸಿದ ಮೇಲೆ ಕೊನೆಯಲ್ಲಿ ಸನ್ಮಾನ ಎಂಬ ಉಡುಗೊರೆ ಕಾಯುತ್ತಿರುತ್ತೆ )
* ಶುಭರಾತ್ರಿ *-
ಮನುಜ
ಮಣ್ಣಿನೋಳ್ಗಿನ ಮೋಹದ ಚಿನ್ನಕ್ಕೆ ಆಸೆ ಪಟ್ಟೆ
ಮಣ್ಣಲ್ಲಿ ಹುಟ್ಟಿದ ಅನ್ನವನ್ನೇಕ್ಕೆ ಚಲ್ಲಿ ಬಿಟ್ಟೆ
ನೀ ಹುಟ್ಟಿದ್ದು ಮಣ್ಣಲ್ಲಿ
ನೀ ಸಾಯುವುದು ಮಣ್ಣಲ್ಲಿ
ಮಣ್ಣಿಗಿಂತ ಪವಿತ್ರ ಮತ್ತೇನುಟ್ಟೆ,
ತಿಳಿಯೋ ಮನುಜ-