ಇತ್ತೀಚಿಗೆ ನಾನು ' ಕವಿತೆ ಹುಟ್ಟಿದ ತಕ್ಷಣ ಕತ್ತು ಕುಯ್ದು ಹತ್ಯೆ ಮಾಡಿಬಿಡುತ್ತೇನೆ.
ఆ ಮೇಲೆ ವಾರವಿಡೀ ಒದ್ದಾಡಿ ಭಾರವಾದ ಅದರ ದೇಹವನ್ನು ಹಾಳೆಗಿಳಿಸಿ, ನಿಟ್ಟುಸಿರು ಬಿಡುತ್ತೇನೆ!-
ನೀವೆ ಬೆಳೆಸಿ ಈ ಪುಟ್ಟ ಬರಹಗಾರಳನ್ನು🙏✨
ಸದಾ ಹೀಗೆ support ಮಾಡಿ .🙏❤️
ಒಲವೆಂದರೆ ಮತ್ತೇನಿಲ್ಲ ಗೆಳೆಯ
ನನ್ನ ಸೀರೆ ನೆರಿಗೆಗೆ ಸಿಕ್ಕ ನಿನ್ನ ಕೈಯ ಸ್ಪರ್ಶ ನೀನ್ನೆದೆಗೆ ತಾಕಿದ ನನ್ನ ಕಿವಿ ಓಲೆ
ಇಷ್ಟೇ ಕಣೋ ಒಲವೆಂದರೆ-
ಚೂರು ಮನ್ನಿಸು ಕನಸು ಹೆಚ್ಚಿದೆ
ಕೊಂಚ ನಿದಾನಿಸು ಹರೆಯ
ತಪ್ಪಿದೆ ಪೋಲಿ ಸಾಲಿಗೆ
ನೀನಾದರೆ ಶೀರ್ಷಿಕೆ ನಿನ್ನೊಲವಿಗೆ
ನಾನಾಗುವೆ ಅಭಿಸಾರಿಕೆ-
ಅಂದು ಅದೆಷ್ಟು ಗಂಟೆಗಳ ಕಾಲ ಕುಳಿತು ಹರಟಿದೆವೋ ಗೆಳೆಯ ನನಗದರ ಅರಿವಿಲ್ಲ ಆದರೆ ಚಂದ್ರ ಬಂದು
ಅದೆಷ್ಟೋ ಹೊತ್ತಾದ ಮೇಲೆ ಕಣ್ತೆರೆದಾಗ.
ನಾ ನಿನ್ನ ಹೆಗಲಿಗೊರಗಿದ್ದೆ..!-
ನಿದ್ದೆಗಣ್ಣಲ್ಲೂ ನಿನದೇ ಹೆಸರ ಕನವರಿಸೋ ನನಗೆ ಮಧ್ಯರಾತ್ರಿ
ನಿದ್ದೆಗಣ್ಣಲ್ಲೂ ನಿನದೇ ಹೆಸರ ಕನವರಿಸೋ ನನಗೆ,
ಹಗಲಲ್ಲಿ ನಿನ್ನ ಹೆಗಲ ಒರಗೋ
ಬಯಕೆ ಎಂದರೆ ಅತಿಯಾದೀತೇ..!?-
ಮಾಸಿ ಹೋಗುತ್ತಿರುವುದು ಕಾಲವೇ
ವಿನಃ ಪ್ರೀತಿಯಲ್ಲ
ಜೊತೆಗಿನ ಪಯಣದಲ್ಲಿ ಪ್ರೀತಿ
ಮತ್ತೊಮ್ಮೆ ಜನ್ಮಪಡೆಯಲಿ-
ನಿನ್ನ ಜೊತೆ ಬಾಳಬೇಕೆನ್ನುವ ಕನಸು
ನನಸಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದೆ,
ಆ ಹರಕೆಗೆ ದೇವರು ವರಕೊಡುತ್ತಿದನೇನೋ!
ಆದರೆ ನೀನು ಚಿಗುರಿದ ಪ್ರೀತಿಯ ಮೊಗ್ಗನ್ನು
ಅರಳುವ ಮೊದಲೇ
ನಿನ್ನ ಕೈಯಾರೇ ನೀನೇ ಚಿವುಟಿ ಹಾಕಿದೆ,
ಇನ್ನು ದೇವರಲ್ಲಿನ ಹರಕೆ,
ಆರಾಧನೆಗಳ ಪ್ರಯೋಜನವಾದರೂ ಏನು..??-