ರವೀಂದ್ರ ಗುಡಿಹಾಳ್   (ನನ್ನುಡಿ ಕನ್ನಡಿ)
1.2k Followers · 1.1k Following

read more
Joined 22 August 2018


read more
Joined 22 August 2018

ಆಸೆಯ ಗಡಿ ದಾಟಿ ಅನುಭವಿಸುವ ಸುಖ
ದುಃಖಭರಿತವಾಗಿರುತ್ತದೆ ಆಸೆಗೆ ಮೀತಿಯಿದೆ
ಅತಿಯಾಸೆಗೆ ಮೀತಿಯಿಲ್ಲ

-



ನಡೆ ಬದಲಾಗದೆ ದಾರಿ ಬದಲಾಗದು
ದೃಷ್ಟಿ ಬದಲಾಗದೆ ದೃಶ್ಯ ಬದಲಾಗದು
ಮಾಡುವ ಯೋಜನೆ ಮತ್ತು
ಯೋಚನೆ ಬಹಳ ಮುಖ್ಯ
ಬದುಕಿಗೆ

-




ಜೀವನ ಮತ್ತು ಆಧ್ಯಾತ್ಮ ಜೀವನ
ಜನನ ಮರಣಗಳ ಮಧ್ಯ ಮಾಡುವ
ಪಯಣವೇ ಜೀವನ ಆಧ್ಯಾತ್ಮ ಜೀವನವೆಂದರೆ
ತನ್ನನ್ನು ತಾ ಅರಿತು ತನ್ನವರೊಂದಿಗೆ ತಾ ಬೆರೆತು
ತನ್ನೊಳಗಿನ ಬೆಳಕಿಗೆ ತಾ ಸಾಕ್ಷಿಯಾಗಿ ತನ್ನ
ಜೀವನವನ್ನು ತಾ ಸಾಕ್ಷಾತ್ಕಾರ ಮಾಡಿಕೊಳ್ಳುವ
ಜೀವನವೇ ಸತ್ಯ ಜೀವನ ನಿತ್ಯ ಪಾವನ
ಗುರು ತೋರುವ ಮಾರ್ಗಕ್ಕೆ
ಸಾಕ್ಷಿಯಾಗುವ ಸನ್ಮಾರ್ಗವದು.
🙏🙏🙏🙏🙏🙏

-



ಬದುಕುವ ಬದುಕು
ಸರಳವಾಗಿ ಸಾಗಬೇಕಾದರೆ
ನಮ್ಮ ಬದುಕು ಸರಳವಾಗಿ
ಸಾಗಿಸಬೇಕು ಈ ಜಗದ ಎಲ್ಲಾ
ಸುಖ ದುಃಖಗಳು ನಮದಲ್ಲವಾದರೂ
ಪ್ರತಿಯೊಬ್ಬರ ಸುಖ ದುಃಖಗಳನ್ನು
ಅರಿತು ನಾವು ನೆರವಾಗಬೇಕು
ಅದುವೇ ನಮ್ಮ ಸನಾತನ ಧರ್ಮ
ಒಬ್ಬರಿಗೆ ಒಬ್ಬರೂ ಒಳಿತು
ಬಯಿಸುವ ಮಹಾ ಧರ್ಮವೇ
ಸನಾತನ ಧರ್ಮ

-




ಮನದ ಬೆಳಕನ್ನು
ಹುಡುಕುವುದೆ ಮಹಾ
ಮಾಯೇ ಮನದ
ಬೆಳಕಿಗೆ ಸಾಕ್ಷಿಯಾದ
ಸತ್ಪುರಷರೆ ಮಹಾಛಾಯೆ
ಅರಿತು ನಡೆ ಅಂತರಂಗದ ಕಡೆ

-



ಭಕ್ತಿಯ ಭಾವಸ್ಪರ್ಶಕೆ
ಭಗವಂತ ಸ್ಪರ್ಶವಾದರೆ
ಅದುವೇ ಮಹಾ ಸಾಕ್ಷಾತ್ಕಾರ
ಯೋಗಿಗಳಿಗೊಲಿತ ಮಹಾ
ಯೋಗವದು ಮನದ ಬೆಳಕು
ತುಂಬಿದ ಮಹಾ ಸಾಕ್ಷಿಯೇ
ಮಹಾದೇವ

-



ತನ್ನೊಳಗೆ ತಾ ಮುಳಗುವುದೆ
ಮಹಾ ಧ್ಯಾನ ಮೌನ ಮಾತನ್ನು
ಕಟ್ಟಿಹಾಕಬಹದು ಮನಸ್ಸನ್ನು ಕಟ್ಟಿ
ಹಾಕುವ ಮಹಾ ಮೌನವೇ
ಮಹಾಧ್ಯಾನ
ಮಹಾಧ್ಯಾನದ ಮಹಾ
ಮರ್ಮವಿದು

-



ಹಳೆ ಎಲೆ ಉದುರುವುದು
ಹೊಸ ಎಲೆ ಚಿಗುರುವುದು
ಇದುವೇ ಬದುಕು

-



ಅಂತರಂಗದ ಗೂಡು
ಅಂತರಾತ್ಮನ ಬೀಡು
ಅಂತರಂಗದ ಬೆಳಕಿಗೆ
ಆತ್ಮಜ್ಞಾನವೇ ಸಾಕ್ಷಿ

-



ಜ್ಞಾನ ಹಚ್ಚಿಟ್ಟ ಬೆಳಕು
ಧ್ಯಾನ ಮುಚ್ಚಿಟ್ಟ ಬೆಳಕು
ಮನದ ಜ್ಞಾನ ಮಹಾ
ಬೆಳಕು ಮನದ
ಅರಿವೇ ಮಹಾ
ಗುರುವು

-


Fetching ರವೀಂದ್ರ ಗುಡಿಹಾಳ್ Quotes