ಕಣ್ಣ ಹನಿ.
ಮನುಷ್ಯ ಕೆಲವು ಸಂಧರ್ಭಗಳಲ್ಲಿ ತನ್ನ ನೋವನ್ನು ಎಷ್ಟೇ ಮರೆಮಾಚಿದರು ಕಣ್ಣೀರು ಅದಕ್ಕೆ ಸಹಕರಿಸುವುದಿಲ್ಲ. ಭಾವನೆಗಳ ಕಟ್ಟೆ ಒಡೆದು ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರಿದಾಗ, ಕೆನ್ನೆಯು ಕಣ್ಣ ಹನಿಗೆ ಕೇಳುತ್ತೆ, ನೀನೇಕೆ ಪ್ರತೀ ಬಾರಿಯೂ ನಿನ್ನನ್ನು ನಿರ್ಲಕ್ಷ ಮಾಡಿದವರ ಬಗ್ಗೆ ಕಣ್ಣೀರೂ ಸುರಿಸುತ್ತಿಯ ಎಂದು. ಅದಕ್ಕೆ ಕಣ್ಣೀರು ಹೇಳುತ್ತೆ ನಾನು ಕಣ್ಣೀರು ಸುರಿಸುತ್ತಿರುವುದು ಅವರು ನನಗೆ ನೋವು ಕೊಟ್ಟರು ಎಂಬ ಕಾರಣಕ್ಕೆ ಅಲ್ಲ, ಬದಲಾಗಿ ನನ್ನನ್ನು ಅವರು ಉಳಿಸಿಕೊಳ್ಳಲಾಗದಷ್ಟು ನಾನು ಅಗ್ಗನಾದೇನಲ್ಲ ಎಂದು.
-
ಕಣ್ಣ ಹನಿ.
ಮನುಷ್ಯ ಕೆಲವು ಸಂಧರ್ಭಗಳಲ್ಲಿ ತನ್ನ ನೋವನ್ನು ಎಷ್ಟೇ ಮರೆಮಾಚಿದರು ಕಣ್ಣೀರು ಅದಕ್ಕೆ ಸಹಕರಿಸುವುದಿಲ್ಲ. ಭಾವನೆಗಳ ಕಟ್ಟೆ ಒಡೆದು ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರಿದಾಗ, ಕೆನ್ನೆಯು ಕಣ್ಣ ಹನಿಗೆ ಕೇಳುತ್ತೆ, ನೀನೇಕೆ ಪ್ರತೀ ಬಾರಿಯೂ ನಿನ್ನನ್ನು ನಿರ್ಲಕ್ಷ ಮಾಡಿದವರ ಬಗ್ಗೆ ಕಣ್ಣೀರೂ ಸುರಿಸುತ್ತಿಯ ಎಂದು. ಅದಕ್ಕೆ ಕಣ್ಣೀರು ಹೇಳುತ್ತೆ ನಾನು ಕಣ್ಣೀರು ಸುರಿಸುತ್ತಿರುವುದು ಅವರು ನನಗೆ ನೋವು ಕೊಟ್ಟರು ಎಂಬ ಕಾರಣಕ್ಕೆ ಅಲ್ಲ, ಬದಲಾಗಿ ನನ್ನನ್ನು ಅವರು ಉಳಿಸಿಕೊಳ್ಳಲಾಗದಷ್ಟು ನಾನು ಅಗ್ಗನಾದೇನಲ್ಲ ಎಂದು.
-
"ಯಶಸ್ಸು ಎಂಬುದು ದೇವರ ಕರುಣೆಯಿಂದಾಗಲೀ, ಸ್ವಾಮೀಜಿಗಳ ಆಶೀರ್ವಾದದಿಂದಾಗಲೀ, ಹಸ್ತದಲ್ಲಿರುವ ರೇಖೆಗಳ ಬಲದಿಂದಾಗಲೀ ಬರುವುದಿಲ್ಲ.
ಗೆಲ್ಲಲು ಹೊರಟವನು ಕನಸನ್ನೂ ಕಾಣಬೇಕು, ಕಣ್ಣೀರನ್ನೂಹಾಕಬೇಕು"
ಅಲ್ತಾರು ಗೌತಮ ಹೆಗ್ಡೆ.-
ಸಹನೆ ನಿನ್ನದಾದರೆ ಸಕಲವೂ ನಿನ್ನದೇ.
ವಿನಯ ನಿನ್ನದಾದರೆ ವಿಜಯವೂ ನಿನ್ನದೇ.-
"ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲಿ,
ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ".
ನಮ್ಮೊಳಗಿನ ನಮ್ಮ ನಡುವಿನ ಅಂತರವನ್ನು
ಕಿರಿದು ಮಾಡಲು ಪ್ರಯತ್ನಿಸೋಣ.
-ಅಲ್ತಾರು ಗೌತಮ್ ಹೆಗ್ಡೆ--
ಜೀವನ ನಾವು ಅಂದುಕೊಂಡಷ್ಟು ಸುಲಭವಾಗಿ ಸಾಗುವುದಿಲ್ಲ.
ನಾವು ಸಾಗುತ್ತ ಹೋದಂತೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಜೀವನಕ್ಕೆ ನಾವು ಹೊಂದಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.-
ಗುರಿಯ ಬೆನ್ನತ್ತಿ ಹೋಗುತ್ತಿರುವಾಗ ನಿನ್ನ ಗಮನ ಕೇವಲ ನಿನ್ನ ಗುರಿಯ ಕಡೆ ಇರಲಿ.
ಪಕ್ಕದಲ್ಲಿ ಇದ್ದವರು ನನ್ನ ಬಗ್ಗೆ ಏನು ಟೀಕೆ ಮಾಡುತ್ತಿದ್ದಾರೆ ಎಂದು ಗಮನ ಅವರ ಕಡೆ ಹಾಯಿಸಿದರೆ ನಿನ್ನ ದಾರಿಯ ದಿಕ್ಕು ಬದಲಾಗಿ ಗುರಿ ಮುಟ್ಟುವುದು ತಡವಾಗಬಹುದು.-
ನಿಮ್ಮನ್ನು ಬಿಟ್ಟು ದೂರ ಹೋದವರಿಗಾಗಿ ಯಾವತ್ತೂ ಬೇಡದಿರಿ. ನಿಮ್ಮ ಸಂದೇಶಕ್ಕೆ, ನಿಮ್ಮ ಕರೆಗೆ ಮತ್ತು ನಿಮ್ಮ ಭೇಟಿಗೆ ಯಾವುದೇ ಬೆಲೆ ಸಿಗದೇ ಇದ್ದ ಮೇಲೆ ಅವರಿಂದ ದೂರವೇ ಇದ್ದು ಬಿಡಿ,
ಇದನ್ನೇ ಸ್ವಾಭಿಮಾನ ಎನ್ನುವರು.-
ಯಶಸ್ಸಿನ ಹಿಂದಿರುವ ಸಂಗತಿಗಳೆಂದರೆ,
ಏಳು-ಬೀಳು, ಸೋಲು-ನೋವು,
ದುಃಖ-ಅವಮಾನ
ಇವಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ತ್ಯವೆ ಯಶಸ್ಸಿಗೆ ಕಾರಣವಾಗುತ್ತದೆ.-
ಚಿಂತೆಗಳು ತಲೆಯ ಸುತ್ತ ಹಾರಾಡುತ್ತಿರುವ ಹಕ್ಕಿಗಳಿದ್ದಂತೆ.
ಹಾರಾಡಲು ಬಿಡಿ ಆದರೆ
ಅಲ್ಲಿಯೇ ಗೂಡು ಕಟ್ಟಲು ಅವಕಾಶ ನೀಡದಿರಿ.-