ಎಂದಿಗೂ ಭಾವನೆಗಳ ಆಧಾರದ ಮೇಲೆ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳದೆ ಬದುಕಿನ ಪ್ರಾಯೋಗಿಕ ಆಧಾರಗಳನ್ನು ,ಸವಾಲು ಸಾಧ್ಯತೆಗಳ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
-
ಕನಸುಗಳೂರ ಶ್ರಮಿಕ
ಬದುಕಿನ ಕತ್ತಲೆ ಕಳೆದು
ಭರವಸೆ ಬೆಳಕಿನ ದಿನಗಳು ಬರಲಿ
ಸಂಭ್ರಮ ಸಡಗರ
ಅನುದಿನ ಇರಲಿ
ಸರ್ವರ ಬಾಳಿಗೆ ಶುಭಫಲ ಸಿಗಲಿ
ಸರ್ವೋದಯದ ದೀಪಾವಳಿ.
*ಆತ್ಮೀಯ ಶುಭಾಶಯಗಳು*-
ದೇವರೆಂಬುವನು ಇದ್ದಿದ್ದು ನಿಜವಾಗಿದ್ದರೆ
ದೇವರಂತ ವ್ಯಕ್ತಿತ್ವದವರಿಗೆ
ಮೋಸ ಮಾಡುತ್ತಿರಲಿಲ್ಲ.-
ಬಾನ ಮೋಡ
ಇಳೆಯೊಡನೆ ಮತ್ತೆ ಮತ್ತೆ ಮಾತಾಡಲು
ಬಾವಗಳ ಮಳೆ ಹಂಚಿ ಹಗುರಾಗುವಂತೆ
ಮೇಘಸಂದೇಶಗಳ ಹೊತ್ತು ತರುವ
ಈ ನಿಮ್ಮ ಗೆಳೆಯ.
ಶುಭರಾತ್ರಿ ಸಂದೇಶ
-
ಹುಡುಕಿದರೆ ಎಲ್ಲರಲ್ಲೂ , ಎಲ್ಲಾ ಕೆಲಸಗಳಲ್ಲೂ ತಪ್ಪುಗಳನ್ನು ಹುಡುಕಬಹುದು. ಉತ್ತಮ ಅಂಶಗಳತ್ತ ದೃಷ್ಟಿ ಹರಿಸಿದರೆ ಸಣ್ಣ ಪುಟ್ಟ ತಪ್ಪುಗಳು ಗೌಣವಾಗುತ್ತವೆ.
-
ನಾವು ಯಾರಿಗೂ ಸ್ಪಂದಿಸದೆ,
ಯಾವ ಕೆಲಸಕ್ಕೂ ಪ್ರತಿಕ್ರಿಯಿಸದಿದ್ದರೆ
ನಮ್ಮ ಕೆಲಸಗಳಿಗೆ ಮಾತ್ರ
ಎಲ್ಲರೂ ಸ್ಪಂದಿಸಬೇಕೆಂದು
ನಿರೀಕ್ಷಿಸುವುದು ಅಸಮಂಜಸ.
ಸ್ಪಂದನೆ ಮತ್ತು ಪ್ರತಿಕ್ರಿಯೆ ಪರಸ್ಪರ ದ್ವಿಮುಖ ಪ್ರಕ್ರಿಯೆ ಆಗಿರಬೇಕು.-
ಸಂಭ್ರಮಿಸೋಣ ಅನುದಿನವೂ
ಕಷ್ಟ ನಷ್ಟಗಳ ಲೆಕ್ಕ ಮರೆತು
ಚಿಂತೆಗಳ ದೂರ ಸರಿಸೀ
ಸಡಗರದಿ ಸಿಂಗರಿಸೋಣ
ಕನಸುಗಳ ಪೋಣಿಸೀ
ನೀರಮೇಲಿನ ಗುಳ್ಳೆ
ನಾಕು ದಿನವೀ ಬದುಕು
ಕನಸುಗಳಲೀ ರಾಜಿಯೇಕೆ..?
-
ಯಾವುದೇ ಪಕ್ಷದವರೇ ಅಗಿರಲಿ,
ತಮ್ಮ ಪಕ್ಷಗಳು , ತಮ್ಮ ಪಕ್ಷದ ಜನಪ್ರತಿನಿಧಿಗಳು
ಅದೆಷ್ಟೇ ತಪ್ಪು ಮಾಡಿದರು, ಜನವಿರೋಧಿ ನೀತಿ ನಿಯಮ ರೂಪಿಸಿದರೂ
ತಪ್ಪುಗಳನ್ನು ತಪ್ಪು ಎನ್ನದೆ ,
ಪ್ರಶ್ನಿಸಿದವರನ್ನೆ ವೈಯಕ್ತಿಕ ದಾಳಿ ಮಾಡುತ್ತಾ,
ಸಮರ್ಥಿಸುತ್ತಾ ಪಕ್ಷಗಳನ್ನು ವೈಭವೀಕರಿಸುವುದರಲ್ಲೇ ಕಾಲಕಳೆಯುತ್ತೀರಿ ಎಂದಾದರೆ ದೇಶದ ಜನಸಾಮಾನ್ಯರಿಗೆ ಮೋಸ ಮಾಡುತ್ತಿದ್ದೀರಿ ಎಂದೆ ಅರ್ಥ.
ಅಂಥವರು ನಿಜವಾದ ದೇಶದ್ರೋಹಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.-
ಸಮಾನ ಸ್ಪರ್ಧಾ ಅವಕಾಶ ನೀಡಿ ಸ್ಮೃತಿ ಶೂರತ್ವ ವನ್ನು ಮಾತ್ರ ಅಳೆದು ಮೆರಿಟ್ ಸ್ಪರ್ಧೆಯಲ್ಲಿ ಗೆದ್ದವನಿಗೆ ಮಾತ್ರ ಅಧಿಕಾರಶಾಹಿತನ ನೀಡುವುದು ಎಂದರೆ ಸ್ಮೃತಿ ಶೂರತ್ವ ಪರೀಕ್ಷಾ ಮೆರಿಟ್ನಲ್ಲಿ ಸೋತವರನ್ನು ಗೆದ್ದವರ ಗುಲಾಮರನ್ನಾಗಿಸುವುದು ಎಂದೇ ಅರ್ಥ..
ಗುಣಮಟ್ಟದ ಆಡಳಿತ ಗುಣಮಟ್ಟದ ಅಧಿಕಾರ ಇರುವುದು ಅಂಕಶೂರತ್ವದಲ್ಲಿ ಮಾತ್ರವಲ್ಲ, ಸೇವಾ ಸಮರ್ಪಣಾ ಮನೋಭಾವದಲ್ಲಿ.
ಮೆರಿಟ್ ಶೋಷಣೆಗೆ ಪರ್ಯಾಯ ಮಾರ್ಗ ಅಗತ್ಯ
-