ಮನಃಶಾಂತಿ ಹುಡುಕುತ
ಮಸಣವ ಸೇರಿತು
ಮರುಗಿದ ಜೀವ
-
Art • Writing • Creative • Music
ಕಾಡಬೇಡ ಹೀಗೆ
ಕನಸಿನ ರಾಯಭಾರಿ
ಕಾದಿರುವೆ ನಿನಗಾಗಿ
ಕೊಡುವೆಯ ನನ್ನ
ಹೃದಯಕೆ ಹಾಜರಿ-
ಅರೆಕ್ಷಣ ಮಾತಿಲ್ಲದೆ ಬರಿ ಮೌನವೇ
ಸುಳಿದಾಡಿದೆ ನನ್ನಲಿ, ನಿನ್ನ ಕಂಡೊಡನೆ
ಮನಸೇಕೊ ಗರಿಗೆದರಿದೆ
ತಾಳಲಾಗದೆ ಪ್ರೀತಿಯ ಕಚಗುಳಿ,
ಕಳುವಾಗಿದೆ ನನ್ನ ಹೃದಯದ ಕೀಲಿ
ದಯಮಾಡಿ ಹಿಂದಿರುಗಿಸು ಒಲವೇ
ಸರಿಯಾಗಿ ಬಂಧಿಸುವೆನು ನಿನ್ನನು
ನನ್ನ ಹೃದಯದ ಜೋಪಡಿಯಲಿ
ಮರೆಯಾಗದಿರು ನನ್ನಿಂದ ಮರುಮಾತಾಡದೆ ,
ಸದಾ ನನ್ನ ಕಿವಿಯಲಿ ಮನಸು
ಪಿಸುಗುಡುತ್ತಿರುವುದೊಂದೆ, ಸಾಗಲಿ
ನಿಮ್ಮ ಪ್ರೀತಿಯ ಸವಾರಿ ಇಂದೇ..
-
ಕಾಣದ ಜೀವಿಯ ಕತಕ್ಕಳಿಯ ನರ್ತನ
ಮಾನವನ ಕರ್ಮ ಫಲದ ಸವಿ ಭೋಜನ
ಜೀವದ ಹಂಗಿಗೆ ನಡೆದಿದೆ ಜೀವನದ ಪ್ರಯಾಣ
ಎಲ್ಲಿ ನೋಡಿದರೂ ಸ್ಮಶಾನ ಮೌನ
ಬಡವ ಬಲ್ಲಿದನೆಂಬ ತಾರತಮ್ಯವನಳಿಸಿ
ಹರಡಿದ ಈ ಕೊರೋನ, ಮತ್ತೆಲ್ಲರ ಬದುಕನ್ನು
ಕರೆದೊಯ್ಯುವುದಿನ್ನೆಲ್ಲಿಗೋ ಕಾಣೆ ನಾ...... !
-
“ಅಪ್ಪ” ಎಂಬ ಎರಡಕ್ಷರದಿ ಅಡಗಿದೆ “ಶ್ರಮ”
ಬದುಕಿನ ಸಂಕೇತವಾಗಿ
ಮಕ್ಕಳ ಏಳಿಗೆಗೆ ಹೆಗಲಾಗಿ
ಜವಾಬ್ದಾರಿಯ ಪೇಟವ ತನ್ನ
ಮುಡಿಗೇರಿಸಿಕೊಂಡು ಸಂಸಾರ
ಎಂಬ ನೌಕೆಯ ನಾವಿಕನಾಗಿ
ಸರಿ ದಾರಿಯಲಿ ಸಾಗುವವನು
“ಅಪ್ಪ”
Happy Father’s Day
-
ಕಣ್ಣ ಸನ್ನೆಯಲಿ ಅವಿತಿರು ಮೌನ
ಮನಸಿನಂತರಾಳದಿ ಮಾತಾಗಿ
ಹೊಮ್ಮಿದೆ, ತುಟಿಯಂಚಿನಲಿ
ಬೀರುತ ಕಿರುನಗೆ ತೇಲಾಡಿದೆ
ಪ್ರೀತಿಯ ಗುಂಗಲಿ...
-
ದ್ವೇಷ, ಅಸೂಯೆಯ ಹಂಗನ್ನು ತೊರೆದು
ನೋವನು ಮರೆಯುತ, ಎಲ್ಲೆಡೆ
ಪ್ರೀತಿ, ವಿಶ್ವಾಸವ ಪಸರಿಸಿ
ನಗುತ, ನಗಿಸುತ ಬಾಳೋಣ ಇರವಷ್ಟು ದಿವಸ..-
ಸಿರಿವಂತನೆನಿಸಿಕೊಳ್ಳುವುದು
ಎಣಿಸಲಾರದಷ್ಟು
ಹಣದಿಂದ ಅಲ್ಲ,
ಬೆಲೆ ಕಟ್ಟಲಾಗದ
ಗುಣದಿಂದ...-
ಸಾವಿರ ಸೋಲಿನ ಸವಾಲಿಗೆ ಅಂಜದೆ
ಸೋತ ದಿನದಂದು ಇದೇ ನನ್ನ ಕೊನೆಯ
ಸೋಲೆಂದು ಭಾವಿಸಿ ಗೆಲುವಿನ
ಆಶಯದೊಂದಿಗೆ ಮುನ್ನಡೆದರೆ
ವಿಜಯದ ಪತಾಕೆಯು ಹಾರುವುದು
ಬಾನೆತ್ತರದಿ...-