ಸಿಗಬೇಕೆಂದು ಮೆಚ್ಚುಗೆ,
ಹೇಳಿಕೊಳ್ಳುವುದು ಸರಿಯಲ್ಲ
ನಮ್ಮ ಬಗ್ಗೆಯೇ ನಾವು ಹೆಚ್ಚಿಗೆ...!!
-
ಪ್ರತಿನಿತ್ಯ ಕಷ್ಟ ಸುಖಗಳ ಉಗಮ,
ನೋವು ನಲಿವುಗಳ ಸಂಗಮ,
ಈ ಎಲ್ಲವನ್ನೂ ಸ್ವೀಕರಿಸುವ ನೀ ಸಮ,
ಇರಲಿ ಎಲ್ಲದಕ್ಕೂ ಒಂದು ಕ್ರಮ,
ಆಗ ನೋಡು ಬದುಕಿನ ಸಂಭ್ರಮ...!!
~ಕೆ. ರಂಗನಾಥ-
ಸದಾ ನಿನ್ನ ನಗುವ ಹೊಳಪಿನಲ್ಲಿ ಬಂಧಿಯಾಗಲು ಬಯಸಿದವ ನಾ...! ಆದರೆ ಏನು ಮಾಡಲಿ, ಆ ನಿನ್ನ ನಗುವ ಸಲುವಾಗಿಯೇ, ನಾನಿಂದು ನಿನ್ನಿಂದ ದೂರಾಗಿ ಕೇವಲ ನಿನ್ನ ನೆನಪಿನ ಬಿಸಿಯಲ್ಲಿ ಬೆಂದು ಹೋಗುವಂತಾಗಿದೆ...!!
-
ಅದನ್ನ ಕಳೆದುಕೊಂಡರೆ, ನಮ್ಮ ಸಂಬಂಧಕ್ಕೆ ಮುಕ್ತಿ,
ಉಳಿಸಿಕೊಂಡು ಹೋದರೆ ಇಬ್ಬರಿಗೂ ಸೂಕ್ತಿ...!!-
ಸೌಂದರ್ಯ ಎಂದರೆ,
ಕಪ್ಪೂ ಅಲ್ಲ, ಬಿಳುಪೂ ಅಲ್ಲ,
ಎಂದೂ ಮುಪ್ಪಾಗದ
ಮಾನವೀಯತೆಯ ಮನಸ್ಸು...!!-
ಕಷ್ಟಗಳ ಬಗ್ಗು ಬಡೆಯುತ,
ನೋವುಗಳನ್ನ ನೆಲಕ್ಕುರುಳಿಸುತ,
ಪ್ರತಿದಿನವೂ ಜೀವನದೋಳ್
ನಗುತ ಬದುಕುವವ ನಿತ್ಯವೂ
ವಿಜಯೀಭವ...!!-
ಬಹಳ ಜಾಗರೂಕತೆಯಿದ ನಿಭಾಯಿಸಬೇಕು.
ಜಾರಿ ಬಿದ್ದ ಕನ್ನಡಿ ಹಿಡಿದು ಹೋದಂತೆ,
ಹೃದಯವೂ ಹೊಡೆದು ಹೋಗಬಹುದು...!!-
ದೂರ ತಳ್ಳಿದವರೇ,
ಬರಬೇಕು ಯಾವುದೋ
ಒಂದು ದಾರ ಇಡ್ಕೊಂಡು ನಿನ್ನ ಬಳಿ,
ಹಂಗ ನೀ ಬೆಳಿ...!!-
ಎಚ್ಚರವಿದ್ದಾಗ ನೆನಪುಗಳು ಕೊಂದರೆ,
ಮಲಗಿದ್ದಾಗ ಕನಸುಗಳು ಕೊಲ್ಲುತ್ತಿವೆ...!!-
ಕೆಲವೊಂದು ಸಾರಿ ಜವಾಬ್ದಾರಿಯ ವಿಷಯ
ಜೀವನದಲ್ಲಿ ಪಾಷಾಣದಿಂದ ಪಾಯಸ
ದಕ್ಕಿಸಿಕೊಳ್ಳುವುದನ್ನು ಕಲಿಸುತ್ತದೆ...!!
ಜೀವನಕ್ಕಾಗಿ ಜೀವವನ್ನೇ ಪಣಕ್ಕಿಟ್ಟು
ಹೋರಾಡುವುದನ್ನು ಕಲಿಸುತ್ತದೆ...!!-