ಎಲ್ಲರೊಳಗೊಂದಾದ ಭರವಸೆ ಮನದಿ
ಎಲ್ಲ ಮರೆ ಮಾಡಿ ನಗ ಬೇಕು ಮಗು ತನದಿ
ಸೀಳು ಬಯಕೆ ಇಂದು ಎದೆಗೆ ನಾಟಿ ಕೊಂಡಿದೆ
ನೆತ್ತರ ತುಸು ಬಸಿದು ಹೃದಯ ಪ್ರಾಣ ಬಿಟ್ಟಿದೆ
ಖಾಲಿ-ಖಾಲಿ ಭಾವನೆ ಬಂಧಿಯಾಗಿದೆ ಅಂತರಂಗದಿ
ತುಂಬಿ ತುಳುಕಿ ಆಚೆ ಬಂತು ನೋವು ಮುಗ್ಧ ಸ್ಪರ್ಶದಿ
-
ಸದಾ ಹುಡುಕಿ ಕೊಲ್ಲುವ ಭಾವಗಳಿಗೆ
ವಿಧಾಯ ಸಮಯ
ಮಿತಿ ಬೇಕು ನೋವಿಗೆ
ನನದು ಅರ್ಧ ಸತ್ತ ಹೃದಯ-
ಕೆನ್ನೆ ಜಾರಿದ ಕಂಬನಿಗಳವು
ವಿಳಾಸ ಮರೆತಂತೆ
ದೂರ ನಡೆದ ಸವಾರಿ ಒಂದು
ತನ್ನೆ ಕಳೆದಂತೆ
ಹೊರಗೆ ನಡೆದ ಕಾಲ ನಡಿಗೆಯದು
ಅದೆತ್ತ ಸಾಗಿದೆ
ತನ್ನ ಮರೆತ ಮನವು ಮೌನದಿ
ಚಿತೆಯ ಸೇರಿದೆ
-
ಮತ್ತದೇ ಹುಚ್ಚು ಬಯಕೆಗಳು
ಬದಲಾಗದ ಆಸೆಗಳ ನಡುವೆ
ಕೈಗೆ ಸಿಗದೋಡುವ ದಿನಗಳು
ಗುರಿ ಮರೆತ ಮನಕೆ
ಗುರು ಯಾರು ಕೊನೆಗೆ..?-
ಮತ್ತೊಮ್ಮೆ ಅದೆ ಪಯಣದ ಹಾದಿಗೆ
ಮನವಿದು ವಾಲಿದೆ
ಯಾರನ್ನೊ ತೊರೆದು
ಮತ್ಯಾರನ್ನೊ ಹುಡುಕಿ ಹೊರಟಿದೆ
ದಿಕ್ಕು ದಿಕ್ಕುಗಳ ನಡುವೆ
ಕಾಡ ದಾರಿಯ ಸ್ವಾಗತ
ಹಚ್ಚಿ ಇಟ್ಟ ದೀಪವಂತೆ
ಕಂಗೊಳಿಸುವ ನಕ್ಷತ್ರ
ವಿದಾಯ ಹೇಳಿರುವೆ
ನನ್ನ ಹಳೆಯ ಊರಿಗೆ
ಸೂರ್ಯ ಹುಟ್ಟುವುದೊಂದೆ ಬಾಕಿ
ಹೊಸದೊಂದು ಭಾವ ಬೆರೆತ ನಾಳೆಗೆ-
ಭಾವನೆಗಳು ಒಮ್ಮೆಲೆ ಬೆದರಿದಾಗ
ಯಾರ ಕೂಗಲಿ
ನನ್ನವರೆ ಮುನ್ನಡೆಸಿ ಚೂರಿ ಚುಚ್ಚುವಾಗ
ಏನು ಮಾಡಲಿ
ತಬ್ಬಲಿಯು ನಾನಲ್ಲ ಎಲ್ಲರಿಹರು ಯಾರಿಲ್ಲ
ಎಲ್ಲಿ ಹೋಗಲಿ
ಕಾಪಾಡೊ ಭಗವಂತನು ಕಲ್ಲಾದ
ಹೇಗೆ ಬದುಕಲಿ
ಮೈ ಮರೆತು ಜೊತೆ ನಡೆದೇ
ಒಂದೇ ಭಾವದಿ
ಕೈ ಬಿಟ್ಟು ಬದಲಾದರು
ಅತಿ ಬೇಗದಿ
ಭಾವಕ್ಕೆ ಬರೆ ಎಳೆದರು
ಮೃದು ವಿನಯದಿ
ಎಲ್ಲರಿಲ್ಲಿ ಒಳ್ಳೆಯವರೆ
ತನ್ನ ಸಮಯಕೆ
ಬಾಗಿಲ ಮುಂದೆಯೆ ಬಾವಿ ತೋಡಿ
ತಮಾಷೆ ನೋಡುವರು ಜೋಕೆ-
ಅಲ್ ಕಂಡದ್ದು"
ಅದೆಲ್ಲಿಗೆ ಸಾಗಿದೆ
ಈ ಹುಚ್ಚು 'ಪಯಣ'
ಕೊನೆ ಮೊದಲುಗಳ ನಡುವೆ
ನೂರು ನಿಲ್ದಾಣ...
ನಮ್ಮವರಾದ 'ನಮ್ಮವರಲ್ಲದ'
ನಮ್ಮವರಿಂದಲೆ
ಸಕಲ ಅವಮಾನ
ನಡುವೆ ಸನ್ಮಾನ..
ಯಾರಿಗುಂಟು ಬಾಳ ಗುಟ್ಟು
ಇಂದು 'ಬಡವ'
ನಾಳೆ ನಿನ್ನಾಳುವನವ...
ಸರಿ ಹೋಗಲಿ ಬಿಡಿ
ನಮ್ಮಲ್ಲೆಲ್ಲಿದೆ ಅವರಿಗಾಗಿ ಸಮಯ...
ಅವರ 'ಬಣ್ಣ' ಕಳಚಿದ ಮುಖವೆ
ಜಗದ ಮತ್ತೊಂದು ವಿಸ್ಮಯ...!!-
ಸುಡು ಬಿಸಿಲ ನಡುವೆ ಬರೀ ಕಾಲ ನಡಿಗೆ
ಕೆತ್ತಿಹ ಬರಹಕೆ ಬರೆ ಎಳೆದ ಕೆಳಗೆ
ಎಲ್ಲಿಹುದು ಬಯಲು ತಿಳಿಯಾಗಿ ಮನದೊಳಗೆ
ಕಲಕಿಹುದು ಕರುಳು ತುಂಡಾಗಿ ಉಸಿರೊಳಗೆ
ಸಿಂಪಡಿಸಲಿಲ್ಲ ತುಸು ಹನಿಯು ಮೇಲೆ
ಕೈವಾಡ ಯಾರದೋ ದಿನ ಘಳಿಗೆ ಬಗೆ ಬಗೆಯ ಲೀಲೆ
ಕಾಣದ ದಿಕ್ಕಿನ ಬರೀ ಗೈ ಮಾಲೀಕನು ನಾನು
ಕಾಲನ ಕರೆಗೆ ತಲೆ ಬಾಗಿ ಮುನ್ನಡೆವೆನು
ಇನ್ನೆಲ್ಲೋ ನಾ ಕಾಣೆ ಅವಿತ ಅವಿರತನ
ಬಹುಶಃ ಬದುಕು ಬೇಡೆಂದು ಪರಮಾತ್ಮ ಅವಿತನ
ಕಗ್ಗಲ್ಲು ಕಡಲಾದಿ ಬೆಳ್ ಮುಗಿಲು ಜೋಲಿ
ಸುಡುವ ಕೆಂಡದ ಮೇಲೆ ಮಲಗಿಸಿ ಹಾಡುವರು ಲಾಲಿ
ಬಿಟ್ಟಾಕು ಮನಸು ಮನಸ್ಸು ಮಾಡುವ ಮುನ್ನ
ಎಲ್ಲರೂ ಅಲ್ಪರೆ ಅರಿತವರಾರು ನಿನ್ನ
ಬೇಡದ ಮಾತುಗಳವು ಲೆಕ್ಕವಿಡಲಾಗದ ನಕ್ಷತ್ರ
ರಾತ್ರಿ ಮುಳುಗಿ ಬೆಳಕು ಚೆಲ್ಲಿರೆ ಯಮನು ನೀಡುವ ಸೂತ್ರ
ಎಲ್ಲರು ನಮ್ಮವರೆ ಸಂಕ್ರಾಂತಿ ಸಿಹಿಯಲಿ
ಯಾರು ಪಾಲು ಪಡೆಯುವರೊ ಯುಗಾದಿಯ ಕಹಿಯಲಿ-