ಬೇಗುದಿಯಲ್ಲಿ ಬೇಯುತ್ತಿದ್ದಾಗ ಬಂದವನಿವನು..ಮಾತಲ್ಲೇ ಸೆಳೆದು ನೆಮ್ಮದಿಯ ಬಿಗಿದಪ್ಪುವಂತೆ ಮಾಡಿಹನು!ನಿನ್ನ ಬಿಟ್ಟಿರಲಾರೆನ್ನುವಷ್ಟು ಪ್ರೀತಿಸುವನು...ಸಾವಿರ ಗೊಂದಲಗಳಿದ್ದರೂ ನಿನ್ನೊಡನೆ ಬಾಳುವೆನು.ಇನ್ನೆಂದೆಂದಿಗೂ ನೀ ನನ್ನವನು... -
ಬೇಗುದಿಯಲ್ಲಿ ಬೇಯುತ್ತಿದ್ದಾಗ ಬಂದವನಿವನು..ಮಾತಲ್ಲೇ ಸೆಳೆದು ನೆಮ್ಮದಿಯ ಬಿಗಿದಪ್ಪುವಂತೆ ಮಾಡಿಹನು!ನಿನ್ನ ಬಿಟ್ಟಿರಲಾರೆನ್ನುವಷ್ಟು ಪ್ರೀತಿಸುವನು...ಸಾವಿರ ಗೊಂದಲಗಳಿದ್ದರೂ ನಿನ್ನೊಡನೆ ಬಾಳುವೆನು.ಇನ್ನೆಂದೆಂದಿಗೂ ನೀ ನನ್ನವನು...
-
ನನಗೇಕೆ ಈ ಹುಚ್ಚು ತಿಳಿಯೆ...!ಬೊಗಸೆ ಪ್ರೀತಿಗೆ ಬಿಗಿದಪ್ಪಿ ಅಳುವಾಸೆ...!ಬೆಟ್ಟದಷ್ಟು ಕೋಪ ಹೆಚ್ಚಿದಾಗ ನಿರಾಸೆ...!ಗೊಂದಲಗಳ ನಡುವೆಯೂ ಜೊತೆಯಾಗಿ ಬಾಳುವಾಸೆ....!ಸನಿಹವ ಬಯಸುತಲೇ ನಿನ್ನ ಮರೆಯುವಾಸೆ....! -
ನನಗೇಕೆ ಈ ಹುಚ್ಚು ತಿಳಿಯೆ...!ಬೊಗಸೆ ಪ್ರೀತಿಗೆ ಬಿಗಿದಪ್ಪಿ ಅಳುವಾಸೆ...!ಬೆಟ್ಟದಷ್ಟು ಕೋಪ ಹೆಚ್ಚಿದಾಗ ನಿರಾಸೆ...!ಗೊಂದಲಗಳ ನಡುವೆಯೂ ಜೊತೆಯಾಗಿ ಬಾಳುವಾಸೆ....!ಸನಿಹವ ಬಯಸುತಲೇ ನಿನ್ನ ಮರೆಯುವಾಸೆ....!
ಮೋಡದ ಕೂಗಿಗೆ ಆಕಾಶವೇ ಅಳುತ್ತಿತ್ತು,ಅಳುವಿನಲೂ ಇಳೆಗೆ ಒಳಿತನೇ ಬಯಸಿತ್ತು..ಇಳೆಯು ಮಳೆಯನು ಸಂತಸದಿ ಸ್ವೀಕರಿಸಿತ್ತು,ಸಂತಸವ ಸಕಲ ಜೀವಿಗಳೊಡನೆ ಹಂಚಿಕೊಂಡಿತು.. -
ಮೋಡದ ಕೂಗಿಗೆ ಆಕಾಶವೇ ಅಳುತ್ತಿತ್ತು,ಅಳುವಿನಲೂ ಇಳೆಗೆ ಒಳಿತನೇ ಬಯಸಿತ್ತು..ಇಳೆಯು ಮಳೆಯನು ಸಂತಸದಿ ಸ್ವೀಕರಿಸಿತ್ತು,ಸಂತಸವ ಸಕಲ ಜೀವಿಗಳೊಡನೆ ಹಂಚಿಕೊಂಡಿತು..
ಕೀಲಿ ಕೊಟ್ಟ ಗೊಂಬೆಗಳು ನಾವಲ್ಲ, ಅವುಗಳಿಗಿಂತ ಕಡಿಮೆಯೇನೂ ಇಲ್ಲ, ಗಾಳಿ ಬಂದಕಡೆ ತೂರಿಕೊಳ್ಳದೇ ಸ್ಥಿರವಾಗಿರುವುದ ಬಲ್ಲವನೇ ಜೀವನವ ಗೆಲ್ಲಬಲ್ಲ....! -
ಕೀಲಿ ಕೊಟ್ಟ ಗೊಂಬೆಗಳು ನಾವಲ್ಲ, ಅವುಗಳಿಗಿಂತ ಕಡಿಮೆಯೇನೂ ಇಲ್ಲ, ಗಾಳಿ ಬಂದಕಡೆ ತೂರಿಕೊಳ್ಳದೇ ಸ್ಥಿರವಾಗಿರುವುದ ಬಲ್ಲವನೇ ಜೀವನವ ಗೆಲ್ಲಬಲ್ಲ....!
ಕರುಣಾಮಯಿ ತಾಯಿ ಕರುಣೆ ಇಲ್ಲದವನಿಗೆ ಜನ್ಮ ನೀಡಿದಳಲ್ಲ... -
ಕರುಣಾಮಯಿ ತಾಯಿ ಕರುಣೆ ಇಲ್ಲದವನಿಗೆ ಜನ್ಮ ನೀಡಿದಳಲ್ಲ...
ಸಮಾಜದ ಕಟ್ಟುಪಾಡುಗಳಿಗೆ ಪಂಜರದಲ್ಲಿನ ಗಿಳಿಯಂತಾಗಿರುವೆ ನಾ!ರೆಕ್ಕೆ ಬಿಚ್ಚಿ ಹಾರುವಾ ಆಸೆಯನು ಬದಿಗಿರಿಸಲಿ ಹೇಗೆ ನಾ!?ಹಾರಿಹೋದ ಹಕ್ಕಿಯ ಬಗೆಗಿನ ಕಟ್ಟುಕಥೆಯ ಸಹಿಸಲೇ!ಅಥವಾ ಇವರಿಗೂ ಹಾರುವುದ ಕಲಿಸಲೇ!? -
ಸಮಾಜದ ಕಟ್ಟುಪಾಡುಗಳಿಗೆ ಪಂಜರದಲ್ಲಿನ ಗಿಳಿಯಂತಾಗಿರುವೆ ನಾ!ರೆಕ್ಕೆ ಬಿಚ್ಚಿ ಹಾರುವಾ ಆಸೆಯನು ಬದಿಗಿರಿಸಲಿ ಹೇಗೆ ನಾ!?ಹಾರಿಹೋದ ಹಕ್ಕಿಯ ಬಗೆಗಿನ ಕಟ್ಟುಕಥೆಯ ಸಹಿಸಲೇ!ಅಥವಾ ಇವರಿಗೂ ಹಾರುವುದ ಕಲಿಸಲೇ!?
ಚಂಚಲಿತ ಮನವಿಂದು ಸ್ಥಿರವಾಗಿದೆ,ಬೇಡದ ಯೋಚನೆ ದೂರವಾಗಿದೆ,ಪ್ರೀತಿಯ ಅರಸುತಿದ್ದ ಮನ ನೆಮ್ಮದಿಯ ಬಿಗಿದಪ್ಪಿದೆ,ಹೀಗೆ ಎಂದೂ ನೆಮ್ಮದಿಯಿರಲೆಂದು ದೇವರ ಬೇಡಿದೆ. -
ಚಂಚಲಿತ ಮನವಿಂದು ಸ್ಥಿರವಾಗಿದೆ,ಬೇಡದ ಯೋಚನೆ ದೂರವಾಗಿದೆ,ಪ್ರೀತಿಯ ಅರಸುತಿದ್ದ ಮನ ನೆಮ್ಮದಿಯ ಬಿಗಿದಪ್ಪಿದೆ,ಹೀಗೆ ಎಂದೂ ನೆಮ್ಮದಿಯಿರಲೆಂದು ದೇವರ ಬೇಡಿದೆ.
ಕೆಳಬಿದ್ದರೂ ಹೊಳೆಯುವುದು ಮಳೆಹನಿ ಸೂರ್ಯ ಕಿರಣಕೆ!ಆಸರೆಯ ನೀಡಿಹುದಲ್ಲ ಹುಲ್ಲು ಆ ಬಡ ಜೀವಕೆ..! -
ಕೆಳಬಿದ್ದರೂ ಹೊಳೆಯುವುದು ಮಳೆಹನಿ ಸೂರ್ಯ ಕಿರಣಕೆ!ಆಸರೆಯ ನೀಡಿಹುದಲ್ಲ ಹುಲ್ಲು ಆ ಬಡ ಜೀವಕೆ..!
ಜೀವಕ್ಕೆ ಜೀವ ಕೊಡುವ ಜನರ ಜೊತೆ ಜಗಳವಾಡಿ ಜೇನುಗೂಡ ಅಣುಕಿಸುವ ಜಂಭವೇಕೆ ನಿನಗೆ...!? -
ಜೀವಕ್ಕೆ ಜೀವ ಕೊಡುವ ಜನರ ಜೊತೆ ಜಗಳವಾಡಿ ಜೇನುಗೂಡ ಅಣುಕಿಸುವ ಜಂಭವೇಕೆ ನಿನಗೆ...!?
ಜೀವವಿಲ್ಲದ ಜೀವಕ್ಕೆ ಜೀವತುಂಬಿ ಮನಸು ಉಲ್ಲಾಸದಿ ಹಾಡುತಿದೆ ಹಾಡು.. -
ಜೀವವಿಲ್ಲದ ಜೀವಕ್ಕೆ ಜೀವತುಂಬಿ ಮನಸು ಉಲ್ಲಾಸದಿ ಹಾಡುತಿದೆ ಹಾಡು..