ಜೀವನ,,
ಸಾಗುತ್ತಿರುವ ದಾರಿಯಲಿ ಅದೆಷ್ಟೋ ಕಲ್ಲು-ಮುಳ್ಳು,
ಹೊಸದಾರಿಯ ತಿರುವಿನೊಂದಿಗೆ ಹೊರಟು ನಿಂತರೆ,
ಆಳಿಗೊಂದು ಕಲ್ಲು ಎಂಬಂತೆ ಮತ್ತೆಷ್ಟೋ ವಿಗ್ನ,
ಅದೆಷ್ಟೋ ಕಣ್ಣೀರ ಹನಿಗಳು ಬತ್ತಿದವು ಪ್ರತಿನಿತ್ಯ ಜಾರುವ ವ್ಯಥೆಯಿಂದ,
ಕೇಳುವ ಕಿವಿಗಳು ಸದ್ದಿಲ್ಲವಾದವು ದಿನನಿತ್ಯದ ಗೋಳಿಗೆ,
ಈ ಜೀವನ ಪುಸ್ತಕ ಸಾಕೆಂದು ಮುಚ್ಚುವ ಹೊತ್ತಿಗೆ, ಬೀಸುವ ತಿಳಿಗಾಳಿಗೆ ತಿರುಗುವ ಮತ್ತೊಂದು ಹೊಸ ಪುಟ,
ಏನಾದರೂ ಗೀಚೋಣ ಎನ್ನುವ ಹೊತ್ತಿಗೆ ಮರಳಿ ಕೊನೆಪುಟವ ಸೇರುವೆ,,,,,ಬಿರುಗಾಳಿ ರಭಸಕೆ....
ಮರಳಿ ಕಾಯುವೆ ತಾಳ್ಮೆಯದಿ ತಂಪು ಗಾಳಿಯ ಆ ಸಿಹಿ ಅಪ್ಪುಗೆಗೆ,ಸಂತಸದಿ ಕರೆಯುವೆ ಜೀವನದ ಹೊಸ ತಿರುವಿಗೆ....-
ಜೀವನ,,
ಸಾಗುತ್ತಿರುವ ದಾರಿಯಲಿ ಅದೆಷ್ಟೋ ಕಲ್ಲು-ಮುಳ್ಳು,
ಹೊಸದಾರಿಯ ತಿರುವಿನೊಂದಿಗೆ ಹೊರಟು ನಿಂತರೆ,
ಆಳಿಗೊಂದು ಕಲ್ಲು ಎಂಬಂತೆ ಮತ್ತೆಷ್ಟೋ ವಿಗ್ನ,
ಅದೆಷ್ಟೋ ಕಣ್ಣೀರ ಹನಿಗಳು ಬತ್ತಿದವು ಪ್ರತಿನಿತ್ಯ ಜಾರುವ ವ್ಯಥೆಯಿಂದ,
ಕೇಳುವ ಕಿವಿಗಳು ಸದ್ದಿಲ್ಲವಾದವು ದಿನನಿತ್ಯದ ಗೋಳಿಗೆ,
ಈ ಜೀವನ ಪುಸ್ತಕ ಸಾಕೆಂದು ಮುಚ್ಚುವ ಹೊತ್ತಿಗೆ, ಬೀಸುವ ತಿಳಿಗಾಳಿಗೆ ತಿರುಗುವ ಮತ್ತೊಂದು ಹೊಸ ಪುಟ,
ಏನಾದರೂ ಗೀಚೋಣ ಎನ್ನುವ ಹೊತ್ತಿಗೆ ಮರಳಿ ಕೊನೆಪುಟವ ಸೇರುವೆ,,,,,
ಬಿರುಗಾಳಿ ರಭಸಕೆ....
-
"Being someone's priority is valuable than being someone's choice"😍
Priya. U-
ದೇವರು,
ಕೆಟ್ಟ-ಒಳ್ಳೆಯ ಪ್ರಪಂಚದಲ್ಲಿ
ಸಿಹಿ -ಕಹಿ ಎಂಬ ಮಾತುಗಳ ನಡುವೆ,
ಕಷ್ಟ-ಸುಖ ಎಂಬ ಜೀವನವನಿಟ್ಟು
ಎರಡೆರಡು ಮನಸುಗಳ ಹೊಂದಿದ ಜನರ ನಡುವೆ, ಸೃಷ್ಟಿಕರ್ತ ಆತನೇ ಕೆಟ್ಟವರನ್ನು ಬಿಟ್ಟು ಒಳ್ಳೆಯವರನ್ನು ತನ್ನೆಡೆಗೆ ಕರಿದುಕೊಳ್ಳುವಂತಿದ್ದರೆ,ಸೃಷ್ಟಿಸಿದವನಾತನೆ ತಿರಸ್ಕರಿಸುವಂತಿದ್ದರೆ ಸೃಷ್ಟಿಸುವುದೇಕೆ...???
ಒಳ್ಳೆಯ ಮನಸುಗಳನ್ನು ಕೊಂಡೊಯ್ಯುವುದೇಕೆ..???
ಆ ಕೆಟ್ಟ ಜನರ ನಡುವೆ ಒಳ್ಳೆಯವರನ್ನು ಕೊಂಡೊಯ್ಯುವ ಅವನಲ್ಲಿ ನನ್ನದೊಂದು ಅಸಮಾಧಾನ 😔-
ಶಿಲೆಯವಳು...
"ಅತಿಯಾಗಿ ಪೆಟ್ಟು ತಿನ್ನುವ ಜೀವ ಅವಳು"
ತುಳಿಯುವವರ ಕಾಲಿಗೆ ಕಲ್ಲಾಗಿ,
ಸಲುಹುವವರ ಪಾಲಿಗೆ ಶಿಲೆಯಾಗಿ,
ಕುಕ್ಕಿ ತಿನ್ನುವ ಜನರ ನಡುವೆ ಬೋರ್ಗಲ್ಲಿನಂತೆ ಎಲ್ಲವ ಎದುರಿಸುತ್ತ, ಕಲ್ಲಾಗಿ, ಶಿಲೆಯಾಗಿ ಎಲ್ಲವನು ಉಂಡು, ಎಲ್ಲವನು ಸಹಿಸಿ ಹೆತ್ತವಳು ಅವಳು....
ಸಹಿಸುವಳು ಅವಳು,ಸಲಹುವಳು ಅವಳು...
ಜಗಕ್ಕೆಲ್ಲ ಒಬ್ಬಳು ......
"ಹೆಣ್ಣು "
ಪ್ರಿಯಾ ಉಪ್ಪಿನ್..-
ಪ್ರೇಮಿಸಿದ್ದು ನೀನೇ...
ಮುದ್ದಿಸಿದ್ದು ನೀನೆ...
ಒಪ್ಪಿಸಿದ್ದು ನೀನೆ...
ಖುಷಿ ಕೊಟ್ಟಿದ್ದು ನೀನೆ...
ಸಿಹಿ ಹಂಚಿದ್ದು ನೀನೆ...
ಆ ಮುಗುಳ್ನಗೆ ಹಿಂದಿನ ಕಾರಣ ನೀನೆ...
ಕೊನೆಗೆ..... ಸಹಿಸಲಾರದಷ್ಟು ನೋವು ಕೊಟ್ಟೋನು ನೀನೆ... ಕಣ್ಣಿನ ಹನಿ ಗೆ ಕಾರಣವೂ ನೀನೆ...-
ಇಷ್ಟ ಪಟ್ಟ ವ್ಯಕ್ತಿಗೆ ಅವರ ಜೊತೆ ಯಾವಾಗ ಮಾತನಾಡುತ್ತೇನೋ ಎಂಬ ಕುತೂಹಲ ಇರಬೇಕೆ ಹೊರತು...
ಯಾವಾಗ ದೂರಾಗಲು ಸಮಯ ಸಿಗುವುದೋ ಎಂಬ ಕಾತರ ಅಲ್ಲ...-
ಜೀವನದಲ್ಲಿ ಮುಂದಿನ ದಿನಗಳ ಕನಸನ್ನು ಕಾಣುತಿದ್ದೆ ಅಂದು.....
ಜೀವನದಲ್ಲಿ ಸವಿ-ನೆನಪುಗಳನ್ನು ಕನಸೆಂದು ಮೆಲಕು ಹಾಕುತ್ತಿರುವೆ ಇಂದು....-
ನನ್ನನ್ನು ಏಕೆ ದೂರ ಮಾಡಿದೆ ಎಂದು ಕೇಳುವ ಹೃದಯಕ್ಕೆ....
ನನ್ನ ನಗುವೊಂದೇ ಉತ್ತರ 🙂-