ಅರ್ಥವಿಲ್ಲದ ಮಳೆಗೆ
ವ್ಯರ್ಥವಾದ ಬೆಳೆ
ಅನ್ನದಾತನ ಕಷ್ಟ
ಕೇಳುವವರು ಯಾರ-
ನಮ್ಮನ್ನು ಭಾರ ಅಂದುಕೊಳ್ಳುವ ಸಂಬಂಧಗಳ ಜೊತೆ... ನಮ್ಮಿಂದ ದೂರ ಇರಲು ಬಯಸುವ ವ್ಯಕ್ತಿಗಳ ಜೊತೆ... ಬಲವಂತವಾಗಿ ಬದುಕುವುದಕ್ಕಿಂತ ...
ಅವರಿಗಿಂತ ಮೊದಲು ನಾವೇ ದೂರವಾಗಿ ಬದುಕುವುದೇ ಒಳ್ಳೆಯದು........🙏-
ಮಾತು ಬರದೇ ಇರೋ ಮೂಕ ಪ್ರಾಣಿಗಳನ್ನು ನಂಬು ಆದರೇ ಮಾತಲ್ಲೇ ಮರಳು ಮಾಡೋ ವ್ಯಕಿಗಳನ್ನು ನಂಬಬೇಡ
-
ಪ್ರಪಂಚ ಹೇಗಿದೆ ಎಂದರೆ ನೋವು ತಮಗಾದಾಗ ಮಾತ್ರ ನೋವು ಬೇರೆಯವರಿಗೆ ಆದರೆ ಅದು ಅವರ ಹಣೆ ಬರಹ...
-
ಎಲ್ಲರಿಗೂ ನೋವುಗಳು ಇವೆ ಅದನ್ನು ತೋರಿಸುವ ವಿಧಾನ ಬೇರೆ ಬೇರೆಯಾಗಿದೆ ಹತ್ತಿರದವರ ಬಳಿ ಕಣ್ಣೀರಾಗಿ, ಗೊತ್ತಿಲ್ಲದವರ ಬಳಿ ನಗುವಾಗಿ
-
ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಮತ್ತು ಮುಖ್ಯವಾಗಿ ಸಮಯವನ್ನು ಮಿಸಲಿಡೋದು
-
ಕಣ್ಣಿನಲ್ಲಿ ಕಂಡ ಪ್ರೀತಿಗೆ ಅರ್ಥ ಇಲ್ಲಾ,ಹೃದಯದಲ್ಲಿ ಹುಟ್ಟಿದ ಪ್ರೀತಿಗೆ ರೂಪ ಇಲ್ಲಾ,ನಿಜವಾದ ಪ್ರೇಮಗೆ ಬೆಲೆಯಿಲ್ಲ...
-
ಕೆಲವೊಂದು ಬಾರಿ ದೇವರು ನೀವು ಬಯಸಿದ್ದನ್ನು ಕೊಟ್ಟಿರುವುದಿಲ್ಲ. ಇದಕ್ಕಾಗಿ ನೀವು ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ನೀವು ಬಯಸಿದ್ದಕ್ಕಿಂತ ಉತ್ತಮವಾದುದನ್ನೇ ಕೊಡಲು ಆತ ಅದನ್ನು ಕೊಡಲಿಲ್ಲ ಎಂದು ಅಂದುಕೊಳ್ಳಿ...
-